<p>ಆಗಸ್ಟ್ 15ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ಕೆಂಪುಕೋಟೆಯಲ್ಲಿ ನಿಂತು ಭಾಷಣ ಮಾಡುತ್ತಿದ್ದಾರೆ. ಆದರೆ, ಅಲ್ಲಿಯೇ ಕಾಳಸಂತೆ ಖದೀಮ, ದಾಸ್ತಾನುಗಾರ ಮತ್ತು ಲಾಭಕೋರರು ಸೇರಿ ಜಯ ಜಯಕಾರ ಹಾಕುತ್ತಿದ್ದಾರೆ. <br /> <br /> ಬಾಂಗ್ಲಾದೇಶ ಹುಲಿಯಂತೆ ಆರ್ಭಟಿಸಿ ತನ್ನ ಅಸ್ತಿತ್ವಕ್ಕೆ ಹೋರಾಡಿ ಕೊನೆಗೆ ಜಯಗಳಿಸಿತು. ಊಸರವಳ್ಳಿಯ ಪಾಕಿಸ್ತಾನದ ಮೇಲೆ ಜಯದ ನಗೆಯನ್ನು ಬೀರುತ್ತದೆ...<br /> ಪುದುಚೆರಿ ಟೆಸ್ಟ್ ಪಂದ್ಯಾವಳಿಯಲ್ಲಿ ಅಣ್ಣಾ ಡಿಎಂಕೆ ಮತ್ತು ಕಾಂಗ್ರೆಸ್ನ ನಡುವೆ ಪಂದ್ಯ. ಅದರಲ್ಲಿ ರನೌಟ್ ಆಗಿ ಹೊರಹೋಗುವ ನೋಟ..<br /> .<br /> ಬೆಳಗಾವಿಯ ಯಥಾಸ್ಥಿತಿ, ಹುಲಿಯಂತೆ ಆರ್ಭಟಿಸುವ ಧಾನ್ಯ ಸಗಟು ವ್ಯಾಪಾರಿ ಅವನ ಮುಂದೆ ಶೋಷಣೆಗೆ ಒಳಗಾಗುತ್ತಿರುವ ಹಸುವಿನ ರೂಪದಲ್ಲಿರುವ ಬಳಕೆದಾರ...<br /> ಹೀಗೆ ನೂರಾರು ರೂಪದಲ್ಲಿ ಸಮಾಜದ ಮತ್ತು ದೇಶದ ಸ್ಥಿತಿ-ಗತಿಯ ಬಗ್ಗೆ ಬೆಳಕು ಚೆಲ್ಲುವ ವ್ಯಂಗ್ಯಚಿತ್ರಗಳು. <br /> <br /> ಒಂದು ಕ್ಷಣ ಅಲ್ಲಿ ಬಂದವರ ಮನವನ್ನು ಕಲಕಿದ್ದಂತೂ ನಿಜ. ಇಂತಹ ಅಪರೂಪದ ಕಲಾತ್ಮಕವಾದ ವ್ಯಂಗ್ಯಚಿತ್ರಗಳು ಮೂಡಿಬಂದಿದ್ದು ದಿವಂಗತ ಬಿ.ವಿ.ರಾಮಮೂರ್ತಿ ಅವರ ಕಲಾಕುಂಚದಿಂದ.<br /> <br /> ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು `ದಿ ವರ್ಲ್ಡ್ ಆಫ್ ರಾಮಮೂರ್ತಿ~ ವ್ಯಂಗ್ಯಚಿತ್ರ ಹಾಗೂ ವರ್ಣಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದೆ.<br /> ಮೂರ್ತಿ ಎಂದೇ ಪ್ರಸಿದ್ಧರಾದ ಬೆಂಗಳೂರು ವೆಂಕಟರಾಮ್ ರಾಮಮೂರ್ತಿ ಅವರು ಕರ್ನಾಟಕದ ಪ್ರತಿಭಾಶಾಲಿ ವ್ಯಂಗ್ಯಚಿತ್ರಕಾರರಾಗಿದ್ದರು.