<p><strong>ನವದೆಹಲಿ (ಪಿಟಿಐ):</strong> ಮಿತ್ರ ಪಕ್ಷವಾದ ತೃಣಮೂಲ ಕಾಂಗ್ರೆಸ್, ಪಿಂಚಣಿ ಸುಧಾರಣಾ ಮಸೂದೆ ವಿರುದ್ಧ ದನಿ ಎತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಈ ಕುರಿತ ಚರ್ಚೆಯನ್ನು ಗುರುವಾರ ಸಚಿವ ಸಂಪುಟ ಸಭೆಯ ಕಾರ್ಯಸೂಚಿ ಪಟ್ಟಿಯಿಂದ ಕೈಬಿಟ್ಟು ಸುರಕ್ಷಿತ ಮಾರ್ಗೋಪಾಯ ಅನುಸರಿಸಿತು.</p>.<p>ಪೂರ್ವನಿಗದಿ ಪ್ರಕಾರ, ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆ ಚರ್ಚೆಗೆ ಬರಬೇಕಿತ್ತು. ಆದರೆ, ರಾಷ್ಟ್ರಪತಿ ಚುನಾವಣೆ ಹತ್ತಿರವಿರುವುದರಿಂದ ಮಿತ್ರಪಕ್ಷದ ವಿರೋಧ ಕಟ್ಟಿಕೊಂಡು ಮಸೂದೆಗೆ ಅಂಗೀಕಾರ ನೀಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯಕ್ಕೆ ಸರ್ಕಾರ ಬಂದಿದೆ ಎನ್ನಲಾಗಿದೆ.</p>.<p>ಪಿಂಚಣಿ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆ ಹಾಗೂ ವಿದೇಶಿ ಹೂಡಿಕೆಗೆ ಅವಕಾಶ ಕಲ್ಪಿಸುವ ಈ ಮಸೂದೆ ಕುರಿತ ಚರ್ಚೆಯನ್ನು ಸರ್ಕಾರ ಯಾವುದೇ ಪರಿಶೀಲನೆ ನಡೆಸದೆ ಮಂದೂಡಿದೆ ಎಂದು ಮೂಲಗಳು ತಿಳಿಸಿವೆ.</p>.<p>ಈ ಮಸೂದೆ ಕುರಿತು ಹೆಚ್ಚು ಚರ್ಚೆಯುವ ಅಗತ್ಯವಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸದಸ್ಯರೂ ಆದ ರೈಲ್ವೆ ಸಚಿವ ಮುಕುಲ್ ರಾವ್ ಅವರು ಪ್ರಧಾನಿ ಮನಮೋಹನ್ ಅವರಿಗೆ ಬುಧವಾರ ಪತ್ರವನ್ನೂ ಬರೆದಿದ್ದರು.<br /> ಈ ಹಿನ್ನೆಲೆಯಲ್ಲಿ ಈ ಮಸೂದೆಗೆ ಅಂಗೀಕಾರ ನಿರ್ಧಾರವನ್ನು ಮುಂದೂಡಲು ಬುಧವಾರ ರಾತ್ರಿ ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ.</p>.<p>ಸಚಿವ ಸಂಪುಟ ಸಭೆಯ ಕಲಾಪಪಟ್ಟಿಯಲ್ಲಿ ಈ ಮಸೂದೆ ಕುರಿತ ಚರ್ಚೆ ಮೂರನೇ ವಿಷಯವಾಗಿ ಅಳವಡಿಕೆಯಾಗಿತ್ತು.</p>.<p>ಆದರೆ ಎರಡು ವಿಷಯಗಳ ಕುರಿತ ಚರ್ಚೆ ಮುಗಿದ ನಂತರ ಸಂಪುಟ ಕಾರ್ಯದರ್ಶಿ ಅಜಿತ್ ಸೇಥ್ ಅವರು, ಮೂರನೇ ವಿಷಯವನ್ನು ಕೈಬಿಡಲಾಗಿದ್ದು, ನಾಲ್ಕನೇ ವಿಷಯದ ಕುರಿತು ಚರ್ಚಿಸಬೇಕು ಎಂದು ಸೂಚಿಸಿದರು.