<p><strong>ವಿಜಾಪುರ: </strong>ಜಿಲ್ಲೆಯಲ್ಲಿ ಎಲ್ಲೆಡೆ ಗುರುವಾರದಂದು ಜನರು ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಪ್ರಸಿದ್ಧ ವಿಜಯ ದಶಮಿ ಹಬ್ಬವನ್ನು ಆಚರಿಸಿದರು. ಸಹಸ್ರಾರು ಜನರು ಒಬ್ಬರಿಗೊಬ್ಬರು ಬನ್ನಿ ಪತ್ರೆಯನ್ನು ವಿನಿಮಯ ಮಾಡಿಕೊಂಡು `ನಾವು- ನೀವು ಬಂಗಾರವಾಗಿ ಇರೋಣ~ ಎಂದು ಪರಸ್ಪರ ಶುಭ ಹಾರೈಸುತ್ತ ಈ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.<br /> <br /> ಜಿಲ್ಲೆಯಲ್ಲಿ `ಬನ್ನಿ ಹಬ್ಬ~ವೆಂದೇ ಪ್ರಸಿದ್ಧವಾದ ಈ ಹಬ್ಬದ ದಿನದಂದು ಬೆಳಗ್ಗೆಯಿಂದಲೇ ಕೆಲವು ಯುವಕರು ತಮ್ಮ ತಮ್ಮ ಮೊಬೈಲ್ಗಳ ಮೂಲಕ ಬಂಧು ಬಳಗದವರಿಗೆ, ಸ್ನೇತರಿಗೆ ಎಸ್.ಎಂ.ಎಸ್. ಕಳಿಸಿ ವಿಜಯ ದಶಮಿ ಹಬ್ಬದ ಶುಭಾಶಯಗಳನ್ನು ಕೋರಿ ಸಂತಸಪಟ್ಟರು. <br /> <br /> ಕೆಲವರು ದೂರವಾಣಿ ಮೂಲಕ ಖುದ್ದು ಮಾತನಾಡಿ ಶುಭಾಶಯ ಕೋರಿದರು. ಇನ್ನೂ ಕೆಲವರು ತಮ್ಮ ಸ್ವ- ಗ್ರಾಮಗಳಿಗೆ ತೆರಳಿ ಬಂಧುಗಳೊಂದಿಗೆ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.<br /> <br /> ಜಿಲ್ಲೆಯಲ್ಲಿ ನಗರಕ್ಕಿಂತ ಗ್ರಾಮೀಣ ಭಾಗದ ಜನರು ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಸಂಜೆಯ ವೇಳೆಯಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ, ಊರ ಹೊರವಲಯದ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಬನ್ನಿಯನ್ನು ತೆಗೆದುಕೊಂಡು ಗ್ರಾಮದ ದೇವಸ್ಥಾನಗಳಿಗೆ ತೆರಳಿ ದೇವರ ಸನ್ನಿಧಿಯಲ್ಲಿ ಬನ್ನಿ ಇಟ್ಟು ನಮಸ್ಕರಿಸಿದರು.<br /> <br /> ಬಳಿಕ ಮನೆಗೆ ತೆರಳಿ ಸಹೋದರಿಯರಿಂದ ಆರತಿ ಬೆಳಗಿಸಿಕೊಂಡು ಮನೆಯ ದೇವರಿಗೆ, ಬಂಧು ಭಗಿನಿಯರಿಗೆ, ನೆರೆ- ಹೊರೆಯವರಿಗೆ ಬನ್ನಿ, ಬಂಗಾರ ನೀಡಿ ನಮಸ್ಕರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು.<br /> <br /> ಇದು ಸಂಪ್ರದಾಯವೂ ಹೌದು. ಪೌರಾಣಿಕ ಕಾಲದಿಂದಲೂ ಮಹತ್ವ ಪಡೆದ ಈ ವಿಜಯ ದಶಮಿ ಹಬ್ಬದ ಸಂದರ್ಭದಲ್ಲಿ ಪರಸ್ಪರ ವಿನಿಮಯ ಮಾಡಿ ಕೊಳ್ಳಲು ಬಳಸುವ ಬನ್ನಿಗೆ ಬಲು ಬೇಡಿಕೆ. ಬುಧವಾರದಂದು ಕೂಡ ಜನರು ಈ ಬನ್ನಿ ಪತ್ರೆಯನ್ನೇ ಬಳಸಿ ಆಯುಧಗಳಿಗೆ ಪೂಜೆ ಸಲ್ಲಿಸಿದರು. <br /> ಒಟ್ಟಾರೆ ಈ ಬಾರಿಯ ಬನ್ನಿಹಬ್ಬ ಜಿಲ್ಲೆಯ ಜನರಲ್ಲಿ ಬಾಂಧವ್ಯ ಬೆಸೆದು ಭಾವೈಕ್ಯತೆಯ ಸಂದೇಶ ಸಾರಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಾಪುರ: </strong>ಜಿಲ್ಲೆಯಲ್ಲಿ ಎಲ್ಲೆಡೆ ಗುರುವಾರದಂದು ಜನರು ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಪ್ರಸಿದ್ಧ ವಿಜಯ ದಶಮಿ ಹಬ್ಬವನ್ನು ಆಚರಿಸಿದರು. ಸಹಸ್ರಾರು ಜನರು ಒಬ್ಬರಿಗೊಬ್ಬರು ಬನ್ನಿ ಪತ್ರೆಯನ್ನು ವಿನಿಮಯ ಮಾಡಿಕೊಂಡು `ನಾವು- ನೀವು ಬಂಗಾರವಾಗಿ ಇರೋಣ~ ಎಂದು ಪರಸ್ಪರ ಶುಭ ಹಾರೈಸುತ್ತ ಈ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.<br /> <br /> ಜಿಲ್ಲೆಯಲ್ಲಿ `ಬನ್ನಿ ಹಬ್ಬ~ವೆಂದೇ ಪ್ರಸಿದ್ಧವಾದ ಈ ಹಬ್ಬದ ದಿನದಂದು ಬೆಳಗ್ಗೆಯಿಂದಲೇ ಕೆಲವು ಯುವಕರು ತಮ್ಮ ತಮ್ಮ ಮೊಬೈಲ್ಗಳ ಮೂಲಕ ಬಂಧು ಬಳಗದವರಿಗೆ, ಸ್ನೇತರಿಗೆ ಎಸ್.ಎಂ.ಎಸ್. ಕಳಿಸಿ ವಿಜಯ ದಶಮಿ ಹಬ್ಬದ ಶುಭಾಶಯಗಳನ್ನು ಕೋರಿ ಸಂತಸಪಟ್ಟರು. <br /> <br /> ಕೆಲವರು ದೂರವಾಣಿ ಮೂಲಕ ಖುದ್ದು ಮಾತನಾಡಿ ಶುಭಾಶಯ ಕೋರಿದರು. ಇನ್ನೂ ಕೆಲವರು ತಮ್ಮ ಸ್ವ- ಗ್ರಾಮಗಳಿಗೆ ತೆರಳಿ ಬಂಧುಗಳೊಂದಿಗೆ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.<br /> <br /> ಜಿಲ್ಲೆಯಲ್ಲಿ ನಗರಕ್ಕಿಂತ ಗ್ರಾಮೀಣ ಭಾಗದ ಜನರು ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಸಂಜೆಯ ವೇಳೆಯಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ, ಊರ ಹೊರವಲಯದ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಬನ್ನಿಯನ್ನು ತೆಗೆದುಕೊಂಡು ಗ್ರಾಮದ ದೇವಸ್ಥಾನಗಳಿಗೆ ತೆರಳಿ ದೇವರ ಸನ್ನಿಧಿಯಲ್ಲಿ ಬನ್ನಿ ಇಟ್ಟು ನಮಸ್ಕರಿಸಿದರು.<br /> <br /> ಬಳಿಕ ಮನೆಗೆ ತೆರಳಿ ಸಹೋದರಿಯರಿಂದ ಆರತಿ ಬೆಳಗಿಸಿಕೊಂಡು ಮನೆಯ ದೇವರಿಗೆ, ಬಂಧು ಭಗಿನಿಯರಿಗೆ, ನೆರೆ- ಹೊರೆಯವರಿಗೆ ಬನ್ನಿ, ಬಂಗಾರ ನೀಡಿ ನಮಸ್ಕರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು.<br /> <br /> ಇದು ಸಂಪ್ರದಾಯವೂ ಹೌದು. ಪೌರಾಣಿಕ ಕಾಲದಿಂದಲೂ ಮಹತ್ವ ಪಡೆದ ಈ ವಿಜಯ ದಶಮಿ ಹಬ್ಬದ ಸಂದರ್ಭದಲ್ಲಿ ಪರಸ್ಪರ ವಿನಿಮಯ ಮಾಡಿ ಕೊಳ್ಳಲು ಬಳಸುವ ಬನ್ನಿಗೆ ಬಲು ಬೇಡಿಕೆ. ಬುಧವಾರದಂದು ಕೂಡ ಜನರು ಈ ಬನ್ನಿ ಪತ್ರೆಯನ್ನೇ ಬಳಸಿ ಆಯುಧಗಳಿಗೆ ಪೂಜೆ ಸಲ್ಲಿಸಿದರು. <br /> ಒಟ್ಟಾರೆ ಈ ಬಾರಿಯ ಬನ್ನಿಹಬ್ಬ ಜಿಲ್ಲೆಯ ಜನರಲ್ಲಿ ಬಾಂಧವ್ಯ ಬೆಸೆದು ಭಾವೈಕ್ಯತೆಯ ಸಂದೇಶ ಸಾರಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>