<p><strong>ಲಕ್ಷ್ಮೇಶ್ವರ: </strong>ಶಿಕ್ಷಣವೇ ಎಲ್ಲಕ್ಕೂ ಮೂಲವಾಗಿದ್ದು ಎಲ್ಲ ಪಾಲಕರು ಮಕ್ಕಳಿಗೆ ಶಿಕ್ಷಣ ದೊರೆಯುವ ವ್ಯವಸ್ಥೆ ಮಾಡಬೇಕು. ಉತ್ತಮ ಶಿಕ್ಷಣದಿಂದ ಮಕ್ಕಳ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ~ ಎಂದು ಯುವ ಧುರೀಣ ಚಂದ್ರಶೇಖರ ಲಮಾಣಿ ಹೇಳಿದರು.<br /> <br /> ಸಮೀಪದ ಒಡೆಯರಮಲ್ಲಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜರುಗಿದ ಮೊರಾರ್ಜಿ ದೇಸಾಯಿಯವರ ಜನ್ಮ ದಿನಾಚರಣೆ ಅಂಗವಾಗಿ ಹಳೆ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಆಹಾರ, ನೀರು, ವಸತಿಯಂತೆ ಇಂದು ಶಿಕ್ಷಣವೂ ಅತೀ ಅಗತ್ಯವಾಗಿದೆ. ಶಿಕ್ಞಣದ ಬೆಳೆವಣಿಗೆಯಿಂದ ದೇಶದ ಅಭಿವೃದ್ಧಿ ಸಾಧ್ಯ~ ಎಂದು ತಿಳಿಸಿದರು.<br /> <br /> ಶಿರಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹುಮಾಯೂನ್ ಮಾಗಡಿ `ಮೊರಾರ್ಜಿ ದೇಸಾಯಿಯವರು ಈ ದೇಶ ಕಂಡ ಅತ್ಯಂತ ಚಾಣಾಕ್ಷ ರಾಜಕಾರಣಿ ಹಾಗೂ ಆಡಳಿತಗಾರರು. ಅವರ ಜೀವನವೇ ಒಂದು ಹೋರಾಟವಾಗಿತ್ತು. <br /> <br /> ಅವರ ತತ್ವ ಸಿದ್ಧಾಂತಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳವುದೇ ನಾವು ಅವರಿಗೆ ಸಲ್ಲಿಸುವ ಗೌರವ ವಾಗಿದೆ~ ಎಂದು ಹೇಳಿದ ಅವರು `ಮಕ್ಕಳು ತಾವು ಕಲಿತ ಶಾಲೆ ಹಾಗೂ ಕಲಿಸಿದ ಗುರುವನ್ನು ಎಂದಿಗೂ ಮರೆಯಬಾರದು ಎಂದದರು. <br /> <br /> ದೇವರಿಗಿಂತ ಗುರು ದೊಡ್ಡವನು. ವಿದ್ಯೆ ಕಲಿಸಿ ನಮಗೆ ಅರಿವಿನ ದಾರಿ ತೋರುವ ಗುರುಗಳು ಎಂದೆಂದಿಗೂ ಪೂಜ್ಯನೀಯರು~ ಎಂದರು.<br /> <br /> `ಲಕ್ಷ್ಮೇಶ್ವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ಬಜಾರದಲ್ಲಿ ವಿದ್ಯಾರ್ಥಿಗಳು ಕಲಿ ಯುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. <br /> <br /> ಜನಪ್ರತಿನಿಧಿಗಳು ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು~ ಎಂದು ಶಿಗ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಣ್ಣ ಲಮಾಣಿ ಹೇಳಿದರು.</p>.<p><br /> ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ, ಪುರಸಭೆ ಅಧ್ಯಕ್ಷೆ ಜಯಕ್ಕ ಕಳ್ಳಿ, ಬಿಇಓ ಅಂದಾನೆಪ್ಪ ವಡಗೇರಿ, ಪದ್ಮರಾಜ ಪಾಟೀಲ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಆರ್.ಡಿ. ಕಮ್ಮಾರ ಮಾತನಾಡಿದರು.<br /> <br /> ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಬಿ.ಎನ್. ರಾಟಿ, ಪ್ರಾಚಾರ್ಯ ಡಿ.ಬಿ. ಅಡವಿ, ಶಿಗ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅಕ್ಕಮ್ಮ ಕೆರೂರ, ನೀಲಪ್ಪ ಪಶುಪತಿಹಾಳ, ವಿಠ್ಠಲ ನಾಯಕ, ನೀಲಪ್ಪ ಹತ್ತಿ ಮತ್ತಿತರರು ಹಾಜರಿದ್ದರು. ಅನಿತಾ ಬಂಡಿ ಸ್ವಾಗತಿಸಿದರು. ಸತೀಶ ಉಮಚಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಕ್ಷ್ಮೇಶ್ವರ: </strong>ಶಿಕ್ಷಣವೇ ಎಲ್ಲಕ್ಕೂ ಮೂಲವಾಗಿದ್ದು ಎಲ್ಲ ಪಾಲಕರು ಮಕ್ಕಳಿಗೆ ಶಿಕ್ಷಣ ದೊರೆಯುವ ವ್ಯವಸ್ಥೆ ಮಾಡಬೇಕು. ಉತ್ತಮ ಶಿಕ್ಷಣದಿಂದ ಮಕ್ಕಳ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ~ ಎಂದು ಯುವ ಧುರೀಣ ಚಂದ್ರಶೇಖರ ಲಮಾಣಿ ಹೇಳಿದರು.