<br /> <br /> `ಕಿಡಿ~ ಪತ್ರಿಕೆಯಿಂದ ಆರಂಭವಾದ ಅವರ ವ್ಯಂಗ್ಯಚಿತ್ರಕಲಾ ಯಾತ್ರೆಯು ಸಂಪಾದಕ ಪೋಥೆನ್ ಜೋಸೆಫ್ರಿಂದ ಗುರುತಿಸಲ್ಪಟ್ಟು `ಡೆಕ್ಕನ್ ಹೆರಾಲ್ಡ್~ ಮತ್ತು `ಪ್ರಜಾವಾಣಿ~ಗಳಲ್ಲಿ ಮುಂದುವರಿಯಿತು.<br /> <br /> ತೀಕ್ಷ್ಣವಾದ ವ್ಯಂಗ್ಯದಿಂದ ಕೂಡಿದ ಅವರ ಚಿತ್ರಗಳು ಬಹು ಜನಪ್ರಿಯತೆಯನ್ನು ಗಳಿಸಿದ್ದವು. ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದರು. ಇವರು 2004ರ ಮಾರ್ಚ್ 24 ರಂದು ನಿಧನರಾದರು. ಮೂರ್ತಿ ಅವರ ಕಲಾಕುಂಚದಿಂದ ಬರಿಯ ವ್ಯಂಗ್ಯಚಿತ್ರಗಳು ಮೂಡಲಿಲ್ಲ. <br /> <br /> ಬದಲಿಗೆ ಸುಂದರವಾದ ಮನಮೋಹಕಗೊಳಿಸುವ ವರ್ಣಚಿತ್ರಗಳು ಒಡಮೂಡಿ ಬಂದವು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಆದರೆ ಸಾಮಾಜಿಕ ಕಳಕಳಿ ಇವರ ಚಿತ್ರಗಳಲ್ಲಿನ ಸಾಮಾನ್ಯ ಅಂಶ. ವರ್ಣಚಿತ್ರಗಳಲ್ಲಿಯೂ ಅನೇಕ ಕೃತಿಗಳಲ್ಲಿ ಸಾಮಾಜಿಕ ವಿಡಂಬನೆಯನ್ನೇ ಕಾಣಬಹುದಾಗಿದೆ. <br /> <br /> ಇದಲ್ಲದೆಯೂ ಜಲವರ್ಣದಲ್ಲಿ ಸಮಾಜದ ಎಲ್ಲ ವಿಷಯಗಳಲ್ಲೂ ಕೈಯಾಡಿಸಿದ್ದಾರೆ ಎಂಬುದು ಈ ಪ್ರದರ್ಶನದಿಂದಲೇ ಗೊತ್ತಾಗುತ್ತದೆ.<br /> <br /> ಅವರ ಪತ್ನಿ ರತ್ನ ರಾಮಮೂರ್ತಿ ಅವರು, `ಅವರಿಗೆ ಗೆರೆಗಳೆಂದರೆ ಏನೋ ಅಭಿಮಾನ. ಅದರಿಂದಾನೇ ಏನಾದರೂ ಸಾಧಿಸುತ್ತೇನೆ ಅಂತ ಹೇಳೋರು. ದಿನವಿಡೀ ಏನಾದರೂ ಗೀಚುತ್ತ ಅಯ್ಯೋ ಇದು ಸರಿ ಹೋಗಿಲ್ಲ, ಅದು ಸರಿ ಹೋಗಿಲ್ಲ ಎಂದು ಪೇಚಾಡೋರು. <br /> <br /> ನಂತರ, ಅವರು ಅಂದುಕೊಂಡಂತೆ ಅವರ ವ್ಯಂಗ್ಯಚಿತ್ರ ಬಂದರೆ, ತೃಪ್ತಿ ಪಡೋರು~<br /> `ಯಾವುದೇ ವ್ಯಂಗ್ಯಚಿತ್ರವನ್ನು ಬಿಡಿಸುವ ಮೊದಲು ಅಧ್ಯಯನ ನಡೆಸುತ್ತಿದ್ದರು. ಅದು ಸಾಮಾಜಿಕ ವಿಷಯವಾಗಿರಲಿ ಅಥವಾ ಸಚಿವರಾಗಿರಲೀ ಅಥವಾ ಉನ್ನತ ವ್ಯಕ್ತಿಗಳ ಬಗ್ಗೆಯಾಗಿರಲೀ ದಿನವಿಡೀ ಅಧ್ಯಯನ ನಡೆಸಿದ ನಂತರವೇ ಅದಕ್ಕೆ ಒಂದು ರೂಪು ನೀಡುತ್ತಿದ್ದರು~.