<p><strong>ಮಂಡ್ಯ:</strong> ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳು ಕುಸಿದಿರುವುದು ಗ್ರಾಹಕರಿಗೆ ಸಮಾಧಾನ ತಂದಿದ್ದರೆ, ಅದನ್ನು ಬೆಳೆದ ರೈತರಿಗೆ ದಿಕ್ಕೇ ತೋಚದಂತಾಗಿದೆ.<br /> <br /> ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಬಹುತೇಕ ತರಕಾರಿಗಳ ಬೆಲೆಯು ಮಂಡ್ಯದ ಮಾರುಕಟ್ಟೆಯಲ್ಲಿ ಕೆಜಿಗೆ 10 ರೂಪಾಯಿಯಂತೆ ದೊರೆಯುತ್ತಿದೆ. ತರಕಾರಿ ಬೆಳೆದುಕೊಂಡು ನಾಲ್ಕು ಕಾಸು ಪಡೆದುಕೊಳ್ಳುತ್ತಿದ್ದ ರೈತ ಸಮೂಹ ಸಿಲುಕಿದೆ.<br /> <br /> ಬೆಂಡೆಕಾಯಿ, ಮೂಲಂಗಿ, ಬಿನ್ಸ್, ಈರೇಕಾಯಿ, ಗೆಡ್ಡೆಕೋಸು ಕೇವಲ ರೂ10 ಕೆಜಿ ಇದ್ದರೆ, ಸೀಮೆ ಬದನೆಕಾಯಿ ರೂ20 ಮಾರಾಟ ಮಾಡಲಾಗುತ್ತಿದೆ.<br /> <br /> ತೊಗರಿಕಾಯಿ ರೂ25, ಅವರೆಕಾಯಿ ರೂ30, ಬಿಟ್ರೂಟ್ ರೂ30, ಕ್ಯಾರೆಟ್ ರೂ 40 ರೂಪಾಯಿಗೆ ಕೆಜಿಯಂತೆ ಮಾರಾಟವಾಗುತ್ತಿದೆ. ಸೊಪ್ಪಿನ ಸೂಡುಗಳೂ ರೂ5 ಒಂದರಂತೆ ಮಾರಾಟ ಮಾಡಲಾಗುತ್ತದೆ. ಕೋತಂಬರಿ ಸೂಡಿನಲ್ಲಿಯೂ ಬೆಲೆ ಇಳಿಕೆಯಾಗಿದೆ.<br /> <br /> ಕೆಲ ದಿನಗಳ ಹಿಂದೆ 20 ರೂಪಾಯಿ ಕೆಜಿಗೆ ಮಾರಾಟವಾಗುತ್ತಿದ್ದ ಟೊಮ್ಯಾಟೊ ಬೆಲೆಯೂ ಈಗ ರೂ10 ಕೆಜಿಗೆ ಕುಸಿದಿದೆ. ಹತ್ತು ರೂಪಾಯಿಗೆ ಹತ್ತು ಸೌತೆಕಾಯಿ ನೀಡಲಾಗುತ್ತಿದೆ.<br /> <br /> ಹದಿನೈದು ದಿನಗಳಲ್ಲಿ 50 ರೂಪಾಯಿಗೆ ಕೆಜಿಗೆ ಮಾರಾಟವಾಗುವ ಮೂಲಕ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ಬೆಲೆಯೂ ಕೆಜಿಗೆ 20 ರಿಂದ 25 ರೂಪಾಯಿಗೆ ಇಳಿದಿರುವುದು ಸಮಾಧಾನ ತರಿಸಿದೆ.<br /> <br /> <strong>ಅರ್ಧ ಕೆಜಿ ಇಲ್ಲ</strong>: ಬೆಲೆ ಇಳಿಕೆಯಿಂದಾಗಿ ಮಾರಾಟಗಾರರು, ಕಾಲು ಕೆಜಿಯ ಲೆಕ್ಕದಲ್ಲಿ ತರಕಾರಿ ತೂಗುವುದನ್ನು ನಿಲ್ಲಿಸಿಬಿಟ್ಟಿದ್ದಾರೆ.<br /> <br /> ಕೆಲವರು ಅರ್ಧ ಕೆಜಿಯೂ ತೂಗುವುದಿಲ್ಲ. ಐದು ರೂಪಾಯಿ ಚಿಲ್ಲರೆ ಇದ್ದರೆ ಮಾತ್ರ ನೀಡಲಾಗುತ್ತದೆ. ಇಲ್ಲದಿದ್ದರೆ ಮಿಕ್ಸ್ ತರಕಾರಿಯನ್ನು ತೆಗೆದುಕೊಳ್ಳಬೇಕು ಎಂದು ಷರತ್ತು ವಿಧಿಸುತ್ತಾರೆ.