<p><strong>ಕರಾಚಿ (ಪಿಟಿಐ):</strong> ಒಂದಿಲ್ಲೊಂದು ವಿವಾದದ ಸುಳಿಯಲ್ಲಿ ಸಿಲುಕಿ ತೊಳಲಾಡಿರುವ ಪಾಕಿಸ್ತಾನ ತಂಡದವರು ಈ ಬಾರಿಯ ವಿಶ್ವಕಪ್ ಕ್ರಿಕೆಟ್ನಲ್ಲಿ ಯಾವುದೇ ರೀತಿಯಲ್ಲಿ ಬಿರುಗಾಳಿ ಏಳುವಂತೆ ಮಾಡಿಲ್ಲ. ಆಟದಲ್ಲಿ ಮಾತ್ರ ತಮ್ಮ ಸತ್ವ ಪ್ರದರ್ಶಿಸುತ್ತಾ ಸಾಗಿದ್ದಾರೆ.<br /> <br /> ‘ಸ್ಪಾಟ್ ಫಿಕ್ಸಿಂಗ್’ನಂಥ ಪ್ರಕರಣದಲ್ಲಿ ವಿಶ್ವದ ಕಣ್ಣು ಕುಕ್ಕಿದ ತಂಡವು ‘ಈಗ ವಿವಾದಗಳಿಂದ ಮುಕ್ತ’ ಎಂದು ಹೇಳುತ್ತಾರೆ ಕೋಚ್ ವಕಾರ್ ಯೂನಿಸ್. ಕೋಚ್ ಸ್ಥಾನಕ್ಕೆ ಬಂದು ಒಂದು ವರ್ಷವನ್ನು ಪೂರೈಸಿರುವ ಅವರು ಪಾಕ್ ಪಡೆಯು ಈ ಬಾರಿಯ ವಿಶ್ವಕಪ್ನಲ್ಲಿ ಯಾವುದೇ ಆಘಾತಕ್ಕೆ ಅವಕಾಶ ಸಿಗದ ರೀತಿಯಲ್ಲಿ ಉತ್ತಮ ಪ್ರದರ್ಶನದ ಹಾದಿಯಲ್ಲಿ ನಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.<br /> <br /> ‘ದೊಡ್ಡ ಸಮಾಧಾನ. ಹೌದು; ತಂಡದ ಪ್ರತಿಯೊಬ್ಬ ಆಟಗಾರ ಆತ್ಮವಿಶ್ವಾಸದಿಂದ ಗಟ್ಟಿಗೊಂಡಿದ್ದಾನೆ. ಹೀಗೆ ಗೆಲುವು ಪಡೆಯುತ್ತಾ ಸಾಗಿರುವುದೇ ಅದಕ್ಕೆ ಸಾಕ್ಷಿ. ವಿವಾದಗಳ ಸುಳಿಯಿಂದ ಹೊರಬಂದು ಕೇವಲ ಕ್ರಿಕೆಟ್ ಕಡೆಗೆ ಗಮನ ಇರುವ ಕಾರಣ ಪ್ರದರ್ಶನ ಮಟ್ಟವೂ ಸುಧಾರಿಸಿದೆ. ಕೋಚ್ ಆಗಿ ತಂಡದಲ್ಲಿನ ಈ ಬೆಳವಣಿಗೆ ಹಿತಕಾರಿ ಎನಿಸಿದೆ’ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.<br /> <br /> ಮತ್ತೆ ನಮ್ಮ ತಂಡವನ್ನು ಯಾವುದಾದರೂ ವಿವಾದದ ನಡುವೆ ಎಳೆಯಲಾಗುತ್ತದೆ ಎನ್ನುವ ಆತಂಕ ತಪ್ಪಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕರಾಚಿ (ಪಿಟಿಐ):</strong> ಒಂದಿಲ್ಲೊಂದು ವಿವಾದದ ಸುಳಿಯಲ್ಲಿ ಸಿಲುಕಿ ತೊಳಲಾಡಿರುವ ಪಾಕಿಸ್ತಾನ ತಂಡದವರು ಈ ಬಾರಿಯ ವಿಶ್ವಕಪ್ ಕ್ರಿಕೆಟ್ನಲ್ಲಿ ಯಾವುದೇ ರೀತಿಯಲ್ಲಿ ಬಿರುಗಾಳಿ ಏಳುವಂತೆ ಮಾಡಿಲ್ಲ. ಆಟದಲ್ಲಿ ಮಾತ್ರ ತಮ್ಮ ಸತ್ವ ಪ್ರದರ್ಶಿಸುತ್ತಾ ಸಾಗಿದ್ದಾರೆ.<br /> <br /> ‘ಸ್ಪಾಟ್ ಫಿಕ್ಸಿಂಗ್’ನಂಥ ಪ್ರಕರಣದಲ್ಲಿ ವಿಶ್ವದ ಕಣ್ಣು ಕುಕ್ಕಿದ ತಂಡವು ‘ಈಗ ವಿವಾದಗಳಿಂದ ಮುಕ್ತ’ ಎಂದು ಹೇಳುತ್ತಾರೆ ಕೋಚ್ ವಕಾರ್ ಯೂನಿಸ್. ಕೋಚ್ ಸ್ಥಾನಕ್ಕೆ ಬಂದು ಒಂದು ವರ್ಷವನ್ನು ಪೂರೈಸಿರುವ ಅವರು ಪಾಕ್ ಪಡೆಯು ಈ ಬಾರಿಯ ವಿಶ್ವಕಪ್ನಲ್ಲಿ ಯಾವುದೇ ಆಘಾತಕ್ಕೆ ಅವಕಾಶ ಸಿಗದ ರೀತಿಯಲ್ಲಿ ಉತ್ತಮ ಪ್ರದರ್ಶನದ ಹಾದಿಯಲ್ಲಿ ನಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.<br /> <br /> ‘ದೊಡ್ಡ ಸಮಾಧಾನ. ಹೌದು; ತಂಡದ ಪ್ರತಿಯೊಬ್ಬ ಆಟಗಾರ ಆತ್ಮವಿಶ್ವಾಸದಿಂದ ಗಟ್ಟಿಗೊಂಡಿದ್ದಾನೆ. ಹೀಗೆ ಗೆಲುವು ಪಡೆಯುತ್ತಾ ಸಾಗಿರುವುದೇ ಅದಕ್ಕೆ ಸಾಕ್ಷಿ. ವಿವಾದಗಳ ಸುಳಿಯಿಂದ ಹೊರಬಂದು ಕೇವಲ ಕ್ರಿಕೆಟ್ ಕಡೆಗೆ ಗಮನ ಇರುವ ಕಾರಣ ಪ್ರದರ್ಶನ ಮಟ್ಟವೂ ಸುಧಾರಿಸಿದೆ. ಕೋಚ್ ಆಗಿ ತಂಡದಲ್ಲಿನ ಈ ಬೆಳವಣಿಗೆ ಹಿತಕಾರಿ ಎನಿಸಿದೆ’ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.<br /> <br /> ಮತ್ತೆ ನಮ್ಮ ತಂಡವನ್ನು ಯಾವುದಾದರೂ ವಿವಾದದ ನಡುವೆ ಎಳೆಯಲಾಗುತ್ತದೆ ಎನ್ನುವ ಆತಂಕ ತಪ್ಪಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>