<p><span style="font-size: medium"> <strong>ಶಿಮ್ಲಾ (ಪಿಟಿಐ):</strong> ಚಂಬಾ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 43 ಜನರು ಸಾವಿಗೀಡಾಗಿದ್ದಾರೆ. ಒಂದು ಅಪಘಾತದಲ್ಲಿ ಮದುವೆಗೆ ಹೊರಟಿದ್ದ ತಂಡದ 34 ಜನ ಮೃತಪಟ್ಟಿದ್ದಾರೆ. ಈ ಅಪಘಾತಗಳಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ.</span></p>.<p><span style="font-size: medium">ಕಳೆದ ರಾತ್ರಿ ಮದುವೆ ಸಮಾರಂಭಕ್ಕೆ 40 ಜನರನ್ನು ಕರೆದೊಯ್ಯುತ್ತಿದ್ದ ಲಾರಿಯೊಂದು ಚಂಬಾ ಜಿಲ್ಲೆ ಯ ಷೇರುಪುರ್ ಗ್ರಾಮದ ಬಳಿ ಉರುಳಿ ಈ ದುರ್ಘಟನೆ ನಡೆದಿದೆ ಎಂದು ಸಾರಿಗೆ ಸಚಿವ ಮೊಹಿಂದ್ರ ಸಿಂಘ್ ಗುರುವಾರ ವಿಧಾನ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ</span></p>.<p><span style="font-size: medium"> ಘಟನಾ ಸ್ಥಳದಲ್ಲಿಯೇ 32 ಜನರ ಸಾವೀಗೀಡಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. <br /> <strong><br /> 9 ಮಂದಿ ಸಾವು:</strong> ಚಂಬಾದಿಂದ 65 ಕಿ.ಮೀ ದೂರದ ಭರ್ಮಾಪುರ ಬಳಿ ನಡೆದ ಮತ್ತೊಂದು ಅಪಘಾತದಲ್ಲಿ ಖಾಸಗಿ ಸಂಸ್ಥೆಗೆ ಸೇರಿದ್ದ 9 ಮಂದಿ ಉದ್ಯೋಗಿಗಳು ಮೃತರಾಗಿದ್ದಾರೆ.</span></p>.<p><span style="font-size: medium">ಖಾಸಗಿ ಸಂಸ್ಥೆಯ ಉದ್ಯೋಗಿಗಳನ್ನು ರಾತ್ರಿ ಕೆಲಸದ ನಂತರ ಅವರವರ ಮನೆಗಳಿಗೆ ಕರೆದೊಯ್ಯುತ್ತಿರುವ ಸಂದರ್ಭದಲ್ಲಿ ಅವರನ್ನು ಸಾಗಿಸುತ್ತಿದ್ದ ವಾಹನ 300 ಮೀಟರ್ ಆಳದ ರಸ್ತೆಯ ಬದಿಯ ಕೊಳ್ಳದಲ್ಲಿ ಬಿದ್ದು ಈ ಅಪಘಾತ ನಡೆದಿದೆ. </span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: medium"> <strong>ಶಿಮ್ಲಾ (ಪಿಟಿಐ):</strong> ಚಂಬಾ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 43 ಜನರು ಸಾವಿಗೀಡಾಗಿದ್ದಾರೆ. ಒಂದು ಅಪಘಾತದಲ್ಲಿ ಮದುವೆಗೆ ಹೊರಟಿದ್ದ ತಂಡದ 34 ಜನ ಮೃತಪಟ್ಟಿದ್ದಾರೆ. ಈ ಅಪಘಾತಗಳಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ.</span></p>.<p><span style="font-size: medium">ಕಳೆದ ರಾತ್ರಿ ಮದುವೆ ಸಮಾರಂಭಕ್ಕೆ 40 ಜನರನ್ನು ಕರೆದೊಯ್ಯುತ್ತಿದ್ದ ಲಾರಿಯೊಂದು ಚಂಬಾ ಜಿಲ್ಲೆ ಯ ಷೇರುಪುರ್ ಗ್ರಾಮದ ಬಳಿ ಉರುಳಿ ಈ ದುರ್ಘಟನೆ ನಡೆದಿದೆ ಎಂದು ಸಾರಿಗೆ ಸಚಿವ ಮೊಹಿಂದ್ರ ಸಿಂಘ್ ಗುರುವಾರ ವಿಧಾನ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ</span></p>.<p><span style="font-size: medium"> ಘಟನಾ ಸ್ಥಳದಲ್ಲಿಯೇ 32 ಜನರ ಸಾವೀಗೀಡಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. <br /> <strong><br /> 9 ಮಂದಿ ಸಾವು:</strong> ಚಂಬಾದಿಂದ 65 ಕಿ.ಮೀ ದೂರದ ಭರ್ಮಾಪುರ ಬಳಿ ನಡೆದ ಮತ್ತೊಂದು ಅಪಘಾತದಲ್ಲಿ ಖಾಸಗಿ ಸಂಸ್ಥೆಗೆ ಸೇರಿದ್ದ 9 ಮಂದಿ ಉದ್ಯೋಗಿಗಳು ಮೃತರಾಗಿದ್ದಾರೆ.</span></p>.<p><span style="font-size: medium">ಖಾಸಗಿ ಸಂಸ್ಥೆಯ ಉದ್ಯೋಗಿಗಳನ್ನು ರಾತ್ರಿ ಕೆಲಸದ ನಂತರ ಅವರವರ ಮನೆಗಳಿಗೆ ಕರೆದೊಯ್ಯುತ್ತಿರುವ ಸಂದರ್ಭದಲ್ಲಿ ಅವರನ್ನು ಸಾಗಿಸುತ್ತಿದ್ದ ವಾಹನ 300 ಮೀಟರ್ ಆಳದ ರಸ್ತೆಯ ಬದಿಯ ಕೊಳ್ಳದಲ್ಲಿ ಬಿದ್ದು ಈ ಅಪಘಾತ ನಡೆದಿದೆ. </span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>