<p><strong>ಮಳವಳ್ಳಿ: </strong>ಮಂಗಳವಾರ, ಭೀಮನ ಅಮಾವಸ್ಯೆಯ ಈ ದಿನ ಸಂಪ್ರದಾಯಸ್ಥರು ಸಾಮಾನ್ಯವಾಗಿ ಯಾವುದೇ ಶುಭ ಕಾರ್ಯಗಳನ್ನು ನಡೆಸುವುದಿಲ್ಲ. ಆದರೆ, ತಾಲ್ಲೂಕಿನ ನೆಲಮಾಕನಹಳ್ಳಿಯಲ್ಲಿ ನಿಮಿರ್ಸಿರುವ ‘ಸಂಗಾತಿ ನಿಲಯ’ದ ಗೃಹಪ್ರವೇಶವನ್ನು ನೆರವೇರಿಸಲಾಯಿತು. ಅದರಲ್ಲೂ ಐವರು ವಿಧವೆಯರಿಂದ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ದು ವಿಶೇಷವಾಗಿತ್ತು.<br /> <br /> ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷೆ ದೇವಿ ಹಾಗೂ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಮುಖಂಡ ಎನ್.ಎಲ್.ಭರತ್ರಾಜ್ ದಂಪತಿ ಅವರ ಮನೆಯ ಗೃಹಪ್ರವೇಶವನ್ನು ವಿನೂತನವಾಗಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದರು.<br /> <br /> ಕಾರ್ಯಕ್ರಮವನ್ನು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಜನಸಾಮಾನ್ಯರಿಗಿಂತ ಸುಶಿಕ್ಷಿತರೆ ಹೆಚ್ಚು ಮೌಢ್ಯ ಆಚರಣೆ ಮಾಡುತ್ತಿದ್ದಾರೆ. ಗೃಹಪ್ರವೇಶವನ್ನು ಅಮಾವಾಸ್ಯೆ ದಿನ ಐವರು ವಿಧವೆಯರಿಂದ ದೀಪ ಬೆಳಗಿಸಿ ನೆರವೇರಿಸಿರುವುದು ಶ್ಲಾಘನೀಯ.<br /> <br /> ಇದು ಕೆಲವರಲ್ಲಿ ಆತಂಕ, ಕುತೂಹಲ ಮೂಡಿಸಿದೆ ಎಂದರು. ಹೆಣ್ಣಿಗೆ ಮದುವೆಯಾಗುವ ಮೊದಲು ಹೂವು, ಬಳೆ, ಕುಂಕುಮ ಅಲಂಕಾರಿಕ ವಸ್ತುಗಳಾಗಿರುತ್ತವೆ. ಆದರೆ, ಮದುವೆಯಾಗಿ ಗಂಡ ಸತ್ತರೆ ಎಲ್ಲವನ್ನು ತ್ಯಜಿಸಬೇಕು. ವಿಧವೆಯನ್ನು ಅಪವಿತ್ರಳೆಂದು ಭಾವಿಸಲಾಗುತ್ತದೆ. <br /> <br /> ಇದು ಸರಿಯಲ್ಲ. ಇಂತಹ ವಿಷಯಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಬೇಕಿದೆ. ಪತಿ ಮರಣದ ಬಳಿಕ ಪತ್ನಿ ತಾಳಿ ತೆಗೆಯಬಾರದು ಎಂದು ಅವರು ಹೇಳಿದರು. ವಿಜ್ಞಾನಿ ಜಿ.ಎನ್.ನಾಗರಾಜು ‘ಮೌಢ್ಯಾಚರಣೆ ಮತ್ತು ಜನಸಾಮಾನ್ಯರು’ ಕುರಿತು ವಿಷಯ ಮಂಡನೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಳವಳ್ಳಿ: </strong>ಮಂಗಳವಾರ, ಭೀಮನ ಅಮಾವಸ್ಯೆಯ ಈ ದಿನ ಸಂಪ್ರದಾಯಸ್ಥರು ಸಾಮಾನ್ಯವಾಗಿ ಯಾವುದೇ ಶುಭ ಕಾರ್ಯಗಳನ್ನು ನಡೆಸುವುದಿಲ್ಲ. ಆದರೆ, ತಾಲ್ಲೂಕಿನ ನೆಲಮಾಕನಹಳ್ಳಿಯಲ್ಲಿ ನಿಮಿರ್ಸಿರುವ ‘ಸಂಗಾತಿ ನಿಲಯ’ದ ಗೃಹಪ್ರವೇಶವನ್ನು ನೆರವೇರಿಸಲಾಯಿತು. ಅದರಲ್ಲೂ ಐವರು ವಿಧವೆಯರಿಂದ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ದು ವಿಶೇಷವಾಗಿತ್ತು.<br /> <br /> ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷೆ ದೇವಿ ಹಾಗೂ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಮುಖಂಡ ಎನ್.ಎಲ್.ಭರತ್ರಾಜ್ ದಂಪತಿ ಅವರ ಮನೆಯ ಗೃಹಪ್ರವೇಶವನ್ನು ವಿನೂತನವಾಗಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದರು.<br /> <br /> ಕಾರ್ಯಕ್ರಮವನ್ನು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಜನಸಾಮಾನ್ಯರಿಗಿಂತ ಸುಶಿಕ್ಷಿತರೆ ಹೆಚ್ಚು ಮೌಢ್ಯ ಆಚರಣೆ ಮಾಡುತ್ತಿದ್ದಾರೆ. ಗೃಹಪ್ರವೇಶವನ್ನು ಅಮಾವಾಸ್ಯೆ ದಿನ ಐವರು ವಿಧವೆಯರಿಂದ ದೀಪ ಬೆಳಗಿಸಿ ನೆರವೇರಿಸಿರುವುದು ಶ್ಲಾಘನೀಯ.<br /> <br /> ಇದು ಕೆಲವರಲ್ಲಿ ಆತಂಕ, ಕುತೂಹಲ ಮೂಡಿಸಿದೆ ಎಂದರು. ಹೆಣ್ಣಿಗೆ ಮದುವೆಯಾಗುವ ಮೊದಲು ಹೂವು, ಬಳೆ, ಕುಂಕುಮ ಅಲಂಕಾರಿಕ ವಸ್ತುಗಳಾಗಿರುತ್ತವೆ. ಆದರೆ, ಮದುವೆಯಾಗಿ ಗಂಡ ಸತ್ತರೆ ಎಲ್ಲವನ್ನು ತ್ಯಜಿಸಬೇಕು. ವಿಧವೆಯನ್ನು ಅಪವಿತ್ರಳೆಂದು ಭಾವಿಸಲಾಗುತ್ತದೆ. <br /> <br /> ಇದು ಸರಿಯಲ್ಲ. ಇಂತಹ ವಿಷಯಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಬೇಕಿದೆ. ಪತಿ ಮರಣದ ಬಳಿಕ ಪತ್ನಿ ತಾಳಿ ತೆಗೆಯಬಾರದು ಎಂದು ಅವರು ಹೇಳಿದರು. ವಿಜ್ಞಾನಿ ಜಿ.ಎನ್.ನಾಗರಾಜು ‘ಮೌಢ್ಯಾಚರಣೆ ಮತ್ತು ಜನಸಾಮಾನ್ಯರು’ ಕುರಿತು ವಿಷಯ ಮಂಡನೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>