<p><strong>ನವದೆಹಲಿ (ಪಿಟಿಐ):</strong> ದೇವಯಾನಿ ಖೋಬ್ರಾಗಡೆ ಅವರ ಬಂಧನದಿಂದ ಅಮೆರಿಕ ಹಾಗೂ ಭಾರತದ ನಡುವೆ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟು ಶೀಘ್ರದಲ್ಲಿ ಬಗೆಹರಿಯುವ ವಿಶ್ವಾಸವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಭಾನುವಾರ ವ್ಯಕ್ತಪಡಿಸಿದ್ದಾರೆ.<br /> <br /> ಈ ಮಧ್ಯೆ, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವುದಕ್ಕಿಂತಲೂ ಮೊದಲಿನ ಪ್ರಕ್ರಿಯೆಗಳಿಂದ ತಮಗೆ ವಿನಾಯ್ತಿ ನೀಡುವಂತೆ ಕೋರಿ ದೇವಯಾನಿ ಅವರು ಅಮೆರಿಕದಲ್ಲಿ ಸಲ್ಲಿಸಿದ್ದ ಅರ್ಜಿಯ ಕುರಿತ ನಿರ್ಧಾರ ಸೋಮವಾರ ಹೊರಬೀಳಲಿದೆ.<br /> <br /> ಬಂಧನ ಪ್ರಕರಣದ ನಂತರ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟು ಬಗೆಹರಿಸುವ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖುರ್ಷಿದ್, ‘ಜಗತ್ತು ಮುಂದಕ್ಕೆ ಸಾಗುತ್ತಲೇ ಇರುತ್ತದೆ. ಅದು ಎಲ್ಲೂ ನಿಲ್ಲುವುದಿಲ್ಲ. ಸಾಯುವುದೂ ಇಲ್ಲ. ಏನಾದರೂ ನಡೆದೇ ನಡೆಯುತ್ತದೆ’ ಎಂದು ಹೇಳಿದರು.<br /> <br /> ಉಭಯ ರಾಷ್ಟ್ರಗಳ ಬಾಂಧವ್ಯದ ಕುರಿತಂತೆ ತಮ್ಮ ಹೇಳಿಕೆಯನ್ನು ಅಮೆರಿಕ ಸ್ವಾಗತಿಸಿರುವುದರ ಬಗ್ಗೆ ಗಮನ ಸೆಳೆದಾಗ, ‘ಕೇವಲ ಹೇಳಿಕೆ ಸ್ವಾಗತಿಸಿದರೆ ಸಾಲದು. ಅವರು ಏನಾದರೂ ಮಾಡಲೇಬೇಕು’ ಎಂದರು.<br /> <br /> ವಿನಾಯ್ತಿ ನೀಡಲು ಮನವಿ (ವಿಶ್ವಸಂಸ್ಥೆ ವರದಿ): ಹೆಚ್ಚಿನ ವಿನಾಯ್ತಿ ಸೌಲಭ್ಯ ಪಡೆಯುವುದಕ್ಕಾಗಿ ವಿಶ್ವಸಂಸ್ಥೆಗೆ ಸಲಹೆಗಾರರಾಗಿ ವರ್ಗಾವಣೆಗೊಂಡಿರುವ ದೇವಯಾನಿ ಖೋಬ್ರಾಗಡೆ ಅವರಿಗೆ ರಾಜತಾಂತ್ರಿಕ ಅಧಿಕಾರಿಗೆ ನೀಡುವ ಎಲ್ಲಾ ವಿನಾಯ್ತಿಗಳನ್ನು ನೀಡುವಂತೆ ಭಾರತವು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರಿಗೆ ಮನವಿ ಮಾಡಿದೆ.