<p><strong>ನವದೆಹಲಿ (ಪಿಟಿಐ):</strong> ವಾಹನಗಳಿಗೆ ಗಾಢ ಛಾಯೆಯ ಗಾಜುಗಳನ್ನು ಬಳಸಬಾರದು ಮತ್ತು ಹೊರಗಿನವರಿಗೆ ವಾಹನದ ಒಳಗಿರುವವರು ಕಾಣಲಾಗದಂತಹ ಸನ್ಫಿಲ್ಮ್ಗಳನ್ನು ಅಂಟಿಸಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.</p>.<p>ಭದ್ರತೆಯ ಕಾರಣಕ್ಕಾಗಿ ಗಣ್ಯ ವ್ಯಕ್ತಿಗಳು ಸರ್ಕಾರಿ ವಾಹನಗಳಿಗೆ ಗಾಢ ಛಾಯೆಯ ಗಾಜುಗಳನ್ನು ಬಳಸಬಹುದಾಗಿದೆ ಎಂದು ಸ್ಪಷ್ಟಪಡಿಸಿರುವ ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ನೇತೃತ್ವದ ನ್ಯಾಯಪೀಠವು, ಈ ಬಗ್ಗೆ ರಾಜ್ಯ ಸರ್ಕಾರಗಳು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು ಎಂದು ಸೂಚಿಸಿದೆ.</p>.<p>1989ರ ಕೇಂದ್ರ ಮೋಟಾರು ವಾಹನ ಕಾಯ್ದೆಯ ಪ್ರಕಾರ ವಾಹನಗಳ ಮುಂದಿನ ಮತ್ತು ಹಿಂದಿನ ಗಾಜುಗಳಿಗೆ ಶೇಕಡಾ 70ರಷ್ಟು ಗೋಚರ ಸ್ಪಷ್ಟತೆ ಇರುವ ಹಾಗೂ ಪಕ್ಕದ ಕಿಟಕಿ ಗಾಜುಗಳಿಗೆ ಶೇಕಡಾ 50ರಷ್ಟು ಗೋಚರ ಸ್ಪಷ್ಟತೆ ಇರುವ ಸನ್ಫಿಲ್ಮ್ನ್ನು ಅಂಟಿಸಬೇಕು.</p>.<p>ದಟ್ಟ ಬಣ್ಣದ ಸನ್ ಫಿಲ್ಮ್ಗಳು ಇರುವ ಕಾರು ಮತ್ತು ಇತರ ವಾಹನಗಳಲ್ಲಿ ಅಪರಾಧಗಳನ್ನು ಎಸಗುತ್ತಿರುವುದರಿಂದ ಸನ್ಫಿಲ್ಮ್ ಅಂಟಿಸುವುದನ್ನು ನಿಷೇಧಿಸಬೇಕು ಎಂದು ಅವಿಶೇಕ್ ಅವರು ಕೋರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ವಾಹನಗಳಿಗೆ ಗಾಢ ಛಾಯೆಯ ಗಾಜುಗಳನ್ನು ಬಳಸಬಾರದು ಮತ್ತು ಹೊರಗಿನವರಿಗೆ ವಾಹನದ ಒಳಗಿರುವವರು ಕಾಣಲಾಗದಂತಹ ಸನ್ಫಿಲ್ಮ್ಗಳನ್ನು ಅಂಟಿಸಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.</p>.<p>ಭದ್ರತೆಯ ಕಾರಣಕ್ಕಾಗಿ ಗಣ್ಯ ವ್ಯಕ್ತಿಗಳು ಸರ್ಕಾರಿ ವಾಹನಗಳಿಗೆ ಗಾಢ ಛಾಯೆಯ ಗಾಜುಗಳನ್ನು ಬಳಸಬಹುದಾಗಿದೆ ಎಂದು ಸ್ಪಷ್ಟಪಡಿಸಿರುವ ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ನೇತೃತ್ವದ ನ್ಯಾಯಪೀಠವು, ಈ ಬಗ್ಗೆ ರಾಜ್ಯ ಸರ್ಕಾರಗಳು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು ಎಂದು ಸೂಚಿಸಿದೆ.</p>.<p>1989ರ ಕೇಂದ್ರ ಮೋಟಾರು ವಾಹನ ಕಾಯ್ದೆಯ ಪ್ರಕಾರ ವಾಹನಗಳ ಮುಂದಿನ ಮತ್ತು ಹಿಂದಿನ ಗಾಜುಗಳಿಗೆ ಶೇಕಡಾ 70ರಷ್ಟು ಗೋಚರ ಸ್ಪಷ್ಟತೆ ಇರುವ ಹಾಗೂ ಪಕ್ಕದ ಕಿಟಕಿ ಗಾಜುಗಳಿಗೆ ಶೇಕಡಾ 50ರಷ್ಟು ಗೋಚರ ಸ್ಪಷ್ಟತೆ ಇರುವ ಸನ್ಫಿಲ್ಮ್ನ್ನು ಅಂಟಿಸಬೇಕು.</p>.<p>ದಟ್ಟ ಬಣ್ಣದ ಸನ್ ಫಿಲ್ಮ್ಗಳು ಇರುವ ಕಾರು ಮತ್ತು ಇತರ ವಾಹನಗಳಲ್ಲಿ ಅಪರಾಧಗಳನ್ನು ಎಸಗುತ್ತಿರುವುದರಿಂದ ಸನ್ಫಿಲ್ಮ್ ಅಂಟಿಸುವುದನ್ನು ನಿಷೇಧಿಸಬೇಕು ಎಂದು ಅವಿಶೇಕ್ ಅವರು ಕೋರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>