<p><strong>ವಿಶ್ವಸಂಸ್ಥೆ (ಪಿಟಿಐ): </strong>ಕೆರಳದ<strong> </strong>ಇಬ್ಬರು ಮೀನುಗಾರರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಭಾರತದ ವಶದಲ್ಲಿರುವ ತನ್ನ ಇಬ್ಬರು ನೌಕಾ ಸಿಬ್ಬಂದಿಯನ್ನು ಬಿಡುಗಡೆಗೊಳಿಸಲು ಸಹಾಯ ಮಾಡುವಂತೆ ಕೋರಿ ಇಟಲಿಯು ವಿಶ್ವಸಂಸ್ಥೆಯ ಮೊರೆ ಹೋಗಿದೆ.<br /> <br /> `ನೌಕಾ ಸಿಬ್ಬಂದಿ ವಿಚಾರಣೆಯನ್ನು ಇಟಲಿಯಲ್ಲಿ ನಡೆಸಲು ಸಿದ್ಧರಿದ್ದೇವೆ, ಆದರೆ ನಾವು ಅವರಿಗೆ ಸ್ವಾತಂತ್ರ್ಯ ನೀಡಬೇಕೆಂದು ಕೋರುತ್ತೇವೆ' ಎಂದು ಇಟಲಿಯ ಒಳಾಡಳಿತ ಸಚಿವ ಆಂಜೋಲಿನೊ ಅಲ್ಫಾನೋ ಅವರು ಹೇಳಿದರು ಎಂದು ಉಲ್ಲೇಖಿಸಿ ಎಎನ್ಎಸ್ಎ ಸುದ್ಧಿಸಂಸ್ಥೆ ವರದಿ ಮಾಡಿದೆ.<br /> <br /> ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಅವರೊಂದಿಗೆ ಭೇಟಿಗೂ ಮುನ್ನ ಅಲ್ಫಾನೋ ಈ ಹೇಳಿಕೆ ನೀಡಿದ್ದಾರೆ.<br /> <br /> ನೌಕಾ ಸಿಬ್ಬಂದಿಯನ್ನು ತಾಯ್ನಾಡಿಗೆ ಮರಳಿ ಕರೆತರುವ ನಿಟ್ಟಿನಲ್ಲಿ ಯುರೋಪಿಯನ್ ಒಕ್ಕೂಟ, ಅಮೆರಿಕ ಮತ್ತು ನ್ಯಾಟೊ ದೇಶಗಳ ಸಹಯೋಗದ ಅಂತರರಾಷ್ಟ್ರೀಯ ಮಟ್ಟದ ರ್ಯಾಲಿಯನ್ನು ನಡೆಸಲು ಇಟಲಿ ಪ್ರಯತ್ನಿಸುತ್ತಿದೆ.</p>.<p>ಕಳೆದ ವರ್ಷ ಫೆಬ್ರುವರಿಯಲ್ಲಿ ಕೇರಳದ ಅಲಪ್ಪುಝಾ ಕರಾವಳಿ ಪ್ರದೇಶದಲ್ಲಿ ಇಟಲಿಯ ಎಂ.ಟಿ. ಎನ್ರಿಕಾ ಲೆಕ್ಸಿ ಹಡಗಿನಲ್ಲಿದ್ದ ನೌಕಾ ಸಿಬ್ಬಂದಿ ಇಬ್ಬರು ಮೀನುಗಾರರನ್ನು ಕಡಲ್ಗಳ್ಳರೆಂದು ತಪ್ಪಾಗಿ ಭಾವಿಸಿ ಗುಂಡು ಹಾರಿಸಿ ಕೊಂದಿದ್ದರು. ಈ ಘಟನೆಯು ಉಭಯ ದೇಶಗಳ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ.</p>.