<p>ರಂಗ ಶಂಕರ ಆಯೋಜಿಸಿರುವ `ಕಂಬಾರರೊಂದಿಗೆ ರಂಗ ಯುಗಾದಿ~ ಕಾರ್ಯಕ್ರಮದಲ್ಲಿ ಹೊಸಪೇಟೆಯ ಕನ್ನಡ ಕಲಾಸಂಘದ ಕಲಾವಿದರು ಡಾ.ಚಂದ್ರಶೇಖರ ಕಂಬಾರ ಅವರ `ಚಾಳೇಶ~ ನಾಟಕ ಪ್ರದರ್ಶಿಸಲಿದ್ದಾರೆ. <br /> <br /> ಭಾನುವಾರ ನಡೆಯಲಿರುವ ರಂಗ ಯುಗಾದಿ ಕಾರ್ಯಕ್ರಮದಲ್ಲಿ ಸಂಜೆ 7ಕ್ಕೆ ಈ ನಾಟಕ ಪ್ರದರ್ಶನಗೊಳ್ಳಲಿದೆ. ನಿರ್ದೇಶಕ ಧನಂಜಯ ಕುಲಕರ್ಣಿ ಇದನ್ನು ವಿನ್ಯಾಸಗೊಳಿಸಿ, ನಿರ್ದೇಶಿಸಿದ್ದಾರೆ.<br /> <br /> ಜನವರಿಯಲ್ಲಿ ಮುಂಬೈ ಕರ್ನಾಟಕ ಸಂಘದವರು ಆಯೋಜಿಸಿದ್ದ ಅಖಿಲ ಭಾರತ ಕನ್ನಡ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶಿತಗೊಂಡ ಈ ನಾಟಕವು ಪ್ರೇಕ್ಷಕರಿಂದ, ನಿರ್ಣಾಯಕರಿಂದ ಅಪಾರ ಮೆಚ್ಚುಗೆ ಗಳಿಸಿ ಐದು ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.<br /> <br /> ಇದೇ ತಂಡದ ಕಲಾವಿದರು ರಂಗ ಯುಗಾದಿ ಕಾರ್ಯಕ್ರಮವನ್ನು ಕಂಬಾರರ ರಂಗ ಗೀತೆಗಳನ್ನು ಹಾಡುವುದರ ಮೂಲಕ ಆರಂಭಿಸಲಿದ್ದಾರೆ.<br /> <br /> <strong>ನಾಟಕದ ಕುರಿತು... </strong><br /> ಡಾ.ಚಂದ್ರಶೇಖರ ಕಂಬಾರರ ಅತ್ಯಂತ ಅಪರೂಪದ ಅಸಂಗತ ನಾಟಕಗಳಲ್ಲೊಂದಾದ `ಚಾಳೇಶ~ ಅನೇಕ ಸಂಕೀರ್ಣ ಅಂಶಗಳನ್ನೊಳಗೊಂಡಿದೆ.<br /> ಅವಕಾಶವಾದಿತನ ಮತ್ತು ಊಳಿಗಮಾನ್ಯ ಪದ್ಧತಿ ನಮ್ಮ ಸಂಸ್ಕೃತಿಗೆ ಹೊಸದೇನಲ್ಲ. <br /> <br /> ಅವಕಾಶ ಸಿಕ್ಕಾಗೆಲ್ಲ ಅದನ್ನು ಅತ್ಯಂತ ಸಮರ್ಥ ರೀತಿಯಲ್ಲಿ ನಾವುಗಳು ಸಾಬೀತುಪಡಿಸುತ್ತಲೇ ಬಂದಿದ್ದೇವೆ. ಕಂಬಾರರ `ಚಾಳೇಶ~ ನಾಟಕದಲ್ಲಿ ಸಹ ಅವರು ಪ್ರಮುಖವಾಗಿ ಚಿತ್ರಿಸಿರುವುದು ಇವೇ ಎರಡು ಅಂಶಗಳನ್ನು.