<p><strong>ನವದೆಹಲಿ (ಪಿಟಿಐ):</strong> ತಮ್ಮ ಸಾಧನೆಗಳನ್ನು ‘ಬಿಂಬಿಸಿ’ಕೊಳ್ಳಲು ಸರ್ಕಾರ ನೀಡುವ ಜಾಹೀರಾತುಗಳ ನಿಯಂತ್ರಣಕ್ಕೆ ಸಲಹಾಸೂತ್ರಗಳನ್ನು ರಚಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.</p>.<p>‘ಶೀಘ್ರದಲ್ಲೇ ಚುನಾವಣೆ ಇದೆ. ಇಂತಹ ಅರ್ಜಿ ವಿಚಾರಣೆಗೆ ಇದು ಸೂಕ್ತ ಸಮಯವಲ್ಲ’ ಎಂದು ಅಭಿಪ್ರಾಯ ಪಟ್ಟ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿ ಪಿ. ಸದಾಶಿವಂ ಅವರಿದ್ದ ಪೀಠ, ‘ಸಾರ್ವತ್ರಿಕ ಚುನಾವಣೆಯ ನಂತರ ಮತ್ತೆ ನ್ಯಾಯಲಯದ ಮೊರೆ ಹೋಗಬಹುದು’ ಎಂದು ಅರ್ಜಿದಾರನಿಗೆ ಹೇಳಿತು.</p>.<p>ಆಡಳಿತಾರೂಢ ಪಕ್ಷ ಹಾಗೂ ಅದರ ನಾಯಕರ ಸಾಧನೆಗಳನ್ನು ‘ಬಿಂಬಿಸಲು’ ಸರ್ಕಾರಗಳು ಜಾಹೀರಾತಿಗಾಗಿ ಸಾರ್ವಜನಿಕ ಬೊಕ್ಕಸದ ಕೋಟಿ–ಕೋಟಿ ಹಣ ವ್ಯಯಿಸುತ್ತಿವೆ ಎಂದು ಆರೋಪಿಸಿ ಕೊಚೌಸ್ಪೆಹ್ ಚಿಟ್ಟಿಲಪಿಲ್ಲಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.</p>.<p>‘ಅಂತಿಮ ಗಳಿಗೆ’ಯಲ್ಲಿ ನ್ಯಾಯಾಲಯದ ಮೊರೆ ಹೋಗಲು ಕಾರಣವೇನು ಎಂದು ಅರ್ಜಿದಾರನಿಗೆ ಪ್ರಶ್ನಿಸಿದ ಪೀಠ, ‘ನೀವು ಹೇಳುವುದು ಸರಿ. ಆದರೆ ವಿಚಾರಣೆಗೆ ಇದು ಸೂಕ್ತ ಸಮಯವಲ್ಲ. ಈ ಹಂತದಲ್ಲಿ ನಿಮ್ಮ ಅರ್ಜಿಯನ್ನು ವಿಚಾರಣೆ ನಡೆಸಲಾಗದು’ ಎಂದೂ ಪೀಠ ಸ್ಪಷ್ಟಪಡಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ತಮ್ಮ ಸಾಧನೆಗಳನ್ನು ‘ಬಿಂಬಿಸಿ’ಕೊಳ್ಳಲು ಸರ್ಕಾರ ನೀಡುವ ಜಾಹೀರಾತುಗಳ ನಿಯಂತ್ರಣಕ್ಕೆ ಸಲಹಾಸೂತ್ರಗಳನ್ನು ರಚಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.</p>.<p>‘ಶೀಘ್ರದಲ್ಲೇ ಚುನಾವಣೆ ಇದೆ. ಇಂತಹ ಅರ್ಜಿ ವಿಚಾರಣೆಗೆ ಇದು ಸೂಕ್ತ ಸಮಯವಲ್ಲ’ ಎಂದು ಅಭಿಪ್ರಾಯ ಪಟ್ಟ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿ ಪಿ. ಸದಾಶಿವಂ ಅವರಿದ್ದ ಪೀಠ, ‘ಸಾರ್ವತ್ರಿಕ ಚುನಾವಣೆಯ ನಂತರ ಮತ್ತೆ ನ್ಯಾಯಲಯದ ಮೊರೆ ಹೋಗಬಹುದು’ ಎಂದು ಅರ್ಜಿದಾರನಿಗೆ ಹೇಳಿತು.</p>.<p>ಆಡಳಿತಾರೂಢ ಪಕ್ಷ ಹಾಗೂ ಅದರ ನಾಯಕರ ಸಾಧನೆಗಳನ್ನು ‘ಬಿಂಬಿಸಲು’ ಸರ್ಕಾರಗಳು ಜಾಹೀರಾತಿಗಾಗಿ ಸಾರ್ವಜನಿಕ ಬೊಕ್ಕಸದ ಕೋಟಿ–ಕೋಟಿ ಹಣ ವ್ಯಯಿಸುತ್ತಿವೆ ಎಂದು ಆರೋಪಿಸಿ ಕೊಚೌಸ್ಪೆಹ್ ಚಿಟ್ಟಿಲಪಿಲ್ಲಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.</p>.<p>‘ಅಂತಿಮ ಗಳಿಗೆ’ಯಲ್ಲಿ ನ್ಯಾಯಾಲಯದ ಮೊರೆ ಹೋಗಲು ಕಾರಣವೇನು ಎಂದು ಅರ್ಜಿದಾರನಿಗೆ ಪ್ರಶ್ನಿಸಿದ ಪೀಠ, ‘ನೀವು ಹೇಳುವುದು ಸರಿ. ಆದರೆ ವಿಚಾರಣೆಗೆ ಇದು ಸೂಕ್ತ ಸಮಯವಲ್ಲ. ಈ ಹಂತದಲ್ಲಿ ನಿಮ್ಮ ಅರ್ಜಿಯನ್ನು ವಿಚಾರಣೆ ನಡೆಸಲಾಗದು’ ಎಂದೂ ಪೀಠ ಸ್ಪಷ್ಟಪಡಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>