<br /> <br /> `ಅವರು ವ್ಯಂಗ್ಯಚಿತ್ರಗಳಂತೆ ವರ್ಣಚಿತ್ರಗಳನ್ನು ಬರೆಯುತ್ತಿದ್ದರು. ಆದರೆ, ವ್ಯಂಗ್ಯಚಿತ್ರದ ಜನಪ್ರಿಯತೆ ಮುಂದೆ ವರ್ಣಚಿತ್ರಗಳ ಅಲಂಕಾರ ಎಲೆ ಮರೆ ಕಾಯಿಯಂತೆ ಯಾರಿಗೂ ಕಾಣದೆ ಹೋಯಿತು~.<br /> <br /> `ಅವರು ತಮ್ಮ ಗೆರೆಗಳ ಮಧ್ಯೆ ಮುಳುಗಿದರೆ ಹೆಂಡತಿ ಮತ್ತು ಮಕ್ಕಳು ಇದ್ದಾರೆ ಎಂಬ ಅರಿವೇ ಇರುತ್ತಿರಲಿಲ್ಲ. ಅವರು ಕೊನೆಯ 12 ವರ್ಷಗಳ ಕಾಲ ತುಂಬ ಅನಾರೋಗ್ಯದಿಂದ ಬಳಲಿದರು. ಕೊನೆಗೆ ಹೃದಯಾಘಾತವಾಗಿ ವಿಧಿ ಅವರನ್ನು ನಮ್ಮಿಂದ ಬಹುದೂರ ಕರೆದುಕೊಂಡು ಹೋಯಿತು~ ಎಂದು ಹನಿಗಣ್ಣಾದರು.<br /> <br /> ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಜುಲೈ 14 ರವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ವಿವರಗಳಿಗೆ-99800 91428. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಗಸ್ಟ್ 15ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ಕೆಂಪುಕೋಟೆಯಲ್ಲಿ ನಿಂತು ಭಾಷಣ ಮಾಡುತ್ತಿದ್ದಾರೆ. ಆದರೆ, ಅಲ್ಲಿಯೇ ಕಾಳಸಂತೆ ಖದೀಮ, ದಾಸ್ತಾನುಗಾರ ಮತ್ತು ಲಾಭಕೋರರು ಸೇರಿ ಜಯ ಜಯಕಾರ ಹಾಕುತ್ತಿದ್ದಾರೆ. <br /> <br /> ಬಾಂಗ್ಲಾದೇಶ ಹುಲಿಯಂತೆ ಆರ್ಭಟಿಸಿ ತನ್ನ ಅಸ್ತಿತ್ವಕ್ಕೆ ಹೋರಾಡಿ ಕೊನೆಗೆ ಜಯಗಳಿಸಿತು. ಊಸರವಳ್ಳಿಯ ಪಾಕಿಸ್ತಾನದ ಮೇಲೆ ಜಯದ ನಗೆಯನ್ನು ಬೀರುತ್ತದೆ...<br /> ಪುದುಚೆರಿ ಟೆಸ್ಟ್ ಪಂದ್ಯಾವಳಿಯಲ್ಲಿ ಅಣ್ಣಾ ಡಿಎಂಕೆ ಮತ್ತು ಕಾಂಗ್ರೆಸ್ನ ನಡುವೆ ಪಂದ್ಯ. ಅದರಲ್ಲಿ ರನೌಟ್ ಆಗಿ ಹೊರಹೋಗುವ ನೋಟ..<br /> .<br /> ಬೆಳಗಾವಿಯ ಯಥಾಸ್ಥಿತಿ, ಹುಲಿಯಂತೆ ಆರ್ಭಟಿಸುವ ಧಾನ್ಯ ಸಗಟು ವ್ಯಾಪಾರಿ ಅವನ ಮುಂದೆ ಶೋಷಣೆಗೆ ಒಳಗಾಗುತ್ತಿರುವ ಹಸುವಿನ ರೂಪದಲ್ಲಿರುವ ಬಳಕೆದಾರ...