<p><strong>ಹಾವೇರಿ: </strong>ನಗರಸಭೆಯು ನೀರಿನ ಕರವನ್ನು ರೂ. 55ರಿಂದ 120 ರೂ.ಗಳಿಗೆ ಏರಿಕೆ ಮಾಡಿರುವುದನ್ನು ವಿರೋಧಿಸಿ ಹಾಗೂ ತಕ್ಷಣವೇ ಏರಿಕೆಯಾದ ಕರವನ್ನು ಇಳಿಸಬೇಕೆಂದು ಇಲ್ಲಿನ ನಗರಸಭೆ ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದ್ದಾರೆ.<br /> <br /> ಮಂಗಳವಾರ ನಗರಸಭೆ ಆಯುಕ್ತ ಎಚ್.ಕೆ.ರುದ್ರಪ್ಪ ಅವರಿಗೆ ಮನವಿ ಸಲ್ಲಿಸಿರುವ ನಗರಸಭೆ ವಿರೋಧ ಪಕ್ಷದ ಸದಸ್ಯರು, `ನಗರದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. 10-15 ದಿನಕ್ಕೊಮ್ಮೆ ನೀರು ನೀಡಲಾಗುತ್ತದೆ. ಈಗಾಗಲೇ ಕೆಲವಡೆ ನೀರಿಗಾಗಿ ಹಾಹಾಕಾರ ಆರಂಭವಾಗಿದ್ದರೆ, ಕೆಲವು ಕಡೆಗಳಲ್ಲಿ ಕೊಳಚೆ ನೀರು ಪೂರೈಕೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ನೀರಿನ ಕರ ಏರಿಕೆ ಮಾಡಿರುವುದು ಸರಿಯಲ್ಲ~ ಎಂದು ಹೇಳಿದ್ದಾರೆ.<br /> <br /> `ನಗರಕ್ಕೆ ನೀರು ಪೂರೈಕೆಯಾಗುವ ಹೆಗ್ಗೇರಿ ಕೆರೆ ನೀರು ಕುಡಿಯಲು ಯೋಗ್ಯವಿಲ್ಲ. ಆದರೂ ಆ ನೀರನ್ನೇ ಪೂರೈಕೆ ಮಾಡಲಾಗುತ್ತದೆ. ನಗರದಲ್ಲಿನ ಬೋರವೆಲ್ಗಳು, ಪೈಪ್ಲೈನ್ ಸಂಪೂರ್ಣ ಹಾಳಾಗಿವೆ. ಕಂಚಾರಗಟ್ಟಿ ಕರ್ಜಗಿ ಮೋಟರ್ ದುರಸ್ತಿ ಬಂದಿವೆ. ಆದರೆ, ಈವರೆಗೆ ನಗರಸಭೆ ಅಧಿಕಾರಿಗಳು ಕೆಟ್ಟು ನಿಂತ ಬೋರವೆಲ್ ಹಾಗೂ ಪೈಪಲೈನ್ಗಳ ದುರಸ್ತಿ ಮಾಡದೇ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. <br /> <br /> ವ್ಯವಸ್ಥಿತವಾಗಿ ನೀರು ಸರಬರಾಜು ಆಗುವವರೆಗೆ ಹಿಂದಿನಂತೆ 55 ರೂಪಾಯಿ ನೀರಿನ ಕರವನ್ನು ಆಕರಿಸಬೇಕು. ಇಲ್ಲವಾದರೆ, ನಗರಸಭೆ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ~ ಎಂದು ನಗರಸಭೆ ವಿರೋಧ ಪಕ್ಷದ ನಾಯಕ ಬಾಬುಸಾಬ ಮೋಮಿನಗಾರ ಎಚ್ಚರಿಸಿದ್ದಾರೆ.