<p>ಬೆಂಗಳೂರು: ಜನವರಿ 14. ಎಲ್ಲೆಡೆ ಸಂಕ್ರಾಂತಿ ಹಬ್ಬದ ಸಡಗರವಾದರೆ ನಗರದ ಕ್ರೈಸ್ತ ಬಾಂಧವರಿಗೆ ಸಂಕ್ರಾಂತಿಯ ಜೊತೆಗೆ ದಿವ್ಯ ಬಾಲ ಯೇಸುವಿನ ಹಬ್ಬದ ಸಂಭ್ರಮವೂ ಇದೆ.<br /> ಖ್ಯಾತಿ ಪಡೆದ ವಿವೇಕ ನಗರದ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ನಡೆಯಲಿರುವ ಜಾತ್ರೆಗೆ ವರ್ಷ ವರ್ಷವೂ ಎಲ್ಲೆಡೆಯಿಂದ ಭಕ್ತರ ಸಾಗರವೇ ಹರಿದು ಬರುತ್ತದೆ. ಸುಮಾರು 40 ವರ್ಷಗಳ ಇತಿಹಾಸವಿದೆ. ಭಾಷೆ, ಜಾತಿ, ಮತಗಳ ಭೇದವಿಲ್ಲದೇ ಎಲ್ಲ ಸಮುದಾಯದ ಜನರು ಭಕ್ತಿ ಶ್ರದ್ಧೆಯಿಂದ ಪಾಲ್ಗೊಳ್ಳುವ ಈ ಹಬ್ಬ ಬೆಂಗಳೂರಿನ ವಿಶೇಷ ಹಬ್ಬ. ಅಂತೆಯೇ ವಿವೇಕ ನಗರದ ಬೀದಿ ಈಗ ಬಣ್ಣ-ಬಣ್ಣದ ದೀಪಗಳಿಂದ ಝಗಮಗಿಸುತ್ತಿದೆ. <br /> ‘ಇದು ಕೇವಲ ಜಾತ್ರೆಯಲ್ಲ. ನಮ್ಮ ಪಾಲಿಗೆ ಇದೊಂದು ಕಲ್ಪವೃಕ್ಷ. ಕೇಳುವ ಅರ್ಹತೆಯೊಂದಿಗೆ ಶ್ರದ್ಧೆಯಿಂದ ಕೇಳಿಕೊಂಡರೆ ಫಲಿಸದ ಫಲವಿಲ್ಲ. ಇಲ್ಲಿ ನಮ್ಮ ಹರಕೆಗಳನ್ನು ಸಲ್ಲಿಸುವುದೆಂದರೆ ಪ್ರಾಣಿ ಬಲಿ ಮಾಡಬೇಕೆಂದೇನೂ ಇಲ್ಲ. ಚಿನ್ನ-ಬೆಳ್ಳಿಯ ಕಾಣಿಕೆ ಸಲ್ಲಿಸುವ ಅಗತ್ಯವೂ ಇಲ್ಲ. ಸುಮ್ಮನೇ ಒಂದು ಮೇಣದಬತ್ತಿ ಹಚ್ಚಿಟ್ಟರೆ ಬಾಲ ಯೇಸು ಸಂತೃಪ್ತನಾಗುತ್ತಾನೆ. ಇದೇ ಇಲ್ಲಿನ ವಿಶೇಷತೆ ಎನ್ನಬಹುದು’ ಎನ್ನುತ್ತಾರೆ ಕೇರಳದ ಫರ್ನಾಂಡಿಸ್ ದಂಪತಿ.<br /> ‘ಕಳೆದ ಸುಮಾರು 12 ವರ್ಷಗಳಿಂದ ಈ ಬಾಲ ಯೇಸುವಿನ ಸನ್ನಿಧಿಗೆ ಬಂದು ಹೋಗುತ್ತಿದ್ದೇವೆ. ಕೇಳಿಕೊಂಡು ಬಂದವರನ್ನು ಯೇಸು ಯಾವತ್ತೂ ಬರಿಗೈಯಿಂದ ಕಳುಹಿಸುವುದಿಲ್ಲ ಎಂಬುದು ನಮ್ಮ ಅನುಭವದ ಮಾತು’ ಎನ್ನುತ್ತಾರೆ ಮಂಗಳೂರಿನ ಅನ್ನಪೂರ್ಣ. <br /> ಉತ್ಸವದ ಅಂಗವಾಗಿ ಶುಕ್ರವಾರ ಬೆಳಿಗ್ಗೆ 5 ಗಂಟೆಯಿಂದ ಆರಂಭಗೊಳ್ಳುವ ವಿವಿಧ ಧಾರ್ಮಿಕ ಆಚರಣೆಗಳು, ಕಾರ್ಯವಿಧಿಗಳು ದಿನವಿಡೀ ಜರುಗಲಿವೆ. ಸಂಜೆ 6ಕ್ಕೆ ಅದ್ಧೂರಿ ರಥೋತ್ಸವ ನೆರವೇರಲಿದ್ದು, ಬಾಲ ಯೇಸುವಿನ ಮೆರವಣಿಗೆ ನಡೆಯುತ್ತದೆ. <br /> ಮೆರವಣಿಗೆ ಸಾನ್ನಿಧ್ಯವನ್ನು ಡಾ.ಬರ್ನಾಡ್ ಮೋರಸ್ ವಹಿಸಿಕೊಳ್ಳುವರು ಎಂದು ದಿವ್ಯ ಬಾಲಯೇಸು ದೇವಾಲಯದ ಸ್ವಾಮಿ ಬಾಲ್ರಾಜ್ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಜನವರಿ 14. ಎಲ್ಲೆಡೆ ಸಂಕ್ರಾಂತಿ ಹಬ್ಬದ ಸಡಗರವಾದರೆ ನಗರದ ಕ್ರೈಸ್ತ ಬಾಂಧವರಿಗೆ ಸಂಕ್ರಾಂತಿಯ ಜೊತೆಗೆ ದಿವ್ಯ ಬಾಲ ಯೇಸುವಿನ ಹಬ್ಬದ ಸಂಭ್ರಮವೂ ಇದೆ.<br /> ಖ್ಯಾತಿ ಪಡೆದ ವಿವೇಕ ನಗರದ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ನಡೆಯಲಿರುವ ಜಾತ್ರೆಗೆ ವರ್ಷ ವರ್ಷವೂ ಎಲ್ಲೆಡೆಯಿಂದ ಭಕ್ತರ ಸಾಗರವೇ ಹರಿದು ಬರುತ್ತದೆ. ಸುಮಾರು 40 ವರ್ಷಗಳ ಇತಿಹಾಸವಿದೆ. ಭಾಷೆ, ಜಾತಿ, ಮತಗಳ ಭೇದವಿಲ್ಲದೇ ಎಲ್ಲ ಸಮುದಾಯದ ಜನರು ಭಕ್ತಿ ಶ್ರದ್ಧೆಯಿಂದ ಪಾಲ್ಗೊಳ್ಳುವ ಈ ಹಬ್ಬ ಬೆಂಗಳೂರಿನ ವಿಶೇಷ ಹಬ್ಬ. ಅಂತೆಯೇ ವಿವೇಕ ನಗರದ ಬೀದಿ ಈಗ ಬಣ್ಣ-ಬಣ್ಣದ ದೀಪಗಳಿಂದ ಝಗಮಗಿಸುತ್ತಿದೆ. <br /> ‘ಇದು ಕೇವಲ ಜಾತ್ರೆಯಲ್ಲ. ನಮ್ಮ ಪಾಲಿಗೆ ಇದೊಂದು ಕಲ್ಪವೃಕ್ಷ. ಕೇಳುವ ಅರ್ಹತೆಯೊಂದಿಗೆ ಶ್ರದ್ಧೆಯಿಂದ ಕೇಳಿಕೊಂಡರೆ ಫಲಿಸದ ಫಲವಿಲ್ಲ. ಇಲ್ಲಿ ನಮ್ಮ ಹರಕೆಗಳನ್ನು ಸಲ್ಲಿಸುವುದೆಂದರೆ ಪ್ರಾಣಿ ಬಲಿ ಮಾಡಬೇಕೆಂದೇನೂ ಇಲ್ಲ. ಚಿನ್ನ-ಬೆಳ್ಳಿಯ ಕಾಣಿಕೆ ಸಲ್ಲಿಸುವ ಅಗತ್ಯವೂ ಇಲ್ಲ. ಸುಮ್ಮನೇ ಒಂದು ಮೇಣದಬತ್ತಿ ಹಚ್ಚಿಟ್ಟರೆ ಬಾಲ ಯೇಸು ಸಂತೃಪ್ತನಾಗುತ್ತಾನೆ. ಇದೇ ಇಲ್ಲಿನ ವಿಶೇಷತೆ ಎನ್ನಬಹುದು’ ಎನ್ನುತ್ತಾರೆ ಕೇರಳದ ಫರ್ನಾಂಡಿಸ್ ದಂಪತಿ.<br /> ‘ಕಳೆದ ಸುಮಾರು 12 ವರ್ಷಗಳಿಂದ ಈ ಬಾಲ ಯೇಸುವಿನ ಸನ್ನಿಧಿಗೆ ಬಂದು ಹೋಗುತ್ತಿದ್ದೇವೆ. ಕೇಳಿಕೊಂಡು ಬಂದವರನ್ನು ಯೇಸು ಯಾವತ್ತೂ ಬರಿಗೈಯಿಂದ ಕಳುಹಿಸುವುದಿಲ್ಲ ಎಂಬುದು ನಮ್ಮ ಅನುಭವದ ಮಾತು’ ಎನ್ನುತ್ತಾರೆ ಮಂಗಳೂರಿನ ಅನ್ನಪೂರ್ಣ. <br /> ಉತ್ಸವದ ಅಂಗವಾಗಿ ಶುಕ್ರವಾರ ಬೆಳಿಗ್ಗೆ 5 ಗಂಟೆಯಿಂದ ಆರಂಭಗೊಳ್ಳುವ ವಿವಿಧ ಧಾರ್ಮಿಕ ಆಚರಣೆಗಳು, ಕಾರ್ಯವಿಧಿಗಳು ದಿನವಿಡೀ ಜರುಗಲಿವೆ. ಸಂಜೆ 6ಕ್ಕೆ ಅದ್ಧೂರಿ ರಥೋತ್ಸವ ನೆರವೇರಲಿದ್ದು, ಬಾಲ ಯೇಸುವಿನ ಮೆರವಣಿಗೆ ನಡೆಯುತ್ತದೆ. <br /> ಮೆರವಣಿಗೆ ಸಾನ್ನಿಧ್ಯವನ್ನು ಡಾ.ಬರ್ನಾಡ್ ಮೋರಸ್ ವಹಿಸಿಕೊಳ್ಳುವರು ಎಂದು ದಿವ್ಯ ಬಾಲಯೇಸು ದೇವಾಲಯದ ಸ್ವಾಮಿ ಬಾಲ್ರಾಜ್ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>