<p>ಮಡಿಕೇರಿ: ಮಂಜಿನ ನಗರಿ ಮಡಿಕೇರಿಗೆ ಆಗಮಿಸುವ ಪ್ರವಾಸಿಗರ ವಾಹನಗಳ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿದೆ. ಇದರ ಜೊತೆ ಸ್ಥಳೀಯವಾಗಿಯೂ ವಾಹನಗಳನ್ನು ಹೊಂದಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ನಗರದಲ್ಲಿ ವಾಹನಗಳ ನಿಲುಗಡೆ ಸ್ಥಳಾವಕಾಶ ಕೊರತೆ ತೀವ್ರವಾಗಿ ಕಾಡುತ್ತಿದೆ. <br /> <br /> ಸಮುದ್ರಮಟ್ಟದಿಂದ ಸುಮಾರು 5,000 ಮೀಟರ್ ಮೇಲೆ ಗುಡ್ಡದ ಮೇಲಿರುವ ಮಡಿಕೇರಿ ಅತ್ಯಂತ ಪುಟ್ಟನಗರವಾಗಿದೆ. ಇಲ್ಲಿ ಸ್ಥಳಾವಕಾಶದ ಕೊರತೆಯೂ ಮುಖ್ಯವಾಗಿ ಕಾರಣವಾಗಿರುವುದರಿಂದ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳವಿಲ್ಲ. ಈ ಕಾರಣಕ್ಕಾಗಿ ವಾಹನಗಳನ್ನು ನಿಲುಗಡೆ ಮಾಡಲು ಚಾಲಕರು ಪರದಾಡುವ ಪರಿಸ್ಥಿತಿ ತಲೆದೋರಿದೆ. <br /> <br /> ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಚಾರ ದೊರೆಯುತ್ತಿದೆ. ಈ ಕಾರಣಕ್ಕಾಗಿ ಹೊರಜಿಲ್ಲೆಯಿಂದ ಹಾಗೂ ಹೊರರಾಜ್ಯದಿಂದಲೂ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಜಿಲ್ಲೆಯ ಜನರಿಗೆ ಆದಾಯ ಬರುತ್ತಿರುವುದು ಒಂದೆಡೆಯಾದರೆ, ವಾಹನಗಳ ವಿಪರೀತ ಸಂಚಾರವು ವಾಹನಗಳ ದಟ್ಟಣೆಯನ್ನು ಹುಟ್ಟುಹಾಕಿದೆ.<br /> <br /> ವಾಹನಗಳ ಸರಾಗ ಸಂಚಾರಕ್ಕೆ ಹಾಗೂ ನಿಲುಗಡೆಗೆ ನಗರಸಭೆಯು ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಪ್ರವಾಸಿಗರ ಆಗಮನ ಇನ್ನಷ್ಟು ಹೆಚ್ಚಾಗಬಹುದು. ಇದು ಇಲ್ಲಿನ ಆದಾಯವನ್ನು ಹೆಚ್ಚಿಸಲು ಮತ್ತೊಂದು ಮೂಲವಾಗುತ್ತದೆ.<br /> <br /> ನಗರದ ಪ್ರಮುಖ ಸ್ಥಳಗಳಾದ ಜನರಲ್ ತಿಮ್ಮಯ್ಯ ವೃತ್ತ, ಖಾಸಗಿ ಬಸ್ನಿಲ್ದಾಣದ ವೃತ್ತ, ಮಹದೇವ ಪೇಟೆ, ಕಾಲೇಜು ರಸ್ತೆ, ಮುಂತಾದ ಸ್ಥಳಗಳಲ್ಲಿ ವಾಹನಗಳ ನಿಲುಗಡೆ ಸಮಸ್ಯೆ ತೀವ್ರವಾಗಿದೆ. ಇದರತ್ತ ನಗರಸಭೆ ಗಮನಹರಿಸಬೇಕು ಎಂದು ಚಾಲಕರು ಮನವಿ ಮಾಡುತ್ತಿದ್ದಾರೆ. <br /> <br /> ನಗರದೆಲ್ಲೆಡೆ ಚಿಕ್ಕರಸ್ತೆಗಳಿರುವ ಕಾರಣ, ವಾಹನವೊಂದು ರಸ್ತೆ ಬದಿ ನಿಂತುಕೊಂಡರೆ ಪಕ್ಕದಲ್ಲಿ ಮತ್ತೊಂದು ವಾಹನ ಚಲಿಸಲು ಹರಸಾಹಸ ಪಡಬೇಕು. ಈಗ ಎಲ್ಲೆಡೆ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತಿದೆ, ಆದರೆ, ವಾಹನಗಳ ನಿಲುಗಡೆಯತ್ತ ಗಮನಹರಿಸಲಾಗುತ್ತಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. <br /> <br /> ಇತ್ತೀಚೆಗೆ ಕಾಲೇಜು ರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಮಾಡಲಾಗಿದೆ. ರಸ್ತೆಯ ಅರ್ಧದಷ್ಟು ಭಾಗದಲ್ಲಿ ಕಾರು, ಜೀಪುಗಳು ನಿಲುಗಡೆಯಾಗಿರುವುದರಿಂದ ವಾಹನಗಳ ಸಂಚಾರಕ್ಕೆ ಸಾಕಷ್ಟು ಅಡೆತಡೆಯುಂಟಾಗುತ್ತಿದೆ. <br /> <br /> ನಗರದಲ್ಲಿರುವ ಖಾಲಿ ಜಾಗದಲ್ಲಿ ಪ್ರತ್ಯೇಕವಾಗಿ ವಾಹನಗಳ ನಿಲುಗಡೆ ವ್ಯವಸ್ಥೆಯನ್ನು ನಿರ್ಮಿಸಲು ನಗರಸಭೆಯು ಗಮನಹರಿಸಬೇಕು ಎಂದು ಚಾಲಕರು ಮನವಿ ಮಾಡಿಕೊಳ್ಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ಮಂಜಿನ ನಗರಿ ಮಡಿಕೇರಿಗೆ ಆಗಮಿಸುವ ಪ್ರವಾಸಿಗರ ವಾಹನಗಳ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿದೆ. ಇದರ ಜೊತೆ ಸ್ಥಳೀಯವಾಗಿಯೂ ವಾಹನಗಳನ್ನು ಹೊಂದಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ನಗರದಲ್ಲಿ ವಾಹನಗಳ ನಿಲುಗಡೆ ಸ್ಥಳಾವಕಾಶ ಕೊರತೆ ತೀವ್ರವಾಗಿ ಕಾಡುತ್ತಿದೆ. <br /> <br /> ಸಮುದ್ರಮಟ್ಟದಿಂದ ಸುಮಾರು 5,000 ಮೀಟರ್ ಮೇಲೆ ಗುಡ್ಡದ ಮೇಲಿರುವ ಮಡಿಕೇರಿ ಅತ್ಯಂತ ಪುಟ್ಟನಗರವಾಗಿದೆ. ಇಲ್ಲಿ ಸ್ಥಳಾವಕಾಶದ ಕೊರತೆಯೂ ಮುಖ್ಯವಾಗಿ ಕಾರಣವಾಗಿರುವುದರಿಂದ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳವಿಲ್ಲ. ಈ ಕಾರಣಕ್ಕಾಗಿ ವಾಹನಗಳನ್ನು ನಿಲುಗಡೆ ಮಾಡಲು ಚಾಲಕರು ಪರದಾಡುವ ಪರಿಸ್ಥಿತಿ ತಲೆದೋರಿದೆ. <br /> <br /> ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಚಾರ ದೊರೆಯುತ್ತಿದೆ. ಈ ಕಾರಣಕ್ಕಾಗಿ ಹೊರಜಿಲ್ಲೆಯಿಂದ ಹಾಗೂ ಹೊರರಾಜ್ಯದಿಂದಲೂ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಜಿಲ್ಲೆಯ ಜನರಿಗೆ ಆದಾಯ ಬರುತ್ತಿರುವುದು ಒಂದೆಡೆಯಾದರೆ, ವಾಹನಗಳ ವಿಪರೀತ ಸಂಚಾರವು ವಾಹನಗಳ ದಟ್ಟಣೆಯನ್ನು ಹುಟ್ಟುಹಾಕಿದೆ.