<br /> <br /> ನಾಟಕದ ವಸ್ತು ಮೇಲ್ನೋಟಕ್ಕೆ ತುಂಬಾ ತಮಾಷೆಯಾಗಿ ಕಂಡರೂ, ಒಳಹೊಕ್ಕು ನೋಡಿದಾಗ ಅದು ಬೇರೆ ಪದರಗಳನ್ನು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ನಾಟಕದ ಪ್ರಮುಖ ಪಾತ್ರಧಾರಿ ಗೋವಿಂದ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸದಾ ಹೊಸ ಸುಳ್ಳುಗಳ ಅನ್ವೇಷಣೆಯಲ್ಲಿ ತೊಡಗಿಕೊಂಡಿರುತ್ತಾನೆ.<br /> <br /> ತನ್ನ ಸುಳ್ಳುಗಳಿಗೆ ತನ್ನ ಹೆಂಡತಿ ಕಾಶಿಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾನೆ. ಒಂದು ಹಂತದಲ್ಲಿ ತಮಾಷೆಗೆಂದು ಹೇಳಿದ ಸುಳ್ಳು ಶಂಕರ, ಸರಸು ಮತ್ತು ಹುಶ್ಯ ಅವರ ಅವಕಾಶವಾದಿತನಕ್ಕೆ ಕಾರಣವಾಗಿ ನಿಲ್ಲುತ್ತದೆ.<br /> <br /> ಹೆಂಡತಿಯನ್ನು ಕಳೆದುಕೊಳ್ಳುವ ಗೋವಿಂದ, ಕೊನೆಗೆ ತನ್ನತನವನ್ನು ರಕ್ಷಿಸಿಕೊಳ್ಳಲು ಕೈಯಲ್ಲಿ ಬೆಲ್ಟು ಹಿಡಿದು ನಿಲ್ಲುವುದು ಸಾಂಕೇತಿಕವಾಗಿ ನಮಗೆ ಊಳಿಗಮಾನ್ಯ ಪದ್ಧತಿಯ ಕುರುಹಾಗಿ ಕಾಣುತ್ತದೆ. ನಮ್ಮ ಪ್ರಸ್ತುತ ರಾಜಕಾರಣ ಸಹ ಇದಕ್ಕೆ ಹೊರತಾಗಿಲ್ಲ... <br /> ====</p>.<p>ರಂಗ ಉಗಾದಿ ಅಂಗವಾಗಿ ಭಾನುವಾರ ಬೆಳಿಗ್ಗೆ 10.30ಕ್ಕೆ ಟಿ.ಬಿ.ಡ್ಯಾಮ್ನ ಕನ್ನಡ ಕಲಾ ಸಂಘದವರಿಂದ ರಂಗ ಪ್ರಾರ್ಥನೆ. 11ಕ್ಕೆ ನಟನಾ ತಂಡದಿಂದ ಅಲಿಬಾಬ ನಾಟಕ ಪ್ರದರ್ಶನ. ನಿರ್ದೇಶನ ಮಂಡ್ಯ ರಮೇಶ್. 12ಕ್ಕೆ ಲಾವಣಿ- ಹೇಳತೇನೆ ಕೇಳ. <br /> <br /> <strong>ಪ್ರಸ್ತುತಿ:</strong> ರಾಜಶೇಖರ ಕಂಬಾರ. ಮಧ್ಯಾಹ್ನ 1ಕ್ಕೆ ನಾಟಕ ಖರೋಖರ. ಇಳಕಲ್ಲಿನ ಸ್ನೇಹರಂಗ ತಂಡ ಪ್ರಸ್ತುತ ಪಡಿಸಲಿದ್ದು ನಾಟಕವನ್ನು ಅಶೋಕ ಬಾದರದಿನ್ನಿ ನಿರ್ದೇಶಿಸಿದ್ದಾರೆ. <br /> <br /> ಬಿ.ಜಯಶ್ರೀ ನಿರ್ದೇಶನದ `ಕರಿಮಾಯೆ~ ನಾಟಕವನ್ನು ಸ್ಪಂದನ ತಂಡ ಮಧ್ಯಾಹ್ನ 3ಕ್ಕೆ ಪ್ರಸ್ತುತ ಪಡಿಸಲಿದೆ. ಸಂಜೆ 6ಕ್ಕೆ ಕಂಬಾರರ ಕಾವ್ಯ ವಾಚನ/ಗಾಯನ. ರಾತ್ರಿ 8ಕ್ಕೆ ಕಂಬಾರರೊಂದಿಗೆ ಸಂವಾದ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಂಗ ಶಂಕರ ಆಯೋಜಿಸಿರುವ `ಕಂಬಾರರೊಂದಿಗೆ ರಂಗ ಯುಗಾದಿ~ ಕಾರ್ಯಕ್ರಮದಲ್ಲಿ ಹೊಸಪೇಟೆಯ ಕನ್ನಡ ಕಲಾಸಂಘದ ಕಲಾವಿದರು ಡಾ.