<p><strong>ನವದೆಹಲಿ (ಪಿಟಿಐ):</strong> ದೂರವಾಣಿ ತರಂಗಾಂತರ ಹಂಚಿಕೆ ಹರಾಜಿನ ಮೂಲ ದರವನ್ನು ಕೇಂದ್ರ ಸಚಿವ ಸಂಪುಟವು ಶುಕ್ರವಾರ 14 ಸಾವಿರ ಕೋಟಿ ರೂಪಾಯಿಗಳಿಗೆ ನಿಗದಿ ಮಾಡಿದೆ. <br /> <br /> ಪಿ.ಚಿದಂಬರಂ ನೇತೃತ್ವದ ಹಿರಿಯ ಸಚಿವರ ಸಮಿತಿಯ ಶಿಫಾರಸಿನಂತೆ ತರಂಗಾಂತರ ಹಂಚಿಕೆಯ ಕನಿಷ್ಠ ದರವನ್ನು ರೂ 14 ಸಾವಿರ ಕೋಟಿಗಳಿಂದ ರೂ 15 ಸಾವಿರ ಕೋಟಿಗಳಿಗೆ ನಿಗದಿ ಮಾಡಲು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸಂಪುಟವು ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.<br /> </p>.<table align="right" border="2" cellpadding="2" cellspacing="2" width="300"> <tbody> <tr> <td bgcolor="#333333" style="text-align: center"><span style="color: #ffffff"><strong>30 ಪೈಸೆ ಹೆಚ್ಚಳ?</strong></span></td> </tr> <tr> <td bgcolor="#f2f0f0"><span style="font-size: small">ನವದೆಹಲಿ (ಪಿಟಿಐ): ಸಂಪುಟದ ಈ ನಿರ್ಧಾರದಿಂದ ಉದ್ಯಮಕ್ಕೆ ಹೊಡೆತ ಬೀಳಲಿದೆ. ಅಲ್ಲದೇ ಅನಿವಾರ್ಯವಾಗಿ ದೂರವಾಣಿ ಕರೆ ದರವನ್ನು ಪ್ರತಿ ನಿಮಿಷಕ್ಕೆ ಸರಾಸರಿ 30 ಪೈಸೆಯಷ್ಟು ಹೆಚ್ಚಿಸಬೇಕಾಗುತ್ತದೆ ಎಂದು ಮೊಬೈಲ್ ಸೇವಾ ಸಂಸ್ಥೆಗಳ ಸಂಘ (ಸಿಒಎಐ) ಹೇಳಿದೆ.<br /> </span></td> </tr> </tbody> </table>.<p><br /> ಈ ನಿರ್ಧಾರದಿಂದ ಮೊಬೈಲ್ ಬಳಕೆದಾರರ ಮೇಲೆ ಹೆಚ್ಚಿನ ಹೊರೆ ಬೀಳುವ ಸಾಧ್ಯತೆಯಿದೆ. 5 ಮೆಗಾ ಹರ್ಟ್ಸ್ ತರಂಗಾಂತರಗಳಿಗೆ ಕನಿಷ್ಠ ದರವನ್ನು 14 ಸಾವಿರ ಕೋಟಿಯಿಂದ 15 ಸಾವಿರ ಕೋಟಿಗೆ ನಿಗದಿ ಮಾಡುವಂತೆ ಸಮಿತಿ ಶಿಫಾರಸು ಮಾಡಿದೆ. <br /> <br /> ಆದರೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಇದಕ್ಕೆ 18 ಸಾವಿರ ಕೋಟಿ ರೂಪಾಯಿ ಕನಿಷ್ಠ ದರ ನಿಗದಿ ಮಾಡಲು ಶಿಫಾರಸು ಮಾಡಿತ್ತು. <br /> <br /> ಸಮಿತಿಯು ಶಿಫಾರಸು ಮಾಡಿದಂತೆ ವಿವಿಧ ಸ್ತರದ ವರಮಾನದ ಮೇಲೆ ಶೇ 3ರಿಂದ ಶೇ 8ರಷ್ಟು ವಾರ್ಷಿಕ ತರಂಗಾಂತರ ಹಂಚಿಕೆ ಶುಲ್ಕವನ್ನು ವಿಧಿಸಲು ಸಂಪುಟವು ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.