<p>ನವದೆಹಲಿ (ಪಿಟಿಐ): ಅಬುಧಾಬಿಯೊಂದಿಗೆ ಮಾಡಿಕೊಂಡಿರುವ ರೂ. 2,058 ಕೋಟಿ ವೆಚ್ಚದ ಜೆಟ್ - ಎತಿಹಾದ್ ಒಪ್ಪಂದ ಇದೀಗ ವಿವಾದದ ಕೇಂದ್ರಬಿಂದುವಾಗಿದೆ.<br /> <br /> ಕೆಲವು ಸಂಸದರು ಆಕ್ಷೇಪ ವ್ಯಕ್ತಪಡಿಸಿದರೂ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಇದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.<br /> `ಒಪ್ಪಂದ ವಿರೋಧಿಸುವವರಿಗೆ ವಾಸ್ತವ ಏನು ಎನ್ನುವುದು ಗೊತ್ತಿಲ್ಲ. ರಾಜಕೀಯ ಕಾರಣಕ್ಕೆ ವಿವಾದ ಎಬ್ಬಿಸುತ್ತಿದ್ದಾರೆ. ವಿದೇಶಿ ನೇರ ಬಂಡವಾಳ ಹೂಡಿಕೆ ದೃಷ್ಟಿಯಿಂದ ಇದು ಈ ವರ್ಷದಲ್ಲಿ ಮಾಡಿಕೊಂಡ ಬಹುದೊಡ್ಡ ಒಪ್ಪಂದವಾಗಿದೆ' ಎಂದು ಹೇಳಿದ್ದಾರೆ.<br /> <br /> ಒಪ್ಪಂದಕ್ಕೆ ಅಪಸ್ವರ...<br /> ಈ ಒಪ್ಪಂದಕ್ಕೆ ಮೊದಲು ಅಪಸ್ವರ ಎತ್ತಿದ್ದು ಸಿಪಿಎಂ ಸಂಸದ ಸೀತಾರಾಂ ಯೆಚೂರಿ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿ. ನಂತರದಲ್ಲಿ ಹಿರಿಯ ಸಂಸದರಾದ ಜಸ್ವಂತ್ ಸಿಂಗ್, ದಿನೇಶ್ ತ್ರಿವೇದಿ, ಜನತಾ ಪಕ್ಷದ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ಕೂಡ ದನಿಗೂಡಿಸಿದ್ದರು.<br /> <br /> ಒಪ್ಪಂದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಇವರೆಲ್ಲ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರವನ್ನೂ ಬರೆದಿದ್ದರು. ಪ್ರಧಾನಿ ಈ ವಿಷಯವನ್ನು ನಾಗರಿಕ ವಿಮಾನಯಾನ, ವಾಣಿಜ್ಯ ಹಾಗೂ ಹಣಕಾಸು ಸೇರಿದಂತೆ ಸಂಬಂಧಪಟ್ಟ ವಿವಿಧ ಸಚಿವಾಲಯಗಳ ಮುಂದೆ ಇಟ್ಟಿದ್ದರು.<br /> <br /> ಏನಿದು ಒಪ್ಪಂದ?<br /> ವಿಮಾನ ಹಾರಾಟಕ್ಕೆ ಸಂಬಂಧಿಸಿ 2007-08ರಲ್ಲಿ ಭಾರತ ಹಾಗೂ ಅಬುಧಾಬಿ ನಡುವಿನ ಒಪ್ಪಂದ ಇದಾಗಿದೆ. ಜೆಟ್ ಏರ್ವೇಸ್ನ ಶೇ 24ರಷ್ಟು ಷೇರುಗಳನ್ನು ಎತಿಹಾದ್ ಏರ್ವೇಸ್ ರೂ. 2,058 ಕೋಟಿಗೆ ಖರೀದಿಸುವ ಪ್ರಸ್ತಾಪ ಇದರಲ್ಲಿದೆ. ಷೇರು ಮಾರಾಟ ವಿಷಯಕ್ಕೆ ಸಂಬಂಧಿಸಿ ಇದೀಗ ತಕರಾರು ಎದ್ದಿದೆ.<br /> <br /> ಬಿಜೆಪಿ ಪಟ್ಟು: `ಈ ಒಪ್ಪಂದ ಕುರಿತು ಪ್ರಧಾನಿ ಸ್ಪಷ್ಟನೆ ನೀಡಬೇಕು' ಎಂದು ಬಿಜೆಪಿ ಪಟ್ಟು ಹಿಡಿದಿದೆ.