ಚಂದ್ರಶೇಖರ ಕಂಬಾರ ಅವರ `ಚಾಳೇಶ~ ನಾಟಕ ಪ್ರದರ್ಶಿಸಲಿದ್ದಾರೆ. <br /> <br /> ಭಾನುವಾರ ನಡೆಯಲಿರುವ ರಂಗ ಯುಗಾದಿ ಕಾರ್ಯಕ್ರಮದಲ್ಲಿ ಸಂಜೆ 7ಕ್ಕೆ ಈ ನಾಟಕ ಪ್ರದರ್ಶನಗೊಳ್ಳಲಿದೆ. ನಿರ್ದೇಶಕ ಧನಂಜಯ ಕುಲಕರ್ಣಿ ಇದನ್ನು ವಿನ್ಯಾಸಗೊಳಿಸಿ, ನಿರ್ದೇಶಿಸಿದ್ದಾರೆ.<br /> <br /> ಜನವರಿಯಲ್ಲಿ ಮುಂಬೈ ಕರ್ನಾಟಕ ಸಂಘದವರು ಆಯೋಜಿಸಿದ್ದ ಅಖಿಲ ಭಾರತ ಕನ್ನಡ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶಿತಗೊಂಡ ಈ ನಾಟಕವು ಪ್ರೇಕ್ಷಕರಿಂದ, ನಿರ್ಣಾಯಕರಿಂದ ಅಪಾರ ಮೆಚ್ಚುಗೆ ಗಳಿಸಿ ಐದು ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.<br /> <br /> ಇದೇ ತಂಡದ ಕಲಾವಿದರು ರಂಗ ಯುಗಾದಿ ಕಾರ್ಯಕ್ರಮವನ್ನು ಕಂಬಾರರ ರಂಗ ಗೀತೆಗಳನ್ನು ಹಾಡುವುದರ ಮೂಲಕ ಆರಂಭಿಸಲಿದ್ದಾರೆ.<br /> <br /> <strong>ನಾಟಕದ ಕುರಿತು... </strong><br /> ಡಾ.ಚಂದ್ರಶೇಖರ ಕಂಬಾರರ ಅತ್ಯಂತ ಅಪರೂಪದ ಅಸಂಗತ ನಾಟಕಗಳಲ್ಲೊಂದಾದ `ಚಾಳೇಶ~ ಅನೇಕ ಸಂಕೀರ್ಣ ಅಂಶಗಳನ್ನೊಳಗೊಂಡಿದೆ.<br /> ಅವಕಾಶವಾದಿತನ ಮತ್ತು ಊಳಿಗಮಾನ್ಯ ಪದ್ಧತಿ ನಮ್ಮ ಸಂಸ್ಕೃತಿಗೆ ಹೊಸದೇನಲ್ಲ. <br /> <br /> ಅವಕಾಶ ಸಿಕ್ಕಾಗೆಲ್ಲ ಅದನ್ನು ಅತ್ಯಂತ ಸಮರ್ಥ ರೀತಿಯಲ್ಲಿ ನಾವುಗಳು ಸಾಬೀತುಪಡಿಸುತ್ತಲೇ ಬಂದಿದ್ದೇವೆ. ಕಂಬಾರರ `ಚಾಳೇಶ~ ನಾಟಕದಲ್ಲಿ ಸಹ ಅವರು ಪ್ರಮುಖವಾಗಿ ಚಿತ್ರಿಸಿರುವುದು ಇವೇ ಎರಡು ಅಂಶಗಳನ್ನು.