<p><strong>ನವದೆಹಲಿ (ಪಿಟಿಐ): </strong> ಮಲೇಷ್ಯಾದ ಇಫೋದಲ್ಲಿ ನಡೆಯಲಿರುವ ಸುಲ್ತಾನ್ ಅಜ್ಲನ್ ಷಾ ಹಾಕಿ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ.<br /> <br /> ಕರ್ನಾಟಕದ ಅರ್ಜುನ್ ಹಾಲಪ್ಪ, ಭರತ್ ಕುಮಾರ್ ಚೆತ್ರಿ, ಧನಂಜಯ್ ಮಹಾದಿಕ್ ಹಾಗೂ ಎಸ್.ವಿ.ಸುನಿಲ್ ಸ್ಥಾನ ಪಡೆದಿದ್ದಾರೆ. ‘ಹಾಕಿ ಇಂಡಿಯಾ’ವು ಈ ಟೂರ್ನಿಗೆ ಮಂಗಳವಾರ ಒಟ್ಟು 18 ಮಂದಿ ಆಟಗಾರರನ್ನು ಆಯ್ಕೆ ಮಾಡಿದೆ. ಮಾಜಿ ನಾಯಕ ರಾಜ್ಪಾಲ್ ಸಿಂಗ್ ಸೇರಿದಂತೆ ಪ್ರಮುಖ ಆಟಗಾರರನ್ನು ಕೈಬಿಡಲಾಗಿದೆ. ಮೇ 5ರಿಂದ 15ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತ ತಂಡವನ್ನು ಅರ್ಜುನ್ ಹಾಲಪ್ಪ ಮುನ್ನಡೆಸಲಿದ್ದಾರೆ. <br /> <br /> ಭಾರತ ಕಳೆದ ಬಾರಿ ಮಳೆಯ ಕಾರಣ ದಕ್ಷಿಣ ಕೊರಿಯಾ ಜೊತೆ ಜಂಟಿ ಚಾಂಪಿಯನ್ ಆಗಿತ್ತು. ಭಾರತವಲ್ಲದೇ, ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಕೊರಿಯಾ ಹಾಗೂ ಆತಿಥೇಯ ಮಲೇಷ್ಯಾ ತಂಡಗಳು ಪಾಲ್ಗೊಳ್ಳಲಿವೆ.<br /> <br /> <strong>ತಂಡ ಇಂತಿದೆ:</strong> ಗೋಲ್ಕೀಪರ್ಸ್: ಭರತ್ ಕುಮಾರ್ ಚೆತ್ರಿ, ಆ್ಯಡ್ರಿಯಾನ್ ಡಿಸೋಜಾ. ಡಿಫೆಂಡರ್ಸ್: ಧನಂಜಯ್ ಮಹಾದಿಕ್, ರೂಪಿಂದರ್ ಪಾಲ್ ಸಿಂಗ್, ದಿವಾಕರ್ ರಾಮ್.<br /> <br /> <strong>ಮಿಡ್ಫೀಲ್ಡರ್ಸ್</strong>: ಗುರ್ಬಜ್ ಸಿಂಗ್, ವಿಕಾಸ್ ಪಿಳ್ಳೈ, ವಿಕ್ರಮ್ ಪಿಳ್ಳೈ, ಅರ್ಜುನ್ ಹಾಲಪ್ಪ (ನಾಯಕ), ರವಿ ಪಾಲ್, ಡ್ಯಾನಿಸ್ ಮುಜ್ತಾಬಾ, ವಿಕಾಸ್ ಶರ್ಮ.<br /> ಫಾರ್ವರ್ಡ್ಸ್: ಶಿವೇಂದ್ರ ಸಿಂಗ್, ಎಸ್.ವಿ.ಸುನಿಲ್, ಮನ್ದೀಪ್ ಅಂಟಿಲ್, ಸರ್ವಂಜೀತ್ ಸಿಂಗ್, ಗುರ್ವಿಂದರ್ ಸಿಂಗ್ ಚಂದಿ, ರೋಶನ್ ಮಿನ್ಜ್.<br /> ಕಾಯ್ದಿರಿಸಿದ ಆಟಗಾರರು: ಪಿ.ಆರ್.ಶ್ರೀಜೇಶ್, ವಿಲಿಯಮ್ ಕ್ಸಾಲ್ಕೊ, ಗುರ್ಜಿಂದರ್ ಸಿಂಗ್, ಬೀರೇಂದ್ರ ಲಾಕ್ರಾ, ಪ್ರೀತಿಂದರ್ ಸಿಂಗ್ ಹಾಗೂ ಬಿಕಾಶ್ ಟೊಪ್ಪೊ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong> ಮಲೇಷ್ಯಾದ ಇಫೋದಲ್ಲಿ ನಡೆಯಲಿರುವ ಸುಲ್ತಾನ್ ಅಜ್ಲನ್ ಷಾ ಹಾಕಿ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ.