<p><strong>ಚಿಂಚೋಳಿ:</strong> ಇಷ್ಟಲಿಂಗಕ್ಕೆ ಜಾತಿ ಮತ ಪಂಥದ ಬೇಧವಿಲ್ಲ. ಪರಮಾತ್ಮನ ಕುರುಹುವಾಗಿ ಅಂಗದ ಮೇಲೆ ಧರಿಸಿಕೊಂಡು ನಿತ್ಯ ಪೂಜೆ ಸಲ್ಲಿಸುವ ಮೂಲಕ ಲಿಂಗಾಂಗ ಸಾಮರಸ್ಯ ಹೊಂದಲು ಸಾಧ್ಯ ಎಂದು ಔರಾದನ ಗುರುಮಠದ ವೀರಭದ್ರಯ್ಯಸ್ವಾಮಿ ಅವರು ನುಡಿದರು. <br /> <br /> ಮಹಾಶಿವರಾತ್ರಿ ಪ್ರಯುಕ್ತ ಬುಧವಾರ ಇಲ್ಲಿನ ಚಂದಾಪುರದ ಗಣೇಶ ಮಂದಿರದಲ್ಲಿ ಸ್ಥಳೀಯ ಶರಣೆ ನೀಲಾಂಬಿಕ ಬಸವತತ್ವ ಸೇವಾ ಟ್ರಸ್ಟ್ ಸಂಜೆ ಹಮ್ಮಿಕೊಂಡ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಪೂಜಾ ವಿಧಾನಗಳನ್ನು ಬೋಧಿಸಿದರು. <br /> <br /> ಇದೇ ಸಂದರ್ಭದಲ್ಲಿ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಹಿರಿಯ ಅನುಭಾವಿ ಡಾ. ರೇವಣಸಿದ್ದಪ್ಪ ಪಾಟೀಲ ಆಗಮಿಸಿದ್ದರು. ಲಿಂಗವಂತ ಧರ್ಮ ತತ್ವ ಪ್ರಚಾರ ಸಂಸ್ಥೆ ಅಧ್ಯಕ್ಷ ಬಕ್ಕಪ್ಪ ಸೂಗೂರು ಅಧ್ಯಕ್ಷತೆ ವಹಿಸಿದ್ದರು.<br /> <br /> ಪ್ರಾಸ್ತಾವಿಕವಾಗಿ ಸುಮಂಗಲಾ ಹುಣಜೆ ಮಾತನಾಡಿದರು. ಶಕುಂತಲಾ ಸೂರ್ಯಕಾಂತ ಹುಲಿ ಸ್ವಾಗತಿಸಿದರು. ಜಯಶ್ರೀ ಸಿದ್ದಯ್ಯ ಮಠಪತಿ ನಿರೂಪಿಸಿದರು. ಸುನೀತಾ ಮಲ್ಲಿಕಾರ್ಜುನ ಪಾಲಾಮೂರು ವಂದಿಸಿದರು. ಕಾರ್ಯಕ್ರಮದಲ್ಲಿ 16 ಮಂದಿ ದೀಕ್ಷೆ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ:</strong> ಇಷ್ಟಲಿಂಗಕ್ಕೆ ಜಾತಿ ಮತ ಪಂಥದ ಬೇಧವಿಲ್ಲ. ಪರಮಾತ್ಮನ ಕುರುಹುವಾಗಿ ಅಂಗದ ಮೇಲೆ ಧರಿಸಿಕೊಂಡು ನಿತ್ಯ ಪೂಜೆ ಸಲ್ಲಿಸುವ ಮೂಲಕ ಲಿಂಗಾಂಗ ಸಾಮರಸ್ಯ ಹೊಂದಲು ಸಾಧ್ಯ ಎಂದು ಔರಾದನ ಗುರುಮಠದ ವೀರಭದ್ರಯ್ಯಸ್ವಾಮಿ ಅವರು ನುಡಿದರು. <br /> <br /> ಮಹಾಶಿವರಾತ್ರಿ ಪ್ರಯುಕ್ತ ಬುಧವಾರ ಇಲ್ಲಿನ ಚಂದಾಪುರದ ಗಣೇಶ ಮಂದಿರದಲ್ಲಿ ಸ್ಥಳೀಯ ಶರಣೆ ನೀಲಾಂಬಿಕ ಬಸವತತ್ವ ಸೇವಾ ಟ್ರಸ್ಟ್ ಸಂಜೆ ಹಮ್ಮಿಕೊಂಡ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಪೂಜಾ ವಿಧಾನಗಳನ್ನು ಬೋಧಿಸಿದರು. <br /> <br /> ಇದೇ ಸಂದರ್ಭದಲ್ಲಿ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಹಿರಿಯ ಅನುಭಾವಿ ಡಾ. ರೇವಣಸಿದ್ದಪ್ಪ ಪಾಟೀಲ ಆಗಮಿಸಿದ್ದರು. ಲಿಂಗವಂತ ಧರ್ಮ ತತ್ವ ಪ್ರಚಾರ ಸಂಸ್ಥೆ ಅಧ್ಯಕ್ಷ ಬಕ್ಕಪ್ಪ ಸೂಗೂರು ಅಧ್ಯಕ್ಷತೆ ವಹಿಸಿದ್ದರು.<br /> <br /> ಪ್ರಾಸ್ತಾವಿಕವಾಗಿ ಸುಮಂಗಲಾ ಹುಣಜೆ ಮಾತನಾಡಿದರು. ಶಕುಂತಲಾ ಸೂರ್ಯಕಾಂತ ಹುಲಿ ಸ್ವಾಗತಿಸಿದರು. ಜಯಶ್ರೀ ಸಿದ್ದಯ್ಯ ಮಠಪತಿ ನಿರೂಪಿಸಿದರು. ಸುನೀತಾ ಮಲ್ಲಿಕಾರ್ಜುನ ಪಾಲಾಮೂರು ವಂದಿಸಿದರು. ಕಾರ್ಯಕ್ರಮದಲ್ಲಿ 16 ಮಂದಿ ದೀಕ್ಷೆ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>