<p><strong>ಬೆಂಗಳೂರು:</strong> ಉತ್ತರ–ದಕ್ಷಿಣ ಕಾರಿಡಾರ್ ಅನ್ನು ನಮ್ಮ ಮೆಟ್ರೊ ಎರಡನೇ ಹಂತದ ವಿಸ್ತರಣೆಯಲ್ಲಿ ಪುಟ್ಟೇನಹಳ್ಳಿಯಿಂದ ಅಂಜನಾಪುರ ಟೌನ್ಶಿಪ್ವರೆಗಿನ ರೀಚ್–4ಬಿ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ.<br /> <br /> ಈ ಕಾಮಗಾರಿಯ ಗುತ್ತಿಗೆಯನ್ನು ವಹಿಸಿಕೊಂಡಿರುವ ನಾಗಾರ್ಜುನ ಕನ್ಸ್ಟ್ರಕ್ಷನ್ಸ್ ಕಂಪೆನಿಯು ರೀಚ್–4 ಮಾರ್ಗದುದ್ದಕ್ಕೂ ರಸ್ತೆ ವಿಸ್ತರಣೆ ಕಾರ್ಯದಲ್ಲಿ ತೊಡಗಿದೆ. ಬ್ಯಾರಿಕೇಡ್ಗಳನ್ನು ಅಳವಡಿಸುವ, ಅಗೆತ, ಪಿಲ್ಲರ್ ಅಳಡಿಸಲು ಗುಂಡಿ ಕೊರೆಯುವ ಹಾಗೂ ಒಳಚರಂಡಿ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. <br /> <br /> ‘ಈ ಮಾರ್ಗದಲ್ಲಿ ಒಟ್ಟು 1,722 ಪಿಲ್ಲರ್ಗಳು ಬರಲಿದ್ದು, ಈ ಪೈಕಿ 227 ಪಿಲ್ಲರ್ಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. 222 ಪಿಲ್ಲರ್ಗಳಿಗೆ ಪಿಲ್ಲರ್ ಕ್ಯಾಪ್ ಕಾಂಕ್ರೀಟೀಕರಣ ಮಾಡಬೇಕಾಗಿದ್ದು, ಈ ಪೈಕಿ ಆರು ಪಿಲ್ಲರ್ಕ್ಯಾಪ್ಗಳ ಕಾಂಕ್ರೀಟೀಕರಣ ಮುಗಿದಿದೆ’ ಎಂದು ಬಿಎಂಆರ್ಸಿಎಲ್ ವಕ್ತಾರ ವಸಂತ ರಾವ್ ತಿಳಿಸಿದರು.<br /> <br /> ‘ಈ ಮಾರ್ಗದಲ್ಲಿ ಅಂಜನಾಪುರ ಅಡ್ಡರಸ್ತೆ, ಕೃಷ್ಣಲೀಲಾಪಾರ್ಕ್, ವಜ್ರಹಳ್ಳಿ, ತಲಘಟ್ಟಪುರ ಹಾಗೂ ಅಂಜನಾಪುರದಲ್ಲಿ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ನಿಲ್ದಾಣಗಳ ಬಳಿ ಒಳಚರಂಡಿ ಕೆಲಸ, ಸರ್ವೀಸ್ ರಸ್ತೆ ಹಾಗೂ ಪಂಚಾಂಗ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. </p>.<p>ಅಂಜನಾಪುರ ಅಡ್ಡರಸ್ತೆ, ಕೃಷ್ಣಲೀಲಾ ಪಾರ್ಕ್ ಹಾಗೂ ವಜ್ರಹಳ್ಳಿ ನಿಲ್ದಾಣಗಳ ಬಳಿ ಪಿಲ್ಲರ್ಗಳನ್ನು ಅಳವಡಿಸುವುದಕ್ಕೆ ಗುಂಡಿ ತೆಗೆಯುವ ಕಾರ್ಯ ಹಾಗೂ ಇಲ್ಲಿ ರಸ್ತೆ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ’ ಎಂದು ಅವರು ತಿಳಿಸಿದರು. <br /> <br /> <strong>ಕೊಳವೆ ಸ್ಥಳಾಂತರ: </strong>‘ಎಲ್ಲಿ ನೀರು ಪೂರೈಕೆ ಕೊಳವೆಗಳನ್ನು ಹಾಗೂ ಒಳಚರಂಡಿ ಕೊಳವೆಗಳನ್ನು ಸ್ಥಳಾಂತರಿಸಬೇಕಾಗುತ್ತದೆ ಎಂಬುದನ್ನು ಗುರುತಿಸಿದ್ದೇವೆ. ಸ್ಥಳಾಂತರದ ಕುರಿತು ಬಿಬಿಎಂಪಿ ಹಾಗೂ ಜಲಮಂಡಳಿ ಜೊತೆ ಮಾತುಕತೆ ನಡೆಸಿದ್ದೇವೆ.