<br /> <br /> ವಿಶ್ವಸಂಸ್ಥೆಗೆ ಭಾರತದ ರಾಯಭಾರಿ ಆಗಿರುವ ಅಶೋಕ್ ಮುಖರ್ಜಿ ಅವರು ಈ ಸಂಬಂಧ, ಡಿಸೆಂಬರ್ 18–19ರಂದು ಬಾನ್ ಕಿ–--ಮೂನ್ ಅವರಿಗೆ ಪತ್ರ ಬರೆದಿದ್ದಾರೆ.<br /> <br /> ಪತ್ರದ ಜೊತೆಗೆ ದೇವಯಾನಿ ಅವರ ಪಾಸ್ಪೋರ್ಟ್ ಮಾಹಿತಿಗಳು ಸೇರಿದಂತೆ ಹಲವು ದಾಖಲೆಗಳನ್ನೂ ಮುಖರ್ಜಿ ಕಳುಹಿಸಿದ್ದಾರೆ.<br /> ‘ದೇವಯಾನಿ ಅವರನ್ನು ಸಲಹೆಗಾರರಾಗಿ ವರ್ಗಾವಣೆ ಮಾಡಿರುವ ಮಾಹಿತಿಯನ್ನು ತಿಳಿಸಿ ಮತ್ತು ರಾಜತಾಂತ್ರಿಕ ಅಧಿಕಾರಿಗೆ ಇರುವ ಎಲ್ಲಾ ವಿನಾಯ್ತಿ ಸೌಲಭ್ಯಗಳನ್ನು ಅವರಿಗೂ ನೀಡುವಂತೆ ಮನವಿ ಮಾಡಿ ನಾನು ಬಾನ್ ಕಿ ಮೂನ್ ಅವರಿಗೆ ಪತ್ರ ಬರೆದಿದ್ದೇನೆ’ ಎಂದು ಮುಖರ್ಜಿ ಹೇಳಿದ್ದಾರೆ.<br /> <br /> ಭಾರತದಿಂದ ಅಧಿಕೃತ ಪತ್ರ ಬಂದಿರುವುದನ್ನು ವಿಶ್ವಸಂಸ್ಥೆ ದೃಢಪಡಿಸಿದೆ. ಭಾರತದ ಮನವಿ ಕುರಿತು ಪ್ರತಿಕ್ರಿ ಯಿಸಿರುವ ವಿಶ್ವಸಂಸ್ಥೆ, ‘ನಿಯಮಗಳಿಗೆ ಅನುಸಾರ’ ಮನವಿ ಪರಿಶೀಲಿಸುವುದಾಗಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ದೇವಯಾನಿ ಖೋಬ್ರಾಗಡೆ ಅವರ ಬಂಧನದಿಂದ ಅಮೆರಿಕ ಹಾಗೂ ಭಾರತದ ನಡುವೆ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟು ಶೀಘ್ರದಲ್ಲಿ ಬಗೆಹರಿಯುವ ವಿಶ್ವಾಸವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಭಾನುವಾರ ವ್ಯಕ್ತಪಡಿಸಿದ್ದಾರೆ.<br /> <br /> ಈ ಮಧ್ಯೆ, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವುದಕ್ಕಿಂತಲೂ ಮೊದಲಿನ ಪ್ರಕ್ರಿಯೆಗಳಿಂದ ತಮಗೆ ವಿನಾಯ್ತಿ ನೀಡುವಂತೆ ಕೋರಿ ದೇವಯಾನಿ ಅವರು ಅಮೆರಿಕದಲ್ಲಿ ಸಲ್ಲಿಸಿದ್ದ ಅರ್ಜಿಯ ಕುರಿತ ನಿರ್ಧಾರ ಸೋಮವಾರ ಹೊರಬೀಳಲಿದೆ.<br /> <br /> ಬಂಧನ ಪ್ರಕರಣದ ನಂತರ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟು ಬಗೆಹರಿಸುವ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖುರ್ಷಿದ್, ‘ಜಗತ್ತು ಮುಂದಕ್ಕೆ ಸಾಗುತ್ತಲೇ ಇರುತ್ತದೆ. ಅದು ಎಲ್ಲೂ ನಿಲ್ಲುವುದಿಲ್ಲ. ಸಾಯುವುದೂ ಇಲ್ಲ. ಏನಾದರೂ ನಡೆದೇ ನಡೆಯುತ್ತದೆ’ ಎಂದು ಹೇಳಿದರು.