<p><strong>ಮಾಸ್ಕೊ(ಪಿಟಿಐ):</strong> ಬಾಲಿವುಡ್ ನಟ ಶಾರುಕ್ ಖಾನ್ ಅವರನ್ನು ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಡೆದ ಘಟನೆಯನ್ನು ಅಮೆರಿಕವು ಗಂಭೀರವಾಗಿ ಪರಿಗಣಿಸಬೇಕು. ಇದು ಮರುಕಳಿಸದಂತೆ ನೋಡಿಕೊಳ್ಳಬೇಕು. ಕಾಟಾಚಾರದ ಕ್ಷಮಾಪಣೆಯಿಂದ ಪ್ರಯೋಜನವಿಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ಶನಿವಾರ ಪುನರುಚ್ಚರಿಸಿದ್ದಾರೆ.<br /> <br /> ತನ್ನ ದೇಶದಲ್ಲಿ ಜಾರಿಯಲ್ಲಿರುವ ಕಾನೂನು ಕ್ರಮಗಳನ್ನು ಅಮೆರಿಕವು ಗಂಭೀರವಾಗಿ ಪರಿಶೀಲಿಸಬೇಕಿದೆ. ಉಭಯ ದೇಶಗಳ ಒಡನಾಟಕ್ಕೆ ಇದು ಅನುಕೂಲವಾಗಲಿದೆ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.<br /> <br /> ಶಾರುಕ್ ಪ್ರಕರಣದಲ್ಲಿ ಭಾರತಕ್ಕೆ ಅಸಮಾಧಾನವಾಗಿದೆ ಎನ್ನುವುದನ್ನು ದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಉಪಮುಖ್ಯಸ್ಥರ ಗಮನಕ್ಕೆ ತರಲು ವಿದೇಶಾಂಗ ಕಾರ್ಯದರ್ಶಿ ಕಚೇರಿಗೆ ಸೂಚನೆ ನೀಡಿದ್ದಾಗಿಯೂ ಕೃಷ್ಣ ಹೇಳಿದ್ದಾರೆ. ದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಈ ಘಟನೆಗಾಗಿ ಶಾರುಕ್ ಅವರ ಕ್ಷಮೆ ಕೇಳಿದೆ.<br /> <br /> <strong>ಅನ್ನಾನ್ ಜತೆ ಚರ್ಚೆ:</strong> ಸಿರಿಯಾ ಬಿಕ್ಕಟ್ಟು ಕುರಿತು ಕೃಷ್ಣ ಅವರು ವಿಶ್ವಸಂಸ್ಥೆಯ ವಿಶೇಷ ರಾಯಭಾರಿ ಕೋಫಿ ಅನ್ನಾನ್ ಅವರೊಂದಿಗೆ ಶನಿವಾರ ದೂರವಾಣಿ ಮೂಲಕ ಚರ್ಚೆ ನಡೆಸಿದರು. <br /> <br /> ಸಂಘರ್ಷ ಪೀಡಿತ ಸಿರಿಯಾದಲ್ಲಿ ಶಾಂತಿ ಸ್ಥಾಪಿಸಲು ಅನ್ನಾನ್ ಮಾಡುತ್ತಿರುವ ಪ್ರಯತ್ನಕ್ಕೆ ಬೆಂಬಲ ನೀಡುವುದಾಗಿಯೂ ತಿಳಿಸಿದರು.<br /> <br /> <strong>ಇಂದು ಕೃಷ್ಣ ಯುಎಇಗೆ</strong>: ದ್ವಿ-ತೆರಿಗೆ ನೀತಿ ಮತ್ತು ರಾಯಭಾರಿ ಕಚೇರಿ ತೆರೆಯವ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಯುಎಇ ವಿದೇಶಾಂಗ ಸಚಿವರು ಅಬುಧಾಬಿಯಲ್ಲಿ ಭಾನುವಾರ ಚರ್ಚಿಸಲಿದ್ದಾರೆ.<br /> </p>.<p><strong>`ಜನಾಂಗೀಯ ಹಿನ್ನೆಲೆ ಕಾರಣವಲ್ಲ~</strong></p>.<p>ಕಳೆದ ಮೂರು ವರ್ಷಗಳಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಅವರನ್ನು ಅಮೆರಿಕದಲ್ಲಿ ಎರಡು ಬಾರಿ ಬಂಧಿಸಿದ್ದರ ಹಿಂದೆ ಯಾವುದೇ ಜನಾಂಗೀಯ ಕಾರಣವಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. `ನಾನು ಈ ಪ್ರಕರಣವನ್ನು ಜನಾಂಗೀಯ ಹಿನ್ನೆಲೆಯಲ್ಲಿ ನೋಡಲುವುದಿಲ್ಲ. <br /> <br /> ಪ್ರತಿನಿತ್ಯವೂ ಇಲ್ಲಿನ ವಿಮಾನ ನಿಲ್ದಾಣಕ್ಕೆ ಸಾವಿರಾರು ಮುಸ್ಲಿಂ ಪ್ರಯಾಣಿಕರು ಬಂದು ಹೋಗುತ್ತಾರೆ. ಹಾಗಂತ ಅವರನ್ನು ಬಂಧಿಸಿದ ಉದಾಹರಣೆಗಳು ಇಲ್ಲ~ ಎಂದು ವಿದೇಶಾಂಗ ಇಲಾಖೆ ವಕ್ತಾರ ಮಾರ್ಕ್ ಟೋನರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.<br /> <br /> ಈ ಹಿಂದೆ 2009ರಲ್ಲಿ ನ್ಯೂಜೆರ್ಸಿಯ ನೇವಾರ್ಕ್ ವಿಮಾನ ನಿಲ್ದಾಣದಲ್ಲಿ ಶಾರುಕ್ ಅವರನ್ನು ತಡೆದು ವಿಚಾರಣೆ ನಡೆಸಲಾಗಿತ್ತು.<br /> </p>.<p><strong>`ದುರದೃಷ್ಟಕರ ಪ್ರಕರಣ~<br /> ನ್ಯೂಯಾರ್ಕ್ (ಪಿಟಿಐ): </strong>ಶಾರುಕ್ ಖಾನ್ ಪ್ರಕರಣ `ದುರದೃಷ್ಟಕರ~ ಎಂದಿರುವ ಯೇಲ್ ವಿಶ್ವವಿದ್ಯಾಲಯವು, ಅಂತಿಮವಾಗಿ ಈ ಘಟನೆ ಸಮಾಧಾನಕರ ರೀತಿಯಲ್ಲಿ ಅಂತ್ಯಕಂಡಿದೆ ಎಂದು ಶನಿವಾರ ಹೇಳಿದೆ.<br /> <br /> `ಸ್ವತಃ ಶಾರುಕ್ ಅವರೇ ಹೇಳುವಂತೆ, ಒಂದು ಸಿನಿಮಾ ಹೇಗೆ ಆರಂಭವಾಗುತ್ತದೆ ಎನ್ನುವುದಕ್ಕಿಂತ ಹೇಗೆ ಮುಕ್ತಾಯವಾಗುತ್ತದೆ ಎನ್ನುವ ಅಂಶ ಮುಖ್ಯವಾಗುತ್ತದೆ. <br /> <br /> ಇದೇ ರೀತಿಯಲ್ಲಿ ಶುಕ್ರವಾರ ದುರದೃಷ್ಟಕರ ರೀತಿಯಲ್ಲಿ ಘಟನೆ ಶುರುವಾಯಿತು. ಕೊನೆಗೆ ಎಲ್ಲರಿಗೂ ಸಮಧಾನವಾಗುವಂತೆ ಅಂತ್ಯ ಕಂಡಿತು~ ಎಂದು ವಿಶ್ವವಿದ್ಯಾಲಯದ ಅಂತರ ರಾಷ್ಟ್ರೀಯ ವ್ಯವಹಾರದ ಸಹಾಯಕ ಕಾರ್ಯದರ್ಶಿ ಜಾರ್ಜ್ ಜೋಸೆಫ್ ಅವರು ಸುದ್ದಿ ಸಂಸ್ಥೆಗೆ ಇ-ಮೇಲ್ ಮೂಲಕ ಹೇಳಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಸ್ಕೊ(ಪಿಟಿಐ):</strong> ಬಾಲಿವುಡ್ ನಟ ಶಾರುಕ್ ಖಾನ್ ಅವರನ್ನು ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಡೆದ ಘಟನೆಯನ್ನು ಅಮೆರಿಕವು ಗಂಭೀರವಾಗಿ ಪರಿಗಣಿಸಬೇಕು. ಇದು ಮರುಕಳಿಸದಂತೆ ನೋಡಿಕೊಳ್ಳಬೇಕು. ಕಾಟಾಚಾರದ ಕ್ಷಮಾಪಣೆಯಿಂದ ಪ್ರಯೋಜನವಿಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ಶನಿವಾರ ಪುನರುಚ್ಚರಿಸಿದ್ದಾರೆ.<br /> <br /> ತನ್ನ ದೇಶದಲ್ಲಿ ಜಾರಿಯಲ್ಲಿರುವ ಕಾನೂನು ಕ್ರಮಗಳನ್ನು ಅಮೆರಿಕವು ಗಂಭೀರವಾಗಿ ಪರಿಶೀಲಿಸಬೇಕಿದೆ. ಉಭಯ ದೇಶಗಳ ಒಡನಾಟಕ್ಕೆ ಇದು ಅನುಕೂಲವಾಗಲಿದೆ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.<br /> <br /> ಶಾರುಕ್ ಪ್ರಕರಣದಲ್ಲಿ ಭಾರತಕ್ಕೆ ಅಸಮಾಧಾನವಾಗಿದೆ ಎನ್ನುವುದನ್ನು ದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಉಪಮುಖ್ಯಸ್ಥರ ಗಮನಕ್ಕೆ ತರಲು ವಿದೇಶಾಂಗ ಕಾರ್ಯದರ್ಶಿ ಕಚೇರಿಗೆ ಸೂಚನೆ ನೀಡಿದ್ದಾಗಿಯೂ ಕೃಷ್ಣ ಹೇಳಿದ್ದಾರೆ. ದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಈ ಘಟನೆಗಾಗಿ ಶಾರುಕ್ ಅವರ ಕ್ಷಮೆ ಕೇಳಿದೆ.<br /> <br /> <strong>ಅನ್ನಾನ್ ಜತೆ ಚರ್ಚೆ:</strong> ಸಿರಿಯಾ ಬಿಕ್ಕಟ್ಟು ಕುರಿತು ಕೃಷ್ಣ ಅವರು ವಿಶ್ವಸಂಸ್ಥೆಯ ವಿಶೇಷ ರಾಯಭಾರಿ ಕೋಫಿ ಅನ್ನಾನ್ ಅವರೊಂದಿಗೆ ಶನಿವಾರ ದೂರವಾಣಿ ಮೂಲಕ ಚರ್ಚೆ ನಡೆಸಿದರು. <br /> <br /> ಸಂಘರ್ಷ ಪೀಡಿತ ಸಿರಿಯಾದಲ್ಲಿ ಶಾಂತಿ ಸ್ಥಾಪಿಸಲು ಅನ್ನಾನ್ ಮಾಡುತ್ತಿರುವ ಪ್ರಯತ್ನಕ್ಕೆ ಬೆಂಬಲ ನೀಡುವುದಾಗಿಯೂ ತಿಳಿಸಿದರು.<br /> <br /> <strong>ಇಂದು ಕೃಷ್ಣ ಯುಎಇಗೆ</strong>: ದ್ವಿ-ತೆರಿಗೆ ನೀತಿ ಮತ್ತು ರಾಯಭಾರಿ ಕಚೇರಿ ತೆರೆಯವ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಯುಎಇ ವಿದೇಶಾಂಗ ಸಚಿವರು ಅಬುಧಾಬಿಯಲ್ಲಿ ಭಾನುವಾರ ಚರ್ಚಿಸಲಿದ್ದಾರೆ.