</p>.<p>ಈ ಕೊಳವೆಗಳ ಸ್ಥಳಾಂತರಕ್ಕೆ ಸಂಬಂಧಿಸಿ ಬಿಎಂಆರ್ಸಿಎಲ್ ಸಂಪೂರ್ಣ ಮೊತ್ತವನ್ನು ಬಿಬಿಎಂಪಿ ಹಾಗೂ ಜಲಮಂಡಳಿಗೆ ಪಾವತಿಸಿದೆ. ಎರಡು ರೈಲು ನಿಲ್ದಾಣಗಳು ನಿರ್ಮಾಣವಾಗುವ ಕಡೆ ಜಲಮಂಡಳಿಯವರು ಈಗಾಗಲೇ ಬದಲಿ ಕೊಳವೆ ಮಾರ್ಗಗಳನ್ನು ಅಳವಡಿಸಿದ್ದಾರೆ’ ಎಂದರು.<br /> <br /> ‘ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸುವ ಕಾಮಗಾರಿಯ ಗುತ್ತಿಗೆಯನ್ನು ಎರಡು ಏಜೆನ್ಸಿಗಳಿಗೆ ನೀಡಲಾಗಿದೆ. ವಿದ್ಯುತ್ ಪರಿವರ್ತಕಗಳನ್ನು ಸ್ಥಳಾಂತರಿಸುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.</p>.<p><strong>ವಾಹನ ಸಂಚಾರ ತಡೆದು ಡಾಂಬರೀಕರಣ– ಸ್ಥಳೀಯರ ಅಸಮಾಧಾನ</strong><br /> ದೊಡ್ಡಕಲ್ಲಸಂದ್ರ ಬಳಿ ಮೆಟ್ರೊ ಕಾಮಗಾರಿ ಸಲುವಾಗಿ ಸರ್ವೀಸ್ ರಸ್ತೆಯನ್ನು ನಿರ್ಮಿಸಲಾಗಿದೆ. ಇದರ ಡಾಂಬರೀಕರಣ ಕಾರ್ಯ ಇತ್ತೀಚೆಗೆ ನಡೆಯಿತು. ಹಗಲು ಹೊತ್ತಿನಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಡಾಂಬರೀಕರಣ ನಡೆಸಿದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ರಾತ್ರಿ ಹೊತ್ತು ವಾಹನ ಸಂಚಾರ ವಿರಳ ಇರುವಾಗ ಕಾಮಗಾರಿ ನಡೆಸಿದರೆ ಸಾರ್ವಜನಿಕರು ಅನನುಕೂಲ ಎದುರಿಸುವುದನ್ನು ತಪ್ಪಿಸಬಹುದು’ ಎಂದು ಸ್ಥಳೀಯರೊಬ್ಬರು ಅಭಿಪ್ರಾಯಪಟ್ಟರು.</p>.<p><strong>ಎರಡು ಮರಗಳ ಮರುನಾಟಿ</strong><br /> ‘ನೈಸ್ ರಸ್ತೆವರೆಗೆ ಕಾಮಗಾರಿ ಮುಂದುವರಿಸಲು ಕೆಲವು ಮರಗಳನ್ನು ಕಡಿಯಬೇಕಾಗುತ್ತದೆ. ಇದಕ್ಕೆ ಅನುಮತಿ ನೀಡುವಂತೆ ಬಿಬಿಎಂಪಿ ಅರಣ್ಯ ವಿಭಾಗಕ್ಕೆ ಪತ್ರ ಬರೆದಿದ್ದೇವೆ. ಇಲ್ಲಿನ ಎರಡು ಮರಗಳನ್ನು ಕಿತ್ತು ಬೇರೆ ಕಡೆ ಮರುನಾಟಿ ಮಾಡಲಾಗಿದೆ’ ಎಂದು ವಸಂತ ರಾವ್ ತಿಳಿಸಿದರು.