<br /> <br /> ಬೇಡಿಕೆಗಿಂತ ಹೆಚ್ಚಾಗಿ ತರಕಾರಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೆಲೆ ಇಲ್ಲದಂತಾಗಿದೆ. ಬಹುತೇಕ ತರಕಾರಿ ಹತ್ತು ರೂಪಾಯಿಗೆ ಕೆಜಿಯಂತೆ ದೊರೆಯುತ್ತಿದೆ. ರೈತರಿಂದ ರೂ8 ಕೆಜಿಯಂತೆ ತೆಗೆದುಕೊಂಡು ಹತ್ತು ರೂಪಾಯಿಗೆ ಮಾರುತ್ತಿದ್ದೇವೆ ಎನ್ನುತ್ತಾರೆ ವ್ಯಾಪಾರಿ ಅಬ್ದುಲ್.<br /> <br /> ಕಳೆದ ಬಾರಿ ಬಿನ್ಸ್ ಮಾರುಕಟ್ಟೆಗೆ ಬಂದಾಗ ರೂ 40 ಕೆಜಿಯಂತೆ ಇತ್ತು. ನಾನು ರೂ30 ಕೆಜಿಯಂತೆ ನೀಡಿ ಹೋಗಿದ್ದೆ. ಆದರೆ, ಈ ಬಾರಿ ರೂ5 ಕೆಜಿಯಂತೆ ಕೇಳುತ್ತಿದ್ದಾರೆ. ಹೊಲದಲ್ಲಿ ಬೆಳೆದ ಕೂಲಿಯೂ ಸಿಗುತ್ತಿಲ್ಲ ಎಂದು ದೂರುತ್ತಾರೆ ದೊಡ್ಡಬ್ಯಾಡರಹಳ್ಳಿಯ ರೈತ ಶಂಭೂಗೌಡ.<br /> <br /> ಐದು ರೂಪಾಯಿಗೆ ಒಂದು ಕಪ್ ಚಹಾ ಸಹಿತ ಸಿಗುವುದಿಲ್ಲ. ಆ ಬೆಲೆಗೆ ಕೆಜಿ ತರಕಾರಿಯನ್ನು ಮಾರುವಂತಾಗಿದೆ. ತರಕಾರಿ ಬೆಳೆದರೆ ಒಂದಷ್ಟು ಲಾಭವಾಗುತ್ತದೆ ಎಂಬುದಿತ್ತು. ಈಗ ಅದೂ ಇಲ್ಲದಂತಾಗಿದೆ ಎನ್ನುತ್ತಾರೆ ರೈತರು.<br /> <br /> <strong>ತರಕಾರಿಯೇ ಜೀವನ:</strong> ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ರೈತರು ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಒಣ ಬೇಸಾಯವನ್ನು ಹೊಂದಿರುವ ಮಳವಳ್ಳಿ ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ.<br /> <br /> ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್. ಪೇಟೆ ಹಾಗೂ ಮದ್ದೂರು ತಾಲ್ಲೂಕುಗಳಲ್ಲಿಯೂ ತರಕಾರಿಯನ್ನು ಬೆಳೆಯಲಾಗುತ್ತದೆ.<br /> <br /> ಮಾಂಸಹಾರವನ್ನು ವರ್ಜಿಸಿ, ಸಸ್ಯಹಾರವನ್ನು ಹೆಚ್ಚಾಗಿ ಬಳಸುವ ಕಾರ್ತಿಕ ಮಾಸದಲ್ಲಿಯೇ ಹೀಗಾದರೆ, ಮುಂದಿನ ದಿನಗಳಲ್ಲಿ ಹೇಗಾಗಬಹುದು ಎನ್ನುವ ಚಿಂತೆ ಅವರನ್ನು ಕಾಡುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ತರಕಾರಿ ಬೆಲೆಗಳಲ್ಲಿ ತೀವ್ರ ಕುಸಿತ ಉಂಟಾಗಿರುವುದು ರೈತರನ್ನು ಕಂಗಾಲಾಗಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳು ಕುಸಿದಿರುವುದು ಗ್ರಾಹಕರಿಗೆ ಸಮಾಧಾನ ತಂದಿದ್ದರೆ, ಅದನ್ನು ಬೆಳೆದ ರೈತರಿಗೆ ದಿಕ್ಕೇ ತೋಚದಂತಾಗಿದೆ.