<p><strong>ಬಳ್ಳಾರಿ:</strong> ಬಳ್ಳಾರಿಯಿಂದ ಹೈದರಾಬಾದ್ನತ್ತ ಲಾರಿ ಮೂಲಕ ಸಾಗಿಸಲಾಗುತ್ತಿದ್ದ ರೂ 4.95 ಕೋಟಿ ನಗದನ್ನು ಆಂಧ್ರಪ್ರದೇಶದ ಗುಂತಕಲ್ ಪೊಲೀಸರು ಗುರುವಾರ ಸಂಜೆ ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ.<br /> <br /> ಲಾರಿಯಲ್ಲಿದ್ದ ಚಾಲಕ, ಕ್ಲೀನರ್ ಹಾಗೂ ಕಡಪ ಮೂಲದ ಈಶ್ವರರೆಡ್ಡಿ, ವೆಂಕಟರಾಮರೆಡ್ಡಿ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.<br /> <br /> ಗುಂತಕಲ್ನ ಹನುಮಾನ್ ವೃತ್ತದಲ್ಲಿ ಲಾರಿಯ (ಸಂಖ್ಯೆ ಎಪಿ- 04 ಎಕ್ಸ್ 9009) ತಪಾಸಣೆ ನಡೆಸಿದ ಸಂದರ್ಭ ಗೋಣಿ ಚೀಲದಲ್ಲಿ ಇರಿಸಲಾಗಿದ್ದ ಅಪಾರ ಪ್ರಮಾಣದ ನಗದು ಇರುವುದು ಬೆಳಕಿಗೆ ಬಂದಿದೆ.<br /> ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಗುಂತಕಲ್ ನಗರ-1 ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.<br /> <br /> ಬಳ್ಳಾರಿಯಲ್ಲಿ ಈ ಹಣವನ್ನು ಯಾರಿಂದ ಪಡೆದು, ಎಲ್ಲಿಗೆ ಸಾಗಿಸಲಾಗುತ್ತಿತ್ತು? ಎಂಬುದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.<br /> <br /> `ಲಾರಿಯಲ್ಲಿ ಹಣ ಸಾಗಿಸುತ್ತಿದ್ದ ಮಾಹಿತಿಯು, ಸಂಜೆ 4ರ ವೇಳೆಗೆ ಬಳ್ಳಾರಿ ಪೊಲೀಸರಿಗೂ ಲಭಿಸಿತ್ತು. ಆದರೆ, ನಾವು ಕಾರ್ಯಾಚರಣೆ ನಡೆಸುವುದರೊಳಗೆ ಲಾರಿ ಆಂಧ್ರ ಗಡಿಯನ್ನು ದಾಟಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.<br /> <br /> `ಬಳ್ಳಾರಿ ಪೊಲೀಸರಿಗೆ ಮಾಹಿತಿ ನೀಡಿರುವವರು ಗುಂತಕಲ್ ಪೊಲೀಸರಿಗೂ ಮಾಹಿತಿ ನೀಡಿರಬಹುದು. <br /> ಹೆಚ್ಚಿನ ವಿವರ ಕಲೆ ಹಾಕಲು ಗುಂತಕಲ್ ಪೊಲೀಸರು ಬಂಧಿತರೊಂದಿಗೆ ನಗರಕ್ಕೆ ಆಗಮಿಸುತ್ತಿದ್ದಾರೆ~ ಎಂದು ಮೂಲಗಳು ತಿಳಿಸಿವೆ.<br /> <br /> ಅಲ್ಲದೆ, ಬಂಧಿತರಲ್ಲಿ ಒಬ್ಬರಾಗಿರುವ ವೆಂಕಟರಾಮರೆಡ್ಡಿ ಅವರು ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ಅವರ ಆಪ್ತರಾಗಿದ್ದಾರೆ ಎಂದೂ ಪೊಲೀಸ್ ಮೂಲಗಳು ಹೇಳಿವೆ.