<br /> </p>.<p><strong>`ಜನಾಂಗೀಯ ಹಿನ್ನೆಲೆ ಕಾರಣವಲ್ಲ~</strong></p>.<p>ಕಳೆದ ಮೂರು ವರ್ಷಗಳಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಅವರನ್ನು ಅಮೆರಿಕದಲ್ಲಿ ಎರಡು ಬಾರಿ ಬಂಧಿಸಿದ್ದರ ಹಿಂದೆ ಯಾವುದೇ ಜನಾಂಗೀಯ ಕಾರಣವಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. `ನಾನು ಈ ಪ್ರಕರಣವನ್ನು ಜನಾಂಗೀಯ ಹಿನ್ನೆಲೆಯಲ್ಲಿ ನೋಡಲುವುದಿಲ್ಲ. <br /> <br /> ಪ್ರತಿನಿತ್ಯವೂ ಇಲ್ಲಿನ ವಿಮಾನ ನಿಲ್ದಾಣಕ್ಕೆ ಸಾವಿರಾರು ಮುಸ್ಲಿಂ ಪ್ರಯಾಣಿಕರು ಬಂದು ಹೋಗುತ್ತಾರೆ. ಹಾಗಂತ ಅವರನ್ನು ಬಂಧಿಸಿದ ಉದಾಹರಣೆಗಳು ಇಲ್ಲ~ ಎಂದು ವಿದೇಶಾಂಗ ಇಲಾಖೆ ವಕ್ತಾರ ಮಾರ್ಕ್ ಟೋನರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.<br /> <br /> ಈ ಹಿಂದೆ 2009ರಲ್ಲಿ ನ್ಯೂಜೆರ್ಸಿಯ ನೇವಾರ್ಕ್ ವಿಮಾನ ನಿಲ್ದಾಣದಲ್ಲಿ ಶಾರುಕ್ ಅವರನ್ನು ತಡೆದು ವಿಚಾರಣೆ ನಡೆಸಲಾಗಿತ್ತು.<br /> </p>.<p><strong>`ದುರದೃಷ್ಟಕರ ಪ್ರಕರಣ~<br /> ನ್ಯೂಯಾರ್ಕ್ (ಪಿಟಿಐ): </strong>ಶಾರುಕ್ ಖಾನ್ ಪ್ರಕರಣ `ದುರದೃಷ್ಟಕರ~ ಎಂದಿರುವ ಯೇಲ್ ವಿಶ್ವವಿದ್ಯಾಲಯವು, ಅಂತಿಮವಾಗಿ ಈ ಘಟನೆ ಸಮಾಧಾನಕರ ರೀತಿಯಲ್ಲಿ ಅಂತ್ಯಕಂಡಿದೆ ಎಂದು ಶನಿವಾರ ಹೇಳಿದೆ.<br /> <br /> `ಸ್ವತಃ ಶಾರುಕ್ ಅವರೇ ಹೇಳುವಂತೆ, ಒಂದು ಸಿನಿಮಾ ಹೇಗೆ ಆರಂಭವಾಗುತ್ತದೆ ಎನ್ನುವುದಕ್ಕಿಂತ ಹೇಗೆ ಮುಕ್ತಾಯವಾಗುತ್ತದೆ ಎನ್ನುವ ಅಂಶ ಮುಖ್ಯವಾಗುತ್ತದೆ. <br /> <br /> ಇದೇ ರೀತಿಯಲ್ಲಿ ಶುಕ್ರವಾರ ದುರದೃಷ್ಟಕರ ರೀತಿಯಲ್ಲಿ ಘಟನೆ ಶುರುವಾಯಿತು. ಕೊನೆಗೆ ಎಲ್ಲರಿಗೂ ಸಮಧಾನವಾಗುವಂತೆ ಅಂತ್ಯ ಕಂಡಿತು~ ಎಂದು ವಿಶ್ವವಿದ್ಯಾಲಯದ ಅಂತರ ರಾಷ್ಟ್ರೀಯ ವ್ಯವಹಾರದ ಸಹಾಯಕ ಕಾರ್ಯದರ್ಶಿ ಜಾರ್ಜ್ ಜೋಸೆಫ್ ಅವರು ಸುದ್ದಿ ಸಂಸ್ಥೆಗೆ ಇ-ಮೇಲ್ ಮೂಲಕ ಹೇಳಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>