<p>ಹಲವು ಪಂಥ- ಜಾತಿಗಳ, ಬಿದಿರ ನಾಡು, ಜೈನಕಾಶಿ ಎಂದೇ ಗುರುತಿಸಿಕೊಂಡ ಬೀಡು ಮೂಡುಬಿದಿರೆ ಈಗ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ತವರೂರು. ಕಳೆದ ಒಂದು ದಶಕದಿಂದ ಪರಂಪರೆಯ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಇಲ್ಲಿ ಸಂಭ್ರಮದಿಂದ ನಡೆಯುತ್ತಿದೆ.<br /> <br /> `ಏಕವ್ಯಕ್ತಿ~ಯಾಗಿ ಕಲೆಯ ಹೊರಗೆ ಮತ್ತು ಒಳಗೆ ಆಳವಾಗಿ ಹೊಕ್ಕು, ಸಮಗ್ರವಾಗಿ ಸ್ಪಂದಿಸಿ ಕಲಾಸಕ್ತರ ಮೆಚ್ಚುಗೆಗೆ ಪಾತ್ರರಾಗಿರುವ ಮೂಡುಬಿದಿರೆಯ ಡಾ. ಮೋಹನ ಆಳ್ವ ಅವರ ಪರಂಪರೆ, ಕಲಾಸೇವೆ, ಸಾಂಸ್ಕೃತಿಕ ಪ್ರೀತಿ ಅನನ್ಯ. `ಆಳ್ವಾಸ್ ವಿರಾಸತ್~ನಂತಹ ಕಲಾಮೇಳವನ್ನು ಸಂಘಟಿಸುವ ಮೂಲಕ ಜನಮನವನ್ನು ಆರೋಗ್ಯ ಪೂರ್ಣವಾಗಿಟ್ಟು, ಇತರ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಮಾಡುವ ಮಾಂತ್ರಿಕ ಶಕ್ತಿ ಕಲಾವಿದರಲ್ಲಿ ಇದೆ ಎಂಬುದನ್ನು ಇಲ್ಲಿ ಆಳ್ವ ತೋರಿಸಿಕೊಟ್ಟಿದ್ದಾರೆ.<br /> <br /> ಸಂಗೀತ, ಕಥಕ್ ನೃತ್ಯ ವೈಭವಗಳ ಸಂಗಮದೊಂದಿಗೆ ಜ. 5ರಿಂದ 8ರ ವರೆಗೆ ನಡೆಯುವ `ಆಳ್ವಾಸ್ ವಿರಾಸತ್~ ರಾಷ್ಟ್ರೀಯ ಉತ್ಸವ ಅದ್ಭುತ ಲೋಕವೊಂದನ್ನು ತೆರೆದಿಡಲಿದೆ. <br /> <br /> ಮಿಜಾರಿನ ಶೋಭಾವನದ ಸುತ್ತಮುತ್ತ ಹಸಿರು ಐಸಿರಿಯ ತಾಣದಲ್ಲಿ ದಾರಿಯುದ್ದಕ್ಕೂ ಬಣ್ಣ ಬಣ್ಣದ ಸಾಂಪ್ರದಾಯಿಕ ಬೆಳಕಿನ ಆಕಾಶ ಬುಟ್ಟಿಗಳ ಚೆಲುವು, ವಿರಾಸತ್ ಮುಖ್ಯ ವೇದಿಕೆಗೆ ಮುಕುಟ ಮಣಿಯಂತೆ ಶೋಭೀಸುವ ಕರಾವಳಿಯ ಹೆಮ್ಮೆಯ ಕಲೆ `ಯಕ್ಷಗಾನ~ದ ಕಿರೀಟ. ಜಾನಪದ ಸೊಗಡನ್ನು ಬಿಂಬಿಸುವ ಕಲಾ ಕುಸುರಿಗಳು ಕಣ್ಮನಗಳಿಗೆ ಮುದ ನೀಡಲಿವೆ. <br /> <br /> ರಾಜ್ಯದ ಮೂಲೆಮೂಲೆಗಳ ಸಾವಿರಾರು ಕಲಾಪ್ರೇಮಿಗಳಲ್ಲದೆ ವಿದೇಶದಿಂದಲೂ ಬಂದ ಅತಿಥಿಗಳಿಗೂ ಕಲೆಗಳ, ನಾದ, ನಿನಾದಗಳ ಮಾಧುರ್ಯವನ್ನು ಇದು ಉಣಬಡಿಸಲಿದೆ.