<p><strong>ನವದೆಹಲಿ (ಪಿಟಿಐ): </strong>ಲಕ್ಷಿ ರತನ್ ಶುಕ್ಲಾ ಅವರ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಬಂಗಾಳ ತಂಡದವರು ಇಲ್ಲಿ ಕೊನೆಗೊಂಡ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದರು. <br /> <br /> ಫಿರೋಜ್ ಷಾ ಕೊಟ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಸೌರವ್ ಗಂಗೂಲಿ ನೇತೃತ್ವದ ಬಂಗಾಳ ಆರು ವಿಕೆಟ್ಗಳ ಭರ್ಜರಿ ಗೆಲುವು ಪಡೆಯಿತು. ಮುಂಬೈ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.<br /> <br /> ಮುಂಬೈ ನೀಡಿದ್ದ 249 ರನ್ಗಳ ಗುರಿ ಮುಟ್ಟಲು ಗಂಗೂಲಿ ಪಡೆ 46.1 ಓವರ್ಗಳನ್ನು ತಗೆದುಕೊಂಡು ನಾಲ್ಕು ವಿಕೆಟ್ ಕಳೆದುಕೊಂಡಿತು. ಇದಕ್ಕೆ ಶುಕ್ಲಾ ಅವರ ಅಜೇಯ ಶತಕ ಕಾರಣವಾಯಿತು. ಎದುರಾಳಿ ಬೌಲರ್ಗಳ ಬೆವರಿಳಿಸಿದ ಶುಕ್ಲಾ 12 ಬೌಂಡರಿ, 2 ಸಿಕ್ಸರ್ ಸೇರಿದಂತೆ 106 ರನ್ ಗಳಿಸಿ ಪ್ರಶಸ್ತಿ ಜಯಿಸಬೇಕೆನ್ನುವ ಬಂಗಾಳದ ಆಸೆಗೆ ಬಲ ತುಂಬಿದರು. ಇದಕ್ಕೆ ಗಂಗೂಲಿ (38, 53ಎಸೆತ, 4ಬೌಂಡರಿ) ಹಾಗೂ ಶ್ರೀವತ್ಸ ಗೋಸ್ವಾಮಿ (42, 73ಎಸೆತ, 4ಬೌಂ) ನೆರವಾದರು. <br /> <br /> ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಮುಂಬೈ 49.2 ಓವರ್ಗಳಲ್ಲಿ 248 ರನ್ ಗಳಿಸಿತ್ತು.10 ಓವರ್ಗೆ ವಿಕೆಟ್ ನಷ್ಟವಿಲ್ಲದೇ 76 ರನ್ ಗಳಿಸಿದ್ದ ಮುಂಬೈ ನಂತರ ಕುಸಿತ ಅನುಭವಿಸಿತು. ಈ ತಂಡದ ವಾಸೀಮ್ ಜಾಫರ್ (61) ಹಾಗೂ ಸೂರ್ಯಕುಮಾರ್ ಯಾದವ್ (50, 68ಎಸೆತ, 7ಬೌಂ) ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾದರು. <br /> ಬೌಲಿಂಗ್ನಲ್ಲಿಯೂ ಮಿಂಚಿದ ಶುಕ್ಲಾ (38ಕ್ಕೆ4) ಎದುರಾಳಿ ಬ್ಯಾಟ್ಸ್ಮನ್ಗಳನ್ನು ಕಾಡಿದರು.<br /> <br /> <strong>ಸಂಕ್ಷಿಪ್ತ ಸ್ಕೋರು:</strong> ಮುಂಬೈ 49.2 ಓವರ್ಗಳಲ್ಲಿ 248 (ವಾಸೀಮ್ ಜಾಫರ್ 61, ಸೂರ್ಯ ಕುಮಾರ್ ಯಾದವ್ 50, ಲಕ್ಷಿ ರತನ್ ಶುಕ್ಲಾ 38ಕ್ಕೆ4). ಬಂಗಾಳ 46.1 ಓವರ್ಗಳಲ್ಲಿ 4 ವಿಕೆಟ್ಗೆ 252. (ಶುಕ್ಲಾ ಔಟಾಗದೇ 106, ಎ. ಮುಜಮದಾರ್ ಔಟಾಗದೇ 50). ಫಲಿತಾಂಶ: ಬಂಗಾಳಕ್ಕೆ ಆರು ವಿಕೆಟ್ಗಳ ಜಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಲಕ್ಷಿ ರತನ್ ಶುಕ್ಲಾ ಅವರ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಬಂಗಾಳ ತಂಡದವರು ಇಲ್ಲಿ ಕೊನೆಗೊಂಡ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದರು. <br /> <br /> ಫಿರೋಜ್ ಷಾ ಕೊಟ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಸೌರವ್ ಗಂಗೂಲಿ ನೇತೃತ್ವದ ಬಂಗಾಳ ಆರು ವಿಕೆಟ್ಗಳ ಭರ್ಜರಿ ಗೆಲುವು ಪಡೆಯಿತು. ಮುಂಬೈ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.<br /> <br /> ಮುಂಬೈ ನೀಡಿದ್ದ 249 ರನ್ಗಳ ಗುರಿ ಮುಟ್ಟಲು ಗಂಗೂಲಿ ಪಡೆ 46.1 ಓವರ್ಗಳನ್ನು ತಗೆದುಕೊಂಡು ನಾಲ್ಕು ವಿಕೆಟ್ ಕಳೆದುಕೊಂಡಿತು. ಇದಕ್ಕೆ ಶುಕ್ಲಾ ಅವರ ಅಜೇಯ ಶತಕ ಕಾರಣವಾಯಿತು. ಎದುರಾಳಿ ಬೌಲರ್ಗಳ ಬೆವರಿಳಿಸಿದ ಶುಕ್ಲಾ 12 ಬೌಂಡರಿ, 2 ಸಿಕ್ಸರ್ ಸೇರಿದಂತೆ 106 ರನ್ ಗಳಿಸಿ ಪ್ರಶಸ್ತಿ ಜಯಿಸಬೇಕೆನ್ನುವ ಬಂಗಾಳದ ಆಸೆಗೆ ಬಲ ತುಂಬಿದರು. ಇದಕ್ಕೆ ಗಂಗೂಲಿ (38, 53ಎಸೆತ, 4ಬೌಂಡರಿ) ಹಾಗೂ ಶ್ರೀವತ್ಸ ಗೋಸ್ವಾಮಿ (42, 73ಎಸೆತ, 4ಬೌಂ) ನೆರವಾದರು. <br /> <br /> ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಮುಂಬೈ 49.2 ಓವರ್ಗಳಲ್ಲಿ 248 ರನ್ ಗಳಿಸಿತ್ತು.10 ಓವರ್ಗೆ ವಿಕೆಟ್ ನಷ್ಟವಿಲ್ಲದೇ 76 ರನ್ ಗಳಿಸಿದ್ದ ಮುಂಬೈ ನಂತರ ಕುಸಿತ ಅನುಭವಿಸಿತು. ಈ ತಂಡದ ವಾಸೀಮ್ ಜಾಫರ್ (61) ಹಾಗೂ ಸೂರ್ಯಕುಮಾರ್ ಯಾದವ್ (50, 68ಎಸೆತ, 7ಬೌಂ) ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾದರು. <br /> ಬೌಲಿಂಗ್ನಲ್ಲಿಯೂ ಮಿಂಚಿದ ಶುಕ್ಲಾ (38ಕ್ಕೆ4) ಎದುರಾಳಿ ಬ್ಯಾಟ್ಸ್ಮನ್ಗಳನ್ನು ಕಾಡಿದರು.<br /> <br /> <strong>ಸಂಕ್ಷಿಪ್ತ ಸ್ಕೋರು:</strong> ಮುಂಬೈ 49.2 ಓವರ್ಗಳಲ್ಲಿ 248 (ವಾಸೀಮ್ ಜಾಫರ್ 61, ಸೂರ್ಯ ಕುಮಾರ್ ಯಾದವ್ 50, ಲಕ್ಷಿ ರತನ್ ಶುಕ್ಲಾ 38ಕ್ಕೆ4). ಬಂಗಾಳ 46.1 ಓವರ್ಗಳಲ್ಲಿ 4 ವಿಕೆಟ್ಗೆ 252. (ಶುಕ್ಲಾ ಔಟಾಗದೇ 106, ಎ. ಮುಜಮದಾರ್ ಔಟಾಗದೇ 50). ಫಲಿತಾಂಶ: ಬಂಗಾಳಕ್ಕೆ ಆರು ವಿಕೆಟ್ಗಳ ಜಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>