<p>ದಾವಣಗೆರೆ: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ ಜನಮನ ಸೂರೆಗೊಂಡಿತು.<br /> <br /> ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ವತಿಯಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರದ ಮೆರವಣಿಗೆ ಆಕರ್ಷಕವಾಗಿತ್ತು.<br /> <br /> ಬೆಳಿಗ್ಗೆ 8ಕ್ಕೆ ನಗರದ ಹೊಂಡದ ವೃತ್ತದ ಬಳಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ರಾಜನಹಳ್ಳಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ, ಗುಂಡಿ ವೃತ್ತ ತಲುಪಿತು.<br /> <br /> ಮೆರವಣಿಯಲ್ಲಿ ಡೊಳ್ಳು, ತಮಟೆ, ಕಾವಡಿ ನೃತ್ಯ, ಬೇಡರಪಡೆ ನೃತ್ಯ, ಕೋಲಾಟ, ಗೊಂಬೆ ಕುಣಿತ, ವೀರಗಾಸೆ, ಕೀಲುಕುದುರೆ ಇತ್ಯಾದಿ ಜಾನಪದ ಕಲಾತಂಡಗಳು ಹಾಗೂ ವಿವಿಧ ವೇಷಭೂಷಣ ಧರಿಸಿದ ಕಲಾವಿದರು ಪ್ರದರ್ಶನ ನೀಡಿದರು.<br /> <br /> ನಂತರ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ವಾಲ್ಮೀಕಿ, ಬೇಡರ ಕಣ್ಣಪ್ಪ, ಏಕಲವ್ಯ, ಮದಕರಿ ನಾಯಕ ಸಮಾಜದ ಮಹಾನ್ ಪುರುಷರನ್ನು ಸ್ಮರಿಸಿದರು.<br /> <br /> ಶತಮಾನಗಳ ಕಾಲ ಸಮಾಜವನ್ನು ಕಾಯುತ್ತಾ ಬಂದ ನಾಯಕ ಸಮಾಜಕ್ಕೆ ಇಂದಿಗೂ ದೇಶ ಆಳಲು ಸಾಧ್ಯವಾಗಿಲ್ಲ. ರಾಜಕೀಯವಾಗಿ ಸೂಕ್ತ ಸ್ಥಾನಮಾನ ದೊರೆತಿಲ್ಲ. ಮೀಸಲಾತಿ, ಮೀಸಲು ಸೌಲಭ್ಯಗಳು ಜನರಿಗೆ ಸೂಕ್ತವಾಗಿ ತಲುಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ಸಮಾಜದ ಮೀಸಲು ಸೌಲಭ್ಯ ಪಡೆದು ನೌಕರಿ ಪಡೆದ ಅಧಿಕಾರಿಗಳು ವರ್ಷದಲ್ಲಿ ಕನಿಷ್ಠ ಒಂದು ತಿಂಗಳು ಲಂಚ ಪಡೆಯದೇ ಕೆಲಸ ಮಾಡಿ, ಆ ಮೂಲಕ ಮಹರ್ಷಿಗೆ ಗೌರವ ನೀಡಿ ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ ಜನಮನ ಸೂರೆಗೊಂಡಿತು.<br /> <br /> ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ವತಿಯಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರದ ಮೆರವಣಿಗೆ ಆಕರ್ಷಕವಾಗಿತ್ತು.<br /> <br /> ಬೆಳಿಗ್ಗೆ 8ಕ್ಕೆ ನಗರದ ಹೊಂಡದ ವೃತ್ತದ ಬಳಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ರಾಜನಹಳ್ಳಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ, ಗುಂಡಿ ವೃತ್ತ ತಲುಪಿತು.<br /> <br /> ಮೆರವಣಿಯಲ್ಲಿ ಡೊಳ್ಳು, ತಮಟೆ, ಕಾವಡಿ ನೃತ್ಯ, ಬೇಡರಪಡೆ ನೃತ್ಯ, ಕೋಲಾಟ, ಗೊಂಬೆ ಕುಣಿತ, ವೀರಗಾಸೆ, ಕೀಲುಕುದುರೆ ಇತ್ಯಾದಿ ಜಾನಪದ ಕಲಾತಂಡಗಳು ಹಾಗೂ ವಿವಿಧ ವೇಷಭೂಷಣ ಧರಿಸಿದ ಕಲಾವಿದರು ಪ್ರದರ್ಶನ ನೀಡಿದರು.<br /> <br /> ನಂತರ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ವಾಲ್ಮೀಕಿ, ಬೇಡರ ಕಣ್ಣಪ್ಪ, ಏಕಲವ್ಯ, ಮದಕರಿ ನಾಯಕ ಸಮಾಜದ ಮಹಾನ್ ಪುರುಷರನ್ನು ಸ್ಮರಿಸಿದರು.<br /> <br /> ಶತಮಾನಗಳ ಕಾಲ ಸಮಾಜವನ್ನು ಕಾಯುತ್ತಾ ಬಂದ ನಾಯಕ ಸಮಾಜಕ್ಕೆ ಇಂದಿಗೂ ದೇಶ ಆಳಲು ಸಾಧ್ಯವಾಗಿಲ್ಲ. ರಾಜಕೀಯವಾಗಿ ಸೂಕ್ತ ಸ್ಥಾನಮಾನ ದೊರೆತಿಲ್ಲ. ಮೀಸಲಾತಿ, ಮೀಸಲು ಸೌಲಭ್ಯಗಳು ಜನರಿಗೆ ಸೂಕ್ತವಾಗಿ ತಲುಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ಸಮಾಜದ ಮೀಸಲು ಸೌಲಭ್ಯ ಪಡೆದು ನೌಕರಿ ಪಡೆದ ಅಧಿಕಾರಿಗಳು ವರ್ಷದಲ್ಲಿ ಕನಿಷ್ಠ ಒಂದು ತಿಂಗಳು ಲಂಚ ಪಡೆಯದೇ ಕೆಲಸ ಮಾಡಿ, ಆ ಮೂಲಕ ಮಹರ್ಷಿಗೆ ಗೌರವ ನೀಡಿ ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>