<br /> <br /> `ಇದರಲ್ಲಿ ಏನೋ ಎಡವಟ್ಟಾಗಿದೆ. ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ನಾವು ತಕರಾರು ಮಾಡುವುದಿಲ್ಲ. ಆದರೆ ಅವ್ಯವಹಾರ ನಡೆದರೆ ಸುಮ್ಮನಿರುವುದಿಲ್ಲ' ಎಂದು ಪಕ್ಷದ ವಕ್ತಾರ ಸೈಯದ್ ಶಹನವಾಜ್ ಹುಸೇನ್ ಹೇಳಿದ್ದಾರೆ. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಒಪ್ಪಂದವನ್ನು ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಹೋಲಿಸಿದ್ದಾರೆ.<br /> <br /> ಪರಿಶೀಲನೆಯಲ್ಲಿದೆ: `ಈ ಒಪ್ಪಂದದಲ್ಲಿ ಷೇರು ಮಾರಾಟ ವಿಷಯ ಇನ್ನೂ ಪರಿಶೀಲನೆಯಲ್ಲಿದೆ. ಸಂಬಂಧಪಟ್ಟ ಸಚಿವಾಲಯಗಳ ಮುಂದೆ ಇದನ್ನು ಪ್ರಸ್ತಾಪಿಸಲಾಗಿದೆ' ಎಂದು ಪ್ರಧಾನಿ ಕಚೇರಿ ಮಂಗಳವಾರ ಸ್ಪಷ್ಟಪಡಿಸಿದೆ.<br /> <br /> `ಒಪ್ಪಂದ ಕುರಿತು ಸರ್ಕಾರದಲ್ಲಿ ಭಿನ್ನಾಭಿಪ್ರಾಯವಿಲ್ಲ. ಅಷ್ಟಕ್ಕೂ ಇದು ಎರಡು ಖಾಸಗಿ ಸಂಸ್ಥೆಗಳ ನಡುವೆ ಆದ ಒಡಂಬಡಿಕೆಯಾಗಿದೆ' ಎಂದೂ ಪ್ರಧಾನಿ ಕಚೇರಿಯು ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ಅಬುಧಾಬಿಯೊಂದಿಗೆ ಮಾಡಿಕೊಂಡಿರುವ ರೂ. 2,058 ಕೋಟಿ ವೆಚ್ಚದ ಜೆಟ್ - ಎತಿಹಾದ್ ಒಪ್ಪಂದ ಇದೀಗ ವಿವಾದದ ಕೇಂದ್ರಬಿಂದುವಾಗಿದೆ.<br /> <br /> ಕೆಲವು ಸಂಸದರು ಆಕ್ಷೇಪ ವ್ಯಕ್ತಪಡಿಸಿದರೂ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಇದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.<br /> `ಒಪ್ಪಂದ ವಿರೋಧಿಸುವವರಿಗೆ ವಾಸ್ತವ ಏನು ಎನ್ನುವುದು ಗೊತ್ತಿಲ್ಲ. ರಾಜಕೀಯ ಕಾರಣಕ್ಕೆ ವಿವಾದ ಎಬ್ಬಿಸುತ್ತಿದ್ದಾರೆ. ವಿದೇಶಿ ನೇರ ಬಂಡವಾಳ ಹೂಡಿಕೆ ದೃಷ್ಟಿಯಿಂದ ಇದು ಈ ವರ್ಷದಲ್ಲಿ ಮಾಡಿಕೊಂಡ ಬಹುದೊಡ್ಡ ಒಪ್ಪಂದವಾಗಿದೆ' ಎಂದು ಹೇಳಿದ್ದಾರೆ.<br /> <br /> ಒಪ್ಪಂದಕ್ಕೆ ಅಪಸ್ವರ...<br /> ಈ ಒಪ್ಪಂದಕ್ಕೆ ಮೊದಲು ಅಪಸ್ವರ ಎತ್ತಿದ್ದು ಸಿಪಿಎಂ ಸಂಸದ ಸೀತಾರಾಂ ಯೆಚೂರಿ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿ. ನಂತರದಲ್ಲಿ ಹಿರಿಯ ಸಂಸದರಾದ ಜಸ್ವಂತ್ ಸಿಂಗ್, ದಿನೇಶ್ ತ್ರಿವೇದಿ, ಜನತಾ ಪಕ್ಷದ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ಕೂಡ ದನಿಗೂಡಿಸಿದ್ದರು.