<p><strong>ಚೆನ್ನೈ: </strong>ಹಾಲಿ ಚಾಂಪಿಯನ್ ರಾಜಸ್ತಾನ ತಂಡದವರು ಎರಡನೇ ದಿನ ಗಳಿಸಿದ್ದು ಕೇವಲ 183 ರನ್. ಎದುರಿಸಿದ್ದು 540 ಎಸೆತ. ರನ್ರೇಟ್ 2.24. ಅಜೇಯ ದ್ವಿಶತಕ ಗಳಿಸಿರುವ ವಿನೀತ್ ಸಕ್ಸೇನಾ ಎದುರಿಸಿದ್ದು 555 ಎಸೆತ! <br /> <br /> ರಾಜಸ್ತಾನ ತಂಡದ ರಕ್ಷಣಾತ್ಮಕ ಆಟಕ್ಕೆ ಸುಸ್ತಾಗಿದ್ದು ತಮಿಳುನಾಡು ಬೌಲರ್ಗಳು. ಮೊದಲ ದಿನ ವಿಕೆಟ್ ಕಬಳಿಸಲು ವಿಫಲರಾಗ್ದ್ದಿದ ಲಕ್ಷ್ಮಿಪತಿ ಬಾಲಾಜಿ ಬಳಗಕ್ಕೆ ಶುಕ್ರವಾರ ಲಭಿಸಿದ್ದು ಕೇವಲ ಎರಡು ವಿಕೆಟ್. <br /> ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ಎರಡನೇ ದಿನದ ಗೌರವ ಕೂಡ ರಾಜಸ್ತಾನ ತಂಡಕ್ಕೆ ಸಲ್ಲಬೇಕು.</p>.<p>ತುಂಬಾ ನಿಧಾನವಾಗಿ ಆಡುತ್ತಾ ಸಾಗಿರುವ ಈ ತಂಡದವರು ಎರಡನೇ ದಿನದ ಆಟದ ಅಂತ್ಯಕ್ಕೆ 180 ಓವರ್ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ 404 ರನ್ ಗಳಿಸಿದ್ದಾರೆ. ಎದುರಿಸಿದ ಒಟ್ಟು ಎಸೆತಗಳು 1080.<br /> <br /> ಆರಂಭಿಕ ಬ್ಯಾಟ್ಸ್ಮನ್ ಸಕ್ಸೇನಾ (ಬ್ಯಾಟಿಂಗ್ 207; 555 ಎಸೆತ, 25 ಬೌಂಡರಿ, 1 ಸಿಕ್ಸರ್) ತಮಿಳುನಾಡು ತಂಡವನ್ನು ಕಾಡುತ್ತಿರುವ ಪರಿ ಅಷ್ಟಿಷ್ಟಲ್ಲ. ನಾಯಕ ಬಾಲಾಜಿ ಎಂಟು ಮಂದಿ ಬೌಲರ್ಗಳನ್ನು ಪ್ರಯೋಗಿಸಿ ಅವರನ್ನು ನಿಯಂತ್ರಿಸಲು ಪ್ರಯತ್ನಿಸಿದರು. ರನ್ವೇಗಕ್ಕೆ ಕಡಿವಾಣ ಬಿತ್ತೇ ಹೊರತು ಸಕ್ಸೇನಾ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಅವರು ಈಗಾಗಲೇ 12 ಗಂಟೆ 27 ನಿಮಿಷವನ್ನು ಕ್ರೀಸ್ನಲ್ಲಿ ಕಳೆದಿದ್ದಾರೆ. <br /> <br /> ಕೊಂಚ ಸಮಾಧಾನವೆಂದರೆ ಎದುರಾಳಿಯ ಆರಂಭಿಕ ಜೊತೆಯಾಟವನ್ನು ಬೇರ್ಪಡಿಸಿದರು. ಅಷ್ಟರಲ್ಲಿ 625 ಎಸೆತಗಳನ್ನು ಎದುರಿಸಿದ್ದ ವಿನೀತ್ ಹಾಗೂ ಆಕಾಶ್ ಚೋಪ್ರಾ ಜೋಡಿ ಮೊದಲ ವಿಕೆಟ್ಗೆ 236 ರನ್ ಸೇರಿಸಿತ್ತು. ಆದರೆ ಚೋಪ್ರಾ (94; 307 ಎಸೆತ, 10 ಬೌಂಡರಿ) ಕೇವಲ 6 ರನ್ಗಳಿಂದ ಶತಕ ತಪ್ಪಿಸಿಕೊಂಡರು. <br /> <br /> ಈ ಹಂತದಲ್ಲಿ ಜೊತೆಗೂಡಿದ ವಿನೀತ್ ಹಾಗೂ ನಾಯಕ ಹೃಷಿಕೇಶ್ ಕಾನಿಟ್ಕರ್ ಮತ್ತೆ ಎದುರಾಳಿಯನ್ನು ಸತಾಯಿಸಿದರು. ಇವರಿಬ್ಬರು ಎರಡನೇ ವಿಕೆಟ್ಗೆ 126 ರನ್ ಕಲೆ ಹಾಕಿದರು. ಬಳಿಕ ಆಗಮಿಸಿದ ರಾಬಿನ್ ಬಿಸ್ತ್ ಕೂಡ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ: </strong>ಹಾಲಿ ಚಾಂಪಿಯನ್ ರಾಜಸ್ತಾನ ತಂಡದವರು ಎರಡನೇ ದಿನ ಗಳಿಸಿದ್ದು ಕೇವಲ 183 ರನ್. ಎದುರಿಸಿದ್ದು 540 ಎಸೆತ. ರನ್ರೇಟ್ 2.24. ಅಜೇಯ ದ್ವಿಶತಕ ಗಳಿಸಿರುವ ವಿನೀತ್ ಸಕ್ಸೇನಾ ಎದುರಿಸಿದ್ದು 555 ಎಸೆತ! <br /> <br /> ರಾಜಸ್ತಾನ ತಂಡದ ರಕ್ಷಣಾತ್ಮಕ ಆಟಕ್ಕೆ ಸುಸ್ತಾಗಿದ್ದು ತಮಿಳುನಾಡು ಬೌಲರ್ಗಳು. ಮೊದಲ ದಿನ ವಿಕೆಟ್ ಕಬಳಿಸಲು ವಿಫಲರಾಗ್ದ್ದಿದ ಲಕ್ಷ್ಮಿಪತಿ ಬಾಲಾಜಿ ಬಳಗಕ್ಕೆ ಶುಕ್ರವಾರ ಲಭಿಸಿದ್ದು ಕೇವಲ ಎರಡು ವಿಕೆಟ್. <br /> ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ಎರಡನೇ ದಿನದ ಗೌರವ ಕೂಡ ರಾಜಸ್ತಾನ ತಂಡಕ್ಕೆ ಸಲ್ಲಬೇಕು.</p>.<p>ತುಂಬಾ ನಿಧಾನವಾಗಿ ಆಡುತ್ತಾ ಸಾಗಿರುವ ಈ ತಂಡದವರು ಎರಡನೇ ದಿನದ ಆಟದ ಅಂತ್ಯಕ್ಕೆ 180 ಓವರ್ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ 404 ರನ್ ಗಳಿಸಿದ್ದಾರೆ. ಎದುರಿಸಿದ ಒಟ್ಟು ಎಸೆತಗಳು 1080.<br /> <br /> ಆರಂಭಿಕ ಬ್ಯಾಟ್ಸ್ಮನ್ ಸಕ್ಸೇನಾ (ಬ್ಯಾಟಿಂಗ್ 207; 555 ಎಸೆತ, 25 ಬೌಂಡರಿ, 1 ಸಿಕ್ಸರ್) ತಮಿಳುನಾಡು ತಂಡವನ್ನು ಕಾಡುತ್ತಿರುವ ಪರಿ ಅಷ್ಟಿಷ್ಟಲ್ಲ. ನಾಯಕ ಬಾಲಾಜಿ ಎಂಟು ಮಂದಿ ಬೌಲರ್ಗಳನ್ನು ಪ್ರಯೋಗಿಸಿ ಅವರನ್ನು ನಿಯಂತ್ರಿಸಲು ಪ್ರಯತ್ನಿಸಿದರು. ರನ್ವೇಗಕ್ಕೆ ಕಡಿವಾಣ ಬಿತ್ತೇ ಹೊರತು ಸಕ್ಸೇನಾ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಅವರು ಈಗಾಗಲೇ 12 ಗಂಟೆ 27 ನಿಮಿಷವನ್ನು ಕ್ರೀಸ್ನಲ್ಲಿ ಕಳೆದಿದ್ದಾರೆ. <br /> <br /> ಕೊಂಚ ಸಮಾಧಾನವೆಂದರೆ ಎದುರಾಳಿಯ ಆರಂಭಿಕ ಜೊತೆಯಾಟವನ್ನು ಬೇರ್ಪಡಿಸಿದರು. ಅಷ್ಟರಲ್ಲಿ 625 ಎಸೆತಗಳನ್ನು ಎದುರಿಸಿದ್ದ ವಿನೀತ್ ಹಾಗೂ ಆಕಾಶ್ ಚೋಪ್ರಾ ಜೋಡಿ ಮೊದಲ ವಿಕೆಟ್ಗೆ 236 ರನ್ ಸೇರಿಸಿತ್ತು. ಆದರೆ ಚೋಪ್ರಾ (94; 307 ಎಸೆತ, 10 ಬೌಂಡರಿ) ಕೇವಲ 6 ರನ್ಗಳಿಂದ ಶತಕ ತಪ್ಪಿಸಿಕೊಂಡರು. <br /> <br /> ಈ ಹಂತದಲ್ಲಿ ಜೊತೆಗೂಡಿದ ವಿನೀತ್ ಹಾಗೂ ನಾಯಕ ಹೃಷಿಕೇಶ್ ಕಾನಿಟ್ಕರ್ ಮತ್ತೆ ಎದುರಾಳಿಯನ್ನು ಸತಾಯಿಸಿದರು. ಇವರಿಬ್ಬರು ಎರಡನೇ ವಿಕೆಟ್ಗೆ 126 ರನ್ ಕಲೆ ಹಾಕಿದರು. ಬಳಿಕ ಆಗಮಿಸಿದ ರಾಬಿನ್ ಬಿಸ್ತ್ ಕೂಡ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>