<br /> <br /> ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಉದ್ಘಾಟನೆ ಮಾಡಲಿದ್ದಾರೆ. ಕೋಲ್ಕತ್ತದ ಪ್ರಸಿದ್ಧ ಹಿಂದುಸ್ತಾನಿ ಗಾಯಕ ಪದ್ಮಶ್ರೀ ಪಂಡಿತ್ ಅಜೊಯ್ ಚಕ್ರವರ್ತಿ ಅವರು ಈ ಸಲದ `ವಿರಾಸತ್ ಪ್ರಶಸ್ತಿ~ಗೆ ಭಾಜನರಾಗಿದ್ದಾರೆ. <br /> <br /> ಗ್ರಾಮಿ ಪ್ರಶಸ್ತಿ ಪುರಸ್ಕೃತ ಪಂಡಿತ್ ವಿಶ್ವಮೋಹನ್ ಭಟ್ ಅವರ ಮೋಹನ ವೀಣೆ ಹಾಗೂ ಪಂಡಿತ್ ಪ್ರವೀಣ್ ಗೋಡ್ಖಿಂಡಿ ಕೊಳಲು ವಾದನದ ಅಪೂರ್ವ ಜುಗಲ್ಬಂದಿ, ಒಡಿಸ್ಸಿ ನೃತ್ಯ ವೈಭವ, ನಿಶಾನ್ ಇ ಖಾಲ್ಸಾ ತಾರನ್ ಅವರಿಂದ ಪಂಜಾಬಿನ ರೋಮಾಂಚಕ ಭಾಂಗ್ರಾ ಮತ್ತು ಜಾನಪದ ನೃತ್ಯ, ಮಲೇಷ್ಯದ ರಾಮ್ಲಿ ಇಬ್ರಾಹಿಂ ಮತ್ತು ತಂಡವರಿಂದ ಸ್ಟೆಲ್ಬೌಂಡ್ ಸಮೂಹ ನೃತ್ಯ ಮನಸ್ಸಿಗೆ ಮುದ ನೀಡಲಿದೆ.<br /> <br /> ಹೆಜ್ಜೆ-ಗೆಜ್ಜೆಗಳ ನಾದಕ್ಕೆ ಹಸಿರು ವನಸಿರಿಯ ಶೋಭಾವನದ ಗಿಡ ಮರ ಬಳ್ಳಿಗಳೂ ತಲೆತೂಗಲಿವೆ. 4 ದಿನಗಳ ಕಾರ್ಯಕ್ರಮ ಕಲಾ ಆಸಕ್ತರ ಮನ ತಣಿಸಲಿದೆ.<br /> ಒಟ್ಟಿನಲ್ಲಿ ಕಲೆಯ ಪರಂಪರೆಯ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಕಲೆಯ ಸಿರಿತನ ಉಳಿಸಿಕೊಂಡು ಬಂದಿರುವ `ಆಳ್ವಾಸ್ ವಿರಾಸತ್~ ತನ್ನದೇ ಛಾಪು ಮೂಡಿಸಿ ಸುಮಾರು 20 ವರ್ಷಗಳಿಂದ ಯಶಸ್ವಿ ಹೆಜ್ಜೆ ಇಡುತ್ತ ಬಂದಿದೆ. ಈ ಮೂಲಕ ದೇಶದ ವಿವಿಧ ಕಲಾ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ಕಲೆ ಹಾಕುವ ಮೋಹನ ಆಳ್ವ ಅವರ ಪ್ರಯತ್ನಕ್ಕೆ ಎಲ್ಲೆಡೆ ಶ್ಲಾಘನೆಯೂ ದೊರೆಯುತ್ತಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಲವು ಪಂಥ- ಜಾತಿಗಳ, ಬಿದಿರ ನಾಡು, ಜೈನಕಾಶಿ ಎಂದೇ ಗುರುತಿಸಿಕೊಂಡ ಬೀಡು ಮೂಡುಬಿದಿರೆ ಈಗ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ತವರೂರು. ಕಳೆದ ಒಂದು ದಶಕದಿಂದ ಪರಂಪರೆಯ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಇಲ್ಲಿ ಸಂಭ್ರಮದಿಂದ ನಡೆಯುತ್ತಿದೆ.<br /> <br /> `ಏಕವ್ಯಕ್ತಿ~ಯಾಗಿ ಕಲೆಯ ಹೊರಗೆ ಮತ್ತು ಒಳಗೆ ಆಳವಾಗಿ ಹೊಕ್ಕು, ಸಮಗ್ರವಾಗಿ ಸ್ಪಂದಿಸಿ ಕಲಾಸಕ್ತರ ಮೆಚ್ಚುಗೆಗೆ ಪಾತ್ರರಾಗಿರುವ ಮೂಡುಬಿದಿರೆಯ ಡಾ. ಮೋಹನ ಆಳ್ವ ಅವರ ಪರಂಪರೆ, ಕಲಾಸೇವೆ, ಸಾಂಸ್ಕೃತಿಕ ಪ್ರೀತಿ ಅನನ್ಯ. `ಆಳ್ವಾಸ್ ವಿರಾಸತ್~ನಂತಹ ಕಲಾಮೇಳವನ್ನು ಸಂಘಟಿಸುವ ಮೂಲಕ ಜನಮನವನ್ನು ಆರೋಗ್ಯ ಪೂರ್ಣವಾಗಿಟ್ಟು, ಇತರ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಮಾಡುವ ಮಾಂತ್ರಿಕ ಶಕ್ತಿ ಕಲಾವಿದರಲ್ಲಿ ಇದೆ ಎಂಬುದನ್ನು ಇಲ್ಲಿ ಆಳ್ವ ತೋರಿಸಿಕೊಟ್ಟಿದ್ದಾರೆ.<br /> <br /> ಸಂಗೀತ, ಕಥಕ್ ನೃತ್ಯ ವೈಭವಗಳ ಸಂಗಮದೊಂದಿಗೆ ಜ. 5ರಿಂದ 8ರ ವರೆಗೆ ನಡೆಯುವ `ಆಳ್ವಾಸ್ ವಿರಾಸತ್~ ರಾಷ್ಟ್ರೀಯ ಉತ್ಸವ ಅದ್ಭುತ ಲೋಕವೊಂದನ್ನು ತೆರೆದಿಡಲಿದೆ. <br /> <br /> ಮಿಜಾರಿನ ಶೋಭಾವನದ ಸುತ್ತಮುತ್ತ ಹಸಿರು ಐಸಿರಿಯ ತಾಣದಲ್ಲಿ ದಾರಿಯುದ್ದಕ್ಕೂ ಬಣ್ಣ ಬಣ್ಣದ ಸಾಂಪ್ರದಾಯಿಕ ಬೆಳಕಿನ ಆಕಾಶ ಬುಟ್ಟಿಗಳ ಚೆಲುವು, ವಿರಾಸತ್ ಮುಖ್ಯ ವೇದಿಕೆಗೆ ಮುಕುಟ ಮಣಿಯಂತೆ ಶೋಭೀಸುವ ಕರಾವಳಿಯ ಹೆಮ್ಮೆಯ ಕಲೆ `ಯಕ್ಷಗಾನ~ದ ಕಿರೀಟ. ಜಾನಪದ ಸೊಗಡನ್ನು ಬಿಂಬಿಸುವ ಕಲಾ ಕುಸುರಿಗಳು ಕಣ್ಮನಗಳಿಗೆ ಮುದ ನೀಡಲಿವೆ. <br /> <br /> ರಾಜ್ಯದ ಮೂಲೆಮೂಲೆಗಳ ಸಾವಿರಾರು ಕಲಾಪ್ರೇಮಿಗಳಲ್ಲದೆ ವಿದೇಶದಿಂದಲೂ ಬಂದ ಅತಿಥಿಗಳಿಗೂ ಕಲೆಗಳ, ನಾದ, ನಿನಾದಗಳ ಮಾಧುರ್ಯವನ್ನು ಇದು ಉಣಬಡಿಸಲಿದೆ.