<p><strong>ನವದೆಹಲಿ, (ಪಿಟಿಐ):</strong> ಅಣ್ಣಾ ಹಜಾರೆ ತಂಡದ ಸಲಹೆಗಳನ್ನು ಮಾನ್ಯ ಮಾಡಿ ತಮ್ಮ ಸಂಸ್ಥೆಗಳ ದಿನನಿತ್ಯದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಸಿಬಿಐ ನಿರ್ದೇಶಕ ಎ.ಪಿ. ಸಿಂಗ್ ಮತ್ತು ಕೇಂದ್ರ ಜಾಗೃತ ಆಯೋಗದ ಆಯುಕ್ತ ಪ್ರದೀಪ್ ಕುಮಾರ್ ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದ್ದಾರೆ.<br /> <br /> ಸಿಬಿಐ ನಿರ್ದೇಶಕ ಮತ್ತು ಸಿವಿಸಿ ಆಯುಕ್ತರನ್ನು ಲೋಕಪಾಲ ವ್ಯವಸ್ಥೆಯ ಅಧಿಕಾರೇತರ ಸದಸ್ಯರನ್ನಾಗಿ ಮಾಡಬೇಕು. ತನಿಖಾ ಸಂಸ್ಥೆಗಳ ಮುಖ್ಯಸ್ಥರನ್ನು ಅಧಿಕಾರೇತರ ಸದಸ್ಯರನ್ನಾಗಿ ಮಾಡುವುದರಿಂದ ಭ್ರಷ್ಟಾಚಾರ ತನಿಖೆಯ ವಿಚಾರದಲ್ಲಿ ಸಮನ್ವಯತೆ ಸಾಧಿಸಬಹುದು ಎಂದು ಎಂದು ಇವರು ಸಲಹೆ ನೀಡಿದರು.<br /> <br /> ಸಿಬಿಐನ ಭ್ರಷ್ಟಾಚಾರ ವಿರೋಧಿ ವಿಭಾಗವನ್ನು ಲೋಕಪಾಲ ವ್ಯವಸ್ಥೆಯಡಿ ತಂದರೆ ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸಿಂಗ್ ಹೇಳಿದರು.<br /> <br /> ಭ್ರಷ್ಟಾಚಾರ ಪ್ರಕರಣಗಳ ತನಿಖೆಯ ಒಟ್ಟಾರೆ ಮೇಲ್ವಿಚಾರಣೆ ಅಧಿಕಾರ ಲೋಕಪಾಲ ವ್ಯವಸ್ಥೆಗೆ ಇರಲಿ. ಇದಲ್ಲದೆ ತಮ್ಮ ಸಂಸ್ಥೆಯ ಹಣಕಾಸು, ಕಾನೂನು ಮತ್ತು ಆಡಳಿತಕ್ಕೆ ಸಂಬಂಧಿಸಿದ ಅಗತ್ಯ ಪೂರೈಸುವ ಅಧಿಕಾರ ಲೋಕಪಾಲರಿಗೆ ಇರಲಿ ಎಂದು ಸಿಬಿಐ ನಿರ್ದೇಶಕ ಸಿಂಗ್ ಸಲಹೆ ಮಾಡಿದ್ದಾರೆ.<br /> <br /> ಸಿಬಿಐ ನಿರ್ದೇಶಕರ ಅಧಿಕಾರಾವಧಿ ಐದು ವರ್ಷಗಳದ್ದಾಗಿರಬೇಕು ಅಥವಾ 65 ವರ್ಷದವರೆಗೆ ಅಧಿಕಾರದಲ್ಲಿರಲು ಅವಕಾಶವಿರಬೇಕು. ಈ ಎರಡರಲ್ಲಿ ಯಾವುದು ಮೊದಲೋ ಅದನ್ನು ಜಾರಿ ಮಾಡಬೇಕು. ಲೋಕಪಾಲ ಸಂಸ್ಥೆಯಲ್ಲಿ ಪ್ರತ್ಯೇಕ ತನಿಖಾ ವಿಭಾಗ ರಚಿಸಿದರೆ ಸಿಬಿಐನ ಈಗಿನ ಕೆಲಸಕ್ಕೆ ಧಕ್ಕೆ ಉಂಟಾಗುತ್ತದೆ ಎಂಬುದು ಅವರ ಅಭಿಪ್ರಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, (ಪಿಟಿಐ):</strong> ಅಣ್ಣಾ ಹಜಾರೆ ತಂಡದ ಸಲಹೆಗಳನ್ನು ಮಾನ್ಯ ಮಾಡಿ ತಮ್ಮ ಸಂಸ್ಥೆಗಳ ದಿನನಿತ್ಯದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಸಿಬಿಐ ನಿರ್ದೇಶಕ ಎ.ಪಿ. ಸಿಂಗ್ ಮತ್ತು ಕೇಂದ್ರ ಜಾಗೃತ ಆಯೋಗದ ಆಯುಕ್ತ ಪ್ರದೀಪ್ ಕುಮಾರ್ ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದ್ದಾರೆ.<br /> <br /> ಸಿಬಿಐ ನಿರ್ದೇಶಕ ಮತ್ತು ಸಿವಿಸಿ ಆಯುಕ್ತರನ್ನು ಲೋಕಪಾಲ ವ್ಯವಸ್ಥೆಯ ಅಧಿಕಾರೇತರ ಸದಸ್ಯರನ್ನಾಗಿ ಮಾಡಬೇಕು. ತನಿಖಾ ಸಂಸ್ಥೆಗಳ ಮುಖ್ಯಸ್ಥರನ್ನು ಅಧಿಕಾರೇತರ ಸದಸ್ಯರನ್ನಾಗಿ ಮಾಡುವುದರಿಂದ ಭ್ರಷ್ಟಾಚಾರ ತನಿಖೆಯ ವಿಚಾರದಲ್ಲಿ ಸಮನ್ವಯತೆ ಸಾಧಿಸಬಹುದು ಎಂದು ಎಂದು ಇವರು ಸಲಹೆ ನೀಡಿದರು.<br /> <br /> ಸಿಬಿಐನ ಭ್ರಷ್ಟಾಚಾರ ವಿರೋಧಿ ವಿಭಾಗವನ್ನು ಲೋಕಪಾಲ ವ್ಯವಸ್ಥೆಯಡಿ ತಂದರೆ ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸಿಂಗ್ ಹೇಳಿದರು.<br /> <br /> ಭ್ರಷ್ಟಾಚಾರ ಪ್ರಕರಣಗಳ ತನಿಖೆಯ ಒಟ್ಟಾರೆ ಮೇಲ್ವಿಚಾರಣೆ ಅಧಿಕಾರ ಲೋಕಪಾಲ ವ್ಯವಸ್ಥೆಗೆ ಇರಲಿ. ಇದಲ್ಲದೆ ತಮ್ಮ ಸಂಸ್ಥೆಯ ಹಣಕಾಸು, ಕಾನೂನು ಮತ್ತು ಆಡಳಿತಕ್ಕೆ ಸಂಬಂಧಿಸಿದ ಅಗತ್ಯ ಪೂರೈಸುವ ಅಧಿಕಾರ ಲೋಕಪಾಲರಿಗೆ ಇರಲಿ ಎಂದು ಸಿಬಿಐ ನಿರ್ದೇಶಕ ಸಿಂಗ್ ಸಲಹೆ ಮಾಡಿದ್ದಾರೆ.<br /> <br /> ಸಿಬಿಐ ನಿರ್ದೇಶಕರ ಅಧಿಕಾರಾವಧಿ ಐದು ವರ್ಷಗಳದ್ದಾಗಿರಬೇಕು ಅಥವಾ 65 ವರ್ಷದವರೆಗೆ ಅಧಿಕಾರದಲ್ಲಿರಲು ಅವಕಾಶವಿರಬೇಕು. ಈ ಎರಡರಲ್ಲಿ ಯಾವುದು ಮೊದಲೋ ಅದನ್ನು ಜಾರಿ ಮಾಡಬೇಕು. ಲೋಕಪಾಲ ಸಂಸ್ಥೆಯಲ್ಲಿ ಪ್ರತ್ಯೇಕ ತನಿಖಾ ವಿಭಾಗ ರಚಿಸಿದರೆ ಸಿಬಿಐನ ಈಗಿನ ಕೆಲಸಕ್ಕೆ ಧಕ್ಕೆ ಉಂಟಾಗುತ್ತದೆ ಎಂಬುದು ಅವರ ಅಭಿಪ್ರಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>