<br /> <br /> ನಾಟಕದ ವಸ್ತು ಮೇಲ್ನೋಟಕ್ಕೆ ತುಂಬಾ ತಮಾಷೆಯಾಗಿ ಕಂಡರೂ, ಒಳಹೊಕ್ಕು ನೋಡಿದಾಗ ಅದು ಬೇರೆ ಪದರಗಳನ್ನು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ನಾಟಕದ ಪ್ರಮುಖ ಪಾತ್ರಧಾರಿ ಗೋವಿಂದ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸದಾ ಹೊಸ ಸುಳ್ಳುಗಳ ಅನ್ವೇಷಣೆಯಲ್ಲಿ ತೊಡಗಿಕೊಂಡಿರುತ್ತಾನೆ.<br /> <br /> ತನ್ನ ಸುಳ್ಳುಗಳಿಗೆ ತನ್ನ ಹೆಂಡತಿ ಕಾಶಿಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾನೆ. ಒಂದು ಹಂತದಲ್ಲಿ ತಮಾಷೆಗೆಂದು ಹೇಳಿದ ಸುಳ್ಳು ಶಂಕರ, ಸರಸು ಮತ್ತು ಹುಶ್ಯ ಅವರ ಅವಕಾಶವಾದಿತನಕ್ಕೆ ಕಾರಣವಾಗಿ ನಿಲ್ಲುತ್ತದೆ.<br /> <br /> ಹೆಂಡತಿಯನ್ನು ಕಳೆದುಕೊಳ್ಳುವ ಗೋವಿಂದ, ಕೊನೆಗೆ ತನ್ನತನವನ್ನು ರಕ್ಷಿಸಿಕೊಳ್ಳಲು ಕೈಯಲ್ಲಿ ಬೆಲ್ಟು ಹಿಡಿದು ನಿಲ್ಲುವುದು ಸಾಂಕೇತಿಕವಾಗಿ ನಮಗೆ ಊಳಿಗಮಾನ್ಯ ಪದ್ಧತಿಯ ಕುರುಹಾಗಿ ಕಾಣುತ್ತದೆ. ನಮ್ಮ ಪ್ರಸ್ತುತ ರಾಜಕಾರಣ ಸಹ ಇದಕ್ಕೆ ಹೊರತಾಗಿಲ್ಲ... <br /> ====</p>.<p>ರಂಗ ಉಗಾದಿ ಅಂಗವಾಗಿ ಭಾನುವಾರ ಬೆಳಿಗ್ಗೆ 10.30ಕ್ಕೆ ಟಿ.ಬಿ.ಡ್ಯಾಮ್ನ ಕನ್ನಡ ಕಲಾ ಸಂಘದವರಿಂದ ರಂಗ ಪ್ರಾರ್ಥನೆ. 11ಕ್ಕೆ ನಟನಾ ತಂಡದಿಂದ ಅಲಿಬಾಬ ನಾಟಕ ಪ್ರದರ್ಶನ. ನಿರ್ದೇಶನ ಮಂಡ್ಯ ರಮೇಶ್. 12ಕ್ಕೆ ಲಾವಣಿ- ಹೇಳತೇನೆ ಕೇಳ. <br /> <br /> <strong>ಪ್ರಸ್ತುತಿ:</strong> ರಾಜಶೇಖರ ಕಂಬಾರ. ಮಧ್ಯಾಹ್ನ 1ಕ್ಕೆ ನಾಟಕ ಖರೋಖರ. ಇಳಕಲ್ಲಿನ ಸ್ನೇಹರಂಗ ತಂಡ ಪ್ರಸ್ತುತ ಪಡಿಸಲಿದ್ದು ನಾಟಕವನ್ನು ಅಶೋಕ ಬಾದರದಿನ್ನಿ ನಿರ್ದೇಶಿಸಿದ್ದಾರೆ. <br /> <br /> ಬಿ.ಜಯಶ್ರೀ ನಿರ್ದೇಶನದ `ಕರಿಮಾಯೆ~ ನಾಟಕವನ್ನು ಸ್ಪಂದನ ತಂಡ ಮಧ್ಯಾಹ್ನ 3ಕ್ಕೆ ಪ್ರಸ್ತುತ ಪಡಿಸಲಿದೆ. ಸಂಜೆ 6ಕ್ಕೆ ಕಂಬಾರರ ಕಾವ್ಯ ವಾಚನ/ಗಾಯನ. ರಾತ್ರಿ 8ಕ್ಕೆ ಕಂಬಾರರೊಂದಿಗೆ ಸಂವಾದ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>