<br /> ಹೀಗೆ ನೂರಾರು ರೂಪದಲ್ಲಿ ಸಮಾಜದ ಮತ್ತು ದೇಶದ ಸ್ಥಿತಿ-ಗತಿಯ ಬಗ್ಗೆ ಬೆಳಕು ಚೆಲ್ಲುವ ವ್ಯಂಗ್ಯಚಿತ್ರಗಳು. <br /> <br /> ಒಂದು ಕ್ಷಣ ಅಲ್ಲಿ ಬಂದವರ ಮನವನ್ನು ಕಲಕಿದ್ದಂತೂ ನಿಜ. ಇಂತಹ ಅಪರೂಪದ ಕಲಾತ್ಮಕವಾದ ವ್ಯಂಗ್ಯಚಿತ್ರಗಳು ಮೂಡಿಬಂದಿದ್ದು ದಿವಂಗತ ಬಿ.ವಿ.ರಾಮಮೂರ್ತಿ ಅವರ ಕಲಾಕುಂಚದಿಂದ.<br /> <br /> ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು `ದಿ ವರ್ಲ್ಡ್ ಆಫ್ ರಾಮಮೂರ್ತಿ~ ವ್ಯಂಗ್ಯಚಿತ್ರ ಹಾಗೂ ವರ್ಣಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದೆ.<br /> ಮೂರ್ತಿ ಎಂದೇ ಪ್ರಸಿದ್ಧರಾದ ಬೆಂಗಳೂರು ವೆಂಕಟರಾಮ್ ರಾಮಮೂರ್ತಿ ಅವರು ಕರ್ನಾಟಕದ ಪ್ರತಿಭಾಶಾಲಿ ವ್ಯಂಗ್ಯಚಿತ್ರಕಾರರಾಗಿದ್ದರು.<br /> <br /> `ಕಿಡಿ~ ಪತ್ರಿಕೆಯಿಂದ ಆರಂಭವಾದ ಅವರ ವ್ಯಂಗ್ಯಚಿತ್ರಕಲಾ ಯಾತ್ರೆಯು ಸಂಪಾದಕ ಪೋಥೆನ್ ಜೋಸೆಫ್ರಿಂದ ಗುರುತಿಸಲ್ಪಟ್ಟು `ಡೆಕ್ಕನ್ ಹೆರಾಲ್ಡ್~ ಮತ್ತು `ಪ್ರಜಾವಾಣಿ~ಗಳಲ್ಲಿ ಮುಂದುವರಿಯಿತು.<br /> <br /> ತೀಕ್ಷ್ಣವಾದ ವ್ಯಂಗ್ಯದಿಂದ ಕೂಡಿದ ಅವರ ಚಿತ್ರಗಳು ಬಹು ಜನಪ್ರಿಯತೆಯನ್ನು ಗಳಿಸಿದ್ದವು. ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದರು. ಇವರು 2004ರ ಮಾರ್ಚ್ 24 ರಂದು ನಿಧನರಾದರು. ಮೂರ್ತಿ ಅವರ ಕಲಾಕುಂಚದಿಂದ ಬರಿಯ ವ್ಯಂಗ್ಯಚಿತ್ರಗಳು ಮೂಡಲಿಲ್ಲ. <br /> <br /> ಬದಲಿಗೆ ಸುಂದರವಾದ ಮನಮೋಹಕಗೊಳಿಸುವ ವರ್ಣಚಿತ್ರಗಳು ಒಡಮೂಡಿ ಬಂದವು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಆದರೆ ಸಾಮಾಜಿಕ ಕಳಕಳಿ ಇವರ ಚಿತ್ರಗಳಲ್ಲಿನ ಸಾಮಾನ್ಯ ಅಂಶ. ವರ್ಣಚಿತ್ರಗಳಲ್ಲಿಯೂ ಅನೇಕ ಕೃತಿಗಳಲ್ಲಿ ಸಾಮಾಜಿಕ ವಿಡಂಬನೆಯನ್ನೇ ಕಾಣಬಹುದಾಗಿದೆ. <br /> <br /> ಇದಲ್ಲದೆಯೂ ಜಲವರ್ಣದಲ್ಲಿ ಸಮಾಜದ ಎಲ್ಲ ವಿಷಯಗಳಲ್ಲೂ ಕೈಯಾಡಿಸಿದ್ದಾರೆ ಎಂಬುದು ಈ ಪ್ರದರ್ಶನದಿಂದಲೇ ಗೊತ್ತಾಗುತ್ತದೆ.