<p><strong>ಮಂಡ್ಯ: </strong>ವ್ಯಕ್ತಿಗಳ ನಡುವಿನ ದ್ವೇಷಕ್ಕೆ ಎತ್ತು ಕಣ್ಣು ಕಳೆದುಕೊಂಡ ಪ್ರಕರಣ ಇದು. ದ್ವೇಷದ ಹಿನ್ನೆಲೆಯಲ್ಲಿ ತಾಲ್ಲೂಕಿನ ಹುಳ್ಳೇನಹಳ್ಳಿ ಗ್ರಾಮದ ಮಂಚೇಗೌಡ ಎಂಬವರಿಗೆ ಸೇರಿದ ಎತ್ತುಗಳ ಕಣ್ಣಿಗೆ ಆ್ಯಸಿಡ್ ಹಾಕಿದ್ದು, ಎರಡು ಎತ್ತುಗಳ ಎಡ ಕಣ್ಣು ಹಾನಿಗೊಂಡಿದೆ.<br /> <br /> ಪಶು ವೈದ್ಯರೂ ಕೂಡಾ ಕಣ್ಣಿಗೆ ಹಾನಿ ಆಗಿರುವುದನ್ನು ದೃಢ ಪಡಿಸಿದ್ದು, ದೃಷ್ಟಿ ಬರುವುದು ಕಷ್ಟ ಎಂದು ಹೇಳಿದ್ದಾರೆ ಎಂದು ಈ ಕುರಿತು ಶಿವಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.<br /> <br /> ಎತ್ತುಗಳಿಗೆ ಆ್ಯಸಿಡ್ ಹಾಕಿರುವ ಆರೋಪದ ಮೇಲೆ ಶಿವಳ್ಳಿ ಠಾಣೆ ಪೊಲೀಸರು ಅದೇ ಗ್ರಾಮದ ಪ್ರಭಾಕರ ಎಂಬವರನ್ನು ಬಂಧಿಸಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.<br /> <br /> ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳು ಕಣ್ಣಿನಲ್ಲಿ ಉರಿ ಕಾಣಿಸಿಕೊಂಡ ಕೂಡಲೇ ಕಟ್ಟಿದ್ದ ಗೂಟವನ್ನು ಕಿತ್ತುಕೊಂಡು ಚಿಗಿಯ ಲಾರಂಭಿಸಿದವು. ಪಶುವೈದ್ಯರು ಬಂದು ಪರೀಕ್ಷಿಸುವ ವೇಳೆಗೆ ಹಾನಿ ಆಗಿತ್ತು ಮಂಚೇಗೌಡ ತಿಳಿಸಿದ್ದಾರೆ.<br /> <br /> ಹಳೆಯ ದ್ವೇಷವೇ ಪ್ರಭಾಕರ ಈ ಕೃತ್ಯ ಎಸಗಲು ಕಾರಣ ಎಂದು ಆರೋಪಿಸಿದ್ದಾರೆ. ಪ್ರಭಾಕರ ಕೃತ್ಯದಿಂದಾಗಿ ಈಗ ದ್ವೇಷಕ್ಕೆ ಸಂಬಂಧವೇ ಇಲ್ಲದ ಎತ್ತುಗಳು ದೃಷ್ಟಿ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ: </strong>ವ್ಯಕ್ತಿಗಳ ನಡುವಿನ ದ್ವೇಷಕ್ಕೆ ಎತ್ತು ಕಣ್ಣು ಕಳೆದುಕೊಂಡ ಪ್ರಕರಣ ಇದು. ದ್ವೇಷದ ಹಿನ್ನೆಲೆಯಲ್ಲಿ ತಾಲ್ಲೂಕಿನ ಹುಳ್ಳೇನಹಳ್ಳಿ ಗ್ರಾಮದ ಮಂಚೇಗೌಡ ಎಂಬವರಿಗೆ ಸೇರಿದ ಎತ್ತುಗಳ ಕಣ್ಣಿಗೆ ಆ್ಯಸಿಡ್ ಹಾಕಿದ್ದು, ಎರಡು ಎತ್ತುಗಳ ಎಡ ಕಣ್ಣು ಹಾನಿಗೊಂಡಿದೆ.<br /> <br /> ಪಶು ವೈದ್ಯರೂ ಕೂಡಾ ಕಣ್ಣಿಗೆ ಹಾನಿ ಆಗಿರುವುದನ್ನು ದೃಢ ಪಡಿಸಿದ್ದು, ದೃಷ್ಟಿ ಬರುವುದು ಕಷ್ಟ ಎಂದು ಹೇಳಿದ್ದಾರೆ ಎಂದು ಈ ಕುರಿತು ಶಿವಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.<br /> <br /> ಎತ್ತುಗಳಿಗೆ ಆ್ಯಸಿಡ್ ಹಾಕಿರುವ ಆರೋಪದ ಮೇಲೆ ಶಿವಳ್ಳಿ ಠಾಣೆ ಪೊಲೀಸರು ಅದೇ ಗ್ರಾಮದ ಪ್ರಭಾಕರ ಎಂಬವರನ್ನು ಬಂಧಿಸಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.<br /> <br /> ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳು ಕಣ್ಣಿನಲ್ಲಿ ಉರಿ ಕಾಣಿಸಿಕೊಂಡ ಕೂಡಲೇ ಕಟ್ಟಿದ್ದ ಗೂಟವನ್ನು ಕಿತ್ತುಕೊಂಡು ಚಿಗಿಯ ಲಾರಂಭಿಸಿದವು. ಪಶುವೈದ್ಯರು ಬಂದು ಪರೀಕ್ಷಿಸುವ ವೇಳೆಗೆ ಹಾನಿ ಆಗಿತ್ತು ಮಂಚೇಗೌಡ ತಿಳಿಸಿದ್ದಾರೆ.<br /> <br /> ಹಳೆಯ ದ್ವೇಷವೇ ಪ್ರಭಾಕರ ಈ ಕೃತ್ಯ ಎಸಗಲು ಕಾರಣ ಎಂದು ಆರೋಪಿಸಿದ್ದಾರೆ. ಪ್ರಭಾಕರ ಕೃತ್ಯದಿಂದಾಗಿ ಈಗ ದ್ವೇಷಕ್ಕೆ ಸಂಬಂಧವೇ ಇಲ್ಲದ ಎತ್ತುಗಳು ದೃಷ್ಟಿ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>