<br /> <br /> ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಬಹುತೇಕ ತರಕಾರಿಗಳ ಬೆಲೆಯು ಮಂಡ್ಯದ ಮಾರುಕಟ್ಟೆಯಲ್ಲಿ ಕೆಜಿಗೆ 10 ರೂಪಾಯಿಯಂತೆ ದೊರೆಯುತ್ತಿದೆ. ತರಕಾರಿ ಬೆಳೆದುಕೊಂಡು ನಾಲ್ಕು ಕಾಸು ಪಡೆದುಕೊಳ್ಳುತ್ತಿದ್ದ ರೈತ ಸಮೂಹ ಸಿಲುಕಿದೆ.<br /> <br /> ಬೆಂಡೆಕಾಯಿ, ಮೂಲಂಗಿ, ಬಿನ್ಸ್, ಈರೇಕಾಯಿ, ಗೆಡ್ಡೆಕೋಸು ಕೇವಲ ರೂ10 ಕೆಜಿ ಇದ್ದರೆ, ಸೀಮೆ ಬದನೆಕಾಯಿ ರೂ20 ಮಾರಾಟ ಮಾಡಲಾಗುತ್ತಿದೆ.<br /> <br /> ತೊಗರಿಕಾಯಿ ರೂ25, ಅವರೆಕಾಯಿ ರೂ30, ಬಿಟ್ರೂಟ್ ರೂ30, ಕ್ಯಾರೆಟ್ ರೂ 40 ರೂಪಾಯಿಗೆ ಕೆಜಿಯಂತೆ ಮಾರಾಟವಾಗುತ್ತಿದೆ. ಸೊಪ್ಪಿನ ಸೂಡುಗಳೂ ರೂ5 ಒಂದರಂತೆ ಮಾರಾಟ ಮಾಡಲಾಗುತ್ತದೆ. ಕೋತಂಬರಿ ಸೂಡಿನಲ್ಲಿಯೂ ಬೆಲೆ ಇಳಿಕೆಯಾಗಿದೆ.<br /> <br /> ಕೆಲ ದಿನಗಳ ಹಿಂದೆ 20 ರೂಪಾಯಿ ಕೆಜಿಗೆ ಮಾರಾಟವಾಗುತ್ತಿದ್ದ ಟೊಮ್ಯಾಟೊ ಬೆಲೆಯೂ ಈಗ ರೂ10 ಕೆಜಿಗೆ ಕುಸಿದಿದೆ. ಹತ್ತು ರೂಪಾಯಿಗೆ ಹತ್ತು ಸೌತೆಕಾಯಿ ನೀಡಲಾಗುತ್ತಿದೆ.<br /> <br /> ಹದಿನೈದು ದಿನಗಳಲ್ಲಿ 50 ರೂಪಾಯಿಗೆ ಕೆಜಿಗೆ ಮಾರಾಟವಾಗುವ ಮೂಲಕ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ಬೆಲೆಯೂ ಕೆಜಿಗೆ 20 ರಿಂದ 25 ರೂಪಾಯಿಗೆ ಇಳಿದಿರುವುದು ಸಮಾಧಾನ ತರಿಸಿದೆ.<br /> <br /> <strong>ಅರ್ಧ ಕೆಜಿ ಇಲ್ಲ</strong>: ಬೆಲೆ ಇಳಿಕೆಯಿಂದಾಗಿ ಮಾರಾಟಗಾರರು, ಕಾಲು ಕೆಜಿಯ ಲೆಕ್ಕದಲ್ಲಿ ತರಕಾರಿ ತೂಗುವುದನ್ನು ನಿಲ್ಲಿಸಿಬಿಟ್ಟಿದ್ದಾರೆ.<br /> <br /> ಕೆಲವರು ಅರ್ಧ ಕೆಜಿಯೂ ತೂಗುವುದಿಲ್ಲ. ಐದು ರೂಪಾಯಿ ಚಿಲ್ಲರೆ ಇದ್ದರೆ ಮಾತ್ರ ನೀಡಲಾಗುತ್ತದೆ. ಇಲ್ಲದಿದ್ದರೆ ಮಿಕ್ಸ್ ತರಕಾರಿಯನ್ನು ತೆಗೆದುಕೊಳ್ಳಬೇಕು ಎಂದು ಷರತ್ತು ವಿಧಿಸುತ್ತಾರೆ.