<br /> ‘ನೈಸ್ ರಸ್ತೆಯ ಆಚೆಗೆ 44 ಮರಗಳ ಪೈಕಿ 34 ಮರಗಳನ್ನು ಈಗಾಗಲೇ ಕಡಿಯಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಉತ್ತರ–ದಕ್ಷಿಣ ಕಾರಿಡಾರ್ ಅನ್ನು ನಮ್ಮ ಮೆಟ್ರೊ ಎರಡನೇ ಹಂತದ ವಿಸ್ತರಣೆಯಲ್ಲಿ ಪುಟ್ಟೇನಹಳ್ಳಿಯಿಂದ ಅಂಜನಾಪುರ ಟೌನ್ಶಿಪ್ವರೆಗಿನ ರೀಚ್–4ಬಿ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ.<br /> <br /> ಈ ಕಾಮಗಾರಿಯ ಗುತ್ತಿಗೆಯನ್ನು ವಹಿಸಿಕೊಂಡಿರುವ ನಾಗಾರ್ಜುನ ಕನ್ಸ್ಟ್ರಕ್ಷನ್ಸ್ ಕಂಪೆನಿಯು ರೀಚ್–4 ಮಾರ್ಗದುದ್ದಕ್ಕೂ ರಸ್ತೆ ವಿಸ್ತರಣೆ ಕಾರ್ಯದಲ್ಲಿ ತೊಡಗಿದೆ. ಬ್ಯಾರಿಕೇಡ್ಗಳನ್ನು ಅಳವಡಿಸುವ, ಅಗೆತ, ಪಿಲ್ಲರ್ ಅಳಡಿಸಲು ಗುಂಡಿ ಕೊರೆಯುವ ಹಾಗೂ ಒಳಚರಂಡಿ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. <br /> <br /> ‘ಈ ಮಾರ್ಗದಲ್ಲಿ ಒಟ್ಟು 1,722 ಪಿಲ್ಲರ್ಗಳು ಬರಲಿದ್ದು, ಈ ಪೈಕಿ 227 ಪಿಲ್ಲರ್ಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. 222 ಪಿಲ್ಲರ್ಗಳಿಗೆ ಪಿಲ್ಲರ್ ಕ್ಯಾಪ್ ಕಾಂಕ್ರೀಟೀಕರಣ ಮಾಡಬೇಕಾಗಿದ್ದು, ಈ ಪೈಕಿ ಆರು ಪಿಲ್ಲರ್ಕ್ಯಾಪ್ಗಳ ಕಾಂಕ್ರೀಟೀಕರಣ ಮುಗಿದಿದೆ’ ಎಂದು ಬಿಎಂಆರ್ಸಿಎಲ್ ವಕ್ತಾರ ವಸಂತ ರಾವ್ ತಿಳಿಸಿದರು.<br /> <br /> ‘ಈ ಮಾರ್ಗದಲ್ಲಿ ಅಂಜನಾಪುರ ಅಡ್ಡರಸ್ತೆ, ಕೃಷ್ಣಲೀಲಾಪಾರ್ಕ್, ವಜ್ರಹಳ್ಳಿ, ತಲಘಟ್ಟಪುರ ಹಾಗೂ ಅಂಜನಾಪುರದಲ್ಲಿ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ನಿಲ್ದಾಣಗಳ ಬಳಿ ಒಳಚರಂಡಿ ಕೆಲಸ, ಸರ್ವೀಸ್ ರಸ್ತೆ ಹಾಗೂ ಪಂಚಾಂಗ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. </p>.<p>ಅಂಜನಾಪುರ ಅಡ್ಡರಸ್ತೆ, ಕೃಷ್ಣಲೀಲಾ ಪಾರ್ಕ್ ಹಾಗೂ ವಜ್ರಹಳ್ಳಿ ನಿಲ್ದಾಣಗಳ ಬಳಿ ಪಿಲ್ಲರ್ಗಳನ್ನು ಅಳವಡಿಸುವುದಕ್ಕೆ ಗುಂಡಿ ತೆಗೆಯುವ ಕಾರ್ಯ ಹಾಗೂ ಇಲ್ಲಿ ರಸ್ತೆ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ’ ಎಂದು ಅವರು ತಿಳಿಸಿದರು. <br /> <br /> <strong>ಕೊಳವೆ ಸ್ಥಳಾಂತರ: </strong>‘ಎಲ್ಲಿ ನೀರು ಪೂರೈಕೆ ಕೊಳವೆಗಳನ್ನು ಹಾಗೂ ಒಳಚರಂಡಿ ಕೊಳವೆಗಳನ್ನು ಸ್ಥಳಾಂತರಿಸಬೇಕಾಗುತ್ತದೆ ಎಂಬುದನ್ನು ಗುರುತಿಸಿದ್ದೇವೆ. ಸ್ಥಳಾಂತರದ ಕುರಿತು ಬಿಬಿಎಂಪಿ ಹಾಗೂ ಜಲಮಂಡಳಿ ಜೊತೆ ಮಾತುಕತೆ ನಡೆಸಿದ್ದೇವೆ.