<p><strong>ಬೆಂಗಳೂರು: </strong>ಲಂಕೇಶ್ ಅವರ ನಂತರ ಪಾರಂಪರಿಕವಾಗಿ ಬರೆಯುವಲ್ಲಿ ಎನ್.ಎಸ್ ಶಂಕರ ಒಬ್ಬರಾಗಿದ್ದಾರೆ. ಅವರ `ಹುಡುಕಾಟ~ ಪುಸ್ತಕದಲ್ಲಿ ಹೀನಾಯ ಸ್ಥಿತಿಯಲ್ಲಿರುವ ಮಾನವನ ಚಿತ್ರಣವನ್ನು ತಂದಿದ್ದಾರೆ ಎಂದು ಪತ್ರಕರ್ತ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.<br /> <br /> ಅವರು ಪ್ರೆಸ್ಕ್ಲಬ್ ಪ್ರಕಾಶನ ಹೊರತಂದಿರುವ ಚಿತ್ರನಿರ್ದೇಶಕ ಎನ್.ಎಸ್ ಶಂಕರ `ಹುಡುಕಾಟ~ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತ, `ಪತ್ರಿಕೋದ್ಯಮವೇ ಬೇಡ ಎಂದುಕೊಂಡಿದ್ದ ನನಗೆ ಮತ್ತೆ ಅದೇ ಕ್ಷೇತ್ರಕ್ಕೆ ಕರೆತಂದವರು ಶಂಕರ. ಅವರ ಪುಸ್ತಕದಲ್ಲಿ ಪತ್ರಿಕೋದ್ಯಮಕ್ಕೆ ಬೇಕಾದ ಹಲವು ಲೇಖನಗಳು ಇವೆ~ ಎಂದು ಹೇಳಿದರು.<br /> <br /> ಸಮಾರಂಭದ ಅಧ್ಯಕ್ಷತೆಯನ್ನು ಕವಿ ಡಾ.ಚಂದ್ರಶೇಖರ ಕಂಬಾರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೃತಿಕಾರ ಎನ್.ಎಸ್ ಶಂಕರ್, ಪ್ರೆಸ್ ಕ್ಲಬ್ ಅಧ್ಯಕ್ಷ ಎಂ.ಎ ಪೊನ್ನಪ್ಪ, ಕಾರ್ಯದರ್ಶಿ ಸದಾಶಿವ ಶಣೈ ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಲಂಕೇಶ್ ಅವರ ನಂತರ ಪಾರಂಪರಿಕವಾಗಿ ಬರೆಯುವಲ್ಲಿ ಎನ್.ಎಸ್ ಶಂಕರ ಒಬ್ಬರಾಗಿದ್ದಾರೆ. ಅವರ `ಹುಡುಕಾಟ~ ಪುಸ್ತಕದಲ್ಲಿ ಹೀನಾಯ ಸ್ಥಿತಿಯಲ್ಲಿರುವ ಮಾನವನ ಚಿತ್ರಣವನ್ನು ತಂದಿದ್ದಾರೆ ಎಂದು ಪತ್ರಕರ್ತ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.<br /> <br /> ಅವರು ಪ್ರೆಸ್ಕ್ಲಬ್ ಪ್ರಕಾಶನ ಹೊರತಂದಿರುವ ಚಿತ್ರನಿರ್ದೇಶಕ ಎನ್.ಎಸ್ ಶಂಕರ `ಹುಡುಕಾಟ~ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತ, `ಪತ್ರಿಕೋದ್ಯಮವೇ ಬೇಡ ಎಂದುಕೊಂಡಿದ್ದ ನನಗೆ ಮತ್ತೆ ಅದೇ ಕ್ಷೇತ್ರಕ್ಕೆ ಕರೆತಂದವರು ಶಂಕರ. ಅವರ ಪುಸ್ತಕದಲ್ಲಿ ಪತ್ರಿಕೋದ್ಯಮಕ್ಕೆ ಬೇಕಾದ ಹಲವು ಲೇಖನಗಳು ಇವೆ~ ಎಂದು ಹೇಳಿದರು.<br /> <br /> ಸಮಾರಂಭದ ಅಧ್ಯಕ್ಷತೆಯನ್ನು ಕವಿ ಡಾ.ಚಂದ್ರಶೇಖರ ಕಂಬಾರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೃತಿಕಾರ ಎನ್.ಎಸ್ ಶಂಕರ್, ಪ್ರೆಸ್ ಕ್ಲಬ್ ಅಧ್ಯಕ್ಷ ಎಂ.ಎ ಪೊನ್ನಪ್ಪ, ಕಾರ್ಯದರ್ಶಿ ಸದಾಶಿವ ಶಣೈ ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>