<p><strong>ಸಿಂಧನೂರು: </strong>ಸಮಾಜದಲ್ಲಿ ಶೋಷಣೆ, ದೌರ್ಜನ್ಯ, ದಬ್ಬಾಳಿಕೆಗೆ ಒಳಗಾಗಿರುವ ದಲಿತರು ಸುಶಿಕ್ಷಿತರಾಗುವ ಮೂಲಕ ಜಾಗೃತಗೊಳ್ಳಬೇಕು ಎಂದು ದಲಿತ ರಕ್ಷಣಾ ವೇದಿಕೆಯ ಗುಲ್ಬರ್ಗಾ ವಿಭಾಗೀಯ ಅಧ್ಯಕ್ಷ ಹನುಮಂತ ಹಂಚಿನಾಳಕ್ಯಾಂಪ್ ಕರೆ ನೀಡಿದರು.<br /> <br /> ತಾಲ್ಲೂಕಿನ ಜಂಗಮರಹಟ್ಟಿ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ದಲಿತ ರಕ್ಷಣಾ ವೇದಿಕೆಯ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ದಲಿತರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿ ಅವರ ಅವರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘದ ಪದಾಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಎಂದು ಕರೆ ನೀಡಿದರು.<br /> <br /> ಬಿಎಸ್ಆರ್ ಪಕ್ಷದ ಮುಖಂಡ ಕೆ.ಕರಿಯಪ್ಪ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಎಲ್ಲ ಸಮಾಜದವರ ಸಹಕಾರ ಅಗತ್ಯವಿದೆ. ದಲಿತರೆನ್ನುವ ಕಾರಣಕ್ಕೆ ಅವರನ್ನು ತಿರಸ್ಕಾರ ಭಾವನೆಯಿಂದ ಕಾಣದೆ ಸೌಹಾರ್ದಯುತ ಜೀವನ ನಡೆಸುವಂತೆ ಸಲಹೆ ನೀಡಿದರು.<br /> <br /> ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶರಣಪ್ಪ ಮಳ್ಳಿ, ರಾಘವೇಂದ್ರ ಸೋಮಲಾಪುರ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಂದಪ್ಪ ಸಾಹುಕಾರ, ಮುಖಂಡರಾದ ಲಿಂಗರಾಜ ಗುಂಜಳ್ಳಿ, ಕಳಸಪ್ಪ ದಳಪತಿ, ಮಲ್ಲೇಶ ತಿಡಿಗೋಳ, ಶ್ರೀನಿವಾಸ ನವಲಿ ಮತ್ತಿತರರು ಇದ್ದರು.<br /> <br /> <strong>ಗ್ರಾಮ ಘಟಕ ಪದಾಧಿಕಾರಿಗಳು: </strong>ಅಯ್ಯಪ್ಪ, ದುರುಗಪ್ಪ (ಗೌರವಾಧ್ಯಕ್ಷರು), ವೆಂಕಟೇಶ ಕೆ. (ಅಧ್ಯಕ್ಷ), ಕಾಶಿನಾಥ, ಅಮರೇಶ ಕಡಬೂರು (ಉಪಾಧ್ಯಕ್ಷರು), ವೆಂಕಟೇಶ ಟಿ., ಅಮರೇಶ (ಕಾರ್ಯದರ್ಶಿಗಳು), ಶಿವು ವೆಂಕಟಾಪುರ (ಪ್ರಧಾನ ಕಾರ್ಯದರ್ಶಿ), ಅಮರೇಶ ವೈ. (ಖಜಾಂಚಿ), ಸಿದ್ಧರಾಮೇಶ (ಸಹಕಾರ್ಯದರ್ಶಿ), ಶಿವಪ್ಪ, ಮೌನೇಶ, ಶ್ರೀನಿವಾಸ, ಚಂದ್ರಗಿರಿಯಪ್ಪ, ಬರಮಪ್ಪ, ಯಲ್ಲಪ್ಪ, ಸಣ್ಣಕಾಶಿನಾಥ (ಸದಸ್ಯರು).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಧನೂರು: </strong>ಸಮಾಜದಲ್ಲಿ ಶೋಷಣೆ, ದೌರ್ಜನ್ಯ, ದಬ್ಬಾಳಿಕೆಗೆ ಒಳಗಾಗಿರುವ ದಲಿತರು ಸುಶಿಕ್ಷಿತರಾಗುವ ಮೂಲಕ ಜಾಗೃತಗೊಳ್ಳಬೇಕು ಎಂದು ದಲಿತ ರಕ್ಷಣಾ ವೇದಿಕೆಯ ಗುಲ್ಬರ್ಗಾ ವಿಭಾಗೀಯ ಅಧ್ಯಕ್ಷ ಹನುಮಂತ ಹಂಚಿನಾಳಕ್ಯಾಂಪ್ ಕರೆ ನೀಡಿದರು.<br /> <br /> ತಾಲ್ಲೂಕಿನ ಜಂಗಮರಹಟ್ಟಿ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ದಲಿತ ರಕ್ಷಣಾ ವೇದಿಕೆಯ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ದಲಿತರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿ ಅವರ ಅವರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘದ ಪದಾಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಎಂದು ಕರೆ ನೀಡಿದರು.<br /> <br /> ಬಿಎಸ್ಆರ್ ಪಕ್ಷದ ಮುಖಂಡ ಕೆ.ಕರಿಯಪ್ಪ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಎಲ್ಲ ಸಮಾಜದವರ ಸಹಕಾರ ಅಗತ್ಯವಿದೆ. ದಲಿತರೆನ್ನುವ ಕಾರಣಕ್ಕೆ ಅವರನ್ನು ತಿರಸ್ಕಾರ ಭಾವನೆಯಿಂದ ಕಾಣದೆ ಸೌಹಾರ್ದಯುತ ಜೀವನ ನಡೆಸುವಂತೆ ಸಲಹೆ ನೀಡಿದರು.<br /> <br /> ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶರಣಪ್ಪ ಮಳ್ಳಿ, ರಾಘವೇಂದ್ರ ಸೋಮಲಾಪುರ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಂದಪ್ಪ ಸಾಹುಕಾರ, ಮುಖಂಡರಾದ ಲಿಂಗರಾಜ ಗುಂಜಳ್ಳಿ, ಕಳಸಪ್ಪ ದಳಪತಿ, ಮಲ್ಲೇಶ ತಿಡಿಗೋಳ, ಶ್ರೀನಿವಾಸ ನವಲಿ ಮತ್ತಿತರರು ಇದ್ದರು.<br /> <br /> <strong>ಗ್ರಾಮ ಘಟಕ ಪದಾಧಿಕಾರಿಗಳು: </strong>ಅಯ್ಯಪ್ಪ, ದುರುಗಪ್ಪ (ಗೌರವಾಧ್ಯಕ್ಷರು), ವೆಂಕಟೇಶ ಕೆ. (ಅಧ್ಯಕ್ಷ), ಕಾಶಿನಾಥ, ಅಮರೇಶ ಕಡಬೂರು (ಉಪಾಧ್ಯಕ್ಷರು), ವೆಂಕಟೇಶ ಟಿ., ಅಮರೇಶ (ಕಾರ್ಯದರ್ಶಿಗಳು), ಶಿವು ವೆಂಕಟಾಪುರ (ಪ್ರಧಾನ ಕಾರ್ಯದರ್ಶಿ), ಅಮರೇಶ ವೈ. (ಖಜಾಂಚಿ), ಸಿದ್ಧರಾಮೇಶ (ಸಹಕಾರ್ಯದರ್ಶಿ), ಶಿವಪ್ಪ, ಮೌನೇಶ, ಶ್ರೀನಿವಾಸ, ಚಂದ್ರಗಿರಿಯಪ್ಪ, ಬರಮಪ್ಪ, ಯಲ್ಲಪ್ಪ, ಸಣ್ಣಕಾಶಿನಾಥ (ಸದಸ್ಯರು).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>