<p><strong>ಸ್ಯಾನ್ ಫ್ರಾನ್ಸಿಸ್ಕೊ/ವಾಷಿಂಗ್ಟನ್ (ಪಿಟಿಐ)</strong>: ದಕ್ಷಿಣ ಕೊರಿಯಾದ ಏಷಿಯಾನ ಏರ್ಲೈನ್ಸ್ನ ವಿಮಾನವೊಂದು ಇಲ್ಲಿನ ವಿಮಾನನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಇಳಿಯುತ್ತಿರುವ ಸಂದರ್ಭದಲ್ಲಿ ರನ್ವೇಗೆ ಅಪ್ಪಳಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.<br /> <br /> ಘಟನೆಯಲ್ಲಿ 180 ಜನರು ಗಾಯಗೊಂಡಿದ್ದಾರೆ. ಮೂವರು ಭಾರತೀಯರು ಸೇರಿದಂತೆ ವಿಮಾನದಲ್ಲಿ 307 ಜನರು ಪ್ರಯಾಣಿಸುತ್ತಿದ್ದರು. ಭಾರತದ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.<br /> <br /> ಸ್ಥಳೀಯ ಕಾಲಮಾನ ರಾತ್ರಿ 11.30ರ ಸುಮಾರಿಗೆ ಬೋಯಿಂಗ್ ವಿಮಾನವು ರನ್ವೇಗೆ ಅಪ್ಪಳಿಸಿದ ಸಂದರ್ಭದಲ್ಲಿ ಬೆಂಕಿ ಹತ್ತಿಕೊಂಡಿತಾದರೂ ಪವಾಡಸದೃಶವಾಗಿ ಭಾರಿ ದುರಂತವೊಂದು ತಪ್ಪಿತು.<br /> <br /> ದುರ್ಘಟನೆಯಲ್ಲಿ ಚೀನಾದ ಇಬ್ಬರು ಶಾಲಾ ಮಕ್ಕಳು ಮೃತಪಟ್ಟಿದ್ದಾರೆ. ಇಬ್ಬರೂ ಚೀನಾದವರಾಗಿದ್ದಾರೆ. 181 ಜನರು ಗಾಯಗೊಂಡಿದ್ದಾರೆ. ಹೆಚ್ಚಿನವರಿಗೆ ಸಣ್ಣಪುಟ್ಟ ಗಾಯಗಳಾಗಿವೆಯಷ್ಟೇ ಎಂದು ದಕ್ಷಿಣ ಕೊರಿಯಾದ ಎರಡನೇ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಏಷಿಯಾನ ಏರ್ಲೈನ್ಸ್ ಹೇಳಿದೆ.<br /> <br /> ಮಗು ಸೇರಿದಂತೆ ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದೂ ಸಂಸ್ಥೆಯ ಮೂಲಗಳು ವಿವರಿಸಿವೆ. ಸೋಲ್ನಿಂದ ಸ್ಯಾನ್ಫ್ರಾನ್ಸಿಸ್ಕೊಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿದ್ದ ಮೂವರು ಭಾರತೀಯರಲ್ಲಿ ಒಬ್ಬರು ತೀವ್ರಗಾಯಗೊಂಡಿದ್ದು, ಅವರ ಭುಜದ ಎಲುಬು ಮುರಿದಿದೆ. ಉಳಿದಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಭಾರತದ ರಾಯಭಾರಿಯಾಗಿರುವ ವಿಷ್ಣು ಪ್ರಕಾಶ್ ಹೇಳಿದ್ದಾರೆ.<br /> <br /> ವಿಮಾನದಲ್ಲಿ 291 ಪ್ರಯಾಣಿಕರು ಮತ್ತು 16 ಸಿಬ್ಬಂದಿಗಳಿದ್ದರು ಎಂದು ಏಷಿಯಾನ ಏರ್ಲೈನ್ಸ್ ತಿಳಿಸಿದೆ. `ಅವಘಡಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಂಸ್ಥೆ ಶ್ರಮಿಸುತ್ತಿದೆ. ಅಮೆರಿಕದ ಭದ್ರತಾ ಸಂಸ್ಥೆಗಳು ನಡೆಸಲಿರುವ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು' ಎಂದು ಏರ್ಲೈನ್ಸ್ ತಿಳಿಸಿದೆ.</p>.