<br /> <br /> ಬೇಡಿಕೆಗಿಂತ ಹೆಚ್ಚಾಗಿ ತರಕಾರಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೆಲೆ ಇಲ್ಲದಂತಾಗಿದೆ. ಬಹುತೇಕ ತರಕಾರಿ ಹತ್ತು ರೂಪಾಯಿಗೆ ಕೆಜಿಯಂತೆ ದೊರೆಯುತ್ತಿದೆ. ರೈತರಿಂದ ರೂ8 ಕೆಜಿಯಂತೆ ತೆಗೆದುಕೊಂಡು ಹತ್ತು ರೂಪಾಯಿಗೆ ಮಾರುತ್ತಿದ್ದೇವೆ ಎನ್ನುತ್ತಾರೆ ವ್ಯಾಪಾರಿ ಅಬ್ದುಲ್.<br /> <br /> ಕಳೆದ ಬಾರಿ ಬಿನ್ಸ್ ಮಾರುಕಟ್ಟೆಗೆ ಬಂದಾಗ ರೂ 40 ಕೆಜಿಯಂತೆ ಇತ್ತು. ನಾನು ರೂ30 ಕೆಜಿಯಂತೆ ನೀಡಿ ಹೋಗಿದ್ದೆ. ಆದರೆ, ಈ ಬಾರಿ ರೂ5 ಕೆಜಿಯಂತೆ ಕೇಳುತ್ತಿದ್ದಾರೆ. ಹೊಲದಲ್ಲಿ ಬೆಳೆದ ಕೂಲಿಯೂ ಸಿಗುತ್ತಿಲ್ಲ ಎಂದು ದೂರುತ್ತಾರೆ ದೊಡ್ಡಬ್ಯಾಡರಹಳ್ಳಿಯ ರೈತ ಶಂಭೂಗೌಡ.<br /> <br /> ಐದು ರೂಪಾಯಿಗೆ ಒಂದು ಕಪ್ ಚಹಾ ಸಹಿತ ಸಿಗುವುದಿಲ್ಲ. ಆ ಬೆಲೆಗೆ ಕೆಜಿ ತರಕಾರಿಯನ್ನು ಮಾರುವಂತಾಗಿದೆ. ತರಕಾರಿ ಬೆಳೆದರೆ ಒಂದಷ್ಟು ಲಾಭವಾಗುತ್ತದೆ ಎಂಬುದಿತ್ತು. ಈಗ ಅದೂ ಇಲ್ಲದಂತಾಗಿದೆ ಎನ್ನುತ್ತಾರೆ ರೈತರು.<br /> <br /> <strong>ತರಕಾರಿಯೇ ಜೀವನ:</strong> ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ರೈತರು ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಒಣ ಬೇಸಾಯವನ್ನು ಹೊಂದಿರುವ ಮಳವಳ್ಳಿ ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ.<br /> <br /> ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್. ಪೇಟೆ ಹಾಗೂ ಮದ್ದೂರು ತಾಲ್ಲೂಕುಗಳಲ್ಲಿಯೂ ತರಕಾರಿಯನ್ನು ಬೆಳೆಯಲಾಗುತ್ತದೆ.<br /> <br /> ಮಾಂಸಹಾರವನ್ನು ವರ್ಜಿಸಿ, ಸಸ್ಯಹಾರವನ್ನು ಹೆಚ್ಚಾಗಿ ಬಳಸುವ ಕಾರ್ತಿಕ ಮಾಸದಲ್ಲಿಯೇ ಹೀಗಾದರೆ, ಮುಂದಿನ ದಿನಗಳಲ್ಲಿ ಹೇಗಾಗಬಹುದು ಎನ್ನುವ ಚಿಂತೆ ಅವರನ್ನು ಕಾಡುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ತರಕಾರಿ ಬೆಲೆಗಳಲ್ಲಿ ತೀವ್ರ ಕುಸಿತ ಉಂಟಾಗಿರುವುದು ರೈತರನ್ನು ಕಂಗಾಲಾಗಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>