<br /> <br /> 2008ರಲ್ಲಿ ದೂರಸಂಪರ್ಕ ಸಚಿವರಾಗಿದ್ದ ಎ. ರಾಜಾ ಅವರು 2 ಜಿ ತರಂಗಾಂತರ ಹಂಚಿಕೆಗೆ ನೀಡಿದ್ದ 122 ಪರವಾನಗಿಯನ್ನು ಫೆಬ್ರುವರಿ ತಿಂಗಳಿನಲ್ಲಿ ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಅಲ್ಲದೇ ಆಗಸ್ಟ್ 31ರೊಳಗೆ ಹೊಸ ಹರಾಜು ನಡೆಸುವಂತೆ ಸೂಚನೆ ನೀಡಿತ್ತು. ಈ ಗಡುವಿನೊಳಗೆ ಹರಾಜು ಪ್ರಕ್ರಿಯೆ ಪೂರ್ಣಗೊಳ್ಳುವುದು ಅನುಮಾನ. ಹೀಗಾಗಿ ಸರ್ಕಾರವು ಗಡುವು ವಿಸ್ತರಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.<br /> <br /> <strong>ಉದ್ದಿಮೆಗೆ ಅಪಥ್ಯ: </strong>ಸಂಪುಟ ನಿಗದಿ ಮಾಡಿರುವ ತರಂಗಾಂತರ ಹಂಚಿಕೆ ಮೂಲ ದರವು ದೂರಸಂಪರ್ಕ ಉದ್ದಿಮೆಗೆ ಅಪಥ್ಯವಾಗಬಹುದು. `ಟ್ರಾಯ್~ ನಿಗದಿ ಮಾಡಿದ್ದ ಮೂಲ ದರದಿಂದ ಕರೆ ದರಗಳು ಶೇ 100ರಷ್ಟು ಹೆಚ್ಚುವ ಸಾಧ್ಯತೆಗಳಿದ್ದವು. ಹೀಗಾಗಿ ಮೂಲದ ದರದಲ್ಲಿ ಶೇ 80ರಷ್ಟು ಕಡಿತ ಮಾಡುವಂತೆ ಉದ್ದಿಮೆಯು ಒತ್ತಾಯಿಸುತ್ತ ಬಂದಿದೆ. <br /> <br /> ಸೆಪ್ಟೆಂಬರ್ 7ರವರೆಗೆ ಸೇವಾವಧಿ ಹೊಂದಿರುವ ಯುನಿನಾರ್, ಸಿಸ್ಟೆಮಾ ಶ್ಯಾಂ ಟೆಲಿ ಸರ್ವಿಸಸ್ನಂಥ ಕಂಪೆನಿಗಳಿಗೆ ತರಂಗಾಂತರ ಹಂಚಿಕೆ ಹರಾಜು ಮಹತ್ವದ್ದಾಗಿದೆ. ಒಂದು ವೇಳೆ ಸೆ. 7ರೊಳಗೆ ಪರವಾನಗಿ ಪಡೆಯಲು ವಿಫಲವಾದಲ್ಲಿ ಈ ಕಂಪೆನಿಗಳು ಅನಿವಾರ್ಯವಾಗಿ ತಮ್ಮ ಸೇವೆ ನಿಲ್ಲಿಸಬೇಕಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ದೂರವಾಣಿ ತರಂಗಾಂತರ ಹಂಚಿಕೆ ಹರಾಜಿನ ಮೂಲ ದರವನ್ನು ಕೇಂದ್ರ ಸಚಿವ ಸಂಪುಟವು ಶುಕ್ರವಾರ 14 ಸಾವಿರ ಕೋಟಿ ರೂಪಾಯಿಗಳಿಗೆ ನಿಗದಿ ಮಾಡಿದೆ. <br /> <br /> ಪಿ.ಚಿದಂಬರಂ ನೇತೃತ್ವದ ಹಿರಿಯ ಸಚಿವರ ಸಮಿತಿಯ ಶಿಫಾರಸಿನಂತೆ ತರಂಗಾಂತರ ಹಂಚಿಕೆಯ ಕನಿಷ್ಠ ದರವನ್ನು ರೂ 14 ಸಾವಿರ ಕೋಟಿಗಳಿಂದ ರೂ 15 ಸಾವಿರ ಕೋಟಿಗಳಿಗೆ ನಿಗದಿ ಮಾಡಲು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸಂಪುಟವು ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.<br /> </p>.<table align="right" border="2" cellpadding="2" cellspacing="2" width="300"> <tbody> <tr> <td bgcolor="#333333" style="text-align: center"><span style="color: #ffffff"><strong>30 ಪೈಸೆ ಹೆಚ್ಚಳ?</strong></span></td> </tr> <tr> <td bgcolor="#f2f0f0"><span style="font-size: small">ನವದೆಹಲಿ (ಪಿಟಿಐ): ಸಂಪುಟದ ಈ ನಿರ್ಧಾರದಿಂದ ಉದ್ಯಮಕ್ಕೆ ಹೊಡೆತ ಬೀಳಲಿದೆ. ಅಲ್ಲದೇ ಅನಿವಾರ್ಯವಾಗಿ ದೂರವಾಣಿ ಕರೆ ದರವನ್ನು ಪ್ರತಿ ನಿಮಿಷಕ್ಕೆ ಸರಾಸರಿ 30 ಪೈಸೆಯಷ್ಟು ಹೆಚ್ಚಿಸಬೇಕಾಗುತ್ತದೆ ಎಂದು ಮೊಬೈಲ್ ಸೇವಾ ಸಂಸ್ಥೆಗಳ ಸಂಘ (ಸಿಒಎಐ) ಹೇಳಿದೆ.