<br /> <br /> ವಾಹನಗಳ ಸರಾಗ ಸಂಚಾರಕ್ಕೆ ಹಾಗೂ ನಿಲುಗಡೆಗೆ ನಗರಸಭೆಯು ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಪ್ರವಾಸಿಗರ ಆಗಮನ ಇನ್ನಷ್ಟು ಹೆಚ್ಚಾಗಬಹುದು. ಇದು ಇಲ್ಲಿನ ಆದಾಯವನ್ನು ಹೆಚ್ಚಿಸಲು ಮತ್ತೊಂದು ಮೂಲವಾಗುತ್ತದೆ.<br /> <br /> ನಗರದ ಪ್ರಮುಖ ಸ್ಥಳಗಳಾದ ಜನರಲ್ ತಿಮ್ಮಯ್ಯ ವೃತ್ತ, ಖಾಸಗಿ ಬಸ್ನಿಲ್ದಾಣದ ವೃತ್ತ, ಮಹದೇವ ಪೇಟೆ, ಕಾಲೇಜು ರಸ್ತೆ, ಮುಂತಾದ ಸ್ಥಳಗಳಲ್ಲಿ ವಾಹನಗಳ ನಿಲುಗಡೆ ಸಮಸ್ಯೆ ತೀವ್ರವಾಗಿದೆ. ಇದರತ್ತ ನಗರಸಭೆ ಗಮನಹರಿಸಬೇಕು ಎಂದು ಚಾಲಕರು ಮನವಿ ಮಾಡುತ್ತಿದ್ದಾರೆ. <br /> <br /> ನಗರದೆಲ್ಲೆಡೆ ಚಿಕ್ಕರಸ್ತೆಗಳಿರುವ ಕಾರಣ, ವಾಹನವೊಂದು ರಸ್ತೆ ಬದಿ ನಿಂತುಕೊಂಡರೆ ಪಕ್ಕದಲ್ಲಿ ಮತ್ತೊಂದು ವಾಹನ ಚಲಿಸಲು ಹರಸಾಹಸ ಪಡಬೇಕು. ಈಗ ಎಲ್ಲೆಡೆ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತಿದೆ, ಆದರೆ, ವಾಹನಗಳ ನಿಲುಗಡೆಯತ್ತ ಗಮನಹರಿಸಲಾಗುತ್ತಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. <br /> <br /> ಇತ್ತೀಚೆಗೆ ಕಾಲೇಜು ರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಮಾಡಲಾಗಿದೆ. ರಸ್ತೆಯ ಅರ್ಧದಷ್ಟು ಭಾಗದಲ್ಲಿ ಕಾರು, ಜೀಪುಗಳು ನಿಲುಗಡೆಯಾಗಿರುವುದರಿಂದ ವಾಹನಗಳ ಸಂಚಾರಕ್ಕೆ ಸಾಕಷ್ಟು ಅಡೆತಡೆಯುಂಟಾಗುತ್ತಿದೆ. <br /> <br /> ನಗರದಲ್ಲಿರುವ ಖಾಲಿ ಜಾಗದಲ್ಲಿ ಪ್ರತ್ಯೇಕವಾಗಿ ವಾಹನಗಳ ನಿಲುಗಡೆ ವ್ಯವಸ್ಥೆಯನ್ನು ನಿರ್ಮಿಸಲು ನಗರಸಭೆಯು ಗಮನಹರಿಸಬೇಕು ಎಂದು ಚಾಲಕರು ಮನವಿ ಮಾಡಿಕೊಳ್ಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>