<p>ಅಗರ್ತಲ, (ಐಎಎನ್ಎಸ್): ಬಾಲಿವುಡ್ ಸಂಗೀತ ಕ್ಷೇತ್ರದ ದಂತಕಥೆ ಎಂದೇ ಖ್ಯಾತರಾಗಿರುವ ಎಸ್. ಡಿ. ಬರ್ಮನ್ (ಸಚಿನ್ ದೇವ್ ಬರ್ಮನ್) ಅವರ ಬಾಂಗ್ಲಾದೇಶದಲ್ಲಿನ ಪೂರ್ವಜರ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸುವುದಾಗಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭರವಸೆ ನೀಡಿದ್ದಾರೆ.<br /> <br /> `ಬಾಂಗ್ಲಾ ದೇಶದ ಪೂರ್ವ ಭಾಗದ ಕೊಮಿಲ್ಲಾದಲ್ಲಿರುವ ಬರ್ಮನ್ ಅವರ ಪೂರ್ವಜರ ಮನೆಯನ್ನು ಜಾನಪದ ಕಲಾ ಸಂಸ್ಥೆ ಹಾಗೂ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಬೇಕೆನ್ನುವ ನಮ್ಮ ಪ್ರಸ್ತಾಪಕ್ಕೆ ಬಾಂಗ್ಲಾ ಸರ್ಕಾರ ಒಪ್ಪಿಗೆ ನೀಡಿದೆ~ ಎಂದು ಹಸೀನಾ ಅವರನ್ನು ಭೇಟಿಯಾದ ಸಾಂಸ್ಕೃತಿಕ ಪ್ರತಿನಿಧಿಗಳ ತಂಡದ ಸದಸ್ಯರಲ್ಲೊಬ್ಬರಾದ ಗೌತಮ್ ದಾಸ್ ಸ್ಪಷ್ಟಪಡಿಸಿದ್ದಾರೆ.<br /> <br /> `ಮನೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಸ್ಥಳೀಯರಲ್ಲಿ ಕೆಲವರು ಅದನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಲ್ಲದೆ ಅದನ್ನು ಕೋಳಿ ಸಾಕಣೆ ಕೇಂದ್ರವನ್ನಾಗಿ ಬದಲಾಯಿಸಿದ್ದಾರೆ. ಆದರೆ ಶೇಖ್ ಹಸೀನಾ ಪ್ರಧಾನಿಯಾದಾಗ ನಾವು ಈ ಕುರಿತು ಅವರ ಗಮನಕ್ಕೆ ತಂದಾಗ, ಮನೆಯ ರಕ್ಷಣೆಯ ಬಗ್ಗೆ ಅವರು ಕ್ರಮ ಕೈಗೊಂಡಿದ್ದರು~ ಎಂದರು. <br /> <br /> ಬಾಂಗ್ಲಾ ದೇಶದ ವಿದೇಶಾಂಗ ಸಚಿವ ದೀಪು ಮೋನಿ ಸೇರಿದಂತೆ 100 ಮಂದಿ ಪ್ರತಿನಿಧಿಗಳ ತಂಡದೊಂದಿಗೆ ಹಸೀನಾ ಅವರು ಕಳೆದ ವಾರ ತ್ರಿಪುರಾಕ್ಕೆ ಭೇಟಿ ನೀಡಿದ್ದರು. 1971ರ ಭಾರತ-ಪಾಕ್ ಯುದ್ಧದ ವೇಳೆ ಬಾಂಗ್ಲಾ ತ್ರಿಪುರಾವನ್ನೇ ನೆಲೆಯಾಗಿಟ್ಟುಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿತ್ತು. ಎಸ್. ಡಿ. ಬರ್ಮನ್ ಢಾಕಾದಿಂದ 85 ಕಿ.