<p>ಸುರಪುರ: ಸುರಪುರ ಎಂದರೆ ತಟ್ಟನೆ ಕಣ್ಮುಂದೆ ಬರುವುದು ಬೆಟ್ಟ ಗುಡ್ಡಗಳ ಸಾಲು. ಇಲ್ಲಿನ ಮನಮೋಹಕ ಪ್ರಾಕೃತಿಕ ಸೊಬಗು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.<br /> <br /> ಇಡೀ ಪಟ್ಟಣ ಸಮುದ್ರ ಮಟ್ಟಕ್ಕಿಂತ ಸಾವಿರ ಅಡಿ ಎತ್ತರದಲ್ಲಿದೆ. ಏಳು ಸುತ್ತಿನ ಬೆಟ್ಟ ಗುಡ್ಡಗಳು ಪಟ್ಟಣವನ್ನು ಕಾಯುತ್ತಿವೆ. ಇದು ನೈಸರ್ಗಿಕ ಕೋಟೆಯೆಂದೇ ಬಿಂಬಿತವಾಗಿದೆ.<br /> <br /> ಹಿಂದೆ ಗೋಸಲ ಅರಸರು ಸುರಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಗುಡ್ಡದಲ್ಲಿರುವ ಕಲ್ಲು ಬಂಡೆಗಳು ಇಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.<br /> <br /> ವಿವಿಧ ಆಕಾರದ ಬಂಡೆಗಳು ಎಲ್ಲರ ಮನಸೆಳೆಯುತ್ತಿವೆ. ಈ ಕಲ್ಲು ಬಂಡೆಗಳ ತುಂಬೆಲ್ಲ ಹಸಿರು ಬೆಳೆದು ಇನ್ನಷ್ಟು ಕಂಗೊಳಿಸುತ್ತಿದೆ.<br /> <br /> ವಾಯು ವಿಹಾರಿಗಳಿಗೆ ಸುರಪುರ ಹೇಳಿ ಮಾಡಿಸಿದ ತಾಣ. ಇಲ್ಲಿಗೆ ಬರುವ ಅತಿಥಿಗಳು ತಪ್ಪದೆ ವಾಯು ವಿಹಾರಕ್ಕೆ ಬರುತ್ತಾರೆ.<br /> <br /> ಇಲ್ಲಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗಂಟೆ ಗಟ್ಟಲೆ ವಾಯುವಿಹಾರ ಮಾಡಿ ಇಲ್ಲಿನ ಸೌಂದರ್ಯವನ್ನು ಸವಿದಿದ್ದರು.<br /> <br /> ಇಲ್ಲಿ ಯಾವುದೆ ಕಾರ್ಖಾನೆಗಳಿಲ್ಲ. ಆದ್ದರಿಂದಲೇ ಪರಿಸರ ಮಾಲಿನ್ಯವು ಇಲ್ಲ. ಪಟ್ಟಣದಿಂದ ನ್ಯಾಯಾಧೀಶರ ವಸತಿಗೃಹ ಮಾರ್ಗವಾಗಿ ಟೇಲರ್ ಮಂಜಿಲ್ ಮೂಲಕ ಹೊರಟರೆ ಸಿಗುವ ಆನಂದಕ್ಕೆ ಸಾಟಿಯಿಲ್ಲ.<br /> ಎಲ್ಲಪ್ಪನ ಬಾವಿಯಿಂದ ಫಾಲನ್ ಬಂಗ್ಲಾದವರೆಗೆ ಮತ್ತು ಅಲ್ಲಿಂದ ಟೇಲರ್ ಮಂಜಿಲ್ವರೆಗೆ ಒಂದು ಸುತ್ತು ವಾಯುವಿಹಾರ ಮಾಡಿದರೆ ಅದ್ಭುತ ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.<br /> <br /> ಇಲ್ಲಿರುವ ಯಲ್ಲಪ್ಪನ ಬಾವಿ ನೀರು ಸಿಹಿಯಾಗಿದೆ. ವಾಯುವಿಹಾರಕ್ಕೆ ಬಂದವರು ಈ ಬಾವಿಯ ನೀರನ್ನು ಕುಡಿಯುತ್ತಾರೆ. ಈ ನೀರಿಗೆ ಮಧುಮೇಹ, ರಕ್ತದೊತ್ತಡ ನಿಯಂತ್ರಿಸುವ ಶಕ್ತಿ ಇದೆ ಎನ್ನುವುದು ಇಲ್ಲಿನವರ ನಂಬಿಕೆ. ಐತಿಹಾಸಿಕ ಟೇಲರ್ ಮಂಜಿಲ್ನಲ್ಲಿ ವಾಯುವಿಹಾರಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಪಕ್ಕದ್ಲ್ಲಲೇ ಕುದುರೆ ಗುಡ್ಡ ಇದೆ. ಈ ಗುಡ್ಡವನ್ನು ಹತ್ತಿ ಕುಳಿತರೆ ಇಡೀ ಪಟ್ಟಣ ಕಾಣುತ್ತದೆ.