<br /> <br /> ಕರ್ನಾಟಕದ ಅರ್ಜುನ್ ಹಾಲಪ್ಪ, ಭರತ್ ಕುಮಾರ್ ಚೆತ್ರಿ, ಧನಂಜಯ್ ಮಹಾದಿಕ್ ಹಾಗೂ ಎಸ್.ವಿ.ಸುನಿಲ್ ಸ್ಥಾನ ಪಡೆದಿದ್ದಾರೆ. ‘ಹಾಕಿ ಇಂಡಿಯಾ’ವು ಈ ಟೂರ್ನಿಗೆ ಮಂಗಳವಾರ ಒಟ್ಟು 18 ಮಂದಿ ಆಟಗಾರರನ್ನು ಆಯ್ಕೆ ಮಾಡಿದೆ. ಮಾಜಿ ನಾಯಕ ರಾಜ್ಪಾಲ್ ಸಿಂಗ್ ಸೇರಿದಂತೆ ಪ್ರಮುಖ ಆಟಗಾರರನ್ನು ಕೈಬಿಡಲಾಗಿದೆ. ಮೇ 5ರಿಂದ 15ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತ ತಂಡವನ್ನು ಅರ್ಜುನ್ ಹಾಲಪ್ಪ ಮುನ್ನಡೆಸಲಿದ್ದಾರೆ. <br /> <br /> ಭಾರತ ಕಳೆದ ಬಾರಿ ಮಳೆಯ ಕಾರಣ ದಕ್ಷಿಣ ಕೊರಿಯಾ ಜೊತೆ ಜಂಟಿ ಚಾಂಪಿಯನ್ ಆಗಿತ್ತು. ಭಾರತವಲ್ಲದೇ, ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಕೊರಿಯಾ ಹಾಗೂ ಆತಿಥೇಯ ಮಲೇಷ್ಯಾ ತಂಡಗಳು ಪಾಲ್ಗೊಳ್ಳಲಿವೆ.<br /> <br /> <strong>ತಂಡ ಇಂತಿದೆ:</strong> ಗೋಲ್ಕೀಪರ್ಸ್: ಭರತ್ ಕುಮಾರ್ ಚೆತ್ರಿ, ಆ್ಯಡ್ರಿಯಾನ್ ಡಿಸೋಜಾ. ಡಿಫೆಂಡರ್ಸ್: ಧನಂಜಯ್ ಮಹಾದಿಕ್, ರೂಪಿಂದರ್ ಪಾಲ್ ಸಿಂಗ್, ದಿವಾಕರ್ ರಾಮ್.<br /> <br /> <strong>ಮಿಡ್ಫೀಲ್ಡರ್ಸ್</strong>: ಗುರ್ಬಜ್ ಸಿಂಗ್, ವಿಕಾಸ್ ಪಿಳ್ಳೈ, ವಿಕ್ರಮ್ ಪಿಳ್ಳೈ, ಅರ್ಜುನ್ ಹಾಲಪ್ಪ (ನಾಯಕ), ರವಿ ಪಾಲ್, ಡ್ಯಾನಿಸ್ ಮುಜ್ತಾಬಾ, ವಿಕಾಸ್ ಶರ್ಮ.<br /> ಫಾರ್ವರ್ಡ್ಸ್: ಶಿವೇಂದ್ರ ಸಿಂಗ್, ಎಸ್.ವಿ.ಸುನಿಲ್, ಮನ್ದೀಪ್ ಅಂಟಿಲ್, ಸರ್ವಂಜೀತ್ ಸಿಂಗ್, ಗುರ್ವಿಂದರ್ ಸಿಂಗ್ ಚಂದಿ, ರೋಶನ್ ಮಿನ್ಜ್.<br /> ಕಾಯ್ದಿರಿಸಿದ ಆಟಗಾರರು: ಪಿ.ಆರ್.ಶ್ರೀಜೇಶ್, ವಿಲಿಯಮ್ ಕ್ಸಾಲ್ಕೊ, ಗುರ್ಜಿಂದರ್ ಸಿಂಗ್, ಬೀರೇಂದ್ರ ಲಾಕ್ರಾ, ಪ್ರೀತಿಂದರ್ ಸಿಂಗ್ ಹಾಗೂ ಬಿಕಾಶ್ ಟೊಪ್ಪೊ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>