<br /> <br /> ಸಮೀಪದ ಒಡೆಯರಮಲ್ಲಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜರುಗಿದ ಮೊರಾರ್ಜಿ ದೇಸಾಯಿಯವರ ಜನ್ಮ ದಿನಾಚರಣೆ ಅಂಗವಾಗಿ ಹಳೆ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಆಹಾರ, ನೀರು, ವಸತಿಯಂತೆ ಇಂದು ಶಿಕ್ಷಣವೂ ಅತೀ ಅಗತ್ಯವಾಗಿದೆ. ಶಿಕ್ಞಣದ ಬೆಳೆವಣಿಗೆಯಿಂದ ದೇಶದ ಅಭಿವೃದ್ಧಿ ಸಾಧ್ಯ~ ಎಂದು ತಿಳಿಸಿದರು.<br /> <br /> ಶಿರಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹುಮಾಯೂನ್ ಮಾಗಡಿ `ಮೊರಾರ್ಜಿ ದೇಸಾಯಿಯವರು ಈ ದೇಶ ಕಂಡ ಅತ್ಯಂತ ಚಾಣಾಕ್ಷ ರಾಜಕಾರಣಿ ಹಾಗೂ ಆಡಳಿತಗಾರರು. ಅವರ ಜೀವನವೇ ಒಂದು ಹೋರಾಟವಾಗಿತ್ತು. <br /> <br /> ಅವರ ತತ್ವ ಸಿದ್ಧಾಂತಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳವುದೇ ನಾವು ಅವರಿಗೆ ಸಲ್ಲಿಸುವ ಗೌರವ ವಾಗಿದೆ~ ಎಂದು ಹೇಳಿದ ಅವರು `ಮಕ್ಕಳು ತಾವು ಕಲಿತ ಶಾಲೆ ಹಾಗೂ ಕಲಿಸಿದ ಗುರುವನ್ನು ಎಂದಿಗೂ ಮರೆಯಬಾರದು ಎಂದದರು. <br /> <br /> ದೇವರಿಗಿಂತ ಗುರು ದೊಡ್ಡವನು. ವಿದ್ಯೆ ಕಲಿಸಿ ನಮಗೆ ಅರಿವಿನ ದಾರಿ ತೋರುವ ಗುರುಗಳು ಎಂದೆಂದಿಗೂ ಪೂಜ್ಯನೀಯರು~ ಎಂದರು.<br /> <br /> `ಲಕ್ಷ್ಮೇಶ್ವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ಬಜಾರದಲ್ಲಿ ವಿದ್ಯಾರ್ಥಿಗಳು ಕಲಿ ಯುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. <br /> <br /> ಜನಪ್ರತಿನಿಧಿಗಳು ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು~ ಎಂದು ಶಿಗ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಣ್ಣ ಲಮಾಣಿ ಹೇಳಿದರು.</p>.<p><br /> ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ, ಪುರಸಭೆ ಅಧ್ಯಕ್ಷೆ ಜಯಕ್ಕ ಕಳ್ಳಿ, ಬಿಇಓ ಅಂದಾನೆಪ್ಪ ವಡಗೇರಿ, ಪದ್ಮರಾಜ ಪಾಟೀಲ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಆರ್.ಡಿ. ಕಮ್ಮಾರ ಮಾತನಾಡಿದರು.<br /> <br /> ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಬಿ.ಎನ್. ರಾಟಿ, ಪ್ರಾಚಾರ್ಯ ಡಿ.ಬಿ. ಅಡವಿ, ಶಿಗ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅಕ್ಕಮ್ಮ ಕೆರೂರ, ನೀಲಪ್ಪ ಪಶುಪತಿಹಾಳ, ವಿಠ್ಠಲ ನಾಯಕ, ನೀಲಪ್ಪ ಹತ್ತಿ ಮತ್ತಿತರರು ಹಾಜರಿದ್ದರು. ಅನಿತಾ ಬಂಡಿ ಸ್ವಾಗತಿಸಿದರು. ಸತೀಶ ಉಮಚಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>