<p><strong>ಹರಿಹರ</strong>: ಶಾಸಕರ ವಿರುದ್ಧ ಖಂಡನಾ ನಿರ್ಣಯ. ಅಧಿಕಾರಿಗಳ ಮೇಲೆ ಹೈಕೋರ್ಟ್ನಿಂದ `ಮ್ಯಾಂಡಮಸ್~ ರಿಟ್. ಇಷ್ಟೇ ಜಕಾತಿ ನೀಡಬೇಕು ಎಂದು ಕರಪತ್ರ ಬಿಡುಗಡೆ ಮಾಡಿರುವ ಆಂಜನೇಯ ಸಣ್ಣ ವರ್ತಕರ ಸಂಘ, ರೈತ ಸಂಘ ಹಾಗೂ ಹಸಿರು ಸೇನೆ ಮೇಲೆ ಮೊಕದ್ದಮೆ ದಾಖಲಿಸುವ ವಿಚಾರ.</p>.<p>ಎರಡೇ ವಿಷಯಗಳಿರುವ ತುರ್ತುಸಭೆಯಲ್ಲಿ ಅರ್ಧಗಂಟೆಯ ವಿರಾಮ. -ಇವು, ಗುರುವಾರ ನಗರಸಭೆ ಸಭಾಂಗಣದಲ್ಲಿ ನಡೆದ ತುರ್ತುಸಭೆಯ ವಿಶೇಷಗಳು. ಶಾಸಕರು ಕೌನ್ಸಿಲ್ ನಿರ್ಣಯಗಳ ಮೇಲೆ ಸವಾರಿ ಮಾಡುತ್ತಿದ್ದಾರೆ. ಅವರ ನಡುವಳಿಕೆಯಿಂದ ಕೌನ್ಸಿಲ್ನ ಗೌರವಕ್ಕೆ ಧಕ್ಕೆಯಾಗಿದೆ.</p>.<p>ಶಾಸಕರ ವಿರುದ್ಧ ಖಂಡನಾ ನಿರ್ಣಯ ಕೈಗೊಂಡ ಘಟನೆ ರಾಜ್ಯದ ಯಾವುದೇ ನಗರಸಭೆಯಲ್ಲೂ ನಡೆದಿಲ್ಲ. ಕೌನ್ಸಿಲ್ ಗೌರವ ಉಳಿಸಿಕೊಳ್ಳಲು ಅವರ ವಿರುದ್ಧ ಖಂಡನಾ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸದಸ್ಯ ಡಿ. ಹೇಮಂತರಾಜ ಒತ್ತಾಯಿಸಿದರು.<br /> <br /> ಶಾಸಕರು ವಾರದ ಸಂತೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ ಕಾರಣ, ಅಧಿಕಾರಿಗಳು ಕೌನ್ಸಿಲ್ ನಿರ್ಣಯ ಜಾರಿಗೊಳಿಸುವಲ್ಲಿ ವಿಫಲರಾಗಿದ್ದಾರೆ. ಶಾಸಕರ ವಿರುದ್ಧ ಖಂಡನಾ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸದಸ್ಯರಾದ ಎ. ವಾಮನಮೂರ್ತಿ, ಕೆ. ಮರಿದೇವ, ನಗೀನಾ ಸುಬಾನ್ ಸಹಮತ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ</strong>: ಶಾಸಕರ ವಿರುದ್ಧ ಖಂಡನಾ ನಿರ್ಣಯ. ಅಧಿಕಾರಿಗಳ ಮೇಲೆ ಹೈಕೋರ್ಟ್ನಿಂದ `ಮ್ಯಾಂಡಮಸ್~ ರಿಟ್. ಇಷ್ಟೇ ಜಕಾತಿ ನೀಡಬೇಕು ಎಂದು ಕರಪತ್ರ ಬಿಡುಗಡೆ ಮಾಡಿರುವ ಆಂಜನೇಯ ಸಣ್ಣ ವರ್ತಕರ ಸಂಘ, ರೈತ ಸಂಘ ಹಾಗೂ ಹಸಿರು ಸೇನೆ ಮೇಲೆ ಮೊಕದ್ದಮೆ ದಾಖಲಿಸುವ ವಿಚಾರ.</p>.<p>ಎರಡೇ ವಿಷಯಗಳಿರುವ ತುರ್ತುಸಭೆಯಲ್ಲಿ ಅರ್ಧಗಂಟೆಯ ವಿರಾಮ. -ಇವು, ಗುರುವಾರ ನಗರಸಭೆ ಸಭಾಂಗಣದಲ್ಲಿ ನಡೆದ ತುರ್ತುಸಭೆಯ ವಿಶೇಷಗಳು. ಶಾಸಕರು ಕೌನ್ಸಿಲ್ ನಿರ್ಣಯಗಳ ಮೇಲೆ ಸವಾರಿ ಮಾಡುತ್ತಿದ್ದಾರೆ. ಅವರ ನಡುವಳಿಕೆಯಿಂದ ಕೌನ್ಸಿಲ್ನ ಗೌರವಕ್ಕೆ ಧಕ್ಕೆಯಾಗಿದೆ.</p>.<p>ಶಾಸಕರ ವಿರುದ್ಧ ಖಂಡನಾ ನಿರ್ಣಯ ಕೈಗೊಂಡ ಘಟನೆ ರಾಜ್ಯದ ಯಾವುದೇ ನಗರಸಭೆಯಲ್ಲೂ ನಡೆದಿಲ್ಲ. ಕೌನ್ಸಿಲ್ ಗೌರವ ಉಳಿಸಿಕೊಳ್ಳಲು ಅವರ ವಿರುದ್ಧ ಖಂಡನಾ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸದಸ್ಯ ಡಿ. ಹೇಮಂತರಾಜ ಒತ್ತಾಯಿಸಿದರು.<br /> <br /> ಶಾಸಕರು ವಾರದ ಸಂತೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ ಕಾರಣ, ಅಧಿಕಾರಿಗಳು ಕೌನ್ಸಿಲ್ ನಿರ್ಣಯ ಜಾರಿಗೊಳಿಸುವಲ್ಲಿ ವಿಫಲರಾಗಿದ್ದಾರೆ. ಶಾಸಕರ ವಿರುದ್ಧ ಖಂಡನಾ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸದಸ್ಯರಾದ ಎ. ವಾಮನಮೂರ್ತಿ, ಕೆ. ಮರಿದೇವ, ನಗೀನಾ ಸುಬಾನ್ ಸಹಮತ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>