<p><strong>`ಪಾರಾಗಿದ್ದೇ ಪವಾಡ'<br /> ಸ್ಯಾನ್ ಫ್ರಾನ್ಸಿಸ್ಕೊ (ಪಿಟಿಐ):</strong> `ನಾವು ಪ್ರಾಣಾಪಾಯದಿಂದ ಪಾರಾಗಿದ್ದೇ ಬಹು ದೊಡ್ಡ ಪವಾಡ' ಎಂದು ರನ್ವೇಗೆ ಅಪ್ಪಳಿಸಿದ ಏಷಿಯಾನ ಏರ್ಲೈನ್ಸ್ ವಿಮಾನದಲ್ಲಿ ಕುಟುಂಬದ ಜೊತೆ ಪ್ರಯಾಣಿಸುತ್ತಿದ್ದ ಭಾರತದ ವೇದಪಾಲ್ ಸಿಂಗ್ ಹೇಳಿದ್ದಾರೆ.<br /> <br /> ವಿಮಾನ ಅಪಘಾತಕ್ಕೀಡಾಗುವುದಕ್ಕಿಂತಲೂ ಮೊದಲು ಪ್ರಯಾಣಿಕರಿಗೆ ಎಚ್ಚರಿಕೆ ಸಂದೇಶ ನೀಡಿರಲಿಲ್ಲ ಎಂದೂ ಅವರು ಹೇಳಿದ್ದಾರೆ.<br /> <br /> `ಎಲ್ಲೋ ಭಾರಿ ಪ್ರಮಾದವಾಗಿದೆ ಎಂದು ತಿಳಿದಿತ್ತು. ಆದರೆ, ಪೈಲಟ್ ಆಗಲೀ, ವಿಮಾನದ ಇತರ ಸಿಬ್ಬಂದಿಯಾಗಲೀ ನಮಗೆ ಮುನ್ನೆಚ್ಚರಿಕೆ ಸಂದೇಶ ನೀಡಿರಲಿಲ್ಲ' ಎಂದು ಆಘಾತಕ್ಕೊಳಗಾಗಿದ್ದ ಸಿಂಗ್ ಹೇಳಿದ್ದಾರೆ.<br /> <br /> ವಿಮಾನದ ಮಧ್ಯ ಭಾಗದಲ್ಲಿ ಕುಟುಂಬದ ಜತೆ ಕುಳಿತಿದ್ದ ಸಿಂಗ್ ಅವರ ಭುಜದ ಎಲುಬು ಮುರಿದಿದೆ. ಕೇವಲ 10 ಸೆಕೆಂಡುಗಳಲ್ಲಿ ನಡೆದು ಹೋದ ಅನಾಹುತದ ಸಂದರ್ಭದಲ್ಲಿ ಲಗೇಜ್ಗಳೆಲ್ಲಾ ಪ್ರಯಾಣಕರ ತಲೆ ಮೇಲೆ ಬೀಳುತ್ತಿದ್ದವು ಎಂದು ಸಿಂಗ್ ಅವರ 15 ವರ್ಷದ ಪುತ್ರ ಹೇಳಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸ್ಯಾನ್ ಫ್ರಾನ್ಸಿಸ್ಕೊ/ವಾಷಿಂಗ್ಟನ್ (ಪಿಟಿಐ)</strong>: ದಕ್ಷಿಣ ಕೊರಿಯಾದ ಏಷಿಯಾನ ಏರ್ಲೈನ್ಸ್ನ ವಿಮಾನವೊಂದು ಇಲ್ಲಿನ ವಿಮಾನನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಇಳಿಯುತ್ತಿರುವ ಸಂದರ್ಭದಲ್ಲಿ ರನ್ವೇಗೆ ಅಪ್ಪಳಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.<br /> <br /> ಘಟನೆಯಲ್ಲಿ 180 ಜನರು ಗಾಯಗೊಂಡಿದ್ದಾರೆ. ಮೂವರು ಭಾರತೀಯರು ಸೇರಿದಂತೆ ವಿಮಾನದಲ್ಲಿ 307 ಜನರು ಪ್ರಯಾಣಿಸುತ್ತಿದ್ದರು. ಭಾರತದ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.<br /> <br /> ಸ್ಥಳೀಯ ಕಾಲಮಾನ ರಾತ್ರಿ 11.30ರ ಸುಮಾರಿಗೆ ಬೋಯಿಂಗ್ ವಿಮಾನವು ರನ್ವೇಗೆ ಅಪ್ಪಳಿಸಿದ ಸಂದರ್ಭದಲ್ಲಿ ಬೆಂಕಿ ಹತ್ತಿಕೊಂಡಿತಾದರೂ ಪವಾಡಸದೃಶವಾಗಿ ಭಾರಿ ದುರಂತವೊಂದು ತಪ್ಪಿತು.<br /> <br /> ದುರ್ಘಟನೆಯಲ್ಲಿ ಚೀನಾದ ಇಬ್ಬರು ಶಾಲಾ ಮಕ್ಕಳು ಮೃತಪಟ್ಟಿದ್ದಾರೆ. ಇಬ್ಬರೂ ಚೀನಾದವರಾಗಿದ್ದಾರೆ. 181 ಜನರು ಗಾಯಗೊಂಡಿದ್ದಾರೆ. ಹೆಚ್ಚಿನವರಿಗೆ ಸಣ್ಣಪುಟ್ಟ ಗಾಯಗಳಾಗಿವೆಯಷ್ಟೇ ಎಂದು ದಕ್ಷಿಣ ಕೊರಿಯಾದ ಎರಡನೇ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಏಷಿಯಾನ ಏರ್ಲೈನ್ಸ್ ಹೇಳಿದೆ.