<p>ಬೀದರ್-ಗುಲ್ಬರ್ಗ ರೈಲ್ವೆ ಮಾರ್ಗ ರೈಲ್ವೆಯ ಎರಡು ವಲಯಗಳಲ್ಲಿ ಹಂಚಿ ಹೋಗಿದೆ. ಬೀದರ್ನಿಂದ ಹುಮನಾಬಾದ್ ತಾಲೂಕಿನ ವ್ಯಾಪ್ತಿಯ ಮಾರ್ಗ ಸಿಕಂದರಬಾದ್ನ ದಕ್ಷಿಣ ಮಧ್ಯ ರೈಲ್ವೆ ಅಧೀನಕ್ಕೆ ಒಳಪಟ್ಟಿದೆ. ಅಲ್ಲಿಂದ ಮುಂದೆ ಗುಲ್ಬರ್ಗವರೆಗಿನ ಮಾರ್ಗ ಮುಂಬೈನಲ್ಲಿರುವ ಕೇಂದ್ರವಲಯಕ್ಕೆ ಸೇರಿದೆ.<br /> <br /> ಕಳೆದ ಮಾರ್ಚ್ 28ರಂದು ಈ ಭಾಗದಲ್ಲಿ ನೂತನವಾಗಿ ನಿರ್ಮಿಸಿದ ಖಾನಾಪೂರ- ಹುಮ್ನಾಬಾದ್ ನಡುವಣ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಲೋಕೊ ರೈಲ್ವೆ ಎಂಜಿನ್ ಯಶಸ್ವಿಯಾಗಿ ತನ್ನ ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಿದೆ. ಇದು ಹೆಮ್ಮೆ ತರುವ ಸಂಗತಿ.<br /> <br /> ಆದರೆ, ಗುಲ್ಬರ್ಗ ಜಿಲ್ಲೆಯ ಕಥೆಯೇ ಬೇರೆ. ಇಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯೇ ಪೂರ್ಣಗೊಂಡಿಲ್ಲವಂತೆ. ಒಂದೆಡೆ ರೈಲು ಎಂಜಿನ್ ಓಡಿದ್ದರೆ, ಇನ್ನೊಂದೆಡೆ ಬಹಳ ನಿರಾಶಾದಾಯಕ ಪ್ರಗತಿ. ಗುಲ್ಬರ್ಗ-ಹುಮ್ನಾಬಾದ್ ನಡುವಿನ 53 ಕಿ.ಮೀ ಕಾಮಗಾರಿ 2014ರಲ್ಲಿ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ. ಇನ್ನಾದರೂ, ಯಾವ ಅಡೆ ತಡೆ ಇಲ್ಲದೆ ಈ ಮಾರ್ಗ ಪೂರ್ಣಗೊಳಿಸಲು ಸರ್ಕಾರ ಗಮನ ಹರಿಸಬೇಕು. ಇದರಿಂದ ದೆಹಲಿ ಬೆಂಗಳೂರು ಮಧ್ಯೆ 350 ಕಿಲೋಮೀಟರ್ ಅಂತರ ಕಡಿಮೆಯಾಗಲಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್-ಗುಲ್ಬರ್ಗ ರೈಲ್ವೆ ಮಾರ್ಗ ರೈಲ್ವೆಯ ಎರಡು ವಲಯಗಳಲ್ಲಿ ಹಂಚಿ ಹೋಗಿದೆ. ಬೀದರ್ನಿಂದ ಹುಮನಾಬಾದ್ ತಾಲೂಕಿನ ವ್ಯಾಪ್ತಿಯ ಮಾರ್ಗ ಸಿಕಂದರಬಾದ್ನ ದಕ್ಷಿಣ ಮಧ್ಯ ರೈಲ್ವೆ ಅಧೀನಕ್ಕೆ ಒಳಪಟ್ಟಿದೆ. ಅಲ್ಲಿಂದ ಮುಂದೆ ಗುಲ್ಬರ್ಗವರೆಗಿನ ಮಾರ್ಗ ಮುಂಬೈನಲ್ಲಿರುವ ಕೇಂದ್ರವಲಯಕ್ಕೆ ಸೇರಿದೆ.<br /> <br /> ಕಳೆದ ಮಾರ್ಚ್ 28ರಂದು ಈ ಭಾಗದಲ್ಲಿ ನೂತನವಾಗಿ ನಿರ್ಮಿಸಿದ ಖಾನಾಪೂರ- ಹುಮ್ನಾಬಾದ್ ನಡುವಣ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಲೋಕೊ ರೈಲ್ವೆ ಎಂಜಿನ್ ಯಶಸ್ವಿಯಾಗಿ ತನ್ನ ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಿದೆ. ಇದು ಹೆಮ್ಮೆ ತರುವ ಸಂಗತಿ.<br /> <br /> ಆದರೆ, ಗುಲ್ಬರ್ಗ ಜಿಲ್ಲೆಯ ಕಥೆಯೇ ಬೇರೆ. ಇಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯೇ ಪೂರ್ಣಗೊಂಡಿಲ್ಲವಂತೆ. ಒಂದೆಡೆ ರೈಲು ಎಂಜಿನ್ ಓಡಿದ್ದರೆ, ಇನ್ನೊಂದೆಡೆ ಬಹಳ ನಿರಾಶಾದಾಯಕ ಪ್ರಗತಿ. ಗುಲ್ಬರ್ಗ-ಹುಮ್ನಾಬಾದ್ ನಡುವಿನ 53 ಕಿ.ಮೀ ಕಾಮಗಾರಿ 2014ರಲ್ಲಿ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ. ಇನ್ನಾದರೂ, ಯಾವ ಅಡೆ ತಡೆ ಇಲ್ಲದೆ ಈ ಮಾರ್ಗ ಪೂರ್ಣಗೊಳಿಸಲು ಸರ್ಕಾರ ಗಮನ ಹರಿಸಬೇಕು. ಇದರಿಂದ ದೆಹಲಿ ಬೆಂಗಳೂರು ಮಧ್ಯೆ 350 ಕಿಲೋಮೀಟರ್ ಅಂತರ ಕಡಿಮೆಯಾಗಲಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>