<br /> <br /> ಉಭಯ ರಾಷ್ಟ್ರಗಳ ಬಾಂಧವ್ಯದ ಕುರಿತಂತೆ ತಮ್ಮ ಹೇಳಿಕೆಯನ್ನು ಅಮೆರಿಕ ಸ್ವಾಗತಿಸಿರುವುದರ ಬಗ್ಗೆ ಗಮನ ಸೆಳೆದಾಗ, ‘ಕೇವಲ ಹೇಳಿಕೆ ಸ್ವಾಗತಿಸಿದರೆ ಸಾಲದು. ಅವರು ಏನಾದರೂ ಮಾಡಲೇಬೇಕು’ ಎಂದರು.<br /> <br /> ವಿನಾಯ್ತಿ ನೀಡಲು ಮನವಿ (ವಿಶ್ವಸಂಸ್ಥೆ ವರದಿ): ಹೆಚ್ಚಿನ ವಿನಾಯ್ತಿ ಸೌಲಭ್ಯ ಪಡೆಯುವುದಕ್ಕಾಗಿ ವಿಶ್ವಸಂಸ್ಥೆಗೆ ಸಲಹೆಗಾರರಾಗಿ ವರ್ಗಾವಣೆಗೊಂಡಿರುವ ದೇವಯಾನಿ ಖೋಬ್ರಾಗಡೆ ಅವರಿಗೆ ರಾಜತಾಂತ್ರಿಕ ಅಧಿಕಾರಿಗೆ ನೀಡುವ ಎಲ್ಲಾ ವಿನಾಯ್ತಿಗಳನ್ನು ನೀಡುವಂತೆ ಭಾರತವು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರಿಗೆ ಮನವಿ ಮಾಡಿದೆ.<br /> <br /> ವಿಶ್ವಸಂಸ್ಥೆಗೆ ಭಾರತದ ರಾಯಭಾರಿ ಆಗಿರುವ ಅಶೋಕ್ ಮುಖರ್ಜಿ ಅವರು ಈ ಸಂಬಂಧ, ಡಿಸೆಂಬರ್ 18–19ರಂದು ಬಾನ್ ಕಿ–--ಮೂನ್ ಅವರಿಗೆ ಪತ್ರ ಬರೆದಿದ್ದಾರೆ.<br /> <br /> ಪತ್ರದ ಜೊತೆಗೆ ದೇವಯಾನಿ ಅವರ ಪಾಸ್ಪೋರ್ಟ್ ಮಾಹಿತಿಗಳು ಸೇರಿದಂತೆ ಹಲವು ದಾಖಲೆಗಳನ್ನೂ ಮುಖರ್ಜಿ ಕಳುಹಿಸಿದ್ದಾರೆ.<br /> ‘ದೇವಯಾನಿ ಅವರನ್ನು ಸಲಹೆಗಾರರಾಗಿ ವರ್ಗಾವಣೆ ಮಾಡಿರುವ ಮಾಹಿತಿಯನ್ನು ತಿಳಿಸಿ ಮತ್ತು ರಾಜತಾಂತ್ರಿಕ ಅಧಿಕಾರಿಗೆ ಇರುವ ಎಲ್ಲಾ ವಿನಾಯ್ತಿ ಸೌಲಭ್ಯಗಳನ್ನು ಅವರಿಗೂ ನೀಡುವಂತೆ ಮನವಿ ಮಾಡಿ ನಾನು ಬಾನ್ ಕಿ ಮೂನ್ ಅವರಿಗೆ ಪತ್ರ ಬರೆದಿದ್ದೇನೆ’ ಎಂದು ಮುಖರ್ಜಿ ಹೇಳಿದ್ದಾರೆ.<br /> <br /> ಭಾರತದಿಂದ ಅಧಿಕೃತ ಪತ್ರ ಬಂದಿರುವುದನ್ನು ವಿಶ್ವಸಂಸ್ಥೆ ದೃಢಪಡಿಸಿದೆ. ಭಾರತದ ಮನವಿ ಕುರಿತು ಪ್ರತಿಕ್ರಿ ಯಿಸಿರುವ ವಿಶ್ವಸಂಸ್ಥೆ, ‘ನಿಯಮಗಳಿಗೆ ಅನುಸಾರ’ ಮನವಿ ಪರಿಶೀಲಿಸುವುದಾಗಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>