<p>‘ಭಕ್ತಸಾಗರ ಮಧ್ಯೆ ವೈರಮುಡಿ ಉತ್ಸವ’ ಎಂಬ ಶೀರ್ಷಿಕೆಯಡಿ, ಮಂಡ್ಯ ಜಿಲ್ಲೆಯ ಮೇಲುಕೋಟೆಯ ಪ್ರಸಿದ್ಧ ವೈರಮುಡಿ ಉತ್ಸವದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಸುದ್ದಿ ಪ್ರಕಟವಾಗಿದೆ (ಮಾ.14). ‘ಸಂಜೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಆಭರಣಗಳನ್ನು ದೇವಸ್ಥಾನದ ಸ್ಥಾನಿಕರಿಗೆ ವಿತರಣೆ (ಪರ್ಕಾವಣೆ) ಮಾಡಲಾಯಿತು.<br /> <br /> ಆನಂತರ ಅವರು ದೇವರನ್ನು ಆಭರಣಗಳಿಂದ ಅಲಂಕರಿಸಿದರು’ ಎಂಬ ಅಂಶ ಸುದ್ದಿಯಲ್ಲಿದೆ. ಆದರೆ ವೈರಮುಡಿ ಕಿರೀಟ ಆಭರಣದ ಪೆಟ್ಟಿಗೆಯ ಸೀಲ್ ಪರಿಶೀಲಿಸಿದ ನಂತರ ದೇವಸ್ಥಾನದ ಪ್ರಧಾನ ಅರ್ಚಕ ವರದರಾಜ ಭಟ್ಟರ್ ಮತ್ತು ಮೊದಲನೇ ಸ್ಥಾನಿಕ ಕರಗಂ<br /> ನಾರಾಯಣಯ್ಯಂಗಾರ್ ಅವರ ಜಂಟಿ ಸುಪರ್ದಿಗೆ ದೇವರ ಧಾರಣೆ ಬಗ್ಗೆ ಹಸ್ತಾಂತರಿಸಲಾಗುತ್ತದೆ ಮತ್ತು ಅರ್ಚಕರು ಕಿರೀಟವನ್ನು ದೇವರಿಗೆ ಧರಿಸಿ ಅಲಂಕರಿಸುತ್ತಾರೆಯೇ ವಿನಾ ಸ್ಥಾನಿಕರಲ್ಲ.<br /> <br /> ಈ ವರ್ಷವೂ ಅದೇ ರೀತಿ ನಡೆದಿದೆ. ರಾಜಮುಡಿ ಮತ್ತು ಅದರ ಜೊತೆ ಬಂದಿರುವ ಇತರೆ ಆಭರಣಗಳನ್ನೂ ಅರ್ಚಕರು, ಪರಿಚಾರಕರು ಮತ್ತು 4 ಜನ ಸ್ಥಾನಿಕರು, ಕಾವಲುಗಾರರು ಇವರ ಜಂಟಿ ಸುಪರ್ದಿಗೆ ವಹಿಸಲಾಗುತ್ತದೆಯೇ ವಿನಾ ಸ್ಥಾನಿಕರಿಗೆ ಮಾತ್ರ ವಿತರಿಸುವುದಿಲ್ಲ. ಈ ಆಭರಣಗಳನ್ನು ಸಹ ಅರ್ಚಕರು ಮಾತ್ರ ದೇವರಿಗೆ ಧರಿಸಿ ಅಲಂಕರಿಸುತ್ತಾರೆಯೇ ವಿನಾ ಸ್ಥಾನಿಕರಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಮೇಲಿನಂತೆಯೇ ನಡೆದಿದೆ. ಈ ಕುರಿತು ದೇವಾಲಯದ ದಾಖಲೆಗಳನ್ನು ಪರಿಶೀಲಿಸಬಹುದು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಭಕ್ತಸಾಗರ ಮಧ್ಯೆ ವೈರಮುಡಿ ಉತ್ಸವ’ ಎಂಬ ಶೀರ್ಷಿಕೆಯಡಿ, ಮಂಡ್ಯ ಜಿಲ್ಲೆಯ ಮೇಲುಕೋಟೆಯ ಪ್ರಸಿದ್ಧ ವೈರಮುಡಿ ಉತ್ಸವದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಸುದ್ದಿ ಪ್ರಕಟವಾಗಿದೆ (ಮಾ.14). ‘ಸಂಜೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಆಭರಣಗಳನ್ನು ದೇವಸ್ಥಾನದ ಸ್ಥಾನಿಕರಿಗೆ ವಿತರಣೆ (ಪರ್ಕಾವಣೆ) ಮಾಡಲಾಯಿತು.<br /> <br /> ಆನಂತರ ಅವರು ದೇವರನ್ನು ಆಭರಣಗಳಿಂದ ಅಲಂಕರಿಸಿದರು’ ಎಂಬ ಅಂಶ ಸುದ್ದಿಯಲ್ಲಿದೆ. ಆದರೆ ವೈರಮುಡಿ ಕಿರೀಟ ಆಭರಣದ ಪೆಟ್ಟಿಗೆಯ ಸೀಲ್ ಪರಿಶೀಲಿಸಿದ ನಂತರ ದೇವಸ್ಥಾನದ ಪ್ರಧಾನ ಅರ್ಚಕ ವರದರಾಜ ಭಟ್ಟರ್ ಮತ್ತು ಮೊದಲನೇ ಸ್ಥಾನಿಕ ಕರಗಂ<br /> ನಾರಾಯಣಯ್ಯಂಗಾರ್ ಅವರ ಜಂಟಿ ಸುಪರ್ದಿಗೆ ದೇವರ ಧಾರಣೆ ಬಗ್ಗೆ ಹಸ್ತಾಂತರಿಸಲಾಗುತ್ತದೆ ಮತ್ತು ಅರ್ಚಕರು ಕಿರೀಟವನ್ನು ದೇವರಿಗೆ ಧರಿಸಿ ಅಲಂಕರಿಸುತ್ತಾರೆಯೇ ವಿನಾ ಸ್ಥಾನಿಕರಲ್ಲ.<br /> <br /> ಈ ವರ್ಷವೂ ಅದೇ ರೀತಿ ನಡೆದಿದೆ. ರಾಜಮುಡಿ ಮತ್ತು ಅದರ ಜೊತೆ ಬಂದಿರುವ ಇತರೆ ಆಭರಣಗಳನ್ನೂ ಅರ್ಚಕರು, ಪರಿಚಾರಕರು ಮತ್ತು 4 ಜನ ಸ್ಥಾನಿಕರು, ಕಾವಲುಗಾರರು ಇವರ ಜಂಟಿ ಸುಪರ್ದಿಗೆ ವಹಿಸಲಾಗುತ್ತದೆಯೇ ವಿನಾ ಸ್ಥಾನಿಕರಿಗೆ ಮಾತ್ರ ವಿತರಿಸುವುದಿಲ್ಲ. ಈ ಆಭರಣಗಳನ್ನು ಸಹ ಅರ್ಚಕರು ಮಾತ್ರ ದೇವರಿಗೆ ಧರಿಸಿ ಅಲಂಕರಿಸುತ್ತಾರೆಯೇ ವಿನಾ ಸ್ಥಾನಿಕರಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಮೇಲಿನಂತೆಯೇ ನಡೆದಿದೆ. ಈ ಕುರಿತು ದೇವಾಲಯದ ದಾಖಲೆಗಳನ್ನು ಪರಿಶೀಲಿಸಬಹುದು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>