<p>ಸಧ್ಯ ಆರೋಪಿಗಳಾದ ಮಾಸ್ಸಿ ಮಿಲಿಯಾನೊ ಲಾಟೊರ್ರೆ ಮತ್ತು ಸಾಲ್ವಟೋರ್ ಗಿರೋನ್ ಅವರು ದೆಹಲಿಯಲ್ಲಿರುವ ಇಟಲಿ ರಾಯಭಾರಿ ಕಚೇರಿಯಲ್ಲಿ ತಂಗಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವಸಂಸ್ಥೆ (ಪಿಟಿಐ): </strong>ಕೆರಳದ<strong> </strong>ಇಬ್ಬರು ಮೀನುಗಾರರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಭಾರತದ ವಶದಲ್ಲಿರುವ ತನ್ನ ಇಬ್ಬರು ನೌಕಾ ಸಿಬ್ಬಂದಿಯನ್ನು ಬಿಡುಗಡೆಗೊಳಿಸಲು ಸಹಾಯ ಮಾಡುವಂತೆ ಕೋರಿ ಇಟಲಿಯು ವಿಶ್ವಸಂಸ್ಥೆಯ ಮೊರೆ ಹೋಗಿದೆ.<br /> <br /> `ನೌಕಾ ಸಿಬ್ಬಂದಿ ವಿಚಾರಣೆಯನ್ನು ಇಟಲಿಯಲ್ಲಿ ನಡೆಸಲು ಸಿದ್ಧರಿದ್ದೇವೆ, ಆದರೆ ನಾವು ಅವರಿಗೆ ಸ್ವಾತಂತ್ರ್ಯ ನೀಡಬೇಕೆಂದು ಕೋರುತ್ತೇವೆ' ಎಂದು ಇಟಲಿಯ ಒಳಾಡಳಿತ ಸಚಿವ ಆಂಜೋಲಿನೊ ಅಲ್ಫಾನೋ ಅವರು ಹೇಳಿದರು ಎಂದು ಉಲ್ಲೇಖಿಸಿ ಎಎನ್ಎಸ್ಎ ಸುದ್ಧಿಸಂಸ್ಥೆ ವರದಿ ಮಾಡಿದೆ.<br /> <br /> ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಅವರೊಂದಿಗೆ ಭೇಟಿಗೂ ಮುನ್ನ ಅಲ್ಫಾನೋ ಈ ಹೇಳಿಕೆ ನೀಡಿದ್ದಾರೆ.<br /> <br /> ನೌಕಾ ಸಿಬ್ಬಂದಿಯನ್ನು ತಾಯ್ನಾಡಿಗೆ ಮರಳಿ ಕರೆತರುವ ನಿಟ್ಟಿನಲ್ಲಿ ಯುರೋಪಿಯನ್ ಒಕ್ಕೂಟ, ಅಮೆರಿಕ ಮತ್ತು ನ್ಯಾಟೊ ದೇಶಗಳ ಸಹಯೋಗದ ಅಂತರರಾಷ್ಟ್ರೀಯ ಮಟ್ಟದ ರ್ಯಾಲಿಯನ್ನು ನಡೆಸಲು ಇಟಲಿ ಪ್ರಯತ್ನಿಸುತ್ತಿದೆ.</p>.<p>ಕಳೆದ ವರ್ಷ ಫೆಬ್ರುವರಿಯಲ್ಲಿ ಕೇರಳದ ಅಲಪ್ಪುಝಾ ಕರಾವಳಿ ಪ್ರದೇಶದಲ್ಲಿ ಇಟಲಿಯ ಎಂ.ಟಿ. ಎನ್ರಿಕಾ ಲೆಕ್ಸಿ ಹಡಗಿನಲ್ಲಿದ್ದ ನೌಕಾ ಸಿಬ್ಬಂದಿ ಇಬ್ಬರು ಮೀನುಗಾರರನ್ನು ಕಡಲ್ಗಳ್ಳರೆಂದು ತಪ್ಪಾಗಿ ಭಾವಿಸಿ ಗುಂಡು ಹಾರಿಸಿ ಕೊಂದಿದ್ದರು. ಈ ಘಟನೆಯು ಉಭಯ ದೇಶಗಳ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ.</p>.<p>ಸಧ್ಯ ಆರೋಪಿಗಳಾದ ಮಾಸ್ಸಿ ಮಿಲಿಯಾನೊ ಲಾಟೊರ್ರೆ ಮತ್ತು ಸಾಲ್ವಟೋರ್ ಗಿರೋನ್ ಅವರು ದೆಹಲಿಯಲ್ಲಿರುವ ಇಟಲಿ ರಾಯಭಾರಿ ಕಚೇರಿಯಲ್ಲಿ ತಂಗಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>