<p><strong>ವಿಶ್ವಸಂಸ್ಥೆ (ಪಿಟಿಐ):</strong> ಬದಲಾಗುತ್ತಿರುವ ಪ್ರಸಕ್ತ ಜಾಗತಿಕ ವಿದ್ಯಮಾನಗಳಿಗೆ ತಕ್ಕಂತೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಕಾರ್ಯನಿರ್ವಹಿಸಲು ವಿಫಲವಾಗುತ್ತಿರುವುದರಿಂದ, ಭದ್ರತಾ ಮಂಡಳಿಯ ರಚನೆಯಲ್ಲಿ ಆಮೂಲಾಗ್ರ ಸುಧಾರಣೆಯಾಗಬೇಕೆಂದು ಭಾರತ ಅಭಿಪ್ರಾಯಪಟ್ಟಿದೆ.<br /> <br /> `ಈಗಿನ ಭದ್ರತಾ ಮಂಡಳಿಯು ಸಮಕಾಲೀನ ವಿಚಾರಗಳನ್ನು ಪ್ರತಿನಿಧಿಸುವಲ್ಲಿ ವಿಫಲವಾಗಿದೆ. ವಿಶ್ವದಾದ್ಯಂತ ನಡೆಯುತ್ತಿರುವ ಘಟನೆಗಳನ್ನು ತಿಳಿಯುವಲ್ಲಿಯೂ ಸೋಲುತ್ತಿದೆ~ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ.<br /> <br /> ಭದ್ರತಾ ಮಂಡಳಿಯ ಮಾಸಿಕ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯತ್ವ ಹೊಂದಿರುವ ರಾಷ್ಟ್ರಗಳ ಎರಡು ವರ್ಷಗಳ ಅವಧಿ ಡಿಸೆಂಬರ್ 31ಕ್ಕೆ ಪೂರ್ಣಗೊಳ್ಳಲಿದ್ದು, ಈ ಸಂದರ್ಭದಲ್ಲಿ ಭದ್ರತಾ ಮಂಡಳಿಯನ್ನು ವಿಸ್ತರಿಸಬೇಕು ಎಂದರು.<br /> <br /> ಹದಿನೈದು ಸದಸ್ಯರನ್ನೊಳಗೊಂಡ ಭದ್ರತಾ ಮಂಡಳಿ ವಿಸ್ತರಣೆಯಾಗಬೇಕಿದ್ದು, ಅದರಲ್ಲಿ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಪ್ರತಿನಿಧಿಗಳಿಗೆ ಕಾಯಂ ಸದಸ್ಯ ಸ್ಥಾನ ನೀಡಬೇಕಿದೆ ಎಂದು ಅವರು ಹೇಳಿದರು. ಭದ್ರತಾ ಮಂಡಳಿಯು ಕ್ರಿಯಾಶೀಲವಾಗಿ ನಡೆಯಬೇಕೆಂದರೆ, ಅದರ ಸದಸ್ಯರ ಸಂಖ್ಯೆಯನ್ನು ವಿಸ್ತರಿಸಬೇಕು. <br /> <br /> ಮಾತ್ರವಲ್ಲ, ಮಂಡಳಿ ಚರ್ಚಿಸುವ ವಿಷಯಗಳು, ತೀರ್ಮಾನಗಳು ಹೆಚ್ಚು ಪಾರದರ್ಶಕವಾಗಿರಬೇಕು~ ಎಂದರು. `ಮುಂದಿನ ದಿನಗಳಲ್ಲಿ ಭದ್ರತಾ ಮಂಡಳಿಯಲ್ಲಿ ಆಫ್ರಿಕಾ, ಲ್ಯಾಟಿನ್ ಅಮೆರಿಕ, ಕೆರೇಬಿಯನ್ ಮತ್ತು ಏಷ್ಯಾ ರಾಷ್ಟ್ರಗಳಿಗೆ ಖಾಯಂ ಸದಸ್ಯತ್ವ ನೀಡುವ ಮೂಲಕ, ಈಗಿನ ಸದಸ್ಯರ ಸಂಖ್ಯೆಯನ್ನು 25ರವರೆಗೂ ವಿಸ್ತರಿಸಬೇಕು~ ಎಂದು ಸಿಂಗ್ ಸಲಹೆ ನೀಡಿದ್ದಾರೆ.