ಮೀ. ದೂರದ ಕೊಮಿಲ್ಲಾದ ಚೋರ್ತಾ ನಗರದಲ್ಲಿ 1906ಅಕ್ಟೋಬರ್ 1ರಂದು ಜನಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಗರ್ತಲ, (ಐಎಎನ್ಎಸ್): ಬಾಲಿವುಡ್ ಸಂಗೀತ ಕ್ಷೇತ್ರದ ದಂತಕಥೆ ಎಂದೇ ಖ್ಯಾತರಾಗಿರುವ ಎಸ್. ಡಿ. ಬರ್ಮನ್ (ಸಚಿನ್ ದೇವ್ ಬರ್ಮನ್) ಅವರ ಬಾಂಗ್ಲಾದೇಶದಲ್ಲಿನ ಪೂರ್ವಜರ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸುವುದಾಗಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭರವಸೆ ನೀಡಿದ್ದಾರೆ.<br /> <br /> `ಬಾಂಗ್ಲಾ ದೇಶದ ಪೂರ್ವ ಭಾಗದ ಕೊಮಿಲ್ಲಾದಲ್ಲಿರುವ ಬರ್ಮನ್ ಅವರ ಪೂರ್ವಜರ ಮನೆಯನ್ನು ಜಾನಪದ ಕಲಾ ಸಂಸ್ಥೆ ಹಾಗೂ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಬೇಕೆನ್ನುವ ನಮ್ಮ ಪ್ರಸ್ತಾಪಕ್ಕೆ ಬಾಂಗ್ಲಾ ಸರ್ಕಾರ ಒಪ್ಪಿಗೆ ನೀಡಿದೆ~ ಎಂದು ಹಸೀನಾ ಅವರನ್ನು ಭೇಟಿಯಾದ ಸಾಂಸ್ಕೃತಿಕ ಪ್ರತಿನಿಧಿಗಳ ತಂಡದ ಸದಸ್ಯರಲ್ಲೊಬ್ಬರಾದ ಗೌತಮ್ ದಾಸ್ ಸ್ಪಷ್ಟಪಡಿಸಿದ್ದಾರೆ.<br /> <br /> `ಮನೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಸ್ಥಳೀಯರಲ್ಲಿ ಕೆಲವರು ಅದನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಲ್ಲದೆ ಅದನ್ನು ಕೋಳಿ ಸಾಕಣೆ ಕೇಂದ್ರವನ್ನಾಗಿ ಬದಲಾಯಿಸಿದ್ದಾರೆ. ಆದರೆ ಶೇಖ್ ಹಸೀನಾ ಪ್ರಧಾನಿಯಾದಾಗ ನಾವು ಈ ಕುರಿತು ಅವರ ಗಮನಕ್ಕೆ ತಂದಾಗ, ಮನೆಯ ರಕ್ಷಣೆಯ ಬಗ್ಗೆ ಅವರು ಕ್ರಮ ಕೈಗೊಂಡಿದ್ದರು~ ಎಂದರು. <br /> <br /> ಬಾಂಗ್ಲಾ ದೇಶದ ವಿದೇಶಾಂಗ ಸಚಿವ ದೀಪು ಮೋನಿ ಸೇರಿದಂತೆ 100 ಮಂದಿ ಪ್ರತಿನಿಧಿಗಳ ತಂಡದೊಂದಿಗೆ ಹಸೀನಾ ಅವರು ಕಳೆದ ವಾರ ತ್ರಿಪುರಾಕ್ಕೆ ಭೇಟಿ ನೀಡಿದ್ದರು. 1971ರ ಭಾರತ-ಪಾಕ್ ಯುದ್ಧದ ವೇಳೆ ಬಾಂಗ್ಲಾ ತ್ರಿಪುರಾವನ್ನೇ ನೆಲೆಯಾಗಿಟ್ಟುಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿತ್ತು. ಎಸ್. ಡಿ. ಬರ್ಮನ್ ಢಾಕಾದಿಂದ 85 ಕಿ.ಮೀ. ದೂರದ ಕೊಮಿಲ್ಲಾದ ಚೋರ್ತಾ ನಗರದಲ್ಲಿ 1906ಅಕ್ಟೋಬರ್ 1ರಂದು ಜನಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>