<p><strong>ದಾವಣಗೆರೆ:</strong> ವಧು-ವರರ ಸಮಾವೇಶದಿಂದ ವರದಕ್ಷಿಣೆ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯ. ವರದಕ್ಷಿಣಿ ಪಿಡುಗನ್ನು ಹೋಗಲಾಡಿಸಲು ವೀರಶೈವ ಸಮಾಜ ಬಾಂಧವರು ಬದ್ಧರಾಗಬೇಕು ಎಂದು ವೀರಶೈವ ಪಂಚಮಸಾಲಿ ಪೀಠದ ಸಿದ್ದಲಿಂಗೇಶ್ವರ ಸ್ವಾಮೀಜಿ ಹೇಳಿದರು.ನಗರದ ಸದ್ಯೋಜಾತ ಹಿರೇಮಠದಲ್ಲಿ ಭಾನುವಾರ ಪಂಚಮಸಾಲಿ ಸಮಾಜದ ವಧು- ವರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.<br /> </p>.<p>ವರದಕ್ಷಿಣೆ ನೀಡುವುದರಿಂದ ತಮ್ಮ ಮಕ್ಕಳನ್ನು ಮಾರಾಟ ಮಾಡಿದಂತಾಗುತ್ತದೆ. ಇದರಿಂದ ಮಕ್ಕಳ ಭವಿಷ್ಯವನ್ನು ಕುಂಠಿತಗೊಳಿಸಿದಂತಾಗುತ್ತದೆ. ಈ ನಾಡಿಗೆ ಆದರ್ಶ ಎಂದು ಕರೆಸಿಕೊಂಡಿರುವ ಪಂಚಮಸಾಲಿ ಸಮಾಜ ಇಂದು ವಧು-ವರರ ಸಮಾವೇಶವನ್ನು ಹಮ್ಮಿಕೊಳ್ಳುವ ಮೂಲಕ ಅದರ್ಶವಾಗಿದೆ ಎಂದರು.ಇಂಟರ್ನೆಟ್ನಲ್ಲಿ ಹುಡುಕಿ, ನೋಡಿ ಮದುವೆಯಾಗುವುದಕ್ಕಿಂತ ಇಂತಹ ಸಮಾವೇಶಗಳ ಮೂಲಕ ಸಂಬಂಧ ಬೆಸೆದು ಗಟ್ಟಿಗೊಳಿಸಬೇಕು. ಜತೆಗೆ, ಜೀವನ ಪರಿವರ್ತನೆಗೆ ಸಹಕಾರಿ ಎಂದು ಅಭಿಪ್ರಾಯಪಟ್ಟರು.<br /> </p>.<p>ವಧು-ವರರ ಸಮಾವೇಶಗಳ ಮೂಲಕ ನೂತನ ದಂಪತಿ ಆದರ್ಶವಾದರೆ, ಅವರ ಮಕ್ಕಳು ಆದರ್ಶರಾಗಿ ನಾಡಿಗೆ ಬರುತ್ತಾರೆ. ಸಾಮಾಜಿಕ ಬಾಂಧವ್ಯ ಉತ್ತಮಗೊಳಿಸಿ ಜನರಲ್ಲಿ ಸಂಸ್ಕಾರ ಉಳಿಯಲಿ ಎನ್ನುವ ಉದ್ದೇಶದಿಂದ ಇಂತಹ ಸಮಾವೇಶಗಳು ನಿರಂತರ ನಡೆಯುತ್ತಿದೆ ಎಂದರು.<br /> </p>.<p>ಹರಿಹರದಲ್ಲಿ ಭವ್ಯವಾದ ಪಂಚಮಸಾಲಿ ಗುರುಪೀಠ, ಸುಂದರವಾದ ದೇವಾಲಯ ನಿರ್ಮಾಣವಾಗುತ್ತಿದೆ. ಬರುವ ಭಕ್ತರಿಗೆ ವಸತಿ ವ್ಯವಸ್ಥೆ, ಅನಾಥ ಮಕ್ಕಳ ವಸತಿಶಾಲೆ, ನಿರಂತರ ಸಂಪರ್ಕ ಕೇಂದ್ರ ಮುಂತಾದ ಸೌಲಭ್ಯಗಳು ಶ್ರೀಪೀಠದಲ್ಲಿ ದೊರೆಯುತ್ತವೆ ಎಂದು ಅವರು ವಿವರಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ವಧು-ವರರ ಸಮಾವೇಶದಿಂದ ವರದಕ್ಷಿಣೆ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯ. ವರದಕ್ಷಿಣಿ ಪಿಡುಗನ್ನು ಹೋಗಲಾಡಿಸಲು ವೀರಶೈವ ಸಮಾಜ ಬಾಂಧವರು ಬದ್ಧರಾಗಬೇಕು ಎಂದು ವೀರಶೈವ ಪಂಚಮಸಾಲಿ ಪೀಠದ ಸಿದ್ದಲಿಂಗೇಶ್ವರ ಸ್ವಾಮೀಜಿ ಹೇಳಿದರು.ನಗರದ ಸದ್ಯೋಜಾತ ಹಿರೇಮಠದಲ್ಲಿ ಭಾನುವಾರ ಪಂಚಮಸಾಲಿ ಸಮಾಜದ ವಧು- ವರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.<br /> </p>.<p>ವರದಕ್ಷಿಣೆ ನೀಡುವುದರಿಂದ ತಮ್ಮ ಮಕ್ಕಳನ್ನು ಮಾರಾಟ ಮಾಡಿದಂತಾಗುತ್ತದೆ. ಇದರಿಂದ ಮಕ್ಕಳ ಭವಿಷ್ಯವನ್ನು ಕುಂಠಿತಗೊಳಿಸಿದಂತಾಗುತ್ತದೆ. ಈ ನಾಡಿಗೆ ಆದರ್ಶ ಎಂದು ಕರೆಸಿಕೊಂಡಿರುವ ಪಂಚಮಸಾಲಿ ಸಮಾಜ ಇಂದು ವಧು-ವರರ ಸಮಾವೇಶವನ್ನು ಹಮ್ಮಿಕೊಳ್ಳುವ ಮೂಲಕ ಅದರ್ಶವಾಗಿದೆ ಎಂದರು.ಇಂಟರ್ನೆಟ್ನಲ್ಲಿ ಹುಡುಕಿ, ನೋಡಿ ಮದುವೆಯಾಗುವುದಕ್ಕಿಂತ ಇಂತಹ ಸಮಾವೇಶಗಳ ಮೂಲಕ ಸಂಬಂಧ ಬೆಸೆದು ಗಟ್ಟಿಗೊಳಿಸಬೇಕು. ಜತೆಗೆ, ಜೀವನ ಪರಿವರ್ತನೆಗೆ ಸಹಕಾರಿ ಎಂದು ಅಭಿಪ್ರಾಯಪಟ್ಟರು.<br /> </p>.<p>ವಧು-ವರರ ಸಮಾವೇಶಗಳ ಮೂಲಕ ನೂತನ ದಂಪತಿ ಆದರ್ಶವಾದರೆ, ಅವರ ಮಕ್ಕಳು ಆದರ್ಶರಾಗಿ ನಾಡಿಗೆ ಬರುತ್ತಾರೆ. ಸಾಮಾಜಿಕ ಬಾಂಧವ್ಯ ಉತ್ತಮಗೊಳಿಸಿ ಜನರಲ್ಲಿ ಸಂಸ್ಕಾರ ಉಳಿಯಲಿ ಎನ್ನುವ ಉದ್ದೇಶದಿಂದ ಇಂತಹ ಸಮಾವೇಶಗಳು ನಿರಂತರ ನಡೆಯುತ್ತಿದೆ ಎಂದರು.<br /> </p>.<p>ಹರಿಹರದಲ್ಲಿ ಭವ್ಯವಾದ ಪಂಚಮಸಾಲಿ ಗುರುಪೀಠ, ಸುಂದರವಾದ ದೇವಾಲಯ ನಿರ್ಮಾಣವಾಗುತ್ತಿದೆ. ಬರುವ ಭಕ್ತರಿಗೆ ವಸತಿ ವ್ಯವಸ್ಥೆ, ಅನಾಥ ಮಕ್ಕಳ ವಸತಿಶಾಲೆ, ನಿರಂತರ ಸಂಪರ್ಕ ಕೇಂದ್ರ ಮುಂತಾದ ಸೌಲಭ್ಯಗಳು ಶ್ರೀಪೀಠದಲ್ಲಿ ದೊರೆಯುತ್ತವೆ ಎಂದು ಅವರು ವಿವರಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>