<p>‘ರಂಗ ಜಂಗಮ’ ಸಂಸ್ಥೆ ಬುಧವಾರದಿಂದ ಐದು ದಿನ ವರನಟ ದಿ. ರಾಜಕುಮಾರ್ ನೆನಪಿನಲ್ಲಿ ಚಿತ್ರೋತ್ಸವ, ರಾಜ್ ನಡೆದು ಬಂದ ಹಾದಿಯ ಅವಲೋಕನದ ಸಾಕ್ಷ್ಯಚಿತ್ರ ಪ್ರದರ್ಶನ ಹಮ್ಮಿಕೊಂಡಿದೆ.<br /> <br /> ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮೇಕಪ್ ಕೃಷ್ಣ ಅವರು ಡಾ. ರಾಜ್ಗೆ ಅನೇಕ ಚಿತ್ರಗಳಲ್ಲಿ ಮೇಕಪ್ ಮಾಡಿದವರು, ಹತ್ತಿರದಿಂದ ಬಲ್ಲವರು. ಹೀಗಾಗಿ ತಮ್ಮ ಪ್ರೀತಿಯ ನಟನ ನೆನಪಿನಲ್ಲಿ ‘ಡಾ. ರಾಜ್ ಜೀವನಧಾರೆ- ಮೇರು ನಟ ನಡೆದು ಬಂದ ದಾರಿ’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ.<br /> <br /> ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಉದ್ಘಾಟನೆ, ಅತಿಥಿಗಳು: ಲಕ್ಷ್ಮೀನಾರಾಯಣ, ಡಾ. ದೊಡ್ಡರಂಗೇಗೌಡ, ಜಯಂತಿ, ರಾಘವೇಂದ್ರ ರಾಜ್ಕುಮಾರ್, ಮಮತಾ ರಾವ್, ರಕ್ಷಿತಾ ಪ್ರೇಮ್, ಎಸ್.ಕೆ. ಭಗವಾನ್, ಅಭಿನಯ. ಬೆಳಿಗ್ಗೆ 11 ಗಂಟೆಗೆ ಡಾ. ರಾಜ್ ಜೀವನಧಾರೆ ಭಾಗ-1 ಪ್ರದರ್ಶನ, ಮಧ್ಯಾಹ್ನ 1.30ಕ್ಕೆ ‘ಸತ್ಯ ಹರಿಶ್ಚಂದ್ರ’ ಸಂಜೆ 6ಕ್ಕೆ ‘ಶಂಕರ್ ಗುರು’ ಚಲನಚಿತ್ರ ಪ್ರದರ್ಶನ. ಈ ಸಂದರ್ಭದಲ್ಲಿ ರಾಜ್ ಕುಟುಂಬದವರು, ಆಪ್ತರು, ನಿರ್ಮಾಪಕರು, ನಿರ್ದೇಶಕರು ನೆನಪುಗಳನ್ನು ಹಂಚಿಕೊಳ್ಳುವರು. <br /> ಸ್ಥಳ: ಪ್ರಿಯದರ್ಶಿನಿ ಸಭಾಂಗಣ, ಬಾದಾಮಿ ಹೌಸ್, ಕಾರ್ಪೋರೇಷನ್ ಮುಂಭಾಗ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ರಂಗ ಜಂಗಮ’ ಸಂಸ್ಥೆ ಬುಧವಾರದಿಂದ ಐದು ದಿನ ವರನಟ ದಿ. ರಾಜಕುಮಾರ್ ನೆನಪಿನಲ್ಲಿ ಚಿತ್ರೋತ್ಸವ, ರಾಜ್ ನಡೆದು ಬಂದ ಹಾದಿಯ ಅವಲೋಕನದ ಸಾಕ್ಷ್ಯಚಿತ್ರ ಪ್ರದರ್ಶನ ಹಮ್ಮಿಕೊಂಡಿದೆ.<br /> <br /> ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮೇಕಪ್ ಕೃಷ್ಣ ಅವರು ಡಾ. ರಾಜ್ಗೆ ಅನೇಕ ಚಿತ್ರಗಳಲ್ಲಿ ಮೇಕಪ್ ಮಾಡಿದವರು, ಹತ್ತಿರದಿಂದ ಬಲ್ಲವರು. ಹೀಗಾಗಿ ತಮ್ಮ ಪ್ರೀತಿಯ ನಟನ ನೆನಪಿನಲ್ಲಿ ‘ಡಾ. ರಾಜ್ ಜೀವನಧಾರೆ- ಮೇರು ನಟ ನಡೆದು ಬಂದ ದಾರಿ’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ.<br /> <br /> ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಉದ್ಘಾಟನೆ, ಅತಿಥಿಗಳು: ಲಕ್ಷ್ಮೀನಾರಾಯಣ, ಡಾ. ದೊಡ್ಡರಂಗೇಗೌಡ, ಜಯಂತಿ, ರಾಘವೇಂದ್ರ ರಾಜ್ಕುಮಾರ್, ಮಮತಾ ರಾವ್, ರಕ್ಷಿತಾ ಪ್ರೇಮ್, ಎಸ್.ಕೆ. ಭಗವಾನ್, ಅಭಿನಯ. ಬೆಳಿಗ್ಗೆ 11 ಗಂಟೆಗೆ ಡಾ. ರಾಜ್ ಜೀವನಧಾರೆ ಭಾಗ-1 ಪ್ರದರ್ಶನ, ಮಧ್ಯಾಹ್ನ 1.30ಕ್ಕೆ ‘ಸತ್ಯ ಹರಿಶ್ಚಂದ್ರ’ ಸಂಜೆ 6ಕ್ಕೆ ‘ಶಂಕರ್ ಗುರು’ ಚಲನಚಿತ್ರ ಪ್ರದರ್ಶನ. ಈ ಸಂದರ್ಭದಲ್ಲಿ ರಾಜ್ ಕುಟುಂಬದವರು, ಆಪ್ತರು, ನಿರ್ಮಾಪಕರು, ನಿರ್ದೇಶಕರು ನೆನಪುಗಳನ್ನು ಹಂಚಿಕೊಳ್ಳುವರು. <br /> ಸ್ಥಳ: ಪ್ರಿಯದರ್ಶಿನಿ ಸಭಾಂಗಣ, ಬಾದಾಮಿ ಹೌಸ್, ಕಾರ್ಪೋರೇಷನ್ ಮುಂಭಾಗ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>