<p>ಅನನ್ಯ ಕಲಾನಿಕೇತನ: ಶನಿವಾರ ರಾಧಿಕಾ ಸಂದೀಪ್ ಅವರ ಭರತನಾಟ್ಯ ರಂಗಪ್ರವೇಶ. ವೃತ್ತಿಯಲ್ಲಿ ವಕೀಲರಾದ ರಾಧಿಕಾ ಅವರು ವಿದುಷಿ ಕೆ. ಬೃಂದಾ ಅವರ ಬಳಿ 11 ವರ್ಷಗಳಿಂದ ಭರತನಾಟ್ಯ ಕಲಿಯುತ್ತಿದ್ದಾರೆ. ತಮ್ಮ 14ನೇ ವಯಸ್ಸಿನಿಂದ ಕಲಿಕೆ ಆರಂಭಿಸಿದ ಅವರು ಈಗ ಪರಿಣತ ನೃತ್ಯ ಕಲಾವಿದೆಯಾಗಿ ರೂಪುಗೊಂಡಿದ್ದಾರೆ. <br /> <br /> ಭರತನಾಟ್ಯದಲ್ಲಿ ಸೀನಿಯರ್ ಮುಗಿಸಿದ್ದು ಪ್ರಸ್ತುತ ವಿದ್ವತ್ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಗುರು ಬೃಂದಾ ನೃತ್ಯ ಸಂಯೋಜಿಸಿದ ಶ್ರೀನಿವಾಸ ಕಲ್ಯಾಣ, ಮೋಹಿನಿ ಭಸ್ಮಾಸುರ, ಶಿವಶಕ್ತಿ, ಮಹಾದೇವಿ, ಗಂಗಾವತರಣ, ಶ್ರೀಕೃಷ್ಣ ಲೀಲಾ ಮುಂತಾದ ರೂಪಕಗಳಲ್ಲಿ ಅಭಿನಯಿಸಿದ್ದಾರೆ. <br /> <br /> ರಾಧಿಕಾಳ ಗುರು ಬೃಂದಾ ಸಾಹಿತ್ಯ ಮತ್ತು ಕಲೆಯ ಕುಟುಂಬದಿಂದ ಬಂದವರು. ಗುರು ಡಾ. ತುಳಸಿ ರಾಮಚಂದ್ರ, ಬಿ. ಭಾನುಮತಿ, ನೀಲಾ ಜಯರಾಮನ್ ಬಳಿ ನೃತ್ಯಾಭ್ಯಾಸ ಮಾಡಿದ್ದಾರೆ. ದೇಶ, ವಿದೇಶಗಳ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.<br /> <br /> ನಟುವಾಂಗ: ವಿದುಷಿ ಕೆ. ಬೃಂದಾ. ಹಾಡುಗಾರಿಕೆ: ರಾಜೇಶ್ವರಿ ಪಂಡಿತ್. ಮೃದಂಗ: ವಿದ್ವಾನ್ ವಿ.ಆರ್. ಚಂದ್ರಶೇಖರ್. ಕೊಳಲು: ವಿದ್ವಾನ್ ಎಚ್. ಎಸ್. ವೇಣುಗೋಪಾಲ್. ವಯಲಿನ್: ವಿದ್ವಾನ್ ಡಾ. ಎಂ. ನಟರಾಜ ಮೂರ್ತಿ. ರಿದಮ್ ಪ್ಯಾಡ್: ವಿದ್ವಾನ್ ಕಾರ್ತಿಕ್ ದಾತಾರ್. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 5.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅನನ್ಯ ಕಲಾನಿಕೇತನ: ಶನಿವಾರ ರಾಧಿಕಾ ಸಂದೀಪ್ ಅವರ ಭರತನಾಟ್ಯ ರಂಗಪ್ರವೇಶ. ವೃತ್ತಿಯಲ್ಲಿ ವಕೀಲರಾದ ರಾಧಿಕಾ ಅವರು ವಿದುಷಿ ಕೆ. ಬೃಂದಾ ಅವರ ಬಳಿ 11 ವರ್ಷಗಳಿಂದ ಭರತನಾಟ್ಯ ಕಲಿಯುತ್ತಿದ್ದಾರೆ. ತಮ್ಮ 14ನೇ ವಯಸ್ಸಿನಿಂದ ಕಲಿಕೆ ಆರಂಭಿಸಿದ ಅವರು ಈಗ ಪರಿಣತ ನೃತ್ಯ ಕಲಾವಿದೆಯಾಗಿ ರೂಪುಗೊಂಡಿದ್ದಾರೆ. <br /> <br /> ಭರತನಾಟ್ಯದಲ್ಲಿ ಸೀನಿಯರ್ ಮುಗಿಸಿದ್ದು ಪ್ರಸ್ತುತ ವಿದ್ವತ್ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಗುರು ಬೃಂದಾ ನೃತ್ಯ ಸಂಯೋಜಿಸಿದ ಶ್ರೀನಿವಾಸ ಕಲ್ಯಾಣ, ಮೋಹಿನಿ ಭಸ್ಮಾಸುರ, ಶಿವಶಕ್ತಿ, ಮಹಾದೇವಿ, ಗಂಗಾವತರಣ, ಶ್ರೀಕೃಷ್ಣ ಲೀಲಾ ಮುಂತಾದ ರೂಪಕಗಳಲ್ಲಿ ಅಭಿನಯಿಸಿದ್ದಾರೆ. <br /> <br /> ರಾಧಿಕಾಳ ಗುರು ಬೃಂದಾ ಸಾಹಿತ್ಯ ಮತ್ತು ಕಲೆಯ ಕುಟುಂಬದಿಂದ ಬಂದವರು. ಗುರು ಡಾ. ತುಳಸಿ ರಾಮಚಂದ್ರ, ಬಿ. ಭಾನುಮತಿ, ನೀಲಾ ಜಯರಾಮನ್ ಬಳಿ ನೃತ್ಯಾಭ್ಯಾಸ ಮಾಡಿದ್ದಾರೆ. ದೇಶ, ವಿದೇಶಗಳ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.<br /> <br /> ನಟುವಾಂಗ: ವಿದುಷಿ ಕೆ. ಬೃಂದಾ. ಹಾಡುಗಾರಿಕೆ: ರಾಜೇಶ್ವರಿ ಪಂಡಿತ್. ಮೃದಂಗ: ವಿದ್ವಾನ್ ವಿ.ಆರ್. ಚಂದ್ರಶೇಖರ್. ಕೊಳಲು: ವಿದ್ವಾನ್ ಎಚ್. ಎಸ್. ವೇಣುಗೋಪಾಲ್. ವಯಲಿನ್: ವಿದ್ವಾನ್ ಡಾ. ಎಂ. ನಟರಾಜ ಮೂರ್ತಿ. ರಿದಮ್ ಪ್ಯಾಡ್: ವಿದ್ವಾನ್ ಕಾರ್ತಿಕ್ ದಾತಾರ್. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 5.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>