<p><strong>ಹುಬ್ಬಳ್ಳಿ: </strong>ಪ್ರಪ್ರಥಮ ಬಾರಿಗೆ ಲಂಡನ್ನಿನಲ್ಲಿ ವಿಶ್ವ ಕನ್ನಡ ಸಮ್ಮೇಳನ ಯುರೋಪ್ -2011ಅನ್ನು ಅಲ್ಲಿಯ ಸಂಗಮ ಸಂಸ್ಥೆಯು ಬರುವ ಆಗಸ್ಟ್ 27 ಮತ್ತು 28ರಂದು ಆಯೋಜಿಸಿದೆ. ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನದಿಂದ ಉತ್ತೇಜಿತರಾಗಿರುವ ಸಂಸ್ಥೆಯು ಲಂಡನ್ನಲ್ಲಿಯೂ ಸಮ್ಮೇಳನ ನಡೆಸುತ್ತಿದೆ . ಸಮ್ಮೇಳನದ ಆಯೋಜಕರಾದ ಕುಮಾರ ಕುಂಟಿಕಾನಮಠ, ಸಂಪತ್ ಯಾದವಾಡ, ಶರತ್ ಕೋಲಾರ, ರಾಮಚಂದ್ರ ಅಯ್ಯರ್ ‘ಪ್ರಜಾವಾಣಿ’ಗೆ ಈ ಕುರಿತು ಇ-ಮೇಲ್ನಲ್ಲಿ ಸುದ್ದಿ ಕಳಿಸಿದ್ದಾರೆ.<br /> <br /> ‘ಕನ್ನಡನಾಡಿನ ಭಾಷೆ, ಸಂಸ್ಕೃತಿಯನ್ನು ಯುರೋಪ್ ಮತ್ತು ಪ್ರಪಂಚದಲ್ಲಿ ಪ್ರಚಾರ ಮಾಡುವ ಯುರೋಪ್ ದೇಶಗಳ ಮತ್ತು ಕರ್ನಾಟಕದೊಂದಿಗೆ ವ್ಯವಹಾರಿಕ, ರಾಜತಾಂತ್ರಿಕ ಸಂಬಂಧವನ್ನು ವೃದ್ಧಿಸುವ ಉದ್ದೇಶದಿಂದ ಈ ಸಮ್ಮೇಳನ ನಡೆಸಲಾಗುತ್ತಿದೆ. ಸಮ್ಮೇಳನದ ಅಂಗವಾಗಿ ಸಾಹಿತ್ಯ, ಉದ್ಯಮ, ಸಂಗೀತ, ವೈದ್ಯಕೀಯ, ಹಾಸ್ಯಗೋಷ್ಠಿಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ.<br /> <br /> ಲಂಡನ್ನಿನ ಇತಿಹಾಸ ಪ್ರಸಿದ್ಧವಾದ ಪ್ರವಾಸಿ ತಾಣಗಳನ್ನು, ಉದ್ಯಮ ಸಂಸ್ಥೆಗಳನ್ನು, ರಾಜಕೀಯ ವ್ಯವಸ್ಥೆಯನ್ನು ನಮ್ಮ ಕನ್ನಡಿಗರು ನೋಡಲಿ. ಹಾಗೆಯೇ ಇಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರನ್ನು ನಮ್ಮ ರಾಜ್ಯದ ಏಳ್ಗೆಗೆ ಉಪಯೋಗಿಸಿಕೊಳ್ಳಲು ಈ ಸಮ್ಮೇಳನ ವೇದಿಕೆಯಾಗಲಿದೆ’ ಎಂದು ಅವರು ವಿವರಿಸಿದ್ದಾರೆ. ‘ಮುಂದಿನ ವರ್ಷಗಳಲ್ಲಿ ಯುರೋಪಿನ ಫ್ರಾನ್ಸ್, ಜರ್ಮನಿ, ಡೆನ್ಮಾರ್ಕ್, ಬೆಲ್ಜಿಯಂ, ಸ್ವಿಜರ್ಲೆಂಡ್ ರಾಜಧಾನಿಗಳಾದ ಪ್ಯಾರಿಸ್, ಫ್ರಾಂಕ್ಫರ್ಟ್, ಬ್ರಸ್ಸೆಲ್ಸ್, ಡೆನ್ಮಾರ್ಕ್, ಜಿನಿವಾ ಮತ್ತಿತರ ಕಡೆ ಸಮ್ಮೇಳನ ಆಯೋಜಿಸುವ ಯೋಜನೆಯೂ ಇದೆ’ ಎಂದು ಆಯೋಜಕರು ತಿಳಿಸಿದ್ದಾರೆ. <br /> <br /> <strong>ವಿವರಗಳು ಈ ಕೆಳಗಿನ ವಿಳಾಸಗಳಲ್ಲಿ ಲಭ್ಯ: </strong><br /> ಕುಮಾರ್ ಕುಂಟಿಕಾನಮಠ, ನಿರ್ದೇಶಕ, ಎಎಲ್ಸಿ ಲಿಮಿಟೆಡ್, 9 ವಿಲಿಯಂ ಕೋರ್ಟ್, 68, ಗಿಲ್ಡ್ಫೋರ್ಡ್ ರಸ್ತೆ ಪೂರ್ವ, ಫಾರ್ನ್ಬೊರೊ, ಯುಕೆ (ಮೊ:00447791204551, 00441252513646) ಇ ಮೇಲ್: <a href="mailto:kumar@kuntikanamata.com">kumar@kuntikanamata.com</a>. <br /> ಸಂಪತ್ ಯಾದವಾಡ, ನಿರ್ದೇಶಕ, ಎಎಲ್ಸಿ ಲಿಮಿಟೆಡ್, 16, ಆರ್ಡ್ವಿಕ್ ಕೋರ್ಟ್, 190, ಸಿಕಾಮೋರ್ ರಸ್ತೆ, ಫಾರ್ನ್ಬೊರ್ಗ್, ಜಿಯು146ಆರ್ಎಚ್, (ಮೊ: 00447876240902) ಇ ಮೇಲ್: <a href="mailto:syadawad@alconsupplies.co.uk">syadawad@alconsupplies.co.uk</a>.<br /> ಶರತ್ ಕೋಲಾರ ರಾಮಚಂದ್ರ ಅಯ್ಯರ್, ನಿರ್ದೇಶಕ, ಅನಿಕಾ ಬಿಸಿನೆಸ್ ಸಿಸ್ಟೆಮ್ಸ್ ಲಿ., 30 ರಾಕ್ಸಹ್ಯಾಮ್ ಅವೆನ್ಯೂ, ಹೆಮೆಲ್ ಹ್ಯಾಮಸ್ಟೆಡ್, ಹರ್ಟಫೋರ್ಡ್ಷೈರ್, ಎಚ್ಪಿ39 ಎಚ್ಎಫ್. (ಮೊ: 00447813339923) ಇ ಮೇಲ್: <a href="mailto:siyer@anikabs.com">siyer@anikabs.com</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಪ್ರಪ್ರಥಮ ಬಾರಿಗೆ ಲಂಡನ್ನಿನಲ್ಲಿ ವಿಶ್ವ ಕನ್ನಡ ಸಮ್ಮೇಳನ ಯುರೋಪ್ -2011ಅನ್ನು ಅಲ್ಲಿಯ ಸಂಗಮ ಸಂಸ್ಥೆಯು ಬರುವ ಆಗಸ್ಟ್ 27 ಮತ್ತು 28ರಂದು ಆಯೋಜಿಸಿದೆ. ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನದಿಂದ ಉತ್ತೇಜಿತರಾಗಿರುವ ಸಂಸ್ಥೆಯು ಲಂಡನ್ನಲ್ಲಿಯೂ ಸಮ್ಮೇಳನ ನಡೆಸುತ್ತಿದೆ . ಸಮ್ಮೇಳನದ ಆಯೋಜಕರಾದ ಕುಮಾರ ಕುಂಟಿಕಾನಮಠ, ಸಂಪತ್ ಯಾದವಾಡ, ಶರತ್ ಕೋಲಾರ, ರಾಮಚಂದ್ರ ಅಯ್ಯರ್ ‘ಪ್ರಜಾವಾಣಿ’ಗೆ ಈ ಕುರಿತು ಇ-ಮೇಲ್ನಲ್ಲಿ ಸುದ್ದಿ ಕಳಿಸಿದ್ದಾರೆ.<br /> <br /> ‘ಕನ್ನಡನಾಡಿನ ಭಾಷೆ, ಸಂಸ್ಕೃತಿಯನ್ನು ಯುರೋಪ್ ಮತ್ತು ಪ್ರಪಂಚದಲ್ಲಿ ಪ್ರಚಾರ ಮಾಡುವ ಯುರೋಪ್ ದೇಶಗಳ ಮತ್ತು ಕರ್ನಾಟಕದೊಂದಿಗೆ ವ್ಯವಹಾರಿಕ, ರಾಜತಾಂತ್ರಿಕ ಸಂಬಂಧವನ್ನು ವೃದ್ಧಿಸುವ ಉದ್ದೇಶದಿಂದ ಈ ಸಮ್ಮೇಳನ ನಡೆಸಲಾಗುತ್ತಿದೆ. ಸಮ್ಮೇಳನದ ಅಂಗವಾಗಿ ಸಾಹಿತ್ಯ, ಉದ್ಯಮ, ಸಂಗೀತ, ವೈದ್ಯಕೀಯ, ಹಾಸ್ಯಗೋಷ್ಠಿಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ.<br /> <br /> ಲಂಡನ್ನಿನ ಇತಿಹಾಸ ಪ್ರಸಿದ್ಧವಾದ ಪ್ರವಾಸಿ ತಾಣಗಳನ್ನು, ಉದ್ಯಮ ಸಂಸ್ಥೆಗಳನ್ನು, ರಾಜಕೀಯ ವ್ಯವಸ್ಥೆಯನ್ನು ನಮ್ಮ ಕನ್ನಡಿಗರು ನೋಡಲಿ. ಹಾಗೆಯೇ ಇಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರನ್ನು ನಮ್ಮ ರಾಜ್ಯದ ಏಳ್ಗೆಗೆ ಉಪಯೋಗಿಸಿಕೊಳ್ಳಲು ಈ ಸಮ್ಮೇಳನ ವೇದಿಕೆಯಾಗಲಿದೆ’ ಎಂದು ಅವರು ವಿವರಿಸಿದ್ದಾರೆ. ‘ಮುಂದಿನ ವರ್ಷಗಳಲ್ಲಿ ಯುರೋಪಿನ ಫ್ರಾನ್ಸ್, ಜರ್ಮನಿ, ಡೆನ್ಮಾರ್ಕ್, ಬೆಲ್ಜಿಯಂ, ಸ್ವಿಜರ್ಲೆಂಡ್ ರಾಜಧಾನಿಗಳಾದ ಪ್ಯಾರಿಸ್, ಫ್ರಾಂಕ್ಫರ್ಟ್, ಬ್ರಸ್ಸೆಲ್ಸ್, ಡೆನ್ಮಾರ್ಕ್, ಜಿನಿವಾ ಮತ್ತಿತರ ಕಡೆ ಸಮ್ಮೇಳನ ಆಯೋಜಿಸುವ ಯೋಜನೆಯೂ ಇದೆ’ ಎಂದು ಆಯೋಜಕರು ತಿಳಿಸಿದ್ದಾರೆ. <br /> <br /> <strong>ವಿವರಗಳು ಈ ಕೆಳಗಿನ ವಿಳಾಸಗಳಲ್ಲಿ ಲಭ್ಯ: </strong><br /> ಕುಮಾರ್ ಕುಂಟಿಕಾನಮಠ, ನಿರ್ದೇಶಕ, ಎಎಲ್ಸಿ ಲಿಮಿಟೆಡ್, 9 ವಿಲಿಯಂ ಕೋರ್ಟ್, 68, ಗಿಲ್ಡ್ಫೋರ್ಡ್ ರಸ್ತೆ ಪೂರ್ವ, ಫಾರ್ನ್ಬೊರೊ, ಯುಕೆ (ಮೊ:00447791204551, 00441252513646) ಇ ಮೇಲ್: <a href="mailto:kumar@kuntikanamata.com">kumar@kuntikanamata.com</a>. <br /> ಸಂಪತ್ ಯಾದವಾಡ, ನಿರ್ದೇಶಕ, ಎಎಲ್ಸಿ ಲಿಮಿಟೆಡ್, 16, ಆರ್ಡ್ವಿಕ್ ಕೋರ್ಟ್, 190, ಸಿಕಾಮೋರ್ ರಸ್ತೆ, ಫಾರ್ನ್ಬೊರ್ಗ್, ಜಿಯು146ಆರ್ಎಚ್, (ಮೊ: 00447876240902) ಇ ಮೇಲ್: <a href="mailto:syadawad@alconsupplies.co.uk">syadawad@alconsupplies.co.uk</a>.<br /> ಶರತ್ ಕೋಲಾರ ರಾಮಚಂದ್ರ ಅಯ್ಯರ್, ನಿರ್ದೇಶಕ, ಅನಿಕಾ ಬಿಸಿನೆಸ್ ಸಿಸ್ಟೆಮ್ಸ್ ಲಿ., 30 ರಾಕ್ಸಹ್ಯಾಮ್ ಅವೆನ್ಯೂ, ಹೆಮೆಲ್ ಹ್ಯಾಮಸ್ಟೆಡ್, ಹರ್ಟಫೋರ್ಡ್ಷೈರ್, ಎಚ್ಪಿ39 ಎಚ್ಎಫ್. (ಮೊ: 00447813339923) ಇ ಮೇಲ್: <a href="mailto:siyer@anikabs.com">siyer@anikabs.com</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>