<br /> <br /> ನೂರಾರು ಮಂದಿ ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ವಿಹಾರ ನಡಸುತ್ತಾರೆ. ಟೇಲರ್ ಮಂಜಿಲ್ ಹತ್ತಿರ ಪ್ರತಿದಿನ ಉಚಿತವಾಗಿ ಪತಂಜಲಿ ಯೋಗ ಹೇಳಿ ಕೊಡಲಾಗುತ್ತಿದೆ.ನಗರ ನಿವಾಸಿಗಳೂ ಇಲ್ಲಿಗೆ ಬಂದು ವಾಯು ವಿಹಾರ ಮಾಡುತ್ತಾರೆ.<br /> <br /> ಈ ಪ್ರದೇಶದಲ್ಲಿ ಅಲ್ಲಲ್ಲಿ ಆಸನಗಳನ್ನು ನಿರ್ಮಿಸಬೇಕು. ಫಾಲನ್ ಬಂಗ್ಲಾದ ಹತ್ತಿರ ಇರುವ ಕೆರೆಯನ್ನು ಅಭಿವೃದ್ಧಿ ಪಡಿಸಬೇಕು.<br /> <br /> ಈ ಪ್ರದೇಶದಲ್ಲಿ ವಾಯು ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು ಜೊತೆಗೆ ವಾಹನಗಳನ್ನು ನಿಷೇಧಿಸಬೇಕು ಎಂಬುದು ವಾಯುವಿಹಾರಿಗಳ ಬೇಡಿಕೆ ಯಾಗಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುರಪುರ: ಸುರಪುರ ಎಂದರೆ ತಟ್ಟನೆ ಕಣ್ಮುಂದೆ ಬರುವುದು ಬೆಟ್ಟ ಗುಡ್ಡಗಳ ಸಾಲು. ಇಲ್ಲಿನ ಮನಮೋಹಕ ಪ್ರಾಕೃತಿಕ ಸೊಬಗು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.<br /> <br /> ಇಡೀ ಪಟ್ಟಣ ಸಮುದ್ರ ಮಟ್ಟಕ್ಕಿಂತ ಸಾವಿರ ಅಡಿ ಎತ್ತರದಲ್ಲಿದೆ. ಏಳು ಸುತ್ತಿನ ಬೆಟ್ಟ ಗುಡ್ಡಗಳು ಪಟ್ಟಣವನ್ನು ಕಾಯುತ್ತಿವೆ. ಇದು ನೈಸರ್ಗಿಕ ಕೋಟೆಯೆಂದೇ ಬಿಂಬಿತವಾಗಿದೆ.<br /> <br /> ಹಿಂದೆ ಗೋಸಲ ಅರಸರು ಸುರಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಗುಡ್ಡದಲ್ಲಿರುವ ಕಲ್ಲು ಬಂಡೆಗಳು ಇಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.<br /> <br /> ವಿವಿಧ ಆಕಾರದ ಬಂಡೆಗಳು ಎಲ್ಲರ ಮನಸೆಳೆಯುತ್ತಿವೆ. ಈ ಕಲ್ಲು ಬಂಡೆಗಳ ತುಂಬೆಲ್ಲ ಹಸಿರು ಬೆಳೆದು ಇನ್ನಷ್ಟು ಕಂಗೊಳಿಸುತ್ತಿದೆ.<br /> <br /> ವಾಯು ವಿಹಾರಿಗಳಿಗೆ ಸುರಪುರ ಹೇಳಿ ಮಾಡಿಸಿದ ತಾಣ. ಇಲ್ಲಿಗೆ ಬರುವ ಅತಿಥಿಗಳು ತಪ್ಪದೆ ವಾಯು ವಿಹಾರಕ್ಕೆ ಬರುತ್ತಾರೆ.