<p>‘ಒಬ್ಬ ಕಲಾವಿದನ ವೃತ್ತಿ ಜೀವನದಲ್ಲಿ ಕಾಡುವ ಪಾತ್ರಗಳು ಸಾಮಾನ್ಯವಾಗಿ ಮೂರ್ನಾಲ್ಕು ಇರಬಹುದು. ಆದರೆ ಈ ಪಾತ್ರ ಕಾಡುವ ಪಾತ್ರವಲ್ಲ, ಪರಿವರ್ತನೆಯಾಗುವ ಪಾತ್ರ’– ‘ಮಹಾಶರಣ ಹರಳಯ್ಯ’ ಚಿತ್ರದಲ್ಲಿ ಹರಳಯ್ಯನ ಪಾತ್ರದಲ್ಲಿ ನಟಿಸಿರುವ ನಟ ಶ್ರೀಧರ್ ಅವರ ಮಾತಿದು.<br /> <br /> ಚಿತ್ರದ ಗೀತೆಗಳ ಧ್ವನಿಸುರುಳಿ ಬಿಡುಗಡೆಯ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಸವಾದಿ ಶರಣದ ಸ್ಮರಣೆ ನಡೆಯಿತು. ‘ಇದು ನಮ್ಮ ನೆಲದ ಕಥೆ’ ಎಂದ ಶ್ರೀಧರ್, ಬಸವೇಶ್ವರರು ಮತ್ತು ಹರಳಯ್ಯನವರು ನಡೆದಾಡಿದ ಕಾರ್ಯಕ್ಷೇತ್ರಗಳಲ್ಲೂ ಚಿತ್ರವನ್ನು ಸೆರೆಹಿಡಿಯಲಾಗಿದೆ ಎಂದರು.<br /> <br /> ‘ಇಂಥ ಸಿನಿಮಾದ ಪ್ರಯತ್ನ ಬಹಳ ಹಿಂದೆಯೇ ಆಗಬೇಕಿತ್ತು’ ಎಂದವರು ಬಸವಣ್ಣನವರಾಗಿ ಅಭಿನಯಿಸಿರುವ ರಮೇಶ್ ಅರವಿಂದ್. ಚಿತ್ರಕ್ಕೆ ಖಂಡಿತಾ ಅತ್ಯುತ್ತಮವಾದ ಪ್ರತಿಕ್ರಿಯೆ ದೊರೆಯುವ ಆಶಾಭಾವ ಅವರದು.<br /> <br /> ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ– ‘12ರಿಂದ 21ನೇ ಶತಮಾನಕ್ಕೆ ಬಂದಿದ್ದರೂ ಜಾತಿ ವ್ಯವಸ್ಥೆ ಜೀವಂತವಾಗಿದೆ’ ಎಂದು ವಿಷಾದಿಸಿದರು. ‘ಇತ್ತೀಚಿಗೆ ನಮ್ಮ ಅಕ್ಕ, ಬಾಡಿಗೆ ಮನೆ ಪಡೆಯಲು ಮುಂಗಡ ಹಣವನ್ನೂ ನೀಡಿದ್ದರು. ಆ ಮನೆಯವರಿಗೆ ಈಕೆ ನನ್ನ ಅಕ್ಕ ಎನ್ನುವುದು ತಿಳಿಯಿತು. ನಯವಾಗಿ ಮನೆ ನೀಡುವುದನ್ನು ನಿರಾಕರಿಸಿದರು’ ಎಂದವರು ಹೇಳಿದರು. ಪುಟ್ಟಣ್ಣ ಕಣಗಾಲರ ‘ನಾಗರಹಾವು’ ಚಿತ್ರೀಕರಣದ ವೇಳೆ, ತಾವು ನಟರಾಗಲು ಹಂಬಲಿಸಿ ಛಾಯಾಚಿತ್ರವನ್ನು ಅವರಿಗೆ ಕೊಟ್ಟಿದ್ದನ್ನು ನೆನಪಿಸಿಕೊಂಡರು.