<br /> <br /> ಮಂಡಳಿ ಸದಸ್ಯರ ಸಂಖ್ಯೆ ವಿಸ್ತರಿಸುವುದೆಂದರೆ, ಈಗಿರುವ ಸದಸ್ಯರು ಹೊರ ನಡೆಯುವುದಲ್ಲ. ಬದಲಿಗೆ ಹೊಸ ಸದಸ್ಯರನ್ನು ಜೊತೆಗೆ ಕರೆದುಕೊಂಡು ಹೋಗಬೇಕು. ಮಂಡಳಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಇದರಿಂದ ಭದ್ರತಾ ಮಂಡಳಿಯ `ತೂಕ~ ಹೆಚ್ಚುತ್ತದೆ. ಕಾರ್ಯ ನಿರ್ವಹಣೆ ಕುರಿತು ಜಾಗತಿಕ ಮಟ್ಟದಲ್ಲಿ ಮಂಡಳಿ ಬಗ್ಗೆ ವಿಶ್ವಾಸರ್ಹತೆ ಮೂಡುತ್ತದೆ ಎಂದು ಸಿಂಗ್ ಹೇಳಿದರು.<br /> <br /> ಪಾಕಿಸ್ತಾನದಂತಹ ರಾಷ್ಟ್ರಗಳು ಮಂಡಳಿಯಲ್ಲಿ ಕಾಯಂ ಸದಸ್ಯತ್ವಕ್ಕೆ ಯತ್ನಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ದಕ್ಷಿಣ ಏಷ್ಯಾ ರಾಷ್ಟ್ರಗಳು ಕಾಯಂ ಸದಸ್ಯತ್ವಕ್ಕೆ ಕೇಳುವಾಗ, ಆ ರಾಷ್ಟ್ರಗಳು ತಮ್ಮ `ಅಭ್ಯರ್ಥಿತನ~ವನ್ನು ಪ್ರದರ್ಶಿಸಬೇಕು. 193 ರಾಷ್ಟ್ರಗಳ ಸದಸ್ಯರನ್ನೊಳಗೊಂಡ ವಿಶ್ವಸಂಸ್ಥೆಯ ಮಹಾ ಸಭೆಯಲ್ಲಿ ಮತದಾನದ ಮೂಲಕ ಯಾರಿಗೆ ಕಾಯಂ ಸದಸ್ಯತ್ವ ಕೊಡಬೇಕೆಂದು ನಿರ್ಧರಿಸಲಾಗುತ್ತದೆ~ ಎಂದು ಹೇಳಿದರು.<br /> <br /> <strong>ವಿಶ್ವಸಂಸ್ಥೆಯಲ್ಲಿ `ಆಕಾಶ್ ಟ್ಯಾಬ್ಲೆಟ್~<br /> ವಿಶ್ವಸಂಸ್ಥೆ (ಪಿಟಿಐ):</strong> ಭಾರತ ಸಂಶೋಧಿಸಿರುವ ಅತಿ ಕಡಿಮೆ ಬೆಲೆಯ `ಟ್ಯಾಬ್ಲೆಟ್ ಕಂಪ್ಯೂಟರ್~ ಅನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಪ್ರದರ್ಶಿಸಲು ನಿರ್ಧರಿಸಿದೆ.ಭದ್ರತಾ ಮಂಡಳಿಯ ಅಧ್ಯಕ್ಷೀಯ ಸ್ಥಾನ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಸ್ಪರ್ಧಾತ್ಮಕ ಬೆಲೆಯ `ಟ್ಯಾಬ್ಲೆಟ್ ಕಂಪ್ಯೂಟರ್~ ಪ್ರದರ್ಶಿಸುವ ಮೂಲಕ, `ಗಣಕ ಯಂತ್ರ ಕ್ಷೇತ್ರದಲ್ಲಿ ಭಾರತದ ಸಂಶೋಧನಾ~ ಶಕ್ತಿ ವಿಶ್ವಸಂಸ್ಥೆಯ ಅಂಗಳದಲ್ಲಿ ಅನಾವರಣಗೊಳ್ಳಲಿದೆ.