<br /> <br /> ಇತ್ತೀಚೆಗಷ್ಟೇ ನಗರದಲ್ಲಿ ಬುಡಾ ಅಧ್ಯಕ್ಷ ಗುರುಲಿಂಗನಗೌಡ ಹಾಗೂ ಜನಾರ್ದನರೆಡ್ಡಿ ಸಂಬಂಧಿ ಭಾಸ್ಕರರೆಡ್ಡಿ ಅವರ ಮನೆಗಳ ಮೇಲೆ ದಾಳಿ ನಡೆಸಿದ್ದ ಸಿಬಿಐ ಸಿಬ್ಬಂದಿ, ವೆಂಕಟರಾಮರೆಡ್ಡಿ ಅವರ ಮನೆಯ ಮೇಲೂ ದಾಳಿ ನಡೆಸುವ ಯೋಜನೆ ಹಾಕಿಕೊಂಡಿದ್ದರು. <br /> <br /> ಆದರೆ, ಅವರ ಬಳಿಯಿದ್ದ ವಿಳಾಸದಲ್ಲಿ ವೆಂಕಟರೆಡ್ಡಿ ನಿವಾಸ ದೊರೆತಿರಲಿಲ್ಲ ಎಂಬ ಕಾರಣದಿಂದ ದಾಳಿ ನಡೆಸದೆ ಮರಳಿದ್ದರು.<br /> <br /> ಪೊಲೀಸರು ವಶಪಡಿಸಿಕೊಂಡಿರುವ ಲಾರಿಯು ಆಂಧ್ರದ ಕಡಪ ಜಿಲ್ಲೆಯ ಪೊದ್ದಟೂರು ಪಟ್ಟಣದ್ದಾಗಿದ್ದು, ಅಲ್ಲಿ ಜನಾರ್ದನರೆಡ್ಡಿ ಹಾಗೂ ಶ್ರೀನಿವಾಸರೆಡ್ಡಿ ಅವರ ಹತ್ತಿರದ ಸಂಬಂಧಿಗಳಿದ್ದಾರೆ. <br /> ಈ ಪ್ರಕರಣದ ತನಿಖೆಗಾಗಿ ಸಿಬಿಐ ತಂಡವೊಂದು ಗುಂತಕಲ್ಗೆ ಗುರುವಾರ ರಾತ್ರಿ ಆಗವಿಸಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಬಳ್ಳಾರಿಯಿಂದ ಹೈದರಾಬಾದ್ನತ್ತ ಲಾರಿ ಮೂಲಕ ಸಾಗಿಸಲಾಗುತ್ತಿದ್ದ ರೂ 4.95 ಕೋಟಿ ನಗದನ್ನು ಆಂಧ್ರಪ್ರದೇಶದ ಗುಂತಕಲ್ ಪೊಲೀಸರು ಗುರುವಾರ ಸಂಜೆ ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ.<br /> <br /> ಲಾರಿಯಲ್ಲಿದ್ದ ಚಾಲಕ, ಕ್ಲೀನರ್ ಹಾಗೂ ಕಡಪ ಮೂಲದ ಈಶ್ವರರೆಡ್ಡಿ, ವೆಂಕಟರಾಮರೆಡ್ಡಿ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.<br /> <br /> ಗುಂತಕಲ್ನ ಹನುಮಾನ್ ವೃತ್ತದಲ್ಲಿ ಲಾರಿಯ (ಸಂಖ್ಯೆ ಎಪಿ- 04 ಎಕ್ಸ್ 9009) ತಪಾಸಣೆ ನಡೆಸಿದ ಸಂದರ್ಭ ಗೋಣಿ ಚೀಲದಲ್ಲಿ ಇರಿಸಲಾಗಿದ್ದ ಅಪಾರ ಪ್ರಮಾಣದ ನಗದು ಇರುವುದು ಬೆಳಕಿಗೆ ಬಂದಿದೆ.<br /> ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಗುಂತಕಲ್ ನಗರ-1 ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.