<p>ತಿಪಟೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎ ವಿದ್ಯಾರ್ಥಿಗಳು ತಾಲ್ಲೂಕಿನ ರಂಗಾಪುರದಲ್ಲಿ ಸೋಮವಾರ ನಡೆದ ಗ್ರಾಮಸಭೆಯಲ್ಲಿ ಪಾಲ್ಗೊಂಡು ಗ್ರಾಮ ಪಂಚಾಯಿತಿ ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿದರು.<br /> <br /> ಪ್ರಭಾರಿ ಅಧ್ಯಕ್ಷ ಆರ್.ಎಸ್.ದೇವರಾಜು ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳ ಹಾಗೂ ಎಸ್ಜಿಎಸ್ವೈ ಯೋಜನೆ ಸಂಘಗಳ ಆಯ್ಕೆ ವಿಷಯ ಚರ್ಚೆಯಾಯಿತು. <br /> <br /> ಉದ್ಯೋಗಖಾತ್ರಿ ಯೋಜನೆ ಬಳಸಿ ಕ್ರಿಯಾಯೋಜನೆ ರೂಪಿಸುವುದು ಸೇರಿದಂತೆ ಕೆಲ ಪ್ರಮುಖ ತೀರ್ಮಾನ ಕೈಗೊಳ್ಳಲಾಯಿತು.<br /> <br /> ಇದೇ ಸಂದರ್ಭದಲ್ಲಿ ಬಿಎ (ಎಚ್ಇಪಿ) ವಿದ್ಯಾರ್ಥಿಗಳು ಕ್ಷೇತ್ರ ಕಾರ್ಯ ಕಾರ್ಯಕ್ರಮದಡಿ ಗ್ರಾಮ ಪಂಚಾಯಿತಿ ಕಾರ್ಯವಿಧಾನ ತಿಳಿದುಕೊಂಡರು. ವಿದ್ಯಾರ್ಥಿನಿ ಎಂ.ಎಸ್.ಮಹಾಲಕ್ಷ್ಮಿ ಪ್ರಭಾರಿ ಅಧ್ಯಕ್ಷರನ್ನು ಸಂದರ್ಶಿಸಿ ಗ್ರಾಮ ಪಂಚಾಯಿತಿ ಯೋಜನೆ, ಕಾರ್ಯವಿಧಾನಗಳ ಬಗ್ಗೆ ಮಾಹಿತಿ ಪಡೆದರು. ಉಳಿದ ವಿದ್ಯಾರ್ಥಿಗಳು ಪ್ರಶ್ನೋತ್ತರದ ಮೂಲಕ ಸಂದೇಶ ಬಗೆಹರಿಸಿಕೊಂಡರು.<br /> <br /> ಗ್ರಾ.ಪಂ.ಸದಸ್ಯರು, ನೋಡಲ್ ಅಧಿಕಾರಿ ನಂದೀಶ್, ಸಿಬ್ಬಂದಿಗಳಾದ ಜಗದೀಶ್, ರಾಜಶೇಖರ್ ಮತ್ತಿತರರು ಪಾಲ್ಗೊಂಡಿದ್ದರು. ಕಾಲೇಜು ತಂಡದಲ್ಲಿ ಉಪನ್ಯಾಸಕರಾದ ಡಾ. ಹೊನ್ನಾಂಜನಯ್ಯ, ಚಿನ್ನಸ್ವಾಮಿ, ಷಣ್ಮುಖಪ್ಪ ಮತ್ತಿತರರು ಇದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿಪಟೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎ ವಿದ್ಯಾರ್ಥಿಗಳು ತಾಲ್ಲೂಕಿನ ರಂಗಾಪುರದಲ್ಲಿ ಸೋಮವಾರ ನಡೆದ ಗ್ರಾಮಸಭೆಯಲ್ಲಿ ಪಾಲ್ಗೊಂಡು ಗ್ರಾಮ ಪಂಚಾಯಿತಿ ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿದರು.<br /> <br /> ಪ್ರಭಾರಿ ಅಧ್ಯಕ್ಷ ಆರ್.ಎಸ್.ದೇವರಾಜು ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳ ಹಾಗೂ ಎಸ್ಜಿಎಸ್ವೈ ಯೋಜನೆ ಸಂಘಗಳ ಆಯ್ಕೆ ವಿಷಯ ಚರ್ಚೆಯಾಯಿತು. <br /> <br /> ಉದ್ಯೋಗಖಾತ್ರಿ ಯೋಜನೆ ಬಳಸಿ ಕ್ರಿಯಾಯೋಜನೆ ರೂಪಿಸುವುದು ಸೇರಿದಂತೆ ಕೆಲ ಪ್ರಮುಖ ತೀರ್ಮಾನ ಕೈಗೊಳ್ಳಲಾಯಿತು.<br /> <br /> ಇದೇ ಸಂದರ್ಭದಲ್ಲಿ ಬಿಎ (ಎಚ್ಇಪಿ) ವಿದ್ಯಾರ್ಥಿಗಳು ಕ್ಷೇತ್ರ ಕಾರ್ಯ ಕಾರ್ಯಕ್ರಮದಡಿ ಗ್ರಾಮ ಪಂಚಾಯಿತಿ ಕಾರ್ಯವಿಧಾನ ತಿಳಿದುಕೊಂಡರು. ವಿದ್ಯಾರ್ಥಿನಿ ಎಂ.ಎಸ್.ಮಹಾಲಕ್ಷ್ಮಿ ಪ್ರಭಾರಿ ಅಧ್ಯಕ್ಷರನ್ನು ಸಂದರ್ಶಿಸಿ ಗ್ರಾಮ ಪಂಚಾಯಿತಿ ಯೋಜನೆ, ಕಾರ್ಯವಿಧಾನಗಳ ಬಗ್ಗೆ ಮಾಹಿತಿ ಪಡೆದರು. ಉಳಿದ ವಿದ್ಯಾರ್ಥಿಗಳು ಪ್ರಶ್ನೋತ್ತರದ ಮೂಲಕ ಸಂದೇಶ ಬಗೆಹರಿಸಿಕೊಂಡರು.<br /> <br /> ಗ್ರಾ.ಪಂ.ಸದಸ್ಯರು, ನೋಡಲ್ ಅಧಿಕಾರಿ ನಂದೀಶ್, ಸಿಬ್ಬಂದಿಗಳಾದ ಜಗದೀಶ್, ರಾಜಶೇಖರ್ ಮತ್ತಿತರರು ಪಾಲ್ಗೊಂಡಿದ್ದರು. ಕಾಲೇಜು ತಂಡದಲ್ಲಿ ಉಪನ್ಯಾಸಕರಾದ ಡಾ. ಹೊನ್ನಾಂಜನಯ್ಯ, ಚಿನ್ನಸ್ವಾಮಿ, ಷಣ್ಮುಖಪ್ಪ ಮತ್ತಿತರರು ಇದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>