<br /> ಮುಕುಲ್ ರಾಯ್ ಅವರು ಗುರುವಾರ ಸಚಿವ ಸಂಪುಟ ಸಭೆಗೆ ಹಾಜರಾಗಿದ್ದರಾದರೂ ಪಿಂಚಣಿ ಸುಧಾರಣೆ ಮಸೂದೆ (ಪಿಎಫ್ಆರ್ಡಿಎ) ಕುರಿತು ಏನನ್ನೂ ಮಾತನಾಡಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಮಿತ್ರ ಪಕ್ಷವಾದ ತೃಣಮೂಲ ಕಾಂಗ್ರೆಸ್, ಪಿಂಚಣಿ ಸುಧಾರಣಾ ಮಸೂದೆ ವಿರುದ್ಧ ದನಿ ಎತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಈ ಕುರಿತ ಚರ್ಚೆಯನ್ನು ಗುರುವಾರ ಸಚಿವ ಸಂಪುಟ ಸಭೆಯ ಕಾರ್ಯಸೂಚಿ ಪಟ್ಟಿಯಿಂದ ಕೈಬಿಟ್ಟು ಸುರಕ್ಷಿತ ಮಾರ್ಗೋಪಾಯ ಅನುಸರಿಸಿತು.</p>.<p>ಪೂರ್ವನಿಗದಿ ಪ್ರಕಾರ, ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆ ಚರ್ಚೆಗೆ ಬರಬೇಕಿತ್ತು. ಆದರೆ, ರಾಷ್ಟ್ರಪತಿ ಚುನಾವಣೆ ಹತ್ತಿರವಿರುವುದರಿಂದ ಮಿತ್ರಪಕ್ಷದ ವಿರೋಧ ಕಟ್ಟಿಕೊಂಡು ಮಸೂದೆಗೆ ಅಂಗೀಕಾರ ನೀಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯಕ್ಕೆ ಸರ್ಕಾರ ಬಂದಿದೆ ಎನ್ನಲಾಗಿದೆ.</p>.<p>ಪಿಂಚಣಿ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆ ಹಾಗೂ ವಿದೇಶಿ ಹೂಡಿಕೆಗೆ ಅವಕಾಶ ಕಲ್ಪಿಸುವ ಈ ಮಸೂದೆ ಕುರಿತ ಚರ್ಚೆಯನ್ನು ಸರ್ಕಾರ ಯಾವುದೇ ಪರಿಶೀಲನೆ ನಡೆಸದೆ ಮಂದೂಡಿದೆ ಎಂದು ಮೂಲಗಳು ತಿಳಿಸಿವೆ.</p>.<p>ಈ ಮಸೂದೆ ಕುರಿತು ಹೆಚ್ಚು ಚರ್ಚೆಯುವ ಅಗತ್ಯವಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸದಸ್ಯರೂ ಆದ ರೈಲ್ವೆ ಸಚಿವ ಮುಕುಲ್ ರಾವ್ ಅವರು ಪ್ರಧಾನಿ ಮನಮೋಹನ್ ಅವರಿಗೆ ಬುಧವಾರ ಪತ್ರವನ್ನೂ ಬರೆದಿದ್ದರು.<br /> ಈ ಹಿನ್ನೆಲೆಯಲ್ಲಿ ಈ ಮಸೂದೆಗೆ ಅಂಗೀಕಾರ ನಿರ್ಧಾರವನ್ನು ಮುಂದೂಡಲು ಬುಧವಾರ ರಾತ್ರಿ ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ.</p>.<p>ಸಚಿವ ಸಂಪುಟ ಸಭೆಯ ಕಲಾಪಪಟ್ಟಿಯಲ್ಲಿ ಈ ಮಸೂದೆ ಕುರಿತ ಚರ್ಚೆ ಮೂರನೇ ವಿಷಯವಾಗಿ ಅಳವಡಿಕೆಯಾಗಿತ್ತು.</p>.<p>ಆದರೆ ಎರಡು ವಿಷಯಗಳ ಕುರಿತ ಚರ್ಚೆ ಮುಗಿದ ನಂತರ ಸಂಪುಟ ಕಾರ್ಯದರ್ಶಿ ಅಜಿತ್ ಸೇಥ್ ಅವರು, ಮೂರನೇ ವಿಷಯವನ್ನು ಕೈಬಿಡಲಾಗಿದ್ದು, ನಾಲ್ಕನೇ ವಿಷಯದ ಕುರಿತು ಚರ್ಚಿಸಬೇಕು ಎಂದು ಸೂಚಿಸಿದರು.<br /> ಮುಕುಲ್ ರಾಯ್ ಅವರು ಗುರುವಾರ ಸಚಿವ ಸಂಪುಟ ಸಭೆಗೆ ಹಾಜರಾಗಿದ್ದರಾದರೂ ಪಿಂಚಣಿ ಸುಧಾರಣೆ ಮಸೂದೆ (ಪಿಎಫ್ಆರ್ಡಿಎ) ಕುರಿತು ಏನನ್ನೂ ಮಾತನಾಡಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>