<p>ನವದೆಹಲಿ (ಪಿಟಿಐ): ರಾಜಧಾನಿ ನಗರ ದೆಹಲಿಯಲ್ಲಿ ಭಾನುವಾರ ಬಣ್ಣಗಳ ಹಬ್ಬ ಹೋಳಿಯದ್ದೇ ಸಡಗರ. ಎಲ್ಲಾ ವಯೋಮಾನದ ಜನರು ರಸ್ತೆಗಳಲ್ಲಿ ಒಂದೆಡೆ ಸೇರಿ ಬಣ್ಣಗಳನ್ನು ಎರಚಿ ಸಂಭ್ರಮಿಸಿದರು.<br /> <br /> ವೃಂದಾವನದಲ್ಲಿ ವಿಧವೆಯರು ಹೋಳಿ ಹಬ್ಬವನ್ನು ಗುಲಾಬಿ ಎಲೆಗಳು ಹಾಗೂ ಬಣ್ಣಗಳನ್ನು ಎರಚಿ, ಸಿಹಿ ಹಂಚಿ, ನೃತ್ಯ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದರು.<br /> <br /> ಬಾಲಿವುಡ್ ಅಂಗಳದಲ್ಲಿ ಹೋಳಿ ಸಂಭ್ರಮ: ಬಾಲಿವುಡ್ ಅಂಗಳದಲ್ಲೂ ಬಣ್ಣಗಳ ಹಬ್ಬ ಹೋಳಿಯ ಶುಭಾಶಯಗಳು ಹರಿದಾಡಿವೆ. ಬಾಲಿವುಡ್ ನಟ, ನಟಿಯರು ತಮ್ಮ ಪ್ರೀತಿಯ ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಟ್ವೀಟ್ ಮಾಡಿ ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.<br /> ‘ಹೋಳಿ ಹಬ್ಬ ನಿಮಗೆಲ್ಲಾ ಸಂತಸ ತರಲಿ’ ಎಂದು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.<br /> <br /> ‘ಕಳೆದ ಕೆಲವು ವರ್ಷಗಳ ಹಿಂದಿನ ಕೆಟ್ಟ ಕ್ಷಣಗಳಿಂದಾಗಿ ನಾನು ಸಂಭ್ರಮಾಚರಣೆಯಲ್ಲಿ ಭಾಗವಹಿಸುವುದಿಲ್ಲ. ಆದರೆ ಮಗಳು ಶ್ವೇತಾ ಹುಟ್ಟುಹಬ್ಬ ಇರುವ ಕಾರಣ ಅವಳ ಜೊತೆ ಸಮಯ ಕಳೆಯುತ್ತೇನೆ‘ ಎಂದು ಅಮಿತಾಭ್ ಹೇಳಿದ್ದಾರೆ.<br /> <br /> ನಟಿಯರಾದ ಶ್ರುತಿ ಹಾಸನ್, ಮಲ್ಲಿಕಾ ಶೆರಾವತ್ ಅವರೂ ಶುಭಾಶಯ ಟ್ವೀಟ್ ಮಾಡಿದ್ದಾರೆ. ಮೂವರ ಸಾವು: ಹೋಳಿ ಆಚರಣೆ ವೇಳೆ ರಾಜಸ್ತಾನದ ಬನ್್ಸವಾರಾ ಜಿಲ್ಲೆಯ ಮಾಹಿ ಕಾಲುವೆಯಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ರಾಜಧಾನಿ ನಗರ ದೆಹಲಿಯಲ್ಲಿ ಭಾನುವಾರ ಬಣ್ಣಗಳ ಹಬ್ಬ ಹೋಳಿಯದ್ದೇ ಸಡಗರ. ಎಲ್ಲಾ ವಯೋಮಾನದ ಜನರು ರಸ್ತೆಗಳಲ್ಲಿ ಒಂದೆಡೆ ಸೇರಿ ಬಣ್ಣಗಳನ್ನು ಎರಚಿ ಸಂಭ್ರಮಿಸಿದರು.<br /> <br /> ವೃಂದಾವನದಲ್ಲಿ ವಿಧವೆಯರು ಹೋಳಿ ಹಬ್ಬವನ್ನು ಗುಲಾಬಿ ಎಲೆಗಳು ಹಾಗೂ ಬಣ್ಣಗಳನ್ನು ಎರಚಿ, ಸಿಹಿ ಹಂಚಿ, ನೃತ್ಯ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದರು.<br /> <br /> ಬಾಲಿವುಡ್ ಅಂಗಳದಲ್ಲಿ ಹೋಳಿ ಸಂಭ್ರಮ: ಬಾಲಿವುಡ್ ಅಂಗಳದಲ್ಲೂ ಬಣ್ಣಗಳ ಹಬ್ಬ ಹೋಳಿಯ ಶುಭಾಶಯಗಳು ಹರಿದಾಡಿವೆ. ಬಾಲಿವುಡ್ ನಟ, ನಟಿಯರು ತಮ್ಮ ಪ್ರೀತಿಯ ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಟ್ವೀಟ್ ಮಾಡಿ ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.<br /> ‘ಹೋಳಿ ಹಬ್ಬ ನಿಮಗೆಲ್ಲಾ ಸಂತಸ ತರಲಿ’ ಎಂದು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.<br /> <br /> ‘ಕಳೆದ ಕೆಲವು ವರ್ಷಗಳ ಹಿಂದಿನ ಕೆಟ್ಟ ಕ್ಷಣಗಳಿಂದಾಗಿ ನಾನು ಸಂಭ್ರಮಾಚರಣೆಯಲ್ಲಿ ಭಾಗವಹಿಸುವುದಿಲ್ಲ. ಆದರೆ ಮಗಳು ಶ್ವೇತಾ ಹುಟ್ಟುಹಬ್ಬ ಇರುವ ಕಾರಣ ಅವಳ ಜೊತೆ ಸಮಯ ಕಳೆಯುತ್ತೇನೆ‘ ಎಂದು ಅಮಿತಾಭ್ ಹೇಳಿದ್ದಾರೆ.<br /> <br /> ನಟಿಯರಾದ ಶ್ರುತಿ ಹಾಸನ್, ಮಲ್ಲಿಕಾ ಶೆರಾವತ್ ಅವರೂ ಶುಭಾಶಯ ಟ್ವೀಟ್ ಮಾಡಿದ್ದಾರೆ. ಮೂವರ ಸಾವು: ಹೋಳಿ ಆಚರಣೆ ವೇಳೆ ರಾಜಸ್ತಾನದ ಬನ್್ಸವಾರಾ ಜಿಲ್ಲೆಯ ಮಾಹಿ ಕಾಲುವೆಯಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>