<br /> <br /> ನಿರ್ದೇಶಕ ಪುರುಷೋತ್ತಮ್, ‘ಮಹಾಶರಣ ಹರಳಯ್ಯ’ ಚಿತ್ರಕ್ಕೆ ಸಿಕ್ಕ ಬೆಂಬಲದಿಂದ ಹರ್ಷಗೊಂಡಿದ್ದಾರೆ. ‘ಮುಂದೆಯೂ ಈ ರೀತಿಯ ಪ್ರಯತ್ನಗಳಾಗಬೇಕು. ಭಕ್ತಿ ಪ್ರಧಾನ ಚಿತ್ರಗಳನ್ನು ಜನರು ಸ್ವೀಕರಿಸುವುದಿಲ್ಲ ಎನ್ನುವ ಮಾತಿಗೆ ಈ ಚಿತ್ರ ಅಪವಾದವಾಗಲಿದೆ’ ಎಂದರು. ಜನವರಿ 10ರಂದು ಚಿತ್ರ ಬಿಡುಗಡೆಯಾಗಲಿದೆಯಂತೆ. ‘ಮಹಾಶರಣ ಹರಳಯ್ಯ ಟ್ರಸ್ಟ್’ ಉತ್ತರ ಕರ್ನಾಟಕದ ಭಾಗದಲ್ಲಿ ಪ್ರದರ್ಶಿಸಲು 1.50 ಕೋಟಿ ರೂಪಾಯಿಗೆ ಈಗಾಗಲೇ ಚಿತ್ರದ ಹಕ್ಕುಗಳನ್ನು ಖರೀದಿಸಿದೆ.<br /> <br /> ನಿರ್ಮಾಪಕರಾದ ವೆಂಕಟೇಶ್, ದೇವರಾಜ್, ಛಾಯಾಗ್ರಹಕ ಗೌರಿವೆಂಕಟೇಶ್, ಹರಳಯ್ಯ ಟ್ರಸ್ಟ್ನ ಸದಾನಂದ ಬಿ. ತೆರದಾಳ, ಕಲಾವಿದರಾದ ಜೇಮ್ಸ್ ಶಿವು, ಸೂರ್ಯಕಲಾ, ಸ್ವಾತಿ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಒಬ್ಬ ಕಲಾವಿದನ ವೃತ್ತಿ ಜೀವನದಲ್ಲಿ ಕಾಡುವ ಪಾತ್ರಗಳು ಸಾಮಾನ್ಯವಾಗಿ ಮೂರ್ನಾಲ್ಕು ಇರಬಹುದು. ಆದರೆ ಈ ಪಾತ್ರ ಕಾಡುವ ಪಾತ್ರವಲ್ಲ, ಪರಿವರ್ತನೆಯಾಗುವ ಪಾತ್ರ’– ‘ಮಹಾಶರಣ ಹರಳಯ್ಯ’ ಚಿತ್ರದಲ್ಲಿ ಹರಳಯ್ಯನ ಪಾತ್ರದಲ್ಲಿ ನಟಿಸಿರುವ ನಟ ಶ್ರೀಧರ್ ಅವರ ಮಾತಿದು.<br /> <br /> ಚಿತ್ರದ ಗೀತೆಗಳ ಧ್ವನಿಸುರುಳಿ ಬಿಡುಗಡೆಯ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಸವಾದಿ ಶರಣದ ಸ್ಮರಣೆ ನಡೆಯಿತು. ‘ಇದು ನಮ್ಮ ನೆಲದ ಕಥೆ’ ಎಂದ ಶ್ರೀಧರ್, ಬಸವೇಶ್ವರರು ಮತ್ತು ಹರಳಯ್ಯನವರು ನಡೆದಾಡಿದ ಕಾರ್ಯಕ್ಷೇತ್ರಗಳಲ್ಲೂ ಚಿತ್ರವನ್ನು ಸೆರೆಹಿಡಿಯಲಾಗಿದೆ ಎಂದರು.