<br /> <br /> ಇಲ್ಲಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗಂಟೆ ಗಟ್ಟಲೆ ವಾಯುವಿಹಾರ ಮಾಡಿ ಇಲ್ಲಿನ ಸೌಂದರ್ಯವನ್ನು ಸವಿದಿದ್ದರು.<br /> <br /> ಇಲ್ಲಿ ಯಾವುದೆ ಕಾರ್ಖಾನೆಗಳಿಲ್ಲ. ಆದ್ದರಿಂದಲೇ ಪರಿಸರ ಮಾಲಿನ್ಯವು ಇಲ್ಲ. ಪಟ್ಟಣದಿಂದ ನ್ಯಾಯಾಧೀಶರ ವಸತಿಗೃಹ ಮಾರ್ಗವಾಗಿ ಟೇಲರ್ ಮಂಜಿಲ್ ಮೂಲಕ ಹೊರಟರೆ ಸಿಗುವ ಆನಂದಕ್ಕೆ ಸಾಟಿಯಿಲ್ಲ.<br /> ಎಲ್ಲಪ್ಪನ ಬಾವಿಯಿಂದ ಫಾಲನ್ ಬಂಗ್ಲಾದವರೆಗೆ ಮತ್ತು ಅಲ್ಲಿಂದ ಟೇಲರ್ ಮಂಜಿಲ್ವರೆಗೆ ಒಂದು ಸುತ್ತು ವಾಯುವಿಹಾರ ಮಾಡಿದರೆ ಅದ್ಭುತ ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.<br /> <br /> ಇಲ್ಲಿರುವ ಯಲ್ಲಪ್ಪನ ಬಾವಿ ನೀರು ಸಿಹಿಯಾಗಿದೆ. ವಾಯುವಿಹಾರಕ್ಕೆ ಬಂದವರು ಈ ಬಾವಿಯ ನೀರನ್ನು ಕುಡಿಯುತ್ತಾರೆ. ಈ ನೀರಿಗೆ ಮಧುಮೇಹ, ರಕ್ತದೊತ್ತಡ ನಿಯಂತ್ರಿಸುವ ಶಕ್ತಿ ಇದೆ ಎನ್ನುವುದು ಇಲ್ಲಿನವರ ನಂಬಿಕೆ. ಐತಿಹಾಸಿಕ ಟೇಲರ್ ಮಂಜಿಲ್ನಲ್ಲಿ ವಾಯುವಿಹಾರಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಪಕ್ಕದ್ಲ್ಲಲೇ ಕುದುರೆ ಗುಡ್ಡ ಇದೆ. ಈ ಗುಡ್ಡವನ್ನು ಹತ್ತಿ ಕುಳಿತರೆ ಇಡೀ ಪಟ್ಟಣ ಕಾಣುತ್ತದೆ.<br /> <br /> ನೂರಾರು ಮಂದಿ ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ವಿಹಾರ ನಡಸುತ್ತಾರೆ. ಟೇಲರ್ ಮಂಜಿಲ್ ಹತ್ತಿರ ಪ್ರತಿದಿನ ಉಚಿತವಾಗಿ ಪತಂಜಲಿ ಯೋಗ ಹೇಳಿ ಕೊಡಲಾಗುತ್ತಿದೆ.ನಗರ ನಿವಾಸಿಗಳೂ ಇಲ್ಲಿಗೆ ಬಂದು ವಾಯು ವಿಹಾರ ಮಾಡುತ್ತಾರೆ.<br /> <br /> ಈ ಪ್ರದೇಶದಲ್ಲಿ ಅಲ್ಲಲ್ಲಿ ಆಸನಗಳನ್ನು ನಿರ್ಮಿಸಬೇಕು. ಫಾಲನ್ ಬಂಗ್ಲಾದ ಹತ್ತಿರ ಇರುವ ಕೆರೆಯನ್ನು ಅಭಿವೃದ್ಧಿ ಪಡಿಸಬೇಕು.<br /> <br /> ಈ ಪ್ರದೇಶದಲ್ಲಿ ವಾಯು ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು ಜೊತೆಗೆ ವಾಹನಗಳನ್ನು ನಿಷೇಧಿಸಬೇಕು ಎಂಬುದು ವಾಯುವಿಹಾರಿಗಳ ಬೇಡಿಕೆ ಯಾಗಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>