<br /> </span></td> </tr> </tbody> </table>.<p><br /> ಈ ನಿರ್ಧಾರದಿಂದ ಮೊಬೈಲ್ ಬಳಕೆದಾರರ ಮೇಲೆ ಹೆಚ್ಚಿನ ಹೊರೆ ಬೀಳುವ ಸಾಧ್ಯತೆಯಿದೆ. 5 ಮೆಗಾ ಹರ್ಟ್ಸ್ ತರಂಗಾಂತರಗಳಿಗೆ ಕನಿಷ್ಠ ದರವನ್ನು 14 ಸಾವಿರ ಕೋಟಿಯಿಂದ 15 ಸಾವಿರ ಕೋಟಿಗೆ ನಿಗದಿ ಮಾಡುವಂತೆ ಸಮಿತಿ ಶಿಫಾರಸು ಮಾಡಿದೆ. <br /> <br /> ಆದರೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಇದಕ್ಕೆ 18 ಸಾವಿರ ಕೋಟಿ ರೂಪಾಯಿ ಕನಿಷ್ಠ ದರ ನಿಗದಿ ಮಾಡಲು ಶಿಫಾರಸು ಮಾಡಿತ್ತು. <br /> <br /> ಸಮಿತಿಯು ಶಿಫಾರಸು ಮಾಡಿದಂತೆ ವಿವಿಧ ಸ್ತರದ ವರಮಾನದ ಮೇಲೆ ಶೇ 3ರಿಂದ ಶೇ 8ರಷ್ಟು ವಾರ್ಷಿಕ ತರಂಗಾಂತರ ಹಂಚಿಕೆ ಶುಲ್ಕವನ್ನು ವಿಧಿಸಲು ಸಂಪುಟವು ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.<br /> <br /> 2008ರಲ್ಲಿ ದೂರಸಂಪರ್ಕ ಸಚಿವರಾಗಿದ್ದ ಎ. ರಾಜಾ ಅವರು 2 ಜಿ ತರಂಗಾಂತರ ಹಂಚಿಕೆಗೆ ನೀಡಿದ್ದ 122 ಪರವಾನಗಿಯನ್ನು ಫೆಬ್ರುವರಿ ತಿಂಗಳಿನಲ್ಲಿ ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಅಲ್ಲದೇ ಆಗಸ್ಟ್ 31ರೊಳಗೆ ಹೊಸ ಹರಾಜು ನಡೆಸುವಂತೆ ಸೂಚನೆ ನೀಡಿತ್ತು. ಈ ಗಡುವಿನೊಳಗೆ ಹರಾಜು ಪ್ರಕ್ರಿಯೆ ಪೂರ್ಣಗೊಳ್ಳುವುದು ಅನುಮಾನ. ಹೀಗಾಗಿ ಸರ್ಕಾರವು ಗಡುವು ವಿಸ್ತರಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.<br /> <br /> <strong>ಉದ್ದಿಮೆಗೆ ಅಪಥ್ಯ: </strong>ಸಂಪುಟ ನಿಗದಿ ಮಾಡಿರುವ ತರಂಗಾಂತರ ಹಂಚಿಕೆ ಮೂಲ ದರವು ದೂರಸಂಪರ್ಕ ಉದ್ದಿಮೆಗೆ ಅಪಥ್ಯವಾಗಬಹುದು. `ಟ್ರಾಯ್~ ನಿಗದಿ ಮಾಡಿದ್ದ ಮೂಲ ದರದಿಂದ ಕರೆ ದರಗಳು ಶೇ 100ರಷ್ಟು ಹೆಚ್ಚುವ ಸಾಧ್ಯತೆಗಳಿದ್ದವು. ಹೀಗಾಗಿ ಮೂಲದ ದರದಲ್ಲಿ ಶೇ 80ರಷ್ಟು ಕಡಿತ ಮಾಡುವಂತೆ ಉದ್ದಿಮೆಯು ಒತ್ತಾಯಿಸುತ್ತ ಬಂದಿದೆ. <br /> <br /> ಸೆಪ್ಟೆಂಬರ್ 7ರವರೆಗೆ ಸೇವಾವಧಿ ಹೊಂದಿರುವ ಯುನಿನಾರ್, ಸಿಸ್ಟೆಮಾ ಶ್ಯಾಂ ಟೆಲಿ ಸರ್ವಿಸಸ್ನಂಥ ಕಂಪೆನಿಗಳಿಗೆ ತರಂಗಾಂತರ ಹಂಚಿಕೆ ಹರಾಜು ಮಹತ್ವದ್ದಾಗಿದೆ. ಒಂದು ವೇಳೆ ಸೆ. 7ರೊಳಗೆ ಪರವಾನಗಿ ಪಡೆಯಲು ವಿಫಲವಾದಲ್ಲಿ ಈ ಕಂಪೆನಿಗಳು ಅನಿವಾರ್ಯವಾಗಿ ತಮ್ಮ ಸೇವೆ ನಿಲ್ಲಿಸಬೇಕಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>