<p>ನವದೆಹಲಿ (ಪಿಟಿಐ): ರಾಹುಲ್ ಗಾಂಧಿ ಅವರ ಬಲಗಾಲಿನಲ್ಲಿ ಮೂಳೆ ಮುರಿತ ಉಂಟಾಗಿದ್ದು, ಪರಿಣಾಮವಾಗಿ ಸೋಮವಾರ 2011-12ರ ಮುಂಗಡಪತ್ರ ಮಂಡನೆ ಕಾಲದಲ್ಲಿ ಸದನದಲ್ಲಿ ಹಾಜರಿರಲು ಅವರಿಗೆ ಸಾಧ್ಯವಾಗಿರಲಿಲ್ಲ ಎಂಬುದು ಮಂಗಳವಾರ ಬೆಳಕಿಗೆ ಬಂದಿದೆ.<br /> <br /> ರಾಹುಲ್ ಗಾಂಧಿ ಅವರಿಗೆ ಸುಧಾರಿಸಿಕೊಳ್ಳಲು ಕೆಲಕಾಲ ಬೇಕಾಗಬಹುದು ಎನ್ನಲಾಗಿದ್ದು ವೈದ್ಯರು ಅವರಿಗೆ ಸಂಫೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.<br /> <br /> ಏಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಹುಲ್ ಅವರು ಸೋಮವಾರ ಮುಂಗಡಪತ್ರ ಮಂಡನೆ ಕಾಲದಲ್ಲಿ ಗೈರು ಹಾಜರಾಗಿದ್ದುದು ಎಲ್ಲರ ಗಮನ ಸೆಳೆದಿತ್ತು. ಸಂಸತ್ತಿನ ಯಾವುದೇ ಪ್ರಮುಖ ಕಲಾಪದಲ್ಲೂ ತಪ್ಪದೇ ಹಾಜರಾಗುವ ಪರಿಪಾಠವನ್ನು ಅವರು ಬೆಳೆಸಿಕೊಂಡಿದ್ದರು.<br /> <br /> ರಾಹುಲ್ ಅವರು ಶುಕ್ರವಾರ ನಡೆಯುವಾಗ ಸಮಸ್ಯೆ ಕಾಣಿಸಿಕೊಂಡಿದ್ದರೂ, ರೈಲ್ವೆ ಮುಂಗಡಪತ್ರ ಮಂಡನೆ ವೇಳೆ ಸಂಸತ್ ಕಲಾಪದಲ್ಲಿ ಪಾಲ್ಗೊಂಡಿದ್ದರು.<br /> <br /> ಕಲಾಪದ ಬಳಿಕ ಅವರು ಎಕ್ಸ್ ರೇ ಪರೀಕ್ಷೆಗೆ ಒಳಗಾಗಿದ್ದರು. ಎಕ್ಸ್ ರೇ ಪರೀಕ್ಷೆಯಲ್ಲಿ ಅವರ ಬಲಗಾಲಿನಲ್ಲಿ ಮೂಳೆ ಮುರಿತ ಉಂಟಾದುದು ಬೆಳಕಿಗೆ ಬಂದಿತ್ತು.<br /> <br /> ಕೆಲವು ದಿನಗಳ ಹಿಂದೆ ವ್ಯಾಯಾಮ ನಿರತರಾಗಿದ್ದಾಗ ಅವರು ಗಾಯಗೊಂಡಿದ್ದರು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ರಾಹುಲ್ ಗಾಂಧಿ ಅವರ ಬಲಗಾಲಿನಲ್ಲಿ ಮೂಳೆ ಮುರಿತ ಉಂಟಾಗಿದ್ದು, ಪರಿಣಾಮವಾಗಿ ಸೋಮವಾರ 2011-12ರ ಮುಂಗಡಪತ್ರ ಮಂಡನೆ ಕಾಲದಲ್ಲಿ ಸದನದಲ್ಲಿ ಹಾಜರಿರಲು ಅವರಿಗೆ ಸಾಧ್ಯವಾಗಿರಲಿಲ್ಲ ಎಂಬುದು ಮಂಗಳವಾರ ಬೆಳಕಿಗೆ ಬಂದಿದೆ.<br /> <br /> ರಾಹುಲ್ ಗಾಂಧಿ ಅವರಿಗೆ ಸುಧಾರಿಸಿಕೊಳ್ಳಲು ಕೆಲಕಾಲ ಬೇಕಾಗಬಹುದು ಎನ್ನಲಾಗಿದ್ದು ವೈದ್ಯರು ಅವರಿಗೆ ಸಂಫೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.<br /> <br /> ಏಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಹುಲ್ ಅವರು ಸೋಮವಾರ ಮುಂಗಡಪತ್ರ ಮಂಡನೆ ಕಾಲದಲ್ಲಿ ಗೈರು ಹಾಜರಾಗಿದ್ದುದು ಎಲ್ಲರ ಗಮನ ಸೆಳೆದಿತ್ತು. ಸಂಸತ್ತಿನ ಯಾವುದೇ ಪ್ರಮುಖ ಕಲಾಪದಲ್ಲೂ ತಪ್ಪದೇ ಹಾಜರಾಗುವ ಪರಿಪಾಠವನ್ನು ಅವರು ಬೆಳೆಸಿಕೊಂಡಿದ್ದರು.<br /> <br /> ರಾಹುಲ್ ಅವರು ಶುಕ್ರವಾರ ನಡೆಯುವಾಗ ಸಮಸ್ಯೆ ಕಾಣಿಸಿಕೊಂಡಿದ್ದರೂ, ರೈಲ್ವೆ ಮುಂಗಡಪತ್ರ ಮಂಡನೆ ವೇಳೆ ಸಂಸತ್ ಕಲಾಪದಲ್ಲಿ ಪಾಲ್ಗೊಂಡಿದ್ದರು.<br /> <br /> ಕಲಾಪದ ಬಳಿಕ ಅವರು ಎಕ್ಸ್ ರೇ ಪರೀಕ್ಷೆಗೆ ಒಳಗಾಗಿದ್ದರು. ಎಕ್ಸ್ ರೇ ಪರೀಕ್ಷೆಯಲ್ಲಿ ಅವರ ಬಲಗಾಲಿನಲ್ಲಿ ಮೂಳೆ ಮುರಿತ ಉಂಟಾದುದು ಬೆಳಕಿಗೆ ಬಂದಿತ್ತು.<br /> <br /> ಕೆಲವು ದಿನಗಳ ಹಿಂದೆ ವ್ಯಾಯಾಮ ನಿರತರಾಗಿದ್ದಾಗ ಅವರು ಗಾಯಗೊಂಡಿದ್ದರು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>