<p><strong>ಬೆಂಗಳೂರು: </strong>60 ವರ್ಷ ಪೂರೈಸಿದ ವಿದ್ವಾಂಸ, ಸಂಶೋಧಕ ಡಾ.ಆರ್. ಶೇಷಶಾಸ್ತ್ರಿ ಅವರನ್ನು ನಗರದಲ್ಲಿ ಶನಿವಾರ ಆತ್ಮೀಯವಾಗಿ ಅಭಿನಂದಿಸಲಾಯಿತು.<br /> <br /> ಕನ್ನಡ ಗೆಳೆಯರ ಬಳಗವು ಮಿಥಿಕ್ ಸೊಸೈಟಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಅವರು ಶಾಸ್ತ್ರಿ- ಸಂಜೀವರತ್ನಾ ದಂಪತಿಯನ್ನು ಸನ್ಮಾನಿಸಿದರು.<br /> <br /> ಸನ್ಮಾನಕ್ಕೂ ಮುನ್ನ ಪುಟ್ಟ ಸಂವಾದ ನಡೆಸಿಕೊಟ್ಟ ಡಾ.ಆರ್. ಶೇಷಶಾಸ್ತ್ರಿ, `ನನ್ನ ಜೀವನದಲ್ಲಿ ಯಾವುದೇ ವಿಚಾರದ ಬಗ್ಗೆ ಯೋಚಿಸಿ ತೀರ್ಮಾನ ಕೈಗೊಂಡವನಲ್ಲ. 60 ವರ್ಷಗಳನ್ನು ಹುಡುಗಾಟದಲ್ಲಿಯೇ ಕಳೆದೆ. ಇನ್ನೂ 40 ವರ್ಷ ಬದುಕಿರುತ್ತೇನೆಂಬ ವಿಶ್ವಾಸ ನನ್ನದು ಎಂದರು. <br /> <br /> ಸನ್ಮಾನ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿದ್ದ `ಶೇಷಶಾಸ್ತ್ರಿ: ಬದುಕು-ಬರಹ~ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಪ್ರೊ.ಎಂ.ಕೆ.ಎಲ್.ಎನ್. ಶಾಸ್ತ್ರಿ, ಶೇಷಶಾಸ್ತ್ರಿ ಅವರ ಗುಣಗಾನ ಮಾಡಿದರು.<br /> <br /> `ಶೇಷಶಾಸ್ತ್ರಿ ಬದುಕು, ಶಾಸನ ಸಾಹಿತ್ಯ~ದ ಬಗ್ಗೆ ಮಾತನಾಡಿದ ಡಾ. ದೇವರಕೊಂಡಾರೆಡ್ಡಿ, `ಆಂಧ್ರದ ಅನಂತಪುರಂನ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವುದರ ಜತೆ ಜತೆಗೆ, ಶಾಸನಗಳು ಹಾಗೂ ವೀರಗಲ್ಲುಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ ಕನ್ನಡ ಹಾಗೂ ತೆಲುಗಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ~ ಎಂದರು.<br /> <br /> `ಶಾಸನೇತರ ಸಾಹಿತ್ಯ~ದ ಬಗ್ಗೆ ಡಾ.ಕೆ.ಆರ್. ಗಣೇಶ್ ಮಾತನಾಡಿದರು. ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಇತಿಹಾಸ ತಜ್ಞ ಡಾ. ಸೂರ್ಯನಾಥ ಕಾಮತ್, `ಶೇಷಶಾಸ್ತ್ರಿ ಅವರಿಗೆ ಇನ್ನು ಮುಂದೆಯೂ ಸಂಶೋಧನೆ ಹಾಗೂ ಅನುವಾದ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ~ ಎಂದರು. <br /> <br /> ಆನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಅವರು ಡಾ.ಆರ್. ಶೇಷಶಾಸ್ತ್ರಿ ದಂಪತಿಯನ್ನು ಸನ್ಮಾನಿಸಿದರು. ಶಾಸ್ತ್ರಿ ಅವರಿಗೆ ಮೈಸೂರು ಪೇಟ ತೊಡಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.<br /> <br /> ಡಾ.ಎಚ್.ಎಸ್. ಗೋಪಾಲರಾವ್ ಅಭಿನಂದನಾ ಭಾಷಣ ಮಾಡಿದರು. ಡಾ. ಜ್ಯೋತ್ಸ್ನಾ ಕಾಮತ್ ಅತಿಥಿಯಾಗಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಕಥೆಗಾರ ಕೆ.ಎನ್. ಭಗವಾನ್ ಅವರ `ನಾಲ್ಕು ದಶಕದ ಕಥೆಗಳು~ ಎಂಬ ಪುಸ್ತಕವನ್ನು ಡಾ. ಜ್ಯೋತ್ಸ್ನಾ ಕಾಮತ್ ಬಿಡುಗಡೆ ಮಾಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>60 ವರ್ಷ ಪೂರೈಸಿದ ವಿದ್ವಾಂಸ, ಸಂಶೋಧಕ ಡಾ.