<br /> <br /> ಅವರ ಪತ್ನಿ ರತ್ನ ರಾಮಮೂರ್ತಿ ಅವರು, `ಅವರಿಗೆ ಗೆರೆಗಳೆಂದರೆ ಏನೋ ಅಭಿಮಾನ. ಅದರಿಂದಾನೇ ಏನಾದರೂ ಸಾಧಿಸುತ್ತೇನೆ ಅಂತ ಹೇಳೋರು. ದಿನವಿಡೀ ಏನಾದರೂ ಗೀಚುತ್ತ ಅಯ್ಯೋ ಇದು ಸರಿ ಹೋಗಿಲ್ಲ, ಅದು ಸರಿ ಹೋಗಿಲ್ಲ ಎಂದು ಪೇಚಾಡೋರು. <br /> <br /> ನಂತರ, ಅವರು ಅಂದುಕೊಂಡಂತೆ ಅವರ ವ್ಯಂಗ್ಯಚಿತ್ರ ಬಂದರೆ, ತೃಪ್ತಿ ಪಡೋರು~<br /> `ಯಾವುದೇ ವ್ಯಂಗ್ಯಚಿತ್ರವನ್ನು ಬಿಡಿಸುವ ಮೊದಲು ಅಧ್ಯಯನ ನಡೆಸುತ್ತಿದ್ದರು. ಅದು ಸಾಮಾಜಿಕ ವಿಷಯವಾಗಿರಲಿ ಅಥವಾ ಸಚಿವರಾಗಿರಲೀ ಅಥವಾ ಉನ್ನತ ವ್ಯಕ್ತಿಗಳ ಬಗ್ಗೆಯಾಗಿರಲೀ ದಿನವಿಡೀ ಅಧ್ಯಯನ ನಡೆಸಿದ ನಂತರವೇ ಅದಕ್ಕೆ ಒಂದು ರೂಪು ನೀಡುತ್ತಿದ್ದರು~.<br /> <br /> `ಅವರು ವ್ಯಂಗ್ಯಚಿತ್ರಗಳಂತೆ ವರ್ಣಚಿತ್ರಗಳನ್ನು ಬರೆಯುತ್ತಿದ್ದರು. ಆದರೆ, ವ್ಯಂಗ್ಯಚಿತ್ರದ ಜನಪ್ರಿಯತೆ ಮುಂದೆ ವರ್ಣಚಿತ್ರಗಳ ಅಲಂಕಾರ ಎಲೆ ಮರೆ ಕಾಯಿಯಂತೆ ಯಾರಿಗೂ ಕಾಣದೆ ಹೋಯಿತು~.<br /> <br /> `ಅವರು ತಮ್ಮ ಗೆರೆಗಳ ಮಧ್ಯೆ ಮುಳುಗಿದರೆ ಹೆಂಡತಿ ಮತ್ತು ಮಕ್ಕಳು ಇದ್ದಾರೆ ಎಂಬ ಅರಿವೇ ಇರುತ್ತಿರಲಿಲ್ಲ. ಅವರು ಕೊನೆಯ 12 ವರ್ಷಗಳ ಕಾಲ ತುಂಬ ಅನಾರೋಗ್ಯದಿಂದ ಬಳಲಿದರು. ಕೊನೆಗೆ ಹೃದಯಾಘಾತವಾಗಿ ವಿಧಿ ಅವರನ್ನು ನಮ್ಮಿಂದ ಬಹುದೂರ ಕರೆದುಕೊಂಡು ಹೋಯಿತು~ ಎಂದು ಹನಿಗಣ್ಣಾದರು.<br /> <br /> ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಜುಲೈ 14 ರವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ವಿವರಗಳಿಗೆ-99800 91428. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>