<br /> <br /> ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಉದ್ಘಾಟನೆ ಮಾಡಲಿದ್ದಾರೆ. ಕೋಲ್ಕತ್ತದ ಪ್ರಸಿದ್ಧ ಹಿಂದುಸ್ತಾನಿ ಗಾಯಕ ಪದ್ಮಶ್ರೀ ಪಂಡಿತ್ ಅಜೊಯ್ ಚಕ್ರವರ್ತಿ ಅವರು ಈ ಸಲದ `ವಿರಾಸತ್ ಪ್ರಶಸ್ತಿ~ಗೆ ಭಾಜನರಾಗಿದ್ದಾರೆ. <br /> <br /> ಗ್ರಾಮಿ ಪ್ರಶಸ್ತಿ ಪುರಸ್ಕೃತ ಪಂಡಿತ್ ವಿಶ್ವಮೋಹನ್ ಭಟ್ ಅವರ ಮೋಹನ ವೀಣೆ ಹಾಗೂ ಪಂಡಿತ್ ಪ್ರವೀಣ್ ಗೋಡ್ಖಿಂಡಿ ಕೊಳಲು ವಾದನದ ಅಪೂರ್ವ ಜುಗಲ್ಬಂದಿ, ಒಡಿಸ್ಸಿ ನೃತ್ಯ ವೈಭವ, ನಿಶಾನ್ ಇ ಖಾಲ್ಸಾ ತಾರನ್ ಅವರಿಂದ ಪಂಜಾಬಿನ ರೋಮಾಂಚಕ ಭಾಂಗ್ರಾ ಮತ್ತು ಜಾನಪದ ನೃತ್ಯ, ಮಲೇಷ್ಯದ ರಾಮ್ಲಿ ಇಬ್ರಾಹಿಂ ಮತ್ತು ತಂಡವರಿಂದ ಸ್ಟೆಲ್ಬೌಂಡ್ ಸಮೂಹ ನೃತ್ಯ ಮನಸ್ಸಿಗೆ ಮುದ ನೀಡಲಿದೆ.<br /> <br /> ಹೆಜ್ಜೆ-ಗೆಜ್ಜೆಗಳ ನಾದಕ್ಕೆ ಹಸಿರು ವನಸಿರಿಯ ಶೋಭಾವನದ ಗಿಡ ಮರ ಬಳ್ಳಿಗಳೂ ತಲೆತೂಗಲಿವೆ. 4 ದಿನಗಳ ಕಾರ್ಯಕ್ರಮ ಕಲಾ ಆಸಕ್ತರ ಮನ ತಣಿಸಲಿದೆ.<br /> ಒಟ್ಟಿನಲ್ಲಿ ಕಲೆಯ ಪರಂಪರೆಯ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಕಲೆಯ ಸಿರಿತನ ಉಳಿಸಿಕೊಂಡು ಬಂದಿರುವ `ಆಳ್ವಾಸ್ ವಿರಾಸತ್~ ತನ್ನದೇ ಛಾಪು ಮೂಡಿಸಿ ಸುಮಾರು 20 ವರ್ಷಗಳಿಂದ ಯಶಸ್ವಿ ಹೆಜ್ಜೆ ಇಡುತ್ತ ಬಂದಿದೆ. ಈ ಮೂಲಕ ದೇಶದ ವಿವಿಧ ಕಲಾ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ಕಲೆ ಹಾಕುವ ಮೋಹನ ಆಳ್ವ ಅವರ ಪ್ರಯತ್ನಕ್ಕೆ ಎಲ್ಲೆಡೆ ಶ್ಲಾಘನೆಯೂ ದೊರೆಯುತ್ತಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>