<br /> <br /> ಮಗು ಸೇರಿದಂತೆ ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದೂ ಸಂಸ್ಥೆಯ ಮೂಲಗಳು ವಿವರಿಸಿವೆ. ಸೋಲ್ನಿಂದ ಸ್ಯಾನ್ಫ್ರಾನ್ಸಿಸ್ಕೊಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿದ್ದ ಮೂವರು ಭಾರತೀಯರಲ್ಲಿ ಒಬ್ಬರು ತೀವ್ರಗಾಯಗೊಂಡಿದ್ದು, ಅವರ ಭುಜದ ಎಲುಬು ಮುರಿದಿದೆ. ಉಳಿದಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಭಾರತದ ರಾಯಭಾರಿಯಾಗಿರುವ ವಿಷ್ಣು ಪ್ರಕಾಶ್ ಹೇಳಿದ್ದಾರೆ.<br /> <br /> ವಿಮಾನದಲ್ಲಿ 291 ಪ್ರಯಾಣಿಕರು ಮತ್ತು 16 ಸಿಬ್ಬಂದಿಗಳಿದ್ದರು ಎಂದು ಏಷಿಯಾನ ಏರ್ಲೈನ್ಸ್ ತಿಳಿಸಿದೆ. `ಅವಘಡಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಂಸ್ಥೆ ಶ್ರಮಿಸುತ್ತಿದೆ. ಅಮೆರಿಕದ ಭದ್ರತಾ ಸಂಸ್ಥೆಗಳು ನಡೆಸಲಿರುವ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು' ಎಂದು ಏರ್ಲೈನ್ಸ್ ತಿಳಿಸಿದೆ.</p>.<p><strong>`ಪಾರಾಗಿದ್ದೇ ಪವಾಡ'<br /> ಸ್ಯಾನ್ ಫ್ರಾನ್ಸಿಸ್ಕೊ (ಪಿಟಿಐ):</strong> `ನಾವು ಪ್ರಾಣಾಪಾಯದಿಂದ ಪಾರಾಗಿದ್ದೇ ಬಹು ದೊಡ್ಡ ಪವಾಡ' ಎಂದು ರನ್ವೇಗೆ ಅಪ್ಪಳಿಸಿದ ಏಷಿಯಾನ ಏರ್ಲೈನ್ಸ್ ವಿಮಾನದಲ್ಲಿ ಕುಟುಂಬದ ಜೊತೆ ಪ್ರಯಾಣಿಸುತ್ತಿದ್ದ ಭಾರತದ ವೇದಪಾಲ್ ಸಿಂಗ್ ಹೇಳಿದ್ದಾರೆ.<br /> <br /> ವಿಮಾನ ಅಪಘಾತಕ್ಕೀಡಾಗುವುದಕ್ಕಿಂತಲೂ ಮೊದಲು ಪ್ರಯಾಣಿಕರಿಗೆ ಎಚ್ಚರಿಕೆ ಸಂದೇಶ ನೀಡಿರಲಿಲ್ಲ ಎಂದೂ ಅವರು ಹೇಳಿದ್ದಾರೆ.<br /> <br /> `ಎಲ್ಲೋ ಭಾರಿ ಪ್ರಮಾದವಾಗಿದೆ ಎಂದು ತಿಳಿದಿತ್ತು. ಆದರೆ, ಪೈಲಟ್ ಆಗಲೀ, ವಿಮಾನದ ಇತರ ಸಿಬ್ಬಂದಿಯಾಗಲೀ ನಮಗೆ ಮುನ್ನೆಚ್ಚರಿಕೆ ಸಂದೇಶ ನೀಡಿರಲಿಲ್ಲ' ಎಂದು ಆಘಾತಕ್ಕೊಳಗಾಗಿದ್ದ ಸಿಂಗ್ ಹೇಳಿದ್ದಾರೆ.<br /> <br /> ವಿಮಾನದ ಮಧ್ಯ ಭಾಗದಲ್ಲಿ ಕುಟುಂಬದ ಜತೆ ಕುಳಿತಿದ್ದ ಸಿಂಗ್ ಅವರ ಭುಜದ ಎಲುಬು ಮುರಿದಿದೆ. ಕೇವಲ 10 ಸೆಕೆಂಡುಗಳಲ್ಲಿ ನಡೆದು ಹೋದ ಅನಾಹುತದ ಸಂದರ್ಭದಲ್ಲಿ ಲಗೇಜ್ಗಳೆಲ್ಲಾ ಪ್ರಯಾಣಕರ ತಲೆ ಮೇಲೆ ಬೀಳುತ್ತಿದ್ದವು ಎಂದು ಸಿಂಗ್ ಅವರ 15 ವರ್ಷದ ಪುತ್ರ ಹೇಳಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>