<br /> <br /> ಬಳ್ಳಾರಿಯಲ್ಲಿ ಈ ಹಣವನ್ನು ಯಾರಿಂದ ಪಡೆದು, ಎಲ್ಲಿಗೆ ಸಾಗಿಸಲಾಗುತ್ತಿತ್ತು? ಎಂಬುದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.<br /> <br /> `ಲಾರಿಯಲ್ಲಿ ಹಣ ಸಾಗಿಸುತ್ತಿದ್ದ ಮಾಹಿತಿಯು, ಸಂಜೆ 4ರ ವೇಳೆಗೆ ಬಳ್ಳಾರಿ ಪೊಲೀಸರಿಗೂ ಲಭಿಸಿತ್ತು. ಆದರೆ, ನಾವು ಕಾರ್ಯಾಚರಣೆ ನಡೆಸುವುದರೊಳಗೆ ಲಾರಿ ಆಂಧ್ರ ಗಡಿಯನ್ನು ದಾಟಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.<br /> <br /> `ಬಳ್ಳಾರಿ ಪೊಲೀಸರಿಗೆ ಮಾಹಿತಿ ನೀಡಿರುವವರು ಗುಂತಕಲ್ ಪೊಲೀಸರಿಗೂ ಮಾಹಿತಿ ನೀಡಿರಬಹುದು. <br /> ಹೆಚ್ಚಿನ ವಿವರ ಕಲೆ ಹಾಕಲು ಗುಂತಕಲ್ ಪೊಲೀಸರು ಬಂಧಿತರೊಂದಿಗೆ ನಗರಕ್ಕೆ ಆಗಮಿಸುತ್ತಿದ್ದಾರೆ~ ಎಂದು ಮೂಲಗಳು ತಿಳಿಸಿವೆ.<br /> <br /> ಅಲ್ಲದೆ, ಬಂಧಿತರಲ್ಲಿ ಒಬ್ಬರಾಗಿರುವ ವೆಂಕಟರಾಮರೆಡ್ಡಿ ಅವರು ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ಅವರ ಆಪ್ತರಾಗಿದ್ದಾರೆ ಎಂದೂ ಪೊಲೀಸ್ ಮೂಲಗಳು ಹೇಳಿವೆ.<br /> <br /> ಇತ್ತೀಚೆಗಷ್ಟೇ ನಗರದಲ್ಲಿ ಬುಡಾ ಅಧ್ಯಕ್ಷ ಗುರುಲಿಂಗನಗೌಡ ಹಾಗೂ ಜನಾರ್ದನರೆಡ್ಡಿ ಸಂಬಂಧಿ ಭಾಸ್ಕರರೆಡ್ಡಿ ಅವರ ಮನೆಗಳ ಮೇಲೆ ದಾಳಿ ನಡೆಸಿದ್ದ ಸಿಬಿಐ ಸಿಬ್ಬಂದಿ, ವೆಂಕಟರಾಮರೆಡ್ಡಿ ಅವರ ಮನೆಯ ಮೇಲೂ ದಾಳಿ ನಡೆಸುವ ಯೋಜನೆ ಹಾಕಿಕೊಂಡಿದ್ದರು. <br /> <br /> ಆದರೆ, ಅವರ ಬಳಿಯಿದ್ದ ವಿಳಾಸದಲ್ಲಿ ವೆಂಕಟರೆಡ್ಡಿ ನಿವಾಸ ದೊರೆತಿರಲಿಲ್ಲ ಎಂಬ ಕಾರಣದಿಂದ ದಾಳಿ ನಡೆಸದೆ ಮರಳಿದ್ದರು.<br /> <br /> ಪೊಲೀಸರು ವಶಪಡಿಸಿಕೊಂಡಿರುವ ಲಾರಿಯು ಆಂಧ್ರದ ಕಡಪ ಜಿಲ್ಲೆಯ ಪೊದ್ದಟೂರು ಪಟ್ಟಣದ್ದಾಗಿದ್ದು, ಅಲ್ಲಿ ಜನಾರ್ದನರೆಡ್ಡಿ ಹಾಗೂ ಶ್ರೀನಿವಾಸರೆಡ್ಡಿ ಅವರ ಹತ್ತಿರದ ಸಂಬಂಧಿಗಳಿದ್ದಾರೆ. <br /> ಈ ಪ್ರಕರಣದ ತನಿಖೆಗಾಗಿ ಸಿಬಿಐ ತಂಡವೊಂದು ಗುಂತಕಲ್ಗೆ ಗುರುವಾರ ರಾತ್ರಿ ಆಗವಿಸಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>