<br /> <br /> `ನಗರವಾಸಿಗಳಿಗೆ ಉತ್ತಮ ರಸ್ತೆ, ಒಳಚರಂಡಿ ನೀಡುವುದಾಗಿ ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಗೆ ಇನ್ನೂ ಅಂತ್ಯ ಸಿಕ್ಕಿಲ್ಲ. ಆಗಾಗ್ಗೆ ಗುತ್ತಿಗೆದಾರರ ಬದಲಾವಣೆಯಿಂದ ಯೋಜನೆ ಕಾಮಗಾರಿಗಳು ಕುಂಟುತ್ತಲೇ ನಗರದ ಪ್ರಗತಿ ಶೂನ್ಯವಾಗಿದೆ~ ಎಂದು ಆರೋಪಿಸಿದರು.<br /> <br /> `ಇನ್ನೊಂದೆಡೆ ಎಂ.ಜಿ. ರಸ್ತೆಯಲ್ಲಿನ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಆದರೆ ಈವರೆಗೂ ಅಲ್ಲಿನ ರಸ್ತೆಗಳ ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ. ಮೊದಲು ನಗರಸಭೆ ನೀಡಬೇಕಾದ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ತದನಂತರವಷ್ಟೆ ನೀರಿನ ಕರದ ಜೊತೆಗೆ ಉಳಿದ ಕರಗಳನ್ನು ಏಏರಿಕೆ ಮಾಡಲಿ~ ಎಂದು ಮೊಮೀನಗಾರ ಸಲಹೆ ನೀಡಿದ್ದಾರೆ. <br /> <br /> ಈ ಸಂದರ್ಭದಲ್ಲಿ ನಗರಸಭೆ ವಿರೋಧ ಪಕ್ಷದ ಸದಸ್ಯರಾದ ಗಣೇಶ ಬಿಷ್ಟಕ್ಕನವರ, ಪರಮೇಶ ಓಲಿ, ವೆಂಕಟೇಶ ಇಟಗಿ, ಪೀರಸಾಬ ಚೋಪದಾರ್ ಸೇರಿದಂತೆ ಹಲವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ: </strong>ನಗರಸಭೆಯು ನೀರಿನ ಕರವನ್ನು ರೂ. 55ರಿಂದ 120 ರೂ.ಗಳಿಗೆ ಏರಿಕೆ ಮಾಡಿರುವುದನ್ನು ವಿರೋಧಿಸಿ ಹಾಗೂ ತಕ್ಷಣವೇ ಏರಿಕೆಯಾದ ಕರವನ್ನು ಇಳಿಸಬೇಕೆಂದು ಇಲ್ಲಿನ ನಗರಸಭೆ ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದ್ದಾರೆ.<br /> <br /> ಮಂಗಳವಾರ ನಗರಸಭೆ ಆಯುಕ್ತ ಎಚ್.ಕೆ.ರುದ್ರಪ್ಪ ಅವರಿಗೆ ಮನವಿ ಸಲ್ಲಿಸಿರುವ ನಗರಸಭೆ ವಿರೋಧ ಪಕ್ಷದ ಸದಸ್ಯರು, `ನಗರದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. 10-15 ದಿನಕ್ಕೊಮ್ಮೆ ನೀರು ನೀಡಲಾಗುತ್ತದೆ. ಈಗಾಗಲೇ ಕೆಲವಡೆ ನೀರಿಗಾಗಿ ಹಾಹಾಕಾರ ಆರಂಭವಾಗಿದ್ದರೆ, ಕೆಲವು ಕಡೆಗಳಲ್ಲಿ ಕೊಳಚೆ ನೀರು ಪೂರೈಕೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ನೀರಿನ ಕರ ಏರಿಕೆ ಮಾಡಿರುವುದು ಸರಿಯಲ್ಲ~ ಎಂದು ಹೇಳಿದ್ದಾರೆ.<br /> <br /> `ನಗರಕ್ಕೆ ನೀರು ಪೂರೈಕೆಯಾಗುವ ಹೆಗ್ಗೇರಿ ಕೆರೆ ನೀರು ಕುಡಿಯಲು ಯೋಗ್ಯವಿಲ್ಲ. ಆದರೂ ಆ ನೀರನ್ನೇ ಪೂರೈಕೆ ಮಾಡಲಾಗುತ್ತದೆ. ನಗರದಲ್ಲಿನ ಬೋರವೆಲ್ಗಳು, ಪೈಪ್ಲೈನ್ ಸಂಪೂರ್ಣ ಹಾಳಾಗಿವೆ. ಕಂಚಾರಗಟ್ಟಿ ಕರ್ಜಗಿ ಮೋಟರ್ ದುರಸ್ತಿ ಬಂದಿವೆ. ಆದರೆ, ಈವರೆಗೆ ನಗರಸಭೆ ಅಧಿಕಾರಿಗಳು ಕೆಟ್ಟು ನಿಂತ ಬೋರವೆಲ್ ಹಾಗೂ ಪೈಪಲೈನ್ಗಳ ದುರಸ್ತಿ ಮಾಡದೇ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. <br /> <br /> ವ್ಯವಸ್ಥಿತವಾಗಿ ನೀರು ಸರಬರಾಜು ಆಗುವವರೆಗೆ ಹಿಂದಿನಂತೆ 55 ರೂಪಾಯಿ ನೀರಿನ ಕರವನ್ನು ಆಕರಿಸಬೇಕು. ಇಲ್ಲವಾದರೆ, ನಗರಸಭೆ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ~ ಎಂದು ನಗರಸಭೆ ವಿರೋಧ ಪಕ್ಷದ ನಾಯಕ ಬಾಬುಸಾಬ ಮೋಮಿನಗಾರ ಎಚ್ಚರಿಸಿದ್ದಾರೆ.<br /> <br /> `ನಗರವಾಸಿಗಳಿಗೆ ಉತ್ತಮ ರಸ್ತೆ, ಒಳಚರಂಡಿ ನೀಡುವುದಾಗಿ ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಗೆ ಇನ್ನೂ ಅಂತ್ಯ ಸಿಕ್ಕಿಲ್ಲ. ಆಗಾಗ್ಗೆ ಗುತ್ತಿಗೆದಾರರ ಬದಲಾವಣೆಯಿಂದ ಯೋಜನೆ ಕಾಮಗಾರಿಗಳು ಕುಂಟುತ್ತಲೇ ನಗರದ ಪ್ರಗತಿ ಶೂನ್ಯವಾಗಿದೆ~ ಎಂದು ಆರೋಪಿಸಿದರು.<br /> <br /> `ಇನ್ನೊಂದೆಡೆ ಎಂ.ಜಿ. ರಸ್ತೆಯಲ್ಲಿನ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಆದರೆ ಈವರೆಗೂ ಅಲ್ಲಿನ ರಸ್ತೆಗಳ ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ. ಮೊದಲು ನಗರಸಭೆ ನೀಡಬೇಕಾದ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ತದನಂತರವಷ್ಟೆ ನೀರಿನ ಕರದ ಜೊತೆಗೆ ಉಳಿದ ಕರಗಳನ್ನು ಏಏರಿಕೆ ಮಾಡಲಿ~ ಎಂದು ಮೊಮೀನಗಾರ ಸಲಹೆ ನೀಡಿದ್ದಾರೆ. <br /> <br /> ಈ ಸಂದರ್ಭದಲ್ಲಿ ನಗರಸಭೆ ವಿರೋಧ ಪಕ್ಷದ ಸದಸ್ಯರಾದ ಗಣೇಶ ಬಿಷ್ಟಕ್ಕನವರ, ಪರಮೇಶ ಓಲಿ, ವೆಂಕಟೇಶ ಇಟಗಿ, ಪೀರಸಾಬ ಚೋಪದಾರ್ ಸೇರಿದಂತೆ ಹಲವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>