ಆರ್. ಶೇಷಶಾಸ್ತ್ರಿ ಅವರನ್ನು ನಗರದಲ್ಲಿ ಶನಿವಾರ ಆತ್ಮೀಯವಾಗಿ ಅಭಿನಂದಿಸಲಾಯಿತು.<br /> <br /> ಕನ್ನಡ ಗೆಳೆಯರ ಬಳಗವು ಮಿಥಿಕ್ ಸೊಸೈಟಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಅವರು ಶಾಸ್ತ್ರಿ- ಸಂಜೀವರತ್ನಾ ದಂಪತಿಯನ್ನು ಸನ್ಮಾನಿಸಿದರು.<br /> <br /> ಸನ್ಮಾನಕ್ಕೂ ಮುನ್ನ ಪುಟ್ಟ ಸಂವಾದ ನಡೆಸಿಕೊಟ್ಟ ಡಾ.ಆರ್. ಶೇಷಶಾಸ್ತ್ರಿ, `ನನ್ನ ಜೀವನದಲ್ಲಿ ಯಾವುದೇ ವಿಚಾರದ ಬಗ್ಗೆ ಯೋಚಿಸಿ ತೀರ್ಮಾನ ಕೈಗೊಂಡವನಲ್ಲ. 60 ವರ್ಷಗಳನ್ನು ಹುಡುಗಾಟದಲ್ಲಿಯೇ ಕಳೆದೆ. ಇನ್ನೂ 40 ವರ್ಷ ಬದುಕಿರುತ್ತೇನೆಂಬ ವಿಶ್ವಾಸ ನನ್ನದು ಎಂದರು. <br /> <br /> ಸನ್ಮಾನ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿದ್ದ `ಶೇಷಶಾಸ್ತ್ರಿ: ಬದುಕು-ಬರಹ~ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಪ್ರೊ.ಎಂ.ಕೆ.ಎಲ್.ಎನ್. ಶಾಸ್ತ್ರಿ, ಶೇಷಶಾಸ್ತ್ರಿ ಅವರ ಗುಣಗಾನ ಮಾಡಿದರು.<br /> <br /> `ಶೇಷಶಾಸ್ತ್ರಿ ಬದುಕು, ಶಾಸನ ಸಾಹಿತ್ಯ~ದ ಬಗ್ಗೆ ಮಾತನಾಡಿದ ಡಾ. ದೇವರಕೊಂಡಾರೆಡ್ಡಿ, `ಆಂಧ್ರದ ಅನಂತಪುರಂನ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವುದರ ಜತೆ ಜತೆಗೆ, ಶಾಸನಗಳು ಹಾಗೂ ವೀರಗಲ್ಲುಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ ಕನ್ನಡ ಹಾಗೂ ತೆಲುಗಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ~ ಎಂದರು.<br /> <br /> `ಶಾಸನೇತರ ಸಾಹಿತ್ಯ~ದ ಬಗ್ಗೆ ಡಾ.ಕೆ.ಆರ್. ಗಣೇಶ್ ಮಾತನಾಡಿದರು. ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಇತಿಹಾಸ ತಜ್ಞ ಡಾ. ಸೂರ್ಯನಾಥ ಕಾಮತ್, `ಶೇಷಶಾಸ್ತ್ರಿ ಅವರಿಗೆ ಇನ್ನು ಮುಂದೆಯೂ ಸಂಶೋಧನೆ ಹಾಗೂ ಅನುವಾದ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ~ ಎಂದರು. <br /> <br /> ಆನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಅವರು ಡಾ.ಆರ್. ಶೇಷಶಾಸ್ತ್ರಿ ದಂಪತಿಯನ್ನು ಸನ್ಮಾನಿಸಿದರು. ಶಾಸ್ತ್ರಿ ಅವರಿಗೆ ಮೈಸೂರು ಪೇಟ ತೊಡಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.<br /> <br /> ಡಾ.ಎಚ್.ಎಸ್. ಗೋಪಾಲರಾವ್ ಅಭಿನಂದನಾ ಭಾಷಣ ಮಾಡಿದರು. ಡಾ. ಜ್ಯೋತ್ಸ್ನಾ ಕಾಮತ್ ಅತಿಥಿಯಾಗಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಕಥೆಗಾರ ಕೆ.ಎನ್. ಭಗವಾನ್ ಅವರ `ನಾಲ್ಕು ದಶಕದ ಕಥೆಗಳು~ ಎಂಬ ಪುಸ್ತಕವನ್ನು ಡಾ. ಜ್ಯೋತ್ಸ್ನಾ ಕಾಮತ್ ಬಿಡುಗಡೆ ಮಾಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>