<p><strong>ಹೊಸಕೋಟೆ: </strong>ರೈತರಿಂದ ಹಣ್ಣು, ತರಕಾರಿ ಪಡೆದು ಅದರ ಹಣವನ್ನು ರೈತರಿಗೆ ಸಂದಾಯ ಮಾಡದೆ ವ್ಯಕ್ತಿಯೊಬ್ಬ ಸುಮಾರು ರೂ 1.10 ಕೋಟಿ ವಂಚಿಸಿದ್ದು ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ನೂರಾರು ರೈತರು ಬುಧವಾರ ಇಲ್ಲಿಯ ಟೆಸ್ಕೊ ಕಚೇರಿ ಎದುರು ಪ್ರತಿಭಟನೆ ನಡೆಸಿದರು.<br /> <br /> `ಆಂಧ್ರಪ್ರದೇಶ ಮೂಲದ ರಾಮರಾಜ ಚಿಂತಾಲಪತಿ ಎಂಬಾತ ಹೊಸಕೋಟೆಯ ವಿವೇಕಾನಂದ ನಗರದಲ್ಲಿ `ಲಾವಣ್ಯ ಫಾರಂ' ಹೆಸರಿನಲ್ಲಿ ಕಚೇರಿ ತೆರೆದಿದ್ದು ಅಲ್ಲಿ ಹೊಸಕೋಟೆ ಸುತ್ತಮುತ್ತ ರೈತರ ಹಣ್ಣು ತರಕಾರಿಗಳನ್ನು ಖರೀದಿಸುತ್ತಿದ್ದ. ಖರೀದಿಸಿದ ಹಣ್ಣು ತರಕಾರಿಗಳನ್ನು ಹೊಸಕೋಟೆಯಲ್ಲೇ ಇದ್ದ ಟೆಸ್ಕೊ ಎಂಬ ಕಂಪೆನಿಗೆ ಆತ ಮಾರಾಟ ಮಾಡುತ್ತಿದ್ದ.</p>.<p>ಆರಂಭದಲ್ಲಿ ಆತ ರೈತರಿಗೆ ಸರಿಯಾಗಿ ಹಣ ಪಾವತಿ ಮಾಡುತ್ತಿದ್ದ. ಬರುಬರುತ್ತಾ ಆತ ಹಣ ಕೊಡಲು ವಿಳಂಬ ಮಾಡತೊಡಗಿದ. ಎರಡು ದಿನಗಳ ಹಿಂದೆ ಆರೋಪಿ ಕಚೇರಿಯನ್ನು ರಾತ್ರೋರಾತ್ರಿ ಮುಚ್ಚಿ ಪರಾರಿಯಾಗಿದ್ದಾನೆ' ಎಂದು ರೈತರು ದೂರಿದರು.<br /> <br /> `ಹಣ್ಣು ತರಕಾರಿ ತರಲು ವಾಹನ ಬಾಡಿಗೆ ಪಡೆದಿದ್ದು ಅದರ ಹಣವನ್ನೂ ಆತ ಕೊಡದೆ ವಂಚಿಸಿದ್ದಾನೆ' ಎಂದು ರೈತರು ದೂರಿದರು. ಈ ಬಗ್ಗೆ ಎಸ್.ರವಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಲಾವಣ್ಯಫಾರಂ ಹಾಗೂ ಟೆಸ್ಕೊ ಕಂಪೆನಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಕೋಟೆ: </strong>ರೈತರಿಂದ ಹಣ್ಣು, ತರಕಾರಿ ಪಡೆದು ಅದರ ಹಣವನ್ನು ರೈತರಿಗೆ ಸಂದಾಯ ಮಾಡದೆ ವ್ಯಕ್ತಿಯೊಬ್ಬ ಸುಮಾರು ರೂ 1.10 ಕೋಟಿ ವಂಚಿಸಿದ್ದು ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ನೂರಾರು ರೈತರು ಬುಧವಾರ ಇಲ್ಲಿಯ ಟೆಸ್ಕೊ ಕಚೇರಿ ಎದುರು ಪ್ರತಿಭಟನೆ ನಡೆಸಿದರು.<br /> <br /> `ಆಂಧ್ರಪ್ರದೇಶ ಮೂಲದ ರಾಮರಾಜ ಚಿಂತಾಲಪತಿ ಎಂಬಾತ ಹೊಸಕೋಟೆಯ ವಿವೇಕಾನಂದ ನಗರದಲ್ಲಿ `ಲಾವಣ್ಯ ಫಾರಂ' ಹೆಸರಿನಲ್ಲಿ ಕಚೇರಿ ತೆರೆದಿದ್ದು ಅಲ್ಲಿ ಹೊಸಕೋಟೆ ಸುತ್ತಮುತ್ತ ರೈತರ ಹಣ್ಣು ತರಕಾರಿಗಳನ್ನು ಖರೀದಿಸುತ್ತಿದ್ದ. ಖರೀದಿಸಿದ ಹಣ್ಣು ತರಕಾರಿಗಳನ್ನು ಹೊಸಕೋಟೆಯಲ್ಲೇ ಇದ್ದ ಟೆಸ್ಕೊ ಎಂಬ ಕಂಪೆನಿಗೆ ಆತ ಮಾರಾಟ ಮಾಡುತ್ತಿದ್ದ.</p>.<p>ಆರಂಭದಲ್ಲಿ ಆತ ರೈತರಿಗೆ ಸರಿಯಾಗಿ ಹಣ ಪಾವತಿ ಮಾಡುತ್ತಿದ್ದ. ಬರುಬರುತ್ತಾ ಆತ ಹಣ ಕೊಡಲು ವಿಳಂಬ ಮಾಡತೊಡಗಿದ. ಎರಡು ದಿನಗಳ ಹಿಂದೆ ಆರೋಪಿ ಕಚೇರಿಯನ್ನು ರಾತ್ರೋರಾತ್ರಿ ಮುಚ್ಚಿ ಪರಾರಿಯಾಗಿದ್ದಾನೆ' ಎಂದು ರೈತರು ದೂರಿದರು.<br /> <br /> `ಹಣ್ಣು ತರಕಾರಿ ತರಲು ವಾಹನ ಬಾಡಿಗೆ ಪಡೆದಿದ್ದು ಅದರ ಹಣವನ್ನೂ ಆತ ಕೊಡದೆ ವಂಚಿಸಿದ್ದಾನೆ' ಎಂದು ರೈತರು ದೂರಿದರು. ಈ ಬಗ್ಗೆ ಎಸ್.ರವಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಲಾವಣ್ಯಫಾರಂ ಹಾಗೂ ಟೆಸ್ಕೊ ಕಂಪೆನಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>