</p>.<p>ಈ ಕೊಳವೆಗಳ ಸ್ಥಳಾಂತರಕ್ಕೆ ಸಂಬಂಧಿಸಿ ಬಿಎಂಆರ್ಸಿಎಲ್ ಸಂಪೂರ್ಣ ಮೊತ್ತವನ್ನು ಬಿಬಿಎಂಪಿ ಹಾಗೂ ಜಲಮಂಡಳಿಗೆ ಪಾವತಿಸಿದೆ. ಎರಡು ರೈಲು ನಿಲ್ದಾಣಗಳು ನಿರ್ಮಾಣವಾಗುವ ಕಡೆ ಜಲಮಂಡಳಿಯವರು ಈಗಾಗಲೇ ಬದಲಿ ಕೊಳವೆ ಮಾರ್ಗಗಳನ್ನು ಅಳವಡಿಸಿದ್ದಾರೆ’ ಎಂದರು.<br /> <br /> ‘ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸುವ ಕಾಮಗಾರಿಯ ಗುತ್ತಿಗೆಯನ್ನು ಎರಡು ಏಜೆನ್ಸಿಗಳಿಗೆ ನೀಡಲಾಗಿದೆ. ವಿದ್ಯುತ್ ಪರಿವರ್ತಕಗಳನ್ನು ಸ್ಥಳಾಂತರಿಸುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.</p>.<p><strong>ವಾಹನ ಸಂಚಾರ ತಡೆದು ಡಾಂಬರೀಕರಣ– ಸ್ಥಳೀಯರ ಅಸಮಾಧಾನ</strong><br /> ದೊಡ್ಡಕಲ್ಲಸಂದ್ರ ಬಳಿ ಮೆಟ್ರೊ ಕಾಮಗಾರಿ ಸಲುವಾಗಿ ಸರ್ವೀಸ್ ರಸ್ತೆಯನ್ನು ನಿರ್ಮಿಸಲಾಗಿದೆ. ಇದರ ಡಾಂಬರೀಕರಣ ಕಾರ್ಯ ಇತ್ತೀಚೆಗೆ ನಡೆಯಿತು. ಹಗಲು ಹೊತ್ತಿನಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಡಾಂಬರೀಕರಣ ನಡೆಸಿದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ರಾತ್ರಿ ಹೊತ್ತು ವಾಹನ ಸಂಚಾರ ವಿರಳ ಇರುವಾಗ ಕಾಮಗಾರಿ ನಡೆಸಿದರೆ ಸಾರ್ವಜನಿಕರು ಅನನುಕೂಲ ಎದುರಿಸುವುದನ್ನು ತಪ್ಪಿಸಬಹುದು’ ಎಂದು ಸ್ಥಳೀಯರೊಬ್ಬರು ಅಭಿಪ್ರಾಯಪಟ್ಟರು.</p>.<p><strong>ಎರಡು ಮರಗಳ ಮರುನಾಟಿ</strong><br /> ‘ನೈಸ್ ರಸ್ತೆವರೆಗೆ ಕಾಮಗಾರಿ ಮುಂದುವರಿಸಲು ಕೆಲವು ಮರಗಳನ್ನು ಕಡಿಯಬೇಕಾಗುತ್ತದೆ. ಇದಕ್ಕೆ ಅನುಮತಿ ನೀಡುವಂತೆ ಬಿಬಿಎಂಪಿ ಅರಣ್ಯ ವಿಭಾಗಕ್ಕೆ ಪತ್ರ ಬರೆದಿದ್ದೇವೆ. ಇಲ್ಲಿನ ಎರಡು ಮರಗಳನ್ನು ಕಿತ್ತು ಬೇರೆ ಕಡೆ ಮರುನಾಟಿ ಮಾಡಲಾಗಿದೆ’ ಎಂದು ವಸಂತ ರಾವ್ ತಿಳಿಸಿದರು.<br /> ‘ನೈಸ್ ರಸ್ತೆಯ ಆಚೆಗೆ 44 ಮರಗಳ ಪೈಕಿ 34 ಮರಗಳನ್ನು ಈಗಾಗಲೇ ಕಡಿಯಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>