<p><strong>ಸುಬ್ರಹ್ಮಣ್ಯ:</strong> `ಪ್ರಾಚೀನ ಕಾಲದ ಕಲೆ, ಸಂಸ್ಕೃತಿ, ಭಾಷೆಯ ಆಗರವಾದ ಶಾಸನಗಳ ಅಧ್ಯಯನ ಇಂದಿನ ಅಗತ್ಯ~ ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.<br /> <br /> ಮೈಸೂರಿನ ಭಾಷಾ ಸಂಸ್ಥಾನಗಳ ಒಕ್ಕೂಟ, ವೇದವ್ಯಾಸ ಸಂಶೋಧನ ಕೇಂದ್ರ, ಶ್ರೀನಿಕೇತನ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ವನದುರ್ಗಾ ದೇವಳದ ಸಭಾಂಗಣದಲ್ಲಿ ಶುಕ್ರವಾರ ನಡೆದ `ಕನ್ನಡ ಶಾಸನಗಳ ಭಾಷೆ ಮತ್ತು ಸಂಸ್ಕೃತಿ~ ವಿಷಯದ ಕುರಿತು ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಲಿಪಿಕಾರರಿಗೆ ಇರುವ ಸ್ವಾತಂತ್ರ್ಯ ಶಾಸನಕಾರರಿಗೆ ಇಲ್ಲ. ಶಾಸನಗಳ ಬಗ್ಗೆ ಸಾಕಷ್ಟು ಕೆಲಸವಾದರೂ ಅನುಪಲಬ್ಧ ಶಾಸನಗಳ ದಾಖಲೀಕರಣ ಅಗತ್ಯವಾಗಿದೆ. ಹಸ್ತಪ್ರತಿಗಳ ವಿವರಣಾತ್ಮಕ ಸೂಚಿಯೊಂದಿಗೆ ಸಾಂಸ್ಕೃತಿಕ ಚಿತ್ರಣವನ್ನು ಶಾಸನಗಳಿಂದ ರಚಿಸುವಂತಾಗಬೇಕು. ಶಾಸನಗಳ ಅಧ್ಯಯನ ಮುಂದಿನ ತಲೆಮಾರಿಗೂ ಪ್ರವಹಿಸಲು ಇಂತಹ ಕಾರ್ಯಗಾರಗಳು ಪೂರಕ~ ಎಂದು ಅತಿಥಿಯಾಗಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಎ.ವಿ.ನಾವಡ ಹೇಳಿದರು.<br /> <br /> ಇತಿಹಾಸ ತಜ್ಞ ಮುಕುಂದ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಭಾಷಾ ಸಂಸ್ಥಾನಗೋ ಒಕ್ಕೂಟದ ಸಂಯೋಜಕ ಸಣ್ಣಪಾಪಯ್ಯ, ವೇದವ್ಯಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಚಂದ್ರಶೇಖರ್ ದಾಮ್ಲೆ, ಶ್ರೀಶಕುಮಾರ್ ಹಾಗೂ ಮತ್ತಿತತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಬ್ರಹ್ಮಣ್ಯ:</strong> `ಪ್ರಾಚೀನ ಕಾಲದ ಕಲೆ, ಸಂಸ್ಕೃತಿ, ಭಾಷೆಯ ಆಗರವಾದ ಶಾಸನಗಳ ಅಧ್ಯಯನ ಇಂದಿನ ಅಗತ್ಯ~ ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.<br /> <br /> ಮೈಸೂರಿನ ಭಾಷಾ ಸಂಸ್ಥಾನಗಳ ಒಕ್ಕೂಟ, ವೇದವ್ಯಾಸ ಸಂಶೋಧನ ಕೇಂದ್ರ, ಶ್ರೀನಿಕೇತನ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ವನದುರ್ಗಾ ದೇವಳದ ಸಭಾಂಗಣದಲ್ಲಿ ಶುಕ್ರವಾರ ನಡೆದ `ಕನ್ನಡ ಶಾಸನಗಳ ಭಾಷೆ ಮತ್ತು ಸಂಸ್ಕೃತಿ~ ವಿಷಯದ ಕುರಿತು ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಲಿಪಿಕಾರರಿಗೆ ಇರುವ ಸ್ವಾತಂತ್ರ್ಯ ಶಾಸನಕಾರರಿಗೆ ಇಲ್ಲ. ಶಾಸನಗಳ ಬಗ್ಗೆ ಸಾಕಷ್ಟು ಕೆಲಸವಾದರೂ ಅನುಪಲಬ್ಧ ಶಾಸನಗಳ ದಾಖಲೀಕರಣ ಅಗತ್ಯವಾಗಿದೆ. ಹಸ್ತಪ್ರತಿಗಳ ವಿವರಣಾತ್ಮಕ ಸೂಚಿಯೊಂದಿಗೆ ಸಾಂಸ್ಕೃತಿಕ ಚಿತ್ರಣವನ್ನು ಶಾಸನಗಳಿಂದ ರಚಿಸುವಂತಾಗಬೇಕು. ಶಾಸನಗಳ ಅಧ್ಯಯನ ಮುಂದಿನ ತಲೆಮಾರಿಗೂ ಪ್ರವಹಿಸಲು ಇಂತಹ ಕಾರ್ಯಗಾರಗಳು ಪೂರಕ~ ಎಂದು ಅತಿಥಿಯಾಗಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಎ.ವಿ.ನಾವಡ ಹೇಳಿದರು.<br /> <br /> ಇತಿಹಾಸ ತಜ್ಞ ಮುಕುಂದ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಭಾಷಾ ಸಂಸ್ಥಾನಗೋ ಒಕ್ಕೂಟದ ಸಂಯೋಜಕ ಸಣ್ಣಪಾಪಯ್ಯ, ವೇದವ್ಯಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಚಂದ್ರಶೇಖರ್ ದಾಮ್ಲೆ, ಶ್ರೀಶಕುಮಾರ್ ಹಾಗೂ ಮತ್ತಿತತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>