<br /> <br /> ‘ಇಂಥ ಸಿನಿಮಾದ ಪ್ರಯತ್ನ ಬಹಳ ಹಿಂದೆಯೇ ಆಗಬೇಕಿತ್ತು’ ಎಂದವರು ಬಸವಣ್ಣನವರಾಗಿ ಅಭಿನಯಿಸಿರುವ ರಮೇಶ್ ಅರವಿಂದ್. ಚಿತ್ರಕ್ಕೆ ಖಂಡಿತಾ ಅತ್ಯುತ್ತಮವಾದ ಪ್ರತಿಕ್ರಿಯೆ ದೊರೆಯುವ ಆಶಾಭಾವ ಅವರದು.<br /> <br /> ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ– ‘12ರಿಂದ 21ನೇ ಶತಮಾನಕ್ಕೆ ಬಂದಿದ್ದರೂ ಜಾತಿ ವ್ಯವಸ್ಥೆ ಜೀವಂತವಾಗಿದೆ’ ಎಂದು ವಿಷಾದಿಸಿದರು. ‘ಇತ್ತೀಚಿಗೆ ನಮ್ಮ ಅಕ್ಕ, ಬಾಡಿಗೆ ಮನೆ ಪಡೆಯಲು ಮುಂಗಡ ಹಣವನ್ನೂ ನೀಡಿದ್ದರು. ಆ ಮನೆಯವರಿಗೆ ಈಕೆ ನನ್ನ ಅಕ್ಕ ಎನ್ನುವುದು ತಿಳಿಯಿತು. ನಯವಾಗಿ ಮನೆ ನೀಡುವುದನ್ನು ನಿರಾಕರಿಸಿದರು’ ಎಂದವರು ಹೇಳಿದರು. ಪುಟ್ಟಣ್ಣ ಕಣಗಾಲರ ‘ನಾಗರಹಾವು’ ಚಿತ್ರೀಕರಣದ ವೇಳೆ, ತಾವು ನಟರಾಗಲು ಹಂಬಲಿಸಿ ಛಾಯಾಚಿತ್ರವನ್ನು ಅವರಿಗೆ ಕೊಟ್ಟಿದ್ದನ್ನು ನೆನಪಿಸಿಕೊಂಡರು.<br /> <br /> ನಿರ್ದೇಶಕ ಪುರುಷೋತ್ತಮ್, ‘ಮಹಾಶರಣ ಹರಳಯ್ಯ’ ಚಿತ್ರಕ್ಕೆ ಸಿಕ್ಕ ಬೆಂಬಲದಿಂದ ಹರ್ಷಗೊಂಡಿದ್ದಾರೆ. ‘ಮುಂದೆಯೂ ಈ ರೀತಿಯ ಪ್ರಯತ್ನಗಳಾಗಬೇಕು. ಭಕ್ತಿ ಪ್ರಧಾನ ಚಿತ್ರಗಳನ್ನು ಜನರು ಸ್ವೀಕರಿಸುವುದಿಲ್ಲ ಎನ್ನುವ ಮಾತಿಗೆ ಈ ಚಿತ್ರ ಅಪವಾದವಾಗಲಿದೆ’ ಎಂದರು. ಜನವರಿ 10ರಂದು ಚಿತ್ರ ಬಿಡುಗಡೆಯಾಗಲಿದೆಯಂತೆ. ‘ಮಹಾಶರಣ ಹರಳಯ್ಯ ಟ್ರಸ್ಟ್’ ಉತ್ತರ ಕರ್ನಾಟಕದ ಭಾಗದಲ್ಲಿ ಪ್ರದರ್ಶಿಸಲು 1.50 ಕೋಟಿ ರೂಪಾಯಿಗೆ ಈಗಾಗಲೇ ಚಿತ್ರದ ಹಕ್ಕುಗಳನ್ನು ಖರೀದಿಸಿದೆ.<br /> <br /> ನಿರ್ಮಾಪಕರಾದ ವೆಂಕಟೇಶ್, ದೇವರಾಜ್, ಛಾಯಾಗ್ರಹಕ ಗೌರಿವೆಂಕಟೇಶ್, ಹರಳಯ್ಯ ಟ್ರಸ್ಟ್ನ ಸದಾನಂದ ಬಿ. ತೆರದಾಳ, ಕಲಾವಿದರಾದ ಜೇಮ್ಸ್ ಶಿವು, ಸೂರ್ಯಕಲಾ, ಸ್ವಾತಿ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>