<br /> <br /> ಇದೇ 28ರಂದು `ಆಕಾಶ್ ಟ್ಯಾಬ್ಲೆಟ್ ಕಂಪ್ಯೂಟರ್~ ಅನ್ನು ಪ್ರದರ್ಶಿಸಲಾಗುತ್ತದೆ ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವಸಂಸ್ಥೆ (ಪಿಟಿಐ):</strong> ಬದಲಾಗುತ್ತಿರುವ ಪ್ರಸಕ್ತ ಜಾಗತಿಕ ವಿದ್ಯಮಾನಗಳಿಗೆ ತಕ್ಕಂತೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಕಾರ್ಯನಿರ್ವಹಿಸಲು ವಿಫಲವಾಗುತ್ತಿರುವುದರಿಂದ, ಭದ್ರತಾ ಮಂಡಳಿಯ ರಚನೆಯಲ್ಲಿ ಆಮೂಲಾಗ್ರ ಸುಧಾರಣೆಯಾಗಬೇಕೆಂದು ಭಾರತ ಅಭಿಪ್ರಾಯಪಟ್ಟಿದೆ.<br /> <br /> `ಈಗಿನ ಭದ್ರತಾ ಮಂಡಳಿಯು ಸಮಕಾಲೀನ ವಿಚಾರಗಳನ್ನು ಪ್ರತಿನಿಧಿಸುವಲ್ಲಿ ವಿಫಲವಾಗಿದೆ. ವಿಶ್ವದಾದ್ಯಂತ ನಡೆಯುತ್ತಿರುವ ಘಟನೆಗಳನ್ನು ತಿಳಿಯುವಲ್ಲಿಯೂ ಸೋಲುತ್ತಿದೆ~ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ.<br /> <br /> ಭದ್ರತಾ ಮಂಡಳಿಯ ಮಾಸಿಕ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯತ್ವ ಹೊಂದಿರುವ ರಾಷ್ಟ್ರಗಳ ಎರಡು ವರ್ಷಗಳ ಅವಧಿ ಡಿಸೆಂಬರ್ 31ಕ್ಕೆ ಪೂರ್ಣಗೊಳ್ಳಲಿದ್ದು, ಈ ಸಂದರ್ಭದಲ್ಲಿ ಭದ್ರತಾ ಮಂಡಳಿಯನ್ನು ವಿಸ್ತರಿಸಬೇಕು ಎಂದರು.<br /> <br /> ಹದಿನೈದು ಸದಸ್ಯರನ್ನೊಳಗೊಂಡ ಭದ್ರತಾ ಮಂಡಳಿ ವಿಸ್ತರಣೆಯಾಗಬೇಕಿದ್ದು, ಅದರಲ್ಲಿ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಪ್ರತಿನಿಧಿಗಳಿಗೆ ಕಾಯಂ ಸದಸ್ಯ ಸ್ಥಾನ ನೀಡಬೇಕಿದೆ ಎಂದು ಅವರು ಹೇಳಿದರು. ಭದ್ರತಾ ಮಂಡಳಿಯು ಕ್ರಿಯಾಶೀಲವಾಗಿ ನಡೆಯಬೇಕೆಂದರೆ, ಅದರ ಸದಸ್ಯರ ಸಂಖ್ಯೆಯನ್ನು ವಿಸ್ತರಿಸಬೇಕು. <br /> <br /> ಮಾತ್ರವಲ್ಲ, ಮಂಡಳಿ ಚರ್ಚಿಸುವ ವಿಷಯಗಳು, ತೀರ್ಮಾನಗಳು ಹೆಚ್ಚು ಪಾರದರ್ಶಕವಾಗಿರಬೇಕು~ ಎಂದರು. `ಮುಂದಿನ ದಿನಗಳಲ್ಲಿ ಭದ್ರತಾ ಮಂಡಳಿಯಲ್ಲಿ ಆಫ್ರಿಕಾ, ಲ್ಯಾಟಿನ್ ಅಮೆರಿಕ, ಕೆರೇಬಿಯನ್ ಮತ್ತು ಏಷ್ಯಾ ರಾಷ್ಟ್ರಗಳಿಗೆ ಖಾಯಂ ಸದಸ್ಯತ್ವ ನೀಡುವ ಮೂಲಕ, ಈಗಿನ ಸದಸ್ಯರ ಸಂಖ್ಯೆಯನ್ನು 25ರವರೆಗೂ ವಿಸ್ತರಿಸಬೇಕು~ ಎಂದು ಸಿಂಗ್ ಸಲಹೆ ನೀಡಿದ್ದಾರೆ.