<br /> <br /> ಒಪ್ಪಂದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಇವರೆಲ್ಲ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರವನ್ನೂ ಬರೆದಿದ್ದರು. ಪ್ರಧಾನಿ ಈ ವಿಷಯವನ್ನು ನಾಗರಿಕ ವಿಮಾನಯಾನ, ವಾಣಿಜ್ಯ ಹಾಗೂ ಹಣಕಾಸು ಸೇರಿದಂತೆ ಸಂಬಂಧಪಟ್ಟ ವಿವಿಧ ಸಚಿವಾಲಯಗಳ ಮುಂದೆ ಇಟ್ಟಿದ್ದರು.<br /> <br /> ಏನಿದು ಒಪ್ಪಂದ?<br /> ವಿಮಾನ ಹಾರಾಟಕ್ಕೆ ಸಂಬಂಧಿಸಿ 2007-08ರಲ್ಲಿ ಭಾರತ ಹಾಗೂ ಅಬುಧಾಬಿ ನಡುವಿನ ಒಪ್ಪಂದ ಇದಾಗಿದೆ. ಜೆಟ್ ಏರ್ವೇಸ್ನ ಶೇ 24ರಷ್ಟು ಷೇರುಗಳನ್ನು ಎತಿಹಾದ್ ಏರ್ವೇಸ್ ರೂ. 2,058 ಕೋಟಿಗೆ ಖರೀದಿಸುವ ಪ್ರಸ್ತಾಪ ಇದರಲ್ಲಿದೆ. ಷೇರು ಮಾರಾಟ ವಿಷಯಕ್ಕೆ ಸಂಬಂಧಿಸಿ ಇದೀಗ ತಕರಾರು ಎದ್ದಿದೆ.<br /> <br /> ಬಿಜೆಪಿ ಪಟ್ಟು: `ಈ ಒಪ್ಪಂದ ಕುರಿತು ಪ್ರಧಾನಿ ಸ್ಪಷ್ಟನೆ ನೀಡಬೇಕು' ಎಂದು ಬಿಜೆಪಿ ಪಟ್ಟು ಹಿಡಿದಿದೆ.<br /> <br /> `ಇದರಲ್ಲಿ ಏನೋ ಎಡವಟ್ಟಾಗಿದೆ. ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ನಾವು ತಕರಾರು ಮಾಡುವುದಿಲ್ಲ. ಆದರೆ ಅವ್ಯವಹಾರ ನಡೆದರೆ ಸುಮ್ಮನಿರುವುದಿಲ್ಲ' ಎಂದು ಪಕ್ಷದ ವಕ್ತಾರ ಸೈಯದ್ ಶಹನವಾಜ್ ಹುಸೇನ್ ಹೇಳಿದ್ದಾರೆ. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಒಪ್ಪಂದವನ್ನು ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಹೋಲಿಸಿದ್ದಾರೆ.<br /> <br /> ಪರಿಶೀಲನೆಯಲ್ಲಿದೆ: `ಈ ಒಪ್ಪಂದದಲ್ಲಿ ಷೇರು ಮಾರಾಟ ವಿಷಯ ಇನ್ನೂ ಪರಿಶೀಲನೆಯಲ್ಲಿದೆ. ಸಂಬಂಧಪಟ್ಟ ಸಚಿವಾಲಯಗಳ ಮುಂದೆ ಇದನ್ನು ಪ್ರಸ್ತಾಪಿಸಲಾಗಿದೆ' ಎಂದು ಪ್ರಧಾನಿ ಕಚೇರಿ ಮಂಗಳವಾರ ಸ್ಪಷ್ಟಪಡಿಸಿದೆ.<br /> <br /> `ಒಪ್ಪಂದ ಕುರಿತು ಸರ್ಕಾರದಲ್ಲಿ ಭಿನ್ನಾಭಿಪ್ರಾಯವಿಲ್ಲ. ಅಷ್ಟಕ್ಕೂ ಇದು ಎರಡು ಖಾಸಗಿ ಸಂಸ್ಥೆಗಳ ನಡುವೆ ಆದ ಒಡಂಬಡಿಕೆಯಾಗಿದೆ' ಎಂದೂ ಪ್ರಧಾನಿ ಕಚೇರಿಯು ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>