<p>ರುದ್ರಾಕ್ಷಿ, ತಾಂಡವಪ್ರಿಯ ಶಿವನಿಗೆ ಅಚ್ಚುಮೆಚ್ಚು. ರುದ್ರಾಕ್ಷಿ ಧಾರಣೆ ಎಲ್ಲರಿಗೂ ಸಲ್ಲ ಎಂಬ `ಮಡಿ~ ಭಾವನೆ ಈಗ ಬದಲಾಗಿದೆ. ಈ ಕಾಯಿಯಲ್ಲೂ ವಿಶೇಷ ಶಕ್ತಿಯಿದೆ ಎಂಬ ಅಂಶ ಜಗಜ್ಜಾಹೀರಾಗುತ್ತಲೇ ಅದಕ್ಕೆ ಎಲ್ಲಾ ವರ್ಗದ ಜನರಿಂದಲೂ ಬೇಡಿಕೆ ಹೆಚ್ಚಿತು. ಅಸಲಿ ಲೇಬಲ್ ಹೊತ್ತ ನಕಲಿ ಕಾಯಿಗಳು ಫುಟ್ಪಾತ್ನಲ್ಲೂ ಬಿಕರಿಯಾಗುತ್ತಿವೆ.<br /> <br /> ಆದರೆ ರುದ್ರಾಕ್ಷಿ ಮಾರಾಟಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಸಂಸ್ಥೆ `ರುದ್ರಶಕ್ತಿ~ ಮಾತ್ರ ಅಸಲಿ ರುದ್ರಾಕ್ಷಿಗಳನ್ನು ಜನರಿಗೆ ಒದಗಿಸುವ ನಿಟ್ಟಿನಲ್ಲಿ ಪ್ರತಿವರ್ಷ ಪ್ರದರ್ಶನ/ಮಾರಾಟ ಮೇಳವನ್ನು ಏರ್ಪಡಿಸುತ್ತಾ ಬಂದಿದೆ. ರುದ್ರಾಕ್ಷಿ ಧರಿಸಿ ಯಶಸ್ಸು, ಉದ್ಯೋಗದಲ್ಲಿ ಪ್ರಗತಿ, ಸಂಬಂಧಗಳಲ್ಲಿ ಸಾಮರಸ್ಯ, ಆರ್ಥಿಕ ಭದ್ರತೆ, ಶತ್ರುಗಳ ವಿರುದ್ಧ ಜಯ ಸಾಧಿಸುವ ಶಕ್ತಿಯನ್ನು ಸಂಚಯಗೊಳಿಸಿಕೊಳ್ಳಿ ಎಂದು ಹೇಳುತ್ತದೆ, `ರುದ್ರಶಕ್ತಿ~.<br /> ಈ ವರ್ಷದ ಮೇಳ ಇಂಡಿಯನ್ ಎಕ್ಸ್ಪ್ರೆಸ್ ವೃತ್ತದ ಬಳಿಯಿರುವ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ನಲ್ಲಿ ಈಗಾಗಲೇ ಆರಂಭಗೊಂಡಿದ್ದು, ಇದೇ 21ರವರೆಗೂ ನಡೆಯಲಿದೆ.<br /> <br /> ರುದ್ರಾಕ್ಷಿಯಲ್ಲಿ ಬಯೋ ಮ್ಯಾಗ್ನೆಟಿಕ್, ಪ್ಯಾರಾಮ್ಯೋಗ್ನೆಟಿಕ್ ಮತ್ತು ವಿದ್ಯುತ್ ಸಂಬಂಧಿ ಗುಣಗಳಿದ್ದು ಪ್ರತಿರೋಧ, ಧಾರಣೆ ಮತ್ತು ಪ್ರಚೋದನೆಯನ್ನು ಉಂಟುಮಾಡುತ್ತದೆ ಎನ್ನಲಾಗಿದೆ. ರುದ್ರಾಕ್ಷಿ ಮಣಿಗಳು ನಮ್ಮ ದೇಹದಲ್ಲಿನ ಜೈವಿಕ ವಿದ್ಯುತ್ತನ್ನು ನಿಯಂತ್ರಿಸುತ್ತವೆ ಎಂಬುದು `ರುದ್ರಶಕ್ತಿ~ಯ ಸುಮೀರ್ ಕಾಕೋಡ್ಕರ್ ಅಭಿಪ್ರಾಯ.<br /> ರುದ್ರಾಕ್ಷಿಯಲ್ಲೇ ತಯಾರಿಸಿದ ಶಿವಲಿಂಗ ಈ ಬಾರಿಯ ಮೇಳದ ಪ್ರಮುಖ ಆಕರ್ಷಣೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರುದ್ರಾಕ್ಷಿ, ತಾಂಡವಪ್ರಿಯ ಶಿವನಿಗೆ ಅಚ್ಚುಮೆಚ್ಚು. ರುದ್ರಾಕ್ಷಿ ಧಾರಣೆ ಎಲ್ಲರಿಗೂ ಸಲ್ಲ ಎಂಬ `ಮಡಿ~ ಭಾವನೆ ಈಗ ಬದಲಾಗಿದೆ. ಈ ಕಾಯಿಯಲ್ಲೂ ವಿಶೇಷ ಶಕ್ತಿಯಿದೆ ಎಂಬ ಅಂಶ ಜಗಜ್ಜಾಹೀರಾಗುತ್ತಲೇ ಅದಕ್ಕೆ ಎಲ್ಲಾ ವರ್ಗದ ಜನರಿಂದಲೂ ಬೇಡಿಕೆ ಹೆಚ್ಚಿತು. ಅಸಲಿ ಲೇಬಲ್ ಹೊತ್ತ ನಕಲಿ ಕಾಯಿಗಳು ಫುಟ್ಪಾತ್ನಲ್ಲೂ ಬಿಕರಿಯಾಗುತ್ತಿವೆ.<br /> <br /> ಆದರೆ ರುದ್ರಾಕ್ಷಿ ಮಾರಾಟಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಸಂಸ್ಥೆ `ರುದ್ರಶಕ್ತಿ~ ಮಾತ್ರ ಅಸಲಿ ರುದ್ರಾಕ್ಷಿಗಳನ್ನು ಜನರಿಗೆ ಒದಗಿಸುವ ನಿಟ್ಟಿನಲ್ಲಿ ಪ್ರತಿವರ್ಷ ಪ್ರದರ್ಶನ/ಮಾರಾಟ ಮೇಳವನ್ನು ಏರ್ಪಡಿಸುತ್ತಾ ಬಂದಿದೆ. ರುದ್ರಾಕ್ಷಿ ಧರಿಸಿ ಯಶಸ್ಸು, ಉದ್ಯೋಗದಲ್ಲಿ ಪ್ರಗತಿ, ಸಂಬಂಧಗಳಲ್ಲಿ ಸಾಮರಸ್ಯ, ಆರ್ಥಿಕ ಭದ್ರತೆ, ಶತ್ರುಗಳ ವಿರುದ್ಧ ಜಯ ಸಾಧಿಸುವ ಶಕ್ತಿಯನ್ನು ಸಂಚಯಗೊಳಿಸಿಕೊಳ್ಳಿ ಎಂದು ಹೇಳುತ್ತದೆ, `ರುದ್ರಶಕ್ತಿ~.<br /> ಈ ವರ್ಷದ ಮೇಳ ಇಂಡಿಯನ್ ಎಕ್ಸ್ಪ್ರೆಸ್ ವೃತ್ತದ ಬಳಿಯಿರುವ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ನಲ್ಲಿ ಈಗಾಗಲೇ ಆರಂಭಗೊಂಡಿದ್ದು, ಇದೇ 21ರವರೆಗೂ ನಡೆಯಲಿದೆ.<br /> <br /> ರುದ್ರಾಕ್ಷಿಯಲ್ಲಿ ಬಯೋ ಮ್ಯಾಗ್ನೆಟಿಕ್, ಪ್ಯಾರಾಮ್ಯೋಗ್ನೆಟಿಕ್ ಮತ್ತು ವಿದ್ಯುತ್ ಸಂಬಂಧಿ ಗುಣಗಳಿದ್ದು ಪ್ರತಿರೋಧ, ಧಾರಣೆ ಮತ್ತು ಪ್ರಚೋದನೆಯನ್ನು ಉಂಟುಮಾಡುತ್ತದೆ ಎನ್ನಲಾಗಿದೆ. ರುದ್ರಾಕ್ಷಿ ಮಣಿಗಳು ನಮ್ಮ ದೇಹದಲ್ಲಿನ ಜೈವಿಕ ವಿದ್ಯುತ್ತನ್ನು ನಿಯಂತ್ರಿಸುತ್ತವೆ ಎಂಬುದು `ರುದ್ರಶಕ್ತಿ~ಯ ಸುಮೀರ್ ಕಾಕೋಡ್ಕರ್ ಅಭಿಪ್ರಾಯ.<br /> ರುದ್ರಾಕ್ಷಿಯಲ್ಲೇ ತಯಾರಿಸಿದ ಶಿವಲಿಂಗ ಈ ಬಾರಿಯ ಮೇಳದ ಪ್ರಮುಖ ಆಕರ್ಷಣೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>