<br /> <br /> ಮಂಡಳಿ ಸದಸ್ಯರ ಸಂಖ್ಯೆ ವಿಸ್ತರಿಸುವುದೆಂದರೆ, ಈಗಿರುವ ಸದಸ್ಯರು ಹೊರ ನಡೆಯುವುದಲ್ಲ. ಬದಲಿಗೆ ಹೊಸ ಸದಸ್ಯರನ್ನು ಜೊತೆಗೆ ಕರೆದುಕೊಂಡು ಹೋಗಬೇಕು. ಮಂಡಳಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಇದರಿಂದ ಭದ್ರತಾ ಮಂಡಳಿಯ `ತೂಕ~ ಹೆಚ್ಚುತ್ತದೆ. ಕಾರ್ಯ ನಿರ್ವಹಣೆ ಕುರಿತು ಜಾಗತಿಕ ಮಟ್ಟದಲ್ಲಿ ಮಂಡಳಿ ಬಗ್ಗೆ ವಿಶ್ವಾಸರ್ಹತೆ ಮೂಡುತ್ತದೆ ಎಂದು ಸಿಂಗ್ ಹೇಳಿದರು.<br /> <br /> ಪಾಕಿಸ್ತಾನದಂತಹ ರಾಷ್ಟ್ರಗಳು ಮಂಡಳಿಯಲ್ಲಿ ಕಾಯಂ ಸದಸ್ಯತ್ವಕ್ಕೆ ಯತ್ನಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ದಕ್ಷಿಣ ಏಷ್ಯಾ ರಾಷ್ಟ್ರಗಳು ಕಾಯಂ ಸದಸ್ಯತ್ವಕ್ಕೆ ಕೇಳುವಾಗ, ಆ ರಾಷ್ಟ್ರಗಳು ತಮ್ಮ `ಅಭ್ಯರ್ಥಿತನ~ವನ್ನು ಪ್ರದರ್ಶಿಸಬೇಕು. 193 ರಾಷ್ಟ್ರಗಳ ಸದಸ್ಯರನ್ನೊಳಗೊಂಡ ವಿಶ್ವಸಂಸ್ಥೆಯ ಮಹಾ ಸಭೆಯಲ್ಲಿ ಮತದಾನದ ಮೂಲಕ ಯಾರಿಗೆ ಕಾಯಂ ಸದಸ್ಯತ್ವ ಕೊಡಬೇಕೆಂದು ನಿರ್ಧರಿಸಲಾಗುತ್ತದೆ~ ಎಂದು ಹೇಳಿದರು.<br /> <br /> <strong>ವಿಶ್ವಸಂಸ್ಥೆಯಲ್ಲಿ `ಆಕಾಶ್ ಟ್ಯಾಬ್ಲೆಟ್~<br /> ವಿಶ್ವಸಂಸ್ಥೆ (ಪಿಟಿಐ):</strong> ಭಾರತ ಸಂಶೋಧಿಸಿರುವ ಅತಿ ಕಡಿಮೆ ಬೆಲೆಯ `ಟ್ಯಾಬ್ಲೆಟ್ ಕಂಪ್ಯೂಟರ್~ ಅನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಪ್ರದರ್ಶಿಸಲು ನಿರ್ಧರಿಸಿದೆ.ಭದ್ರತಾ ಮಂಡಳಿಯ ಅಧ್ಯಕ್ಷೀಯ ಸ್ಥಾನ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಸ್ಪರ್ಧಾತ್ಮಕ ಬೆಲೆಯ `ಟ್ಯಾಬ್ಲೆಟ್ ಕಂಪ್ಯೂಟರ್~ ಪ್ರದರ್ಶಿಸುವ ಮೂಲಕ, `ಗಣಕ ಯಂತ್ರ ಕ್ಷೇತ್ರದಲ್ಲಿ ಭಾರತದ ಸಂಶೋಧನಾ~ ಶಕ್ತಿ ವಿಶ್ವಸಂಸ್ಥೆಯ ಅಂಗಳದಲ್ಲಿ ಅನಾವರಣಗೊಳ್ಳಲಿದೆ.<br /> <br /> ಇದೇ 28ರಂದು `ಆಕಾಶ್ ಟ್ಯಾಬ್ಲೆಟ್ ಕಂಪ್ಯೂಟರ್~ ಅನ